Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ 17ಕ್ಕೆ ಸಿಂಹ ಸಂಕ್ರಾಂತಿ: ಸಮಯ ಹಾಗೂ ಇದರ ಮಹತ್ವವೇನು?
ಪ್ರತಿ ತಿಂಗಳು ಸೂರ್ಯ ತನ್ನ ರಾಶಿಪಥ ಬದಲಾಯಿಸುತ್ತಲೇ ಇರುತ್ತಾನೆ, ಇದೀಗ ಸೂರ್ಯ ತಾನು ಅಧಿಪತಿಯಾಗಿರುವ ಸಿಂಹ ರಾಶಿಗೆ ಸಂಚಾರ ಮಾಡುವುದು. ಸೂರ್ಯನು ಆಗಸ್ಟ್ 17ರಂದು ಸಿಂಹ ರಾಶಿಗೆ ಸಂಚಾರ ಮಾಡಲಿದೆ, ಸಿಂಹ ಸಂಕ್ರಾಂತಿ ಮಹತ್ವವೇನು ನೋಡೋಣ ಬನ್ನಿ:

ಸಿಂಹ ಸಂಕ್ರಾಂತಿ 2023: ದಿನಾಂಕ ಮತ್ತು ಸಮಯ
ಸೂರ್ಯೋದಯ: ಬೆಳಗ್ಗೆ 06:07ಕ್ಕೆ
ಸೂರ್ಯಾಸ್ತ: ಸಂಜೆ 06:54ಕ್ಕೆ
ಪುಣ್ಯ ಕಾಲ ಮುಹೂರ್ತ: ಆಗಸ್ಟ್ 17 ಬೆಳಗ್ಗೆ 07:11ರಿಂದ ಮಧ್ಯಾಹ್ನ 01:35ರವರೆಗೆ
ಮಹಾ ಪುಣ್ಯಕಾಲ ಮುಹೂರ್ತ: ಆಗಸ್ಟ್ 17 ಮಧ್ಯಾಹ್ನ 01:11ರಿಂದ ಮಧ್ಯಾಹ್ನ 01:35ರವರೆಗೆ
ಸಿಂಹ ಸಂಕ್ರಾಂತಿ ಮಹತ್ವ
ಸಿಂಹ ಸಂಕ್ರಾಂತಿಯಂದು ಜನರು ದೇವಾಲಯಕ್ಕೆ ಹೋಗಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನ ಹಸುವಿನ ತುಪ್ಪ ತಿಂದರೆ ಒಳ್ಳೆಯದು ಎಂದು ಹೇಳಲಾಗುವುದು. ಕರ್ನಾಟಕದಲ್ಲಿ ಇಂದಿನಿಂದ ನಿಜ ಶ್ರಾವಣ ಮಾಸ ಶುರು, ನಿಜ ಶ್ರಾವಣ ಮಾಸ ಶುಭ ಕಾರ್ಯಗಳಿಗೆ ಶ್ರೇಷ್ಠವಾಗಿರುವುದರಿಂದ ಪೂಜಾ ಕಾರ್ಯಗಳು ಈ ಸಮಯದಲ್ಲಿ ನಡೆಯುವುದು. ಈ ದಿನ ಸೂರ್ಯದೇವ, ಶ್ರೀ ವಿಷ್ಣು, ನರಸಿಂಹನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಸಿಂಹ ಸಂಕ್ರಾಂತಿಯ ಪೂಜಾ ವಿಧಿಗಳು
* ಈ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು.
* ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು
* ಶ್ರೀ ವಿಷ್ಣುವಿಗೆ ಹೂವಿನ ಪೂಜೆ ಅಂತ ಮಾಡಲಾಗುವುದು, ಸೂರ್ಯ ಕನ್ಯಾ ರಾಶಿಗೆ ಸಂಚಾರ ಮಾಡುವವರಿಗೂ ಈ ಪೂಜೆಯನ್ನು ಮಾಡಲಾಗುವುದು.
ಸೂರ್ಯದೇವ ದುರ್ಬಲ ಸ್ಥಾನದಲ್ಲಿದ್ದರೆ ಈ ಪರಿಹಾರ ಮಾಡಿ
* ಸೂರ್ಯ ಸಂಕ್ರಮಣದಂದು ಕೆಂಪು ವಸ್ತ್ರ ಧರಿಸಿ
* ಬೆಳಗ್ಗೆ ಬೇಗನೆ ಎದ್ದು ಸೂರ್ಯನಿಗೆ ಆರ್ಘ್ಯ ಅರ್ಪಿಸಿ
* ಈ ದಿನ ದಾನ-ಧರ್ಮಗಳಿಗೆ ತುಂಬಾನೇ ಶ್ರೇಷ್ಠ
ಸೂರ್ಯ ಯಂತ್ರ ಸ್ಥಾಪಿಸಿದರೆ ಒಳ್ಳೆಯದು
ಯಾರು ಸೂರ್ಯ ಯಂತ್ರ ಸ್ಥಾಪಿಸಬೇಕು?
* ಯಾರಿಗೆ ಸೂರ್ಯ ಮಂತ್ರ ಪಠಿಸಲು ಸಾಧ್ಯವಿಲ್ಲವೋ
* ಹರಳುಗಳನ್ನು ಖರೀದಿಸಿ ಧರಿಸುವಷ್ಟು ಶಕ್ತಿಯಿಲ್ಲದಿದ್ದರೆ ಈ ಸೂರ್ಯ ಯಂತ್ರ ಸ್ಥಾಪಿಸುವುದರ ಮುಖಾತರ ಪರಿಹಾರ ಕಂಡು ಕೊಳ್ಳಬಹುದು.
ಸೂರ್ಯ ಮಂತ್ರ
ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ
ಸೂರ್ಯ ಗಾಯತ್ರಿ ಮಂತ್ರ:
ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್
ಸೂರ್ಯ ವಶೀಕರಣ ಮಂತ್ರ:
ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ
ಸೂರ್ಯ ಬೀಜ ಮಂತ್ರ:
ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ
ಆದಿತ್ಯ ಹೃದಯಂ ಸ್ತೋತ್ರಂ
ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ



Click it and Unblock the Notifications