Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಜುಲೈ 24ಕ್ಕೆ ಶ್ರಾವಣ ಮೊದಲ ಸೋಮವಾರ: ಈ ದಿನ ಶಿವನ ಆರಾಧನೆಯ ಪೂಜಾ ವಿಧಿ ವಿಧಾನಗಳೇನು?
ಜುಲೈ 24ಕ್ಕೆ ಶ್ರಾವಣ ಮೊದಲ ಸೋಮವಾರ. ಶಿವನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನ, ಈ ದಿನ ಶಿವನನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮೆಲ್ಲಾ ಬೇಡಿಕೆಗಳು, ಇಷ್ಟಾರ್ಥಗಳು ಶಿವನ ಕೃಪೆಯಿಂದ ನೆರವೇರುವುದು. ಶ್ರಾವಣ ಸೋಮವಾರದಂದು ಉಪವಾಸವಿದ್ದು ಕೈಲಾಸನಾಥನ ಆರಾಧನೆ ಮಾಡಲಾಗುವುದು.
ಶ್ರಾವಣ ಸೋಮವಾರ ನೀವು ಶಿವನ ಆರಾಧನೆ ಹೇಗೆ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಸೋಮವಾರ ಶಿವಪೂಜೆ ಮಾಡುವಾಗ ಪಾಲಿಸಬೇಕಾದ ಪೂಜಾ ವಿಧಾನಗಳು
ಗಂಗಾಜಲದೊಂದಿಗೆ ಶಿವನ ಪ್ರತಿಷ್ಠಾಪನೆ
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಶಿವ ಕುಟುಂಬವನ್ನು ಪೂಜಿಸಲಾಗುವುದು. ಈ ದಿನ ಶಿವನನ್ನು ಗಂಗಾಜಲದೊಂದಿಗೆ ಪ್ರತಿಷ್ಠಾಪಿಸಿ, ಶಿವನಿಗೆ ವಿಭೂತಿ ಅರ್ಪಿಸಿ ಪೂಜಿಸಬೇಕು. ಶಿವಪೂಜೆಯಲ್ಲಿ ಹಾಲು, ಗಂಗಾಜಲ, ಬಿಲ್ವಪತ್ರೆ, ಎಳ್ಳು, ಹಣ್ಣುಗಳು, ನೇವೇದ್ಯ ಅರ್ಪಿಸಿ ಪೂಜಿಸಲಾಗುವುದು.
ಈ ದಿನ ಶಿವನಿಗೆ ಅಭಿಷೇಕ ಮಾಡಿಸಿ
ನಿಮ್ಮ ಇಷ್ಟಾರ್ಥಗಳು ನೆರವೇರಲು ಈ ದಿನ ನೀವು ಶಿವನಿಗೆ ಅಭಿಷೇಕ ಮಾಡಿಸಿ. ಈ ದಿನ ಶಿವನಿಗೆ ನಿಮ್ಮ ಇಷ್ಟಾರ್ಥಗಳು ನೆರವೇರಲು ನೀವು ನಿರ್ದಿಷ್ಟ ವಸ್ತುವಿನಿಂದ ಅಭಿಷೇಕ ಮಾಡಿದರೆ ಒಳ್ಳೆಯದು. ಹಾಲಿನಿಂದ ಅಭಿಷೇಕ ಮಾಡಿಸಿದೆ ಸಂತಾನ ಭಾಗ್ಯ, ಕುಟುಂಬದಲ್ಲಿ ನೆಮ್ಮದಿ, ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದರೆ ಧನ ಲಾಭ, ಸಾಸಿವೆ ಎಣ್ಣೆಯಿಂದ ಅಭಿಷೇಕ ಮಾಡಿದರೆ ಶತ್ರುನಾಶ, ತುಪ್ಪದಿಂದ ಅಭಿಷೇಕ ಮಾಡುವುದರಿಂದ ಇಷ್ಟಾರ್ಥ ನೆರವೇರುವುದು.
