Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು!
ಆಗಸ್ಟ್ 31ಕ್ಕೆ ಈ ವರ್ಷದ ಕೊನೆಯ ಶನಿ ತ್ರಯೋದಶಿ: ಶನಿದೋಷ ನಿವಾರಣೆಗೆ ಈ ದಿನ ತುಂಬಾ ಮುಖ್ಯ, ಏಕೆ?
ಈ ಶನಿವಾರ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವವಾದ ದಿನ, ಏಕೆಂದರೆ ಈ ದಿನ ಶನಿ ತ್ರಯೋದಶಿ ಅಥವಾ ಶನಿ ಪ್ರದೋಷ ವ್ರತವಿದೆ. ಶನಿ ದೋಷವಿರುವವರು ಈ ದಿನ ಪರಿಹಾರ ಮಾಡಿದರೆ ಶನಿ ಕಾಟ ಕಡಿಮೆಯಾಗುವುದು ಎಂದು ಹೇಳಲಾಗುವುದು.
ಪ್ರದೋಷ ವ್ರತ ಶಿವನಿಗೆ ಮೀಸಲಾದ ದಿನ. ಶನಿವಾರ ಶನಿ ದೇವನಿಗೆ ಮೀಸಲಾದ ದಿನ. ಪ್ರದೋಷ ವ್ರತ ಶನಿವಾರದಂದು ಬಂದರೆ ಆ ದಿನವನ್ನು ಶನಿ ತ್ರಯೋದಶಿಯೆಂದು ಆಚರಿಸಲಾಗುವುದು.

ಶನಿ ದೇವನ ಆರಾಧನೆಗೆ ಶ್ರೇಷ್ಠವಾದ ದಿನ
ಈ ದಿನ ಶನಿ ದೇವನ ಆರಾಧನೆ ಮಾಡವುದರಿಂದ ಶನಿಯ ಕೃಪೆ ನಮ್ಮ ಮೇಲಿರಲಿದೆ, ಶನಿ ೋಷ, ಶನಿ ಧೈಯ್ಯ ಇರುವವರು ತುಂಬಾನೇ ಕಷ್ಟ ಅನುಭವಿಸುತ್ತಾರೆ. ಈ ದಿನ ಭಕ್ತಿಯಿಂದ ಶನಿಯನ್ನು ಆರಾಧನೆ ಮಾಡುವುದರಿಂದ ಕಷ್ಟಗಳು ಕಡಿಮೆಯಾಗುವುದು, ಹಾಗಾಗಿ ಈ ದಿನ ತುಂಬಾನೇ ಮಹತ್ವವಾದ ದಿನವಾಗಿದೆ.
ಶನಿ ತ್ರಯೋದಶಿಯಂದು ಎನು ಮಾಡಬೇಕು?
ಈ ದಿನ ಉಪವಾಸವಿದ್ದು ಶನಿಯ ಆರಾಧನೆ ಮಡಬೇಕು. ಶನಿ ದೇವಾಲಯಕ್ಕೆ ಹೋಗಿ ಸಾಸಿವೆಯೆಣ್ಣೆಯಲ್ಲಿ ನಿಮ್ಮ ಮುಖವನ್ನು ನೋಡಿ ಆ ಎಣ್ಣೆಯನ್ನು ದೇವಾಯಕ್ಕೆ ಅರ್ಪಿಸಬೇಕು.
ಈ ದಿನ ಬಡವರಿಗೆ ದಾನ ಮಾಡಿದರೆ ಒಳ್ಳಯದು
ಬಡವರಿಗೆ ಕಪ್ಪು ಕಂಬಳಿ, ಎಳ್ಳು, ಸಾಸಿವೆಯೆಣ್ಣೆ ಈ ಬಗೆಯ ವಸ್ತುಗಳನ್ನು ದಾನ ಮಾಡಿ.
ಇನ್ನು ಶಿವ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿದರೆ ಒಳ್ಳೆಯದು
ಈ ದಿನ ಶಿವ ದೇವಾಲಕ್ಕೆ ಹೋಗಿ ರುದ್ರಾಭಿಷೇಕ ಮಾಡಿ. ಶಿವನ ಕೃಪೆಯಿಂದ ಕೂಡ ಶನಿಯ ಕಾಟ ಕಡಿಮೆಯಾಗುವುದು.
ಈ ದಿನ ಹೀಗೆ ಮಾಡಿದರೆ ಕಷ್ಟಗಳು, ಸವಾಲುಗಳು ಕಡಿಮೆಯಾಗುವುದು, ಬದುಕಿನಲ್ಲಿ ಧನಾತ್ಮಕ ಬದಲಾವಣೆಯಾಗುವುದು ಎಂದು ಹೇಳಲಾಗುವುದು:
ಶನಿವಾರ ಸೂರ್ಯಾಸ್ತದ ಬಳಿಕ ಕಪ್ಪು ಉದ್ದು ಹಾಕಿ ಮಾಡಿದ ಕಿಚಡಿ ಸೇವನೆ ಮಾಡಿದರೆ ಒಳ್ಳೆಯದು
ಈ ದಿನ ನೀಲಮಣಿ ಧರಿಸುವುದರಿಂದ ಅದರ ರಕ್ಷೆ ಇರಲಿದೆ ಎಂದು ಹೇಳಲಾಗುವುದು.
ರುದ್ರಾಕ್ಷಿ ಧರಿಸಲು ಈ ದಿನ ಶ್ರೇಷ್ಠವಾಗಿದೆ
14 ಮುಖಿ ರುದ್ರಾಕ್ಷಿ ಅಥವಾ ಸಪ್ತಮುಖಿ ರುದ್ರಾಕ್ಷಿಯನ್ನು ಶನಿಮಾಲೆಯ ಜೊತೆ ಧರಿಸಿದರೆ ಕಷ್ಟಗಳು ಕಡಿಮೆಯಾಗುವುದು ನಂಬಲಾಗುವುದು.
ಈ ದಿನ ಹನುಮಾನ್ ಚಾಲೀಸಾ ಪಠಿಸಿ: , ಶನಿ ಸಾಡೇಸಾತಿ ಇರುವವರು ಶನಿಯ ಕೆಟ್ಟದೃಷ್ಟಿಯಿಂದ ಪಾರಾಗಲು ಸಾಧ್ಯವೇ ಇಲ್ಲ ಎಂದು ಹೇಳಲಾಗುವುದು, ಆದರೆ ಶನಿಯ ಕೆಟ್ಟ ಪರಿಣಾಮ ಕಡಿಮೆ ಮಾಡುವ ಶಕ್ತಿ ಹನುಮಾನ್ ಚಾಲೀಸಾಗೆ ಇದೆ. ಹನುಮಾನ್ ಚಾಲೀಸಾ ಪಠಣೆ ಮಾಡುವುದರಂದ ಎದುರಾಗುವ ಸವಾಲುಗಳು ದೂರಾಗುವುದು. ಶನಿಯ ತೀಕ್ಷ್ಣ ಪರಿಣಾಮ ಕಡಿಮೆಯಾಗುವುದು ಎಂದು ಹೇಳಲಾಗುವುದು.
ಈ ಮಂತ್ರಗಳನ್ನು ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ '
ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ



Click it and Unblock the Notifications