Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಚಿಲ್ಲರೆ ಮಾರುಕಟ್ಟೆ ದೈತ್ಯ ಬಿಗ್ಬಜಾರ್ಗೆ ಏನಾಯಿತು..!? ಕಿಶೋರ್ ಬಿಯಾನಿ ಸಾಮ್ರಾಜ್ಯ ಮುಳುಗಿದ್ದು ಹೇಗೆ?
ನೀವು ಕೆಲವೇ ಕೆಲವು ವರ್ಷದ ಹಿಂದೆ ದೊಡ್ಡ ದೊಡ್ಡ ಮಾಲ್ಗಳಂತೆ ದೊಡ್ಡ ಕಟ್ಟಡದಲ್ಲಿ ಬಿಗ್ ಬಜಾರ್ ಎಂಬ ಶಾಪಿಂಗ್ ಮಾಲ್ ನೋಡಿರಬಹುದು, ಆದ್ರೆ ಈಗ ಒಂದೇ ಒಂದು ಬಿಗ್ ಬಜಾರ್ ನಿಮ್ಮ ಕಣ್ಣ ಮುಂದೆ ಕಾಣಿಸಲ್ಲ. ಒಂದು ಕಾಲದಲ್ಲಿ ಬಿಗ್ ಬಜಾರ್ ಶಾಪ್ ತೆರೆಯುವುದನ್ನೇ ಜನ ಕಾಯುತ್ತಾ ಕುಳಿತ್ತಿದ್ದರು. ಮುಂಬೈನಲ್ಲಿ ಮೊದಲ ಬ್ರಾಂಚ್ ತೆರೆದಾಗ ಅಲ್ಲಿದ್ದ ಜನರ ಕ್ರೇಜ್ ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು.
ಹಾಗಾದ್ರೆ ಬಿಗ್ ಬಜಾರ್ ಸೋತಿದ್ಯಾಕೆ? ಒಂದೇ ಒಂದು ನಗರದಲ್ಲಿ ಈಗ ಬಿಗ್ ಬಜಾರ್ ನೋಡಲು ಸಾಧ್ಯವಾಗುತ್ತಿಲ್ಲ ಏಕೆ ಎಂಬುದು ನಿಮಗೆ ಗೊತ್ತಾ? ಬಿಗ್ ಬಜಾರ್ ಸೋಲಿಗು ಮುನ್ನ ಈ ರೀಟೈಲ್ ಕಿಂಗ್ ಹುಟ್ಟಿದ್ದು ಹೇಗೆ? ಇದನ್ನು ಆರಂಭಿಸಿದ್ದು ಯಾರು ಎಂಬುದನ್ನು ತಿಳಿಯೋಣ.

ಕೇವಲ ಬಟ್ಟೆ ವ್ಯಪಾರಿಯಾಗಿದ್ದ ಕಿಶೋರ್ ಬಿಯಾನಿ ಎಂಬಾತ ಕಟ್ಟಿ ಬೆಳೆಸಿದ ಸಾವಿರಾರು ಕೋಟಿ ಕಂಪನಿ ಇದು. ಪ್ಯೂಚರ್ ಗ್ರೂಪ್ ಹೆಸರು ನೀವು ಕೇಳಿದ್ದರೆ ಅದರ ಸಂಸ್ಥಾಪಕ ಇವರು, ಅದರ ಅಡಿಯಲ್ಲಿ ಬಿಗ್ ಬಜಾರ್, ಪ್ಯಾಂಟಲೂನ್, ಸೆಂಟ್ರಲ್ ಮಾಲ್ ಹೀಗೆ ಈ ಕಂಪನಿ ಹೆಸರು ಬೆಳೆಯುತ್ತಲೇ ಹೋಗುತ್ತದೆ. ಆದ್ರೆ ಈಗ ಒಂದು ಹೆಸರು ಕೂಡ ಅವರ ಮಾಲಿಕತ್ವದಲ್ಲಿ ಇಲ್ಲ.
ಚಿಲ್ಲರೆ ವ್ಯಾಪಾರ ವಲಯದ ದೊರೆ ಎಂದು ಈ ಕಿಶೋರ್ ಬಿಯಾನಿ ಅವರನ್ನು ಕರೆಯಲಾಗಿತ್ತು. ಆಗಸ್ಟ್ 9, 1961 ರಂದು ರಾಜಸ್ಥಾನದ ಮಧ್ಯಮ ವರ್ಗದ ವ್ಯಾಪಾರ ಕುಟುಂಬದಲ್ಲಿ ಜನಿಸಿದ ಅವರು ತಂದೆ ಅವರ ಅಂಗಡಿ ನೊಡಿಕೊಳ್ಳಬೇಕಾದ ಅನಿವಾರ್ಯತೆ ಬಿಟ್ಟು ಬಟ್ಟೆ ವ್ಯಪಾರಕ್ಕೆ ಮುಂದಾದರು. ಅವರು ಆರಂಭದಲ್ಲಿ ಬಟ್ಟೆ ಖರೀದಿಸಿ ತಂದು ಪ್ಯಾಂಟ್ ಹೊಲಿದು ಮಾರಾಟ ಮಾಡಲು ಮುಂದಾದರು. ಮುಂದೆ ಇದೇ ಪ್ಯಾಂಟಲೂನ್ ಎಂಬ ದೊಡ್ಡ ಉದ್ಯಮಕ್ಕೆ ಕಾರಣವಾಯಿತು. ನಿಧಾನಕ್ಕೆ ಪ್ಯಾಂಟಲೂನ್ ಮಳಿಗೆಗಳು ಹುಟ್ಟಿಕೊಂಡವು.