ಶ್ರಾವಣ ಸೋಮವಾರ ಈ ಉಪವಾಸ ನಿಯಮಗಳನ್ನು ಅನುಭವಿಸಿ
ಶ್ರಾವಣ ಸೋಮವಾರ ಕಠಿಣ ಉಪವಾಸ ನಿಯಮವನ್ನು ಪಾಲಿಸಿದರೆ ತುಂಬಾ ಒಳ್ಳೆಯದು. ಕೆಲವರು ಈ ದಿನ ಏನೂ ತಿನ್ನುವುದಿಲ್ಲ, ಇನ್ನು ಕೆಲವರು ಹಾಲು, ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ. ಕಠಿಣ ಉಪವಾಸ ನಿಯಮ ಪಾಲಿಸಲು ಕೆಲವರಿಗೆ ಕಷ್ಟವಾಗುವುದು ಅಂಥವರು ಸಾಬುದಾನ ಖಿಚಡಿ ಸೇವಿಸಬಹುದು.
ಶ್ರಾವಣ ಪೂಜೆಯ ವಿಧಾನ
* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ
* ಶಿವನ ವಿಗ್ರಹ ಅಥವಾ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಓಂ ನಮಃ ಶಿವಾಯ ಎಂಬ ಮಂತ್ರ ಪಠಿಸಿ.
* ಶಿವನಿಗೆ ಅಭಿಷೇಕ ಮಾಡಿ
* ಗಣಪತಿಯನ್ನು ಮೊದಲು ಪೂಜಿಸಬೇಕು
* ಪಾರ್ವತಿ ದೇವಿ, ನಂದಿಗೆ ಗಂಗಾಜಲ ಅರ್ಪಿಸಿ.
* ಶಿವನಿಗೆ 108 ಬಿಲ್ವಪತ್ರೆ ಅರ್ಪಿಸಿ.
ಶಿವನ ಮಂತ್ರಗಳನ್ನು ಪಠಿಸಿ
ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್.
ಅರ್ಥ ತ್ರ್ಯಯಂಬಕಮ್: ಓ ಶಿವನೇ ನೀವು ಮೂರು ಕಣ್ಣುಗಳನ್ನು ಹೊಂದಿದ್ದೀರಿ
ಯಜ್ಮಹೇ : ನಿರಂತರವಾಗಿ ಪೂಜಿಸಲ್ಪಡುತ್ತೀರಿ
ಸುಗಂಧಿನ್: ಪರಿಮಳವನ್ನು ಆಸ್ವಾದಿಸುವವರು
ಪುಷ್ಠಿ ವರ್ಧನಂ: ಭಕ್ತಿಯನ್ನು ಹೆಚ್ಚಿಸುವವರು
ಉರ್ವಾರುಕಮೀವ
ಬಂಧನಾತ್: ಮುಕ್ತಿದಾತ
ಮೃತ್ಯು: ಮರಣ
ಮೋಕ್ಷ: ಜನನ ಮರಣ ಚಕ್ರದಿಂದ ಬಿಡುಗಡೆ
ಮಮ್ರಿತಾತ್: ಅಮರ ಅಲ್ಲ
ಅರ್ಥ: ನಾವು ನಿನ್ನನ್ನು ಧ್ಯಾನಿಸುತ್ತೇವೆ ಓಹ್ ಶಿವ. ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡಿ ಮತ್ತು ಅಮರತ್ವವು ಸಾಧ್ಯವಾಗದಿದ್ದರೂ, ದಯವಿಟ್ಟು ಮೋಕ್ಷವನ್ನು ಸಾಧಿಸಲು ನಮಗೆ ಸಹಾಯ ಮಾಡಿ ಎಂದು ಇದರ ಅರ್ಥವನ್ನು ಹೇಳಬಹುದು.



Click it and Unblock the Notifications