Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಜುಲೈ 24ಕ್ಕೆ ಶ್ರಾವಣ ಮೊದಲ ಸೋಮವಾರ: ಈ ದಿನ ಶಿವನ ಆರಾಧನೆಯ ಪೂಜಾ ವಿಧಿ ವಿಧಾನಗಳೇನು?
ಜುಲೈ 24ಕ್ಕೆ ಶ್ರಾವಣ ಮೊದಲ ಸೋಮವಾರ. ಶಿವನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನ, ಈ ದಿನ ಶಿವನನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮೆಲ್ಲಾ ಬೇಡಿಕೆಗಳು, ಇಷ್ಟಾರ್ಥಗಳು ಶಿವನ ಕೃಪೆಯಿಂದ ನೆರವೇರುವುದು. ಶ್ರಾವಣ ಸೋಮವಾರದಂದು ಉಪವಾಸವಿದ್ದು ಕೈಲಾಸನಾಥನ ಆರಾಧನೆ ಮಾಡಲಾಗುವುದು.
ಶ್ರಾವಣ ಸೋಮವಾರ ನೀವು ಶಿವನ ಆರಾಧನೆ ಹೇಗೆ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಸೋಮವಾರ ಶಿವಪೂಜೆ ಮಾಡುವಾಗ ಪಾಲಿಸಬೇಕಾದ ಪೂಜಾ ವಿಧಾನಗಳು
ಗಂಗಾಜಲದೊಂದಿಗೆ ಶಿವನ ಪ್ರತಿಷ್ಠಾಪನೆ
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಶಿವ ಕುಟುಂಬವನ್ನು ಪೂಜಿಸಲಾಗುವುದು. ಈ ದಿನ ಶಿವನನ್ನು ಗಂಗಾಜಲದೊಂದಿಗೆ ಪ್ರತಿಷ್ಠಾಪಿಸಿ, ಶಿವನಿಗೆ ವಿಭೂತಿ ಅರ್ಪಿಸಿ ಪೂಜಿಸಬೇಕು. ಶಿವಪೂಜೆಯಲ್ಲಿ ಹಾಲು, ಗಂಗಾಜಲ, ಬಿಲ್ವಪತ್ರೆ, ಎಳ್ಳು, ಹಣ್ಣುಗಳು, ನೇವೇದ್ಯ ಅರ್ಪಿಸಿ ಪೂಜಿಸಲಾಗುವುದು.
ಈ ದಿನ ಶಿವನಿಗೆ ಅಭಿಷೇಕ ಮಾಡಿಸಿ
ನಿಮ್ಮ ಇಷ್ಟಾರ್ಥಗಳು ನೆರವೇರಲು ಈ ದಿನ ನೀವು ಶಿವನಿಗೆ ಅಭಿಷೇಕ ಮಾಡಿಸಿ. ಈ ದಿನ ಶಿವನಿಗೆ ನಿಮ್ಮ ಇಷ್ಟಾರ್ಥಗಳು ನೆರವೇರಲು ನೀವು ನಿರ್ದಿಷ್ಟ ವಸ್ತುವಿನಿಂದ ಅಭಿಷೇಕ ಮಾಡಿದರೆ ಒಳ್ಳೆಯದು. ಹಾಲಿನಿಂದ ಅಭಿಷೇಕ ಮಾಡಿಸಿದೆ ಸಂತಾನ ಭಾಗ್ಯ, ಕುಟುಂಬದಲ್ಲಿ ನೆಮ್ಮದಿ, ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದರೆ ಧನ ಲಾಭ, ಸಾಸಿವೆ ಎಣ್ಣೆಯಿಂದ ಅಭಿಷೇಕ ಮಾಡಿದರೆ ಶತ್ರುನಾಶ, ತುಪ್ಪದಿಂದ ಅಭಿಷೇಕ ಮಾಡುವುದರಿಂದ ಇಷ್ಟಾರ್ಥ ನೆರವೇರುವುದು.