ಆದರೆ 2009ರಲ್ಲಿ ಚಿಲ್ಲರೆ ವಲಯವಾಗಿದ್ದ ಕಿರಾಣಿ ಕ್ಷೇತ್ರದಲ್ಲಿ ಮೈಲಿಗಲ್ಲು ಸೃಷ್ಟಿಸುವ ಬಿಗ್ ಬಜಾರ್ ತೆರೆದರು. ಒಂದೇ ದಿನ 30 ಕೋಟಿ ರೂಪಾಯಿ ವ್ಯವಹಾರ ನಡೆಸಿರುವ ಕೀರ್ತಿ ಕೂಡ ಬಿಗ್ ಬಜಾರ್ಗೆ ಇದೆ. ಅನಂತರ ಪ್ರತಿಯೊಂದು ನಗರದಲ್ಲಿ ಬಿಗ್ ಬಜಾರ್ ಬಂದಿತ್ತು. ಎಲ್ಲಿ ನೋಡಿದ್ರು ರಿಯಾಯಿತಿ ದರದಲ್ಲಿ ಮಾರ್ಕೆಟ್ ಹಾಗೆ ಅಲ್ಲಿ ಸಿಗದೆ ವಸ್ತುಗಳೆ ಇರಲಿಲ್ಲ. ಇದು ಭಾರತೀಯ ಗ್ರಾಹಕರ ತನ್ನತ್ತ ಸೆಳೆದಿತ್ತು.
ಆದ್ರೆ ಕೆಲವೇ ವರ್ಷದಲ್ಲಿ ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ಕಂಪನಿಯನ್ನು ಸಾಲದ ಸುಳಿಯಲ್ಲಿ ಮುಳುಗಿಸಿತು. ಹತ್ತಾರು ಹೊಸ ಉದ್ಯಮ ಆರಂಭಿಸಿದರು, ಹಾಗೆ ಮಾರುಕಟ್ಟೆಯಲ್ಲಿದ್ದ ಕೆಲವೊಂದು ಸಂಸ್ಥೆಗಳನ್ನು ಖರೀದಿಸಿದರು, ಆದ್ರೆ ಯಾವುದೂ ಕೈ ಹಿಡಿಯಲಿಲ್ಲ. ಹಾಗೆ ಆನ್ಲೈನ್ ಮಾರುಕಟ್ಟೆಯಿಂದಾಗಿ ಬಿಗ್ ಬಜಾರ್ ಕುಸಿತ ಕಂಡಿತು.
ಫ್ಲಿಕ್ಕಾರ್ಟ್, ಅಮೇಜಾನ್ ಜೊತೆಗೆ ಹೋರಾಟ
ಆರಂಭದಲ್ಲಿಯೇ ಈ ಆನ್ಲೈನ್ ಶಾಪಿಂಗ್ ಆಪ್ಗಳು ಬಿಗ್ ಬಜಾರ್ಗೆ ಅಪಾಯ ತಂದವು. ಸದ್ಯದ ಟ್ರೆಂಡ್ಗೆ ಹೊಂದಿಕೊಳ್ಳಲು ಕಿಶೋರ್ ಪರದಾಡಿದರು, ಆಡಳಿತ ಮಂಡಳಿಗಳ ನಿರ್ಧಾರಗಳಲ್ಲಿ ವೈಫಲ್ಯ ಕಾಣುತ್ತಿತ್ತು. ಈ ಆನ್ಲೈನ್ ಆಪ್ಗಳು ಬಿಗ್ ಬಜಾರ್ಗೆ ದೊಡ್ಡ ಹೊಡೆತ ನೀಡದವು, ಕೊನೆಗೂ ಬಿಗ್ ಬಜಾರ್ ಆನ್ಲೈನ್ಗೆ ಎಂಟ್ರಿಕೊಟ್ಟಿತು. ತನ್ನದೆ ವೆಬ್ಜೈಟ್ ಮೂಲಕ ವ್ಯಾಪಾರಕ್ಕೆ ಮುಂದಾಯಿತು. ಆದ್ರೆ ಯಾವುದು ಅವರಂದುಕೊಂಡಂತೆ ನಡೆಯಲಿಲ್ಲ. ಹೀಗಿದ್ದರು ಕಿಶೋರ್ ಬಿಯಾನಿ ಬ್ಯಾಂಕ್ನಿಂದ ಸಾಲ ಪಡೆದು ಹೊಸ ಹೊಸ ಉದ್ಯಮ ತೆರೆದರು ಎಲ್ಲವು ನಷ್ಟಕ್ಕೆ ದಾರಿಯಾದವು.
ಒಂದೊಂದೇ ಮಳಿಗೆಗಳು ಮುಚ್ಚಲ್ಪಟ್ಟವು ಬಿಗ್ಬಜಾರ್ ರಿಲಾಯನ್ಸ್ ಗ್ರೂಪ್ಗೆ ಮಾರಾಟ ಮಾಡಬೇಕಾಯಿತು, ಹಾಗೆ ಪ್ಯಾಂಟಲೂನ್ ಕೂಡ ಮಾರಾಟ ಮಾಡಿ ಬ್ಯಾಂಕ್ ಸಾಲ ತೀರಿಸಬೇಕಾಯಿತು. ಅಂತಿಮವಾಗಿ ಕೋವಿಡ್ನಲ್ಲಿ ಉಂಟಾದ ಆರ್ಥಿಕ ಸಮಸ್ಯೆಯಿಂದ ಸಂಸ್ಥೆ ಮೇಲೆದ್ದು ಬರುವುದು ಕಷ್ಟವಾಗಿತ್ತು, ಹೀಗಾಗಿ ಎಲ್ಲಾ ಸಂಸ್ಥೆಗಳ ಮಾರಾಟ ಮಾಡಲಾಯಿತು.



Click it and Unblock the Notifications