Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಆಗಸ್ಟ್ 17ಕ್ಕೆ ಸಿಂಹ ಸಂಕ್ರಾಂತಿ: ಸಮಯ ಹಾಗೂ ಇದರ ಮಹತ್ವವೇನು?
ಪ್ರತಿ ತಿಂಗಳು ಸೂರ್ಯ ತನ್ನ ರಾಶಿಪಥ ಬದಲಾಯಿಸುತ್ತಲೇ ಇರುತ್ತಾನೆ, ಇದೀಗ ಸೂರ್ಯ ತಾನು ಅಧಿಪತಿಯಾಗಿರುವ ಸಿಂಹ ರಾಶಿಗೆ ಸಂಚಾರ ಮಾಡುವುದು. ಸೂರ್ಯನು ಆಗಸ್ಟ್ 17ರಂದು ಸಿಂಹ ರಾಶಿಗೆ ಸಂಚಾರ ಮಾಡಲಿದೆ, ಸಿಂಹ ಸಂಕ್ರಾಂತಿ ಮಹತ್ವವೇನು ನೋಡೋಣ ಬನ್ನಿ:

ಸಿಂಹ ಸಂಕ್ರಾಂತಿ 2023: ದಿನಾಂಕ ಮತ್ತು ಸಮಯ
ಸೂರ್ಯೋದಯ: ಬೆಳಗ್ಗೆ 06:07ಕ್ಕೆ
ಸೂರ್ಯಾಸ್ತ: ಸಂಜೆ 06:54ಕ್ಕೆ
ಪುಣ್ಯ ಕಾಲ ಮುಹೂರ್ತ: ಆಗಸ್ಟ್ 17 ಬೆಳಗ್ಗೆ 07:11ರಿಂದ ಮಧ್ಯಾಹ್ನ 01:35ರವರೆಗೆ
ಮಹಾ ಪುಣ್ಯಕಾಲ ಮುಹೂರ್ತ: ಆಗಸ್ಟ್ 17 ಮಧ್ಯಾಹ್ನ 01:11ರಿಂದ ಮಧ್ಯಾಹ್ನ 01:35ರವರೆಗೆ
ಸಿಂಹ ಸಂಕ್ರಾಂತಿ ಮಹತ್ವ
ಸಿಂಹ ಸಂಕ್ರಾಂತಿಯಂದು ಜನರು ದೇವಾಲಯಕ್ಕೆ ಹೋಗಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನ ಹಸುವಿನ ತುಪ್ಪ ತಿಂದರೆ ಒಳ್ಳೆಯದು ಎಂದು ಹೇಳಲಾಗುವುದು. ಕರ್ನಾಟಕದಲ್ಲಿ ಇಂದಿನಿಂದ ನಿಜ ಶ್ರಾವಣ ಮಾಸ ಶುರು, ನಿಜ ಶ್ರಾವಣ ಮಾಸ ಶುಭ ಕಾರ್ಯಗಳಿಗೆ ಶ್ರೇಷ್ಠವಾಗಿರುವುದರಿಂದ ಪೂಜಾ ಕಾರ್ಯಗಳು ಈ ಸಮಯದಲ್ಲಿ ನಡೆಯುವುದು. ಈ ದಿನ ಸೂರ್ಯದೇವ, ಶ್ರೀ ವಿಷ್ಣು, ನರಸಿಂಹನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಸಿಂಹ ಸಂಕ್ರಾಂತಿಯ ಪೂಜಾ ವಿಧಿಗಳು
* ಈ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು.
* ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು
* ಶ್ರೀ ವಿಷ್ಣುವಿಗೆ ಹೂವಿನ ಪೂಜೆ ಅಂತ ಮಾಡಲಾಗುವುದು, ಸೂರ್ಯ ಕನ್ಯಾ ರಾಶಿಗೆ ಸಂಚಾರ ಮಾಡುವವರಿಗೂ ಈ ಪೂಜೆಯನ್ನು ಮಾಡಲಾಗುವುದು.
ಸೂರ್ಯದೇವ ದುರ್ಬಲ ಸ್ಥಾನದಲ್ಲಿದ್ದರೆ ಈ ಪರಿಹಾರ ಮಾಡಿ
* ಸೂರ್ಯ ಸಂಕ್ರಮಣದಂದು ಕೆಂಪು ವಸ್ತ್ರ ಧರಿಸಿ
* ಬೆಳಗ್ಗೆ ಬೇಗನೆ ಎದ್ದು ಸೂರ್ಯನಿಗೆ ಆರ್ಘ್ಯ ಅರ್ಪಿಸಿ
* ಈ ದಿನ ದಾನ-ಧರ್ಮಗಳಿಗೆ ತುಂಬಾನೇ ಶ್ರೇಷ್ಠ
ಸೂರ್ಯ ಯಂತ್ರ ಸ್ಥಾಪಿಸಿದರೆ ಒಳ್ಳೆಯದು
ಯಾರು ಸೂರ್ಯ ಯಂತ್ರ ಸ್ಥಾಪಿಸಬೇಕು?
* ಯಾರಿಗೆ ಸೂರ್ಯ ಮಂತ್ರ ಪಠಿಸಲು ಸಾಧ್ಯವಿಲ್ಲವೋ
* ಹರಳುಗಳನ್ನು ಖರೀದಿಸಿ ಧರಿಸುವಷ್ಟು ಶಕ್ತಿಯಿಲ್ಲದಿದ್ದರೆ ಈ ಸೂರ್ಯ ಯಂತ್ರ ಸ್ಥಾಪಿಸುವುದರ ಮುಖಾತರ ಪರಿಹಾರ ಕಂಡು ಕೊಳ್ಳಬಹುದು.
ಸೂರ್ಯ ಮಂತ್ರ
ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ
ಸೂರ್ಯ ಗಾಯತ್ರಿ ಮಂತ್ರ:
ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್
ಸೂರ್ಯ ವಶೀಕರಣ ಮಂತ್ರ:
ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ
ಸೂರ್ಯ ಬೀಜ ಮಂತ್ರ:
ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ
ಆದಿತ್ಯ ಹೃದಯಂ ಸ್ತೋತ್ರಂ
ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ



Click it and Unblock the Notifications