Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಆಗಸ್ಟ್ 17ಕ್ಕೆ ಸಿಂಹ ಸಂಕ್ರಾಂತಿ: ಸಮಯ ಹಾಗೂ ಇದರ ಮಹತ್ವವೇನು?
ಪ್ರತಿ ತಿಂಗಳು ಸೂರ್ಯ ತನ್ನ ರಾಶಿಪಥ ಬದಲಾಯಿಸುತ್ತಲೇ ಇರುತ್ತಾನೆ, ಇದೀಗ ಸೂರ್ಯ ತಾನು ಅಧಿಪತಿಯಾಗಿರುವ ಸಿಂಹ ರಾಶಿಗೆ ಸಂಚಾರ ಮಾಡುವುದು. ಸೂರ್ಯನು ಆಗಸ್ಟ್ 17ರಂದು ಸಿಂಹ ರಾಶಿಗೆ ಸಂಚಾರ ಮಾಡಲಿದೆ, ಸಿಂಹ ಸಂಕ್ರಾಂತಿ ಮಹತ್ವವೇನು ನೋಡೋಣ ಬನ್ನಿ:

ಸಿಂಹ ಸಂಕ್ರಾಂತಿ 2023: ದಿನಾಂಕ ಮತ್ತು ಸಮಯ
ಸೂರ್ಯೋದಯ: ಬೆಳಗ್ಗೆ 06:07ಕ್ಕೆ
ಸೂರ್ಯಾಸ್ತ: ಸಂಜೆ 06:54ಕ್ಕೆ
ಪುಣ್ಯ ಕಾಲ ಮುಹೂರ್ತ: ಆಗಸ್ಟ್ 17 ಬೆಳಗ್ಗೆ 07:11ರಿಂದ ಮಧ್ಯಾಹ್ನ 01:35ರವರೆಗೆ
ಮಹಾ ಪುಣ್ಯಕಾಲ ಮುಹೂರ್ತ: ಆಗಸ್ಟ್ 17 ಮಧ್ಯಾಹ್ನ 01:11ರಿಂದ ಮಧ್ಯಾಹ್ನ 01:35ರವರೆಗೆ
ಸಿಂಹ ಸಂಕ್ರಾಂತಿ ಮಹತ್ವ
ಸಿಂಹ ಸಂಕ್ರಾಂತಿಯಂದು ಜನರು ದೇವಾಲಯಕ್ಕೆ ಹೋಗಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನ ಹಸುವಿನ ತುಪ್ಪ ತಿಂದರೆ ಒಳ್ಳೆಯದು ಎಂದು ಹೇಳಲಾಗುವುದು. ಕರ್ನಾಟಕದಲ್ಲಿ ಇಂದಿನಿಂದ ನಿಜ ಶ್ರಾವಣ ಮಾಸ ಶುರು, ನಿಜ ಶ್ರಾವಣ ಮಾಸ ಶುಭ ಕಾರ್ಯಗಳಿಗೆ ಶ್ರೇಷ್ಠವಾಗಿರುವುದರಿಂದ ಪೂಜಾ ಕಾರ್ಯಗಳು ಈ ಸಮಯದಲ್ಲಿ ನಡೆಯುವುದು. ಈ ದಿನ ಸೂರ್ಯದೇವ, ಶ್ರೀ ವಿಷ್ಣು, ನರಸಿಂಹನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಸಿಂಹ ಸಂಕ್ರಾಂತಿಯ ಪೂಜಾ ವಿಧಿಗಳು
* ಈ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು.
* ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು
* ಶ್ರೀ ವಿಷ್ಣುವಿಗೆ ಹೂವಿನ ಪೂಜೆ ಅಂತ ಮಾಡಲಾಗುವುದು, ಸೂರ್ಯ ಕನ್ಯಾ ರಾಶಿಗೆ ಸಂಚಾರ ಮಾಡುವವರಿಗೂ ಈ ಪೂಜೆಯನ್ನು ಮಾಡಲಾಗುವುದು.
ಸೂರ್ಯದೇವ ದುರ್ಬಲ ಸ್ಥಾನದಲ್ಲಿದ್ದರೆ ಈ ಪರಿಹಾರ ಮಾಡಿ
* ಸೂರ್ಯ ಸಂಕ್ರಮಣದಂದು ಕೆಂಪು ವಸ್ತ್ರ ಧರಿಸಿ
* ಬೆಳಗ್ಗೆ ಬೇಗನೆ ಎದ್ದು ಸೂರ್ಯನಿಗೆ ಆರ್ಘ್ಯ ಅರ್ಪಿಸಿ
* ಈ ದಿನ ದಾನ-ಧರ್ಮಗಳಿಗೆ ತುಂಬಾನೇ ಶ್ರೇಷ್ಠ
ಸೂರ್ಯ ಯಂತ್ರ ಸ್ಥಾಪಿಸಿದರೆ ಒಳ್ಳೆಯದು
ಯಾರು ಸೂರ್ಯ ಯಂತ್ರ ಸ್ಥಾಪಿಸಬೇಕು?
* ಯಾರಿಗೆ ಸೂರ್ಯ ಮಂತ್ರ ಪಠಿಸಲು ಸಾಧ್ಯವಿಲ್ಲವೋ
* ಹರಳುಗಳನ್ನು ಖರೀದಿಸಿ ಧರಿಸುವಷ್ಟು ಶಕ್ತಿಯಿಲ್ಲದಿದ್ದರೆ ಈ ಸೂರ್ಯ ಯಂತ್ರ ಸ್ಥಾಪಿಸುವುದರ ಮುಖಾತರ ಪರಿಹಾರ ಕಂಡು ಕೊಳ್ಳಬಹುದು.
ಸೂರ್ಯ ಮಂತ್ರ
ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ
ಸೂರ್ಯ ಗಾಯತ್ರಿ ಮಂತ್ರ:
ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್
ಸೂರ್ಯ ವಶೀಕರಣ ಮಂತ್ರ:
ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ
ಸೂರ್ಯ ಬೀಜ ಮಂತ್ರ:
ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ
ಆದಿತ್ಯ ಹೃದಯಂ ಸ್ತೋತ್ರಂ
ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ



Click it and Unblock the Notifications