ಶ್ರಾವಣ ಸೋಮವಾರ ಈ ಉಪವಾಸ ನಿಯಮಗಳನ್ನು ಅನುಭವಿಸಿ
ಶ್ರಾವಣ ಸೋಮವಾರ ಕಠಿಣ ಉಪವಾಸ ನಿಯಮವನ್ನು ಪಾಲಿಸಿದರೆ ತುಂಬಾ ಒಳ್ಳೆಯದು. ಕೆಲವರು ಈ ದಿನ ಏನೂ ತಿನ್ನುವುದಿಲ್ಲ, ಇನ್ನು ಕೆಲವರು ಹಾಲು, ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ. ಕಠಿಣ ಉಪವಾಸ ನಿಯಮ ಪಾಲಿಸಲು ಕೆಲವರಿಗೆ ಕಷ್ಟವಾಗುವುದು ಅಂಥವರು ಸಾಬುದಾನ ಖಿಚಡಿ ಸೇವಿಸಬಹುದು.
ಶ್ರಾವಣ ಪೂಜೆಯ ವಿಧಾನ
* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ
* ಶಿವನ ವಿಗ್ರಹ ಅಥವಾ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಓಂ ನಮಃ ಶಿವಾಯ ಎಂಬ ಮಂತ್ರ ಪಠಿಸಿ.
* ಶಿವನಿಗೆ ಅಭಿಷೇಕ ಮಾಡಿ
* ಗಣಪತಿಯನ್ನು ಮೊದಲು ಪೂಜಿಸಬೇಕು
* ಪಾರ್ವತಿ ದೇವಿ, ನಂದಿಗೆ ಗಂಗಾಜಲ ಅರ್ಪಿಸಿ.
* ಶಿವನಿಗೆ 108 ಬಿಲ್ವಪತ್ರೆ ಅರ್ಪಿಸಿ.
ಶಿವನ ಮಂತ್ರಗಳನ್ನು ಪಠಿಸಿ
ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್.
ಅರ್ಥ ತ್ರ್ಯಯಂಬಕಮ್: ಓ ಶಿವನೇ ನೀವು ಮೂರು ಕಣ್ಣುಗಳನ್ನು ಹೊಂದಿದ್ದೀರಿ
ಯಜ್ಮಹೇ : ನಿರಂತರವಾಗಿ ಪೂಜಿಸಲ್ಪಡುತ್ತೀರಿ
ಸುಗಂಧಿನ್: ಪರಿಮಳವನ್ನು ಆಸ್ವಾದಿಸುವವರು
ಪುಷ್ಠಿ ವರ್ಧನಂ: ಭಕ್ತಿಯನ್ನು ಹೆಚ್ಚಿಸುವವರು
ಉರ್ವಾರುಕಮೀವ
ಬಂಧನಾತ್: ಮುಕ್ತಿದಾತ
ಮೃತ್ಯು: ಮರಣ
ಮೋಕ್ಷ: ಜನನ ಮರಣ ಚಕ್ರದಿಂದ ಬಿಡುಗಡೆ
ಮಮ್ರಿತಾತ್: ಅಮರ ಅಲ್ಲ
ಅರ್ಥ: ನಾವು ನಿನ್ನನ್ನು ಧ್ಯಾನಿಸುತ್ತೇವೆ ಓಹ್ ಶಿವ. ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡಿ ಮತ್ತು ಅಮರತ್ವವು ಸಾಧ್ಯವಾಗದಿದ್ದರೂ, ದಯವಿಟ್ಟು ಮೋಕ್ಷವನ್ನು ಸಾಧಿಸಲು ನಮಗೆ ಸಹಾಯ ಮಾಡಿ ಎಂದು ಇದರ ಅರ್ಥವನ್ನು ಹೇಳಬಹುದು.



Click it and Unblock the Notifications