Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಶ್ರಾವಣ ಶಿವರಾತ್ರಿ 2023 : ಇಷ್ಟಾರ್ಥ ಸಿದ್ಧಿಗಾಗಿ ಈ ಪರಿಹಾರ ಮಾಡಿ!
ಹಿಂದೂ ಪಂಚಾಂಗದ ಪ್ರಕಾರ ಒಂದು ವರ್ಷದಲ್ಲಿ ಒಟ್ಟು 12 ಶಿವರಾತ್ರಿಗಳು ಬರುತ್ತವೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಜುಲೈ 15 ರಂದು ರಾತ್ರಿ 08:32 ಕ್ಕೆ ಪ್ರಾರಂಭವಾಗಿ ಜುಲೈ 16 ರಂದು ರಾತ್ರಿ 10:08 ಕ್ಕೆ ಕೊನೆಗೊಳ್ಳುತ್ತದೆ. ಶ್ರಾವಣ ಶಿವರಾತ್ರಿಯ ದಿನ ರಾತ್ರಿಯಲ್ಲಿ ಪೂಜೆ ಮಾಡುವ ವಿಧಿ-ವಿಧಾನಗಳು ಇರೋದ್ರಿಂದ ಉಪವಾಸವನ್ನು ಜುಲೈ 15, 2023 ರಂದು ಶನಿವಾರ ಆಚರಿಸಲಾಗುತ್ತದೆ.

ಶ್ರಾವಣ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಶಿವ ದೇವಾಲಯಗಳಲ್ಲಿ ಭಕ್ತರು ರುದ್ರಾಭಿಷೇಕ ಹಾಗೂ ಪೂಜೆಗಳನ್ನು ಕೈಗೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಶಿವನಲ್ಲಿ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ. ಅನೇಕ ಜನರು ಶ್ರಾವಣ ಶಿವರಾತ್ರಿಯಂದು ಉಪವಾಸ ಮಾಡುತ್ತಾರೆ.
ಶಿವರಾತ್ರಿಯು ಪವಿತ್ರವಾದ ದಿನವಾಗಿದ್ದು, ಈ ಶಿವನ ಧ್ಯಾನದಲ್ಲಿ ತಲ್ಲೀನರಾದರೆ ಆತ ನಮ್ಮ ಕಷ್ಟಗಳನ್ನೆಲ್ಲಾ ದೂರ ಮಾಡುತ್ತಾನೆ ಅನ್ನೋ ನಂಬಿಕೆಯಿದೆ. ಅಷ್ಟಕ್ಕೂ ಶಿವರಾತ್ರಿ ದಿನ ನಮ್ಮ ಇಷ್ಟಾರ್ಥ ಸಿದ್ಧಿಗಾಗಿ ಏನು ಮಾಡಬೇಕು? ಯಾವ ರೀತಿ ಪರಿಹಾರಗಳನ್ನು ಕೈಗೊಳ್ಳಬೇಕು ಅನ್ನೋದನ್ನು ತಿಳಿಯೋಣ.
ಶ್ರಾವಣ ಶಿವರಾತ್ರಿ ದಿನ ಈ ರೀತಿ ಪರಿಹಾರ ಮಾಡಿ :
* ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ
* ಶಿವನ ಸಂಕಲ್ಪ ಮಾಡಿ ಹಾಲಿನಿಂದ ಅಭಿಷೇಕ ಮಾಡಿದ ನಂತರ ಓಂ ಹಿ ಈಶಾನಾಯ ನಮಃ ಎಂದು ಜಪಿಸಿ
* ಎರಡನೇ ಹಂತದಲ್ಲಿ ಅಭಿಷೇಕ ಮಾಡಿದ ನಂತರ ಓಂ ಹಿ ಅಘೋರಾಯ ನಮಃ ಎಂದು ಜಪಿಸಿ
* ಮೂರನೇ ಹಂತದಲ್ಲಿ ಧೃತ ಸ್ನಾನ ಮಾಡಿ ಮತ್ತು ಓಂ ಹಿ ವಾಮದೇವಾಯ ನಮಃ ಎಂಬ ಮಂತ್ರವನ್ನು ಜಪಿಸಿ
* ನಾಲ್ಕನೇ ಹಂತದಲ್ಲಿ ಜೇನಿನ ಅಭಿಷೇಕ ಮಾಡಿ. ಮತ್ತು ಓಂ ಹಿ ಸದ್ಯೋಜಾತಯೇ ನಮಃ ಮಂತ್ರವನ್ನು ಜಪಿಸಿ.
ಸಮಸ್ಯೆಗೆ ಪರಿಹಾರಗಳು ಪಡೆಯೋದು ಹೇಗೆ?
* ಮನುಷ್ಯ ಎಂದ ಮೇಲೆ ಆತನಿಗೆ ನೂರಾರು ಆಸೆ, ಕನಸುಗಳಿರುತ್ತದೆ. ಉದಾಹರಣೆಗೆ ಉದಾಹರಣೆಗೆ ನಿಮಗೆ ಸಂಬಳ ಬರದಿದ್ದರೆ "ನನಗೆ ಸಂಬಳ ಸಿಕ್ಕಿದೆ ನನಗೆ ಸಂತೋಷವಾಗಿದೆ" ಎಂದು ಬರೆಯಬೇಕು. ಕೆಂಪು ಪೆನ್ನಿನಿಂದ ಕಾಗದದ ಮೇಲೆ ಬರೆದು ಆ ಕಾಗದವನ್ನು ಮಡಚಿ ಶಿವರಾತ್ರಿಯ ದಿನದಂದು ಮನೆಯ ಹೊರಗೆ ನೆಲದ ಮೇಲೆ ಹೂತುಹಾಕಿ. ಅಲ್ಲದೆ ಆ ಜಾಗದಲ್ಲಿ ಗಿಡ ನೆಟ್ಟು ಪ್ರತಿನಿತ್ಯ ನೀರುಣಿಸಬೇಕು.
* ಪಂಚ ಮುಖಿ ರುದ್ರಾಕ್ಷವನ್ನು ನೀರಿನಿಂದ ಸ್ವಚ್ಛಗೊಳಿಸಿ ಒಣಗಿಸಿ. ಒಣಗಿದ ನಂತರ ಅದನ್ನು ನಿಮ್ಮ ಎಡಗೈಯಲ್ಲಿ ಇರಿಸಿ. ಮತ್ತು ಅದನ್ನು ನಿಮ್ಮ ಬಲಗೈಯಿಂದ ಮುಚ್ಚಿ. ಮತ್ತು ನಿಮ್ಮ ಮನಸ್ಸಿನಲ್ಲಿರುವ ಹಾರೈಕೆಗಳನ್ನು ಹೇಳಿಕೊಳ್ಳಿ. ಇದು ನನ್ನ ಒಂದು ಮಾಂತ್ರಿಕ ರುದ್ರಾಕ್ಷಿಯಾಗಿದ್ದು ಅದು ನನ್ನ ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ಮನಸ್ಸಿನಲ್ಲಿ ಯೋಚಿಸಿ. ಇದಾದ ಬಳಿಕ ಅದನ್ನು ಎಲ್ಲೋ ಸುರಕ್ಷಿತವಾಗಿ ಇರಿಸಿ ಮತ್ತು ದಿನಕ್ಕೆ ಒಮ್ಮೆ ನೋಡಿ.
* ಒಂದು ಕರಿಮೆಣಸು ಮತ್ತು ಏಳು ಕರಿ ಎಳ್ಳನ್ನು ಅಂಗೈಯಲ್ಲಿ ಇರಿಸಿ. ಮತ್ತು ನಿಮ್ಮ ಹೃದಯದಿಂದ ಹಾರೈಕೆ ಮಾಡಿ ಮತ್ತು ಅದನ್ನು ಶಿವಲಿಂಗಕ್ಕೆ ಅರ್ಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ಖಂಡಿತ ಈಡೇರುತ್ತದೆ.
* ಶಿವರಾತ್ರಿಯ ದಿನದಂದು 21 ಬಿಲ್ವಪತ್ರೆಯನ್ನು
ತೆಗೆದುಕೊಂಡು ಪ್ರತಿಯೊಬ್ಬರ ಮೇಲೆ ಶ್ರೀಗಂಧದಿಂದ 'ಓಂ ನಮಃ ಶಿವಾಯ' ಎಂದು ಬರೆಯಿರಿ. ಮತ್ತು ನಿಮ್ಮ ಇಚ್ಛೆಯನ್ನು ಮನಸ್ಸಿನಲ್ಲಿ ನೆನೆದುಕೊಂಡು ಶಿವಲಿಂಗಕ್ಕೆ ಅರ್ಪಿಸಿ.
ಶಿವರಾತ್ರಿಯ ದಿನ ಈ ರೀತಿ ಪೂಜೆ ಸಲ್ಲಿಸಿ ಪರಿಹಾರಗಳನ್ನು ಮಾಡಿದ್ರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತೆ ಅನ್ನೋ ನಂಬಿಕೆಯಿದೆ.
ಸೂಚನೆ : ಇಂಟರ್ನೆಟ್ ನಲ್ಲಿ ಸಿಗುವ ಮಾಹಿತಿಯನ್ನು ಆಧಾರಿಸಿ ಈ ಲೇಖನ ಬರೆಯಲಾಗಿದೆ. ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಜವಾಬ್ದಾರರಾಗಿ ಇರೋದಿಲ್ಲ. ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ತಜ್ಞರ ಮಾಹಿತಿ ಪಡೆಯೋದು ಉತ್ತಮ.



Click it and Unblock the Notifications
