Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
3 ವರ್ಷದ ನಂತರ ವೇಷಮರೆಸಿ ಬಂದ ಮಗ, ಆದ್ರೆ ತಾಯಿನ ಯಾಮಾರಿಸಲು ಸಾಧ್ಯನಾ? ಎಮೋಷನಲ್ ವೀಡಿಯೋ ವೈರಲ್
ವೇಷ ಮರೆಸಿ ಬಂದರೆ ಹೆತ್ತ ಕರುಳು ತನ್ನ ಕುಡಿಯನ್ನು ಅರಿಯದೆ ಇರುತ್ತದೆಯೇ? ಅಂಥದ್ದೊಂದು ತುಂಬಾ ಸುಂದರ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದವರು ತಾಯಿಯನ್ನು ಮೀರಿಸಿದ ದೇವರಿಲ್ಲ ಎಂದು ಹೇಳುವುದು ಇದೇ ಕಾರಣಕ್ಕೆ ಎಂದು ಹೇಳುತ್ತಿದ್ದಾರೆ, ಈ ವೀಡಿಯೋ ಭಾವನಾತ್ಮಕವಾಗಿ ನಮ್ಮನ್ನು ತುಂಬಾನೇ ಸೆಳೆಯುತ್ತದೆ.

ಆತ ಮನೆ ಬಿಟ್ಟು 3 ವರ್ಷ ಆಗಿತ್ತು, ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ತಾಯಿಯದ್ದು ಮೀನು ಮಾರುವ ವೃತ್ತಿ. ಮೀನು ಮಾರಿ ಮಕ್ಕಳನ್ನು ಬೆಳೆಸಿದ್ದಳು, ಮಗ ಕೆಲಸಕ್ಕಾಗಿ ದುಬೈಗೆ ಹೋಗಿದ್ದ. 3 ವರ್ಷದ ಬಳಿಕ ದುಬೈನಿಂದ ಬಂದವ ಸೀದಾ ತನ್ನ ತಾಯಿಯನ್ನು ನೋಡಲು ಹೋಗಿದ್ದಾನೆ. ಆದರೆ ತಾಯಿಗೆ ಗುರುತು ಸಿಗಬಾರದು ಎಂದು ಮುಖವನ್ನು ಮುಚ್ಚಿ, ಕಣ್ಣು ನೋಡಿ ಎಲ್ಲಿ ಕಂಡು ಹಿಡಿಯುತ್ತಾಳೋ ಎಂದು ಕಣ್ಣಿಗೆ ತಂಪು ಕನ್ನಡಕ ಧರಿಸಿ ಹೋಗಿದ್ದಾನೆ.
ಗ್ರಾಹಕನಂತೆ ಬಂದು ತನ್ನ ತಾಯಿ ಬಳಿ ಮೀನಿನ ರೇಟ್ ಕೇಳುತ್ತಾನೆ, ತಾಯಿಯೂ ಹೇಳುತ್ತಾಳೆ, ಆದರೆ ಆ ತಾಯಿಗೆ ಆ ವ್ಯಕ್ತಿಯನ್ನು ನೋಡುವಾಗ ಏನೋ ಒಂದು ಅನುಮಾನ, ಮೀನನ್ನು ಕವರ್ಗೆ ಹಾಕುತ್ತಿರುವಾಗಲೂ ಅವಳಿಗೆ ಇದು ನನ್ನ ಮಗನಾಗಿರಬಹುದೇ ಒಂದು ಸಂಶಯ ಬರುತ್ತದೆ, ನೋಡೇ ಬಿಡುವ ಎಂದು ಸೀದ ಎದ್ದೇಳುವ ಆಕೆ , ಆತ ಮುಖಕ್ಕೆ ಮುಚ್ಚಿದ್ದ ಟವಲ್ ಎಳೆಯುತ್ತಾಳೆ, ನೋಡಿದರೆ ಮಗ! ಮಗ ಅಮ್ಮನನ್ನು ತಬ್ಬಿಕೊಂಡಾಗ ಆ ತಾಯಿ ಎಮೋಷನ್ ಆಗುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ಈ ವೀಡಿಯೋದಲ್ಲಿರುವವರು ಗಂಗೊಳ್ಳಿಯ ನಿವಾಸಿ ರೋಹಿತ್ ಹಾಗೂ ಅವರ ತಾಯಿ. ಈ ಎಮೋಷನಲ್ ವೀಡಿಯೋ ಫುಲ್ ವೈರಲ್ ಆಗಿದೆ.
ತನ್ನ ಕರುಳ ಬಳ್ಳಿಯನ್ನು ತಾಯಿಯಾದವಳು ಗುರುತಿಸಿಯೇ ಗುರುತಿಸುತ್ತಾಳೆ, ಎದುರಿಗೆ ಬಂದಾಗ ಮಾತ್ರ ಏಕೆ ಎಷ್ಟೇ ದೂರದಲ್ಲಿರಲಿ ತನ್ನ ಮಕ್ಕಳಿಗೆ ಏನೋ ಸಮಸ್ಯೆಯಾದಾಗ ಇಲ್ಲಿ ತಾಯಿಗೆ ಏನೋ ಒಂಥರ ಕಳವಳ ಆಗುತ್ತದೆ, ತಾಯಿ-ಮಕ್ಕಳ ಸಂಬಂಧವೇ ಅಂಥದ್ದು, ಅದರಲ್ಲು ತಾಯಿ ನೀಡುವ ಪ್ರೀತಿಯನ್ನು ಯಾರಿಂದಲೂ ನೀಡಲು ಸಾಧ್ಯವಿಲ್ಲ ಎಂಬುವುದು ಕೂಡ ಅಷ್ಟೇ ಸತ್ಯ.



Click it and Unblock the Notifications