Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಆಗಸ್ಟ್ 31ಕ್ಕೆ ಈ ವರ್ಷದ ಕೊನೆಯ ಶನಿ ತ್ರಯೋದಶಿ: ಶನಿದೋಷ ನಿವಾರಣೆಗೆ ಈ ದಿನ ತುಂಬಾ ಮುಖ್ಯ, ಏಕೆ?
ಈ ಶನಿವಾರ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವವಾದ ದಿನ, ಏಕೆಂದರೆ ಈ ದಿನ ಶನಿ ತ್ರಯೋದಶಿ ಅಥವಾ ಶನಿ ಪ್ರದೋಷ ವ್ರತವಿದೆ. ಶನಿ ದೋಷವಿರುವವರು ಈ ದಿನ ಪರಿಹಾರ ಮಾಡಿದರೆ ಶನಿ ಕಾಟ ಕಡಿಮೆಯಾಗುವುದು ಎಂದು ಹೇಳಲಾಗುವುದು.
ಪ್ರದೋಷ ವ್ರತ ಶಿವನಿಗೆ ಮೀಸಲಾದ ದಿನ. ಶನಿವಾರ ಶನಿ ದೇವನಿಗೆ ಮೀಸಲಾದ ದಿನ. ಪ್ರದೋಷ ವ್ರತ ಶನಿವಾರದಂದು ಬಂದರೆ ಆ ದಿನವನ್ನು ಶನಿ ತ್ರಯೋದಶಿಯೆಂದು ಆಚರಿಸಲಾಗುವುದು.

ಶನಿ ದೇವನ ಆರಾಧನೆಗೆ ಶ್ರೇಷ್ಠವಾದ ದಿನ
ಈ ದಿನ ಶನಿ ದೇವನ ಆರಾಧನೆ ಮಾಡವುದರಿಂದ ಶನಿಯ ಕೃಪೆ ನಮ್ಮ ಮೇಲಿರಲಿದೆ, ಶನಿ ೋಷ, ಶನಿ ಧೈಯ್ಯ ಇರುವವರು ತುಂಬಾನೇ ಕಷ್ಟ ಅನುಭವಿಸುತ್ತಾರೆ. ಈ ದಿನ ಭಕ್ತಿಯಿಂದ ಶನಿಯನ್ನು ಆರಾಧನೆ ಮಾಡುವುದರಿಂದ ಕಷ್ಟಗಳು ಕಡಿಮೆಯಾಗುವುದು, ಹಾಗಾಗಿ ಈ ದಿನ ತುಂಬಾನೇ ಮಹತ್ವವಾದ ದಿನವಾಗಿದೆ.
ಶನಿ ತ್ರಯೋದಶಿಯಂದು ಎನು ಮಾಡಬೇಕು?
ಈ ದಿನ ಉಪವಾಸವಿದ್ದು ಶನಿಯ ಆರಾಧನೆ ಮಡಬೇಕು. ಶನಿ ದೇವಾಲಯಕ್ಕೆ ಹೋಗಿ ಸಾಸಿವೆಯೆಣ್ಣೆಯಲ್ಲಿ ನಿಮ್ಮ ಮುಖವನ್ನು ನೋಡಿ ಆ ಎಣ್ಣೆಯನ್ನು ದೇವಾಯಕ್ಕೆ ಅರ್ಪಿಸಬೇಕು.
ಈ ದಿನ ಬಡವರಿಗೆ ದಾನ ಮಾಡಿದರೆ ಒಳ್ಳಯದು
ಬಡವರಿಗೆ ಕಪ್ಪು ಕಂಬಳಿ, ಎಳ್ಳು, ಸಾಸಿವೆಯೆಣ್ಣೆ ಈ ಬಗೆಯ ವಸ್ತುಗಳನ್ನು ದಾನ ಮಾಡಿ.
ಇನ್ನು ಶಿವ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿದರೆ ಒಳ್ಳೆಯದು
ಈ ದಿನ ಶಿವ ದೇವಾಲಕ್ಕೆ ಹೋಗಿ ರುದ್ರಾಭಿಷೇಕ ಮಾಡಿ. ಶಿವನ ಕೃಪೆಯಿಂದ ಕೂಡ ಶನಿಯ ಕಾಟ ಕಡಿಮೆಯಾಗುವುದು.
ಈ ದಿನ ಹೀಗೆ ಮಾಡಿದರೆ ಕಷ್ಟಗಳು, ಸವಾಲುಗಳು ಕಡಿಮೆಯಾಗುವುದು, ಬದುಕಿನಲ್ಲಿ ಧನಾತ್ಮಕ ಬದಲಾವಣೆಯಾಗುವುದು ಎಂದು ಹೇಳಲಾಗುವುದು:
ಶನಿವಾರ ಸೂರ್ಯಾಸ್ತದ ಬಳಿಕ ಕಪ್ಪು ಉದ್ದು ಹಾಕಿ ಮಾಡಿದ ಕಿಚಡಿ ಸೇವನೆ ಮಾಡಿದರೆ ಒಳ್ಳೆಯದು
ಈ ದಿನ ನೀಲಮಣಿ ಧರಿಸುವುದರಿಂದ ಅದರ ರಕ್ಷೆ ಇರಲಿದೆ ಎಂದು ಹೇಳಲಾಗುವುದು.
ರುದ್ರಾಕ್ಷಿ ಧರಿಸಲು ಈ ದಿನ ಶ್ರೇಷ್ಠವಾಗಿದೆ
14 ಮುಖಿ ರುