Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿಗೆ ಬಿರಿಯಾನಿ ಆರ್ಡರ್ ಮಾಡಿದ್ದಕ್ಕೆ ಡೆಲಿವರಿ ಬಾಯ್ ಹೀಗಾ ಮಾಡುವುದು?
ಇವತ್ತು ರಜೆಯಿದೆ, ಆರ್ಡರ್ ಮಾಡಿದ ಬಿರಿಯಾನಿ ಬರುತ್ತದೆ, ಅದನ್ನು ತಿಂದು ಆರಾಮವಾಗಿ ಇರೋಣ ಅಂತ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿದವನಿಗೆ ಬಿರಿಯಾನಿಯೇನೋ ಬಂತು, ಆದರೆ ಆ ಬಿರಿಯಾನಿ ತಂದುಕೊಟ್ಟ ಡೆಲಿವರಿ ಬಾಯ್ ಬೈಯ್ದ ಪರಿಗೆ ಈತನಿಗೆ ತಾನು ಬಿರಿಯಾನಿ ಆರ್ಡರ್ ಮಾಡಿದ್ದು ತಪ್ಪಾಯ್ತಾ? ಅಯ್ಯೋ ಇದನೀಗ ತಿನ್ನುವುದಾ, ಎಸೆಯುವುದಾ ಎಂಬ ಪರಿಸ್ಥಿತಿ ಎದುರಾಯ್ತು ಎಂದು ಆ ಗ್ರಾಹಕನೇ ತಮಗಾದ ಅನುಭವದ ಬಗ್ಗೆ redditನಲ್ಲಿ ಬರೆದುಕೊಂಡಿದ್ದು Diet Tips for migraine ಎಂಬ ಕ್ಯಾಪಕ್ಷನ್ ಅಡಿಯಲ್ಲಿ ತಮ್ಮ ಕತೆ ಹೇಳಿಕೊಂಡಿದ್ದಾರೆ.

ಗ್ರಾಹಕನಿಗೆ ಬಿರಿಯಾನಿ ತಂದ ವ್ಯಥೆ ಏನು ಎಂದು ನೋಡೋಣ ಬನ್ನಿ:
ಅವರೇ ಹೇಳಿಕೊಂಡಂತೆ 'ಬಿರಿಯಾನಿ ಆರ್ಡರ್ ಮಾಡಿದಾಗ ಬಿರಿಯಾನಿ ಬಂತು, ಒಟಿಪಿ ಹಾಕಿದ ಮೇಲೆ ಬ್ರದರ್ ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಾ, ಧರ್ಮದ ಪ್ರಕಾರ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳುತ್ತಾನೆ, ಈತನಿಗೂ ಗಾಬರಿಯಾಗಿ ಏನಾಯ್ತು ಬ್ರದರ್ ಅಂತಾನೆ, ಆಗ ಅವನು ಹೇಳುತ್ತಾನೆ ಚಿಕನ್, ಮಟನ್ ಎಲ್ಲಾ ನೀವು ನಂತರ ಕೂಡ ಸೇವಿಸಬಹುದ, ದೀಪಾವಳಿಗೆ ಸಾತ್ವಿಕ ಆಹಾರ ಸೇವಿಸಿ ಅಲ್ಲಾ, ಆ ಡೆಲಿವರಿ ಬಾಯ್ ಮಾತು ಕೇಳಿದ ಗ್ರಾಹಕನಿಗೆ ಏನು ಹೇಳಬೇಕೆಂಬುವುದೇ ಗೊತ್ತಾಗುವುದಿಲ್ಲ, ಅವನ್ಯಾಕೆ ಆ ರೀತಿ ಅಕ್ಕರೆ ತೋರಿಸಬೇಕು ಎಂದು ತೋಚದೆ ನಿಂತುಕೊಳ್ಳುವಂತಾಯ್ತು ನಾನೀಗ ಏನು ಮಾಡಬೇಕು? ನನ್ನ ಬಳಿ ಅವನ ಹೆಸರು ಮತ್ತು ನಂಬರ್ ಇದೆ, ಅವನಿಗೂ ನನ್ನ ಮನೆ ಗೊತ್ತಿದೆ, ರಿಪೋರ್ಟ್ ಮಾಡಿದ್ರೆ ಅವನು ಬಂದು ಸೀನ್ ಮಾಡಬಹುದು, ಇವತ್ತಿನ ಮೂಡ್ ಹಾಳಾಯ್ತು , ಈಗ ಇತ್ತ ಈ ಬಿರಿಯಾನಿ ತಿನ್ನಕ್ಕೂ ಆಗದ ಪರಿಸ್ಥಿತಿ ಉಂಟಾಯ್ತು ಎಂದು ತಮ್ಮ ಬಿರಿಯಾನಿ ವ್ಯಥೆಯ ಬಗ್ಗೆ ಬರೆದುಕೊಂಡಿದ್ದಾರೆ.
ಡೆಲಿವರಿ ಬಾಯ್ ವರ್ತನೆ ಅಧಿಕ ಪ್ರಸಂಗ ಅನಿಸಿದರೂ ಮುಗ್ಧತೆಯೂ ಎದ್ದು ಕಾಣುತ್ತೆ
ಆತನಿಗೆ ತಾನು ಡೆಲಿವರಿ ಕೊಟ್ಟಾಯ್ತು ಹೊರಟಾಯ್ತು ಎಂದು ಇರಬಹುದಿತ್ತು, ಆದರೆ ಧಾರ್ಮಿಕ ಆಚರಣೆಗಳನ್ನು ಪಾಲಿಸುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಆತನಲ್ಲಿ ಇರಬಹುದು, ಅಲ್ಲದೆ ಆಚಾರ-ವಿಚಾರಗಳನ್ನು ಪಾಲಿಸಿಕೊಂಡು ಹೋಗುವ ವ್ಯಕ್ತಿ ಆಗಿರಬಹುದು. ಹಾಗಾಗಿಯೇ ಆತ ದೀಪಾವಳಿ ಆಗಿ ಏಕೆ ನಾನ್ವೆಜ್ ತಿಂತೀರಾ ಎಂದು ಕೇಳಿರಬಹುದು. ಈ ದಿನ ಆ ಡೆಲಿವರಿ ಬಾಯ್ ಅದೃಷ್ಟವೂ ಚೆನ್ನಾಗಿತ್ತು ನಾನು ಏನು ಬೇಕಾದರು ತಿನ್ನುತ್ತೇನೆ ನಿನಗೇನು ಎಂದು ಜಗಳಕ್ಕೆ ನಿಂತಿದ್ದರೆ ಅಲ್ಲಿಯ ಪರಿಸ್ಥಿತಿಯೇ ಬದಲಾಗುತ್ತಿತ್ತು, ಪಾಪ ಆ ಗ್ರಾಹಕ ಏನೂ ಹೇಳಲಿಲ್ಲ.
ಬೇರೆಯವರು ಆಹಾರ ಸೇವಿಸುವಾಗ ಏನೂ ಹೇಳದಿರುವುದು ಸಭ್ಯತೆ
ಅವರು ಏನಾದರೂ ಅವರಿಗೆ ಇಷ್ಟಬಂದಿದ್ದು ತಿನ್ನಲಿ ಅದು ಅವರ ಇಷ್ಟ,ನಾವು ಹೋಗಿ ಈ ದಿನ ನಾನ್ವೆಜ್ ತಿಂತೀಯ, ವೆಜ್ ತಿನ್ನು ಅಥವಾ ಅಯ್ಯೇ ಈ ಆಹಾರ ಸೇವನೆ ಮಾಡುತ್ತೀಯ ಎಂದಲ್ಲಾ ಕೇಳುವುದೇ ಅನಾಗರಿಕತೆ, ಒಬ್ಬರು ಅವರಿಗಿಷ್ಟವಾದ ಆಹಾರ ಸೇವಿಸುತ್ತಾರೆ, ನಾವು ನಮ್ಮ ನಂಬಿಕೆ, ಆಚಾರದಂತೆ ಜೀವನ ಮಾಡಬೇಕು. ನಮ್ಮ ಅಭಿಪ್ರಾಯ ಬೇರೆಯವರ ಮೇಲೆ ಹಾಕಲು ಹೋಗಬಾರದು.
ಹಬ್ಬ-ಹರಿದಿನಗಳ ಆಚರಣೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವೂ ಇರುತ್ತದೆ
ನಾವು ದೇವಿ ಪೂಜೆ ಮಾಡುವಾಗ ಸಾತ್ವಿಕ ಆಹಾರ ಸೇವಿಸುತ್ತೇವೆ, ಅದೇ ಬೆಂಗಾಳಿಯರು ದೇವಿಗೆ ಮೀನು ಸಾರು ಮಾಡಿ ನೈವೇದ್ಯವಾಗಿ ಇಡುತ್ತಾರೆ. ಯುಗಾದಿಗೆ ಕೆಲವರು ವೆಜ್ ಮಾತ್ರ ಮಾಡುತ್ತಾರೆ, ಇನ್ನು ಕೆಲವು ಕಡೆ ಯುಗಾದಿ ಕಳೆದು ಮಾರನೇಯ ದಿನ ಹೊಸ ತೊಡಕು ಅಂತ ಮಾಡ್ತಾರೆ. ದೀಪಾವಳಿ ಸಮಯದಲ್ಲಿ ತರ್ಪಣ ನೀಡುತ್ತಾರೆ, ಈ ದಿನ ತೀರಿ ಹೋದ ಪಿತೃಗಳಿಗೆ ಅವರಿಗಿಷ್ಟವಾದ ಆಹಾರ ಮಾಡಿ ಬಡಿಸುತ್ತಾರೆ. ಆವಾಗ ನಾನ್ವೆಜ್ ಕೂಡ ಮಾಡುತ್ತಾರೆ ಕೆಲವರು ವೆಜ್ ಮಾತ್ರ ಮಾಡ್ತಾರೆ. ಹೀಗಾಗಿ ಎಲ್ಲರೂ ಒಂದೇ ರೀತಿ ಆಲೋಚಿಸಬೇಕು, ವರ್ತಿಸಬೇಕು ಎಂದು ಭಾವಿಸುವುದು ತಪ್ಪು.
ಡೆಲಿವರಿ ಬಾಯ್ ಹೇಳಿದ ಮಾತಿನಿಂದಾಗ ಆತನಿಗೆ ಬಿರಿಯಾನಿ ತಿನ್ನುವ ಮೂಡ್ ಹಾಳಾಯ್ತು, ಪಾಪ ಆತ ಇನ್ಮುಂದೆ ಇಂಥ ದಿನಗಳಲ್ಲಿ ಬಿರಿಯಾನಿ ಆರ್ಡರ್ ಮಾಡುವುದಕ್ಕೆ ಹಿಂದೇಟು ಹಾಕುವುದು ಗ್ಯಾರಂಟಿ...



Click it and Unblock the Notifications









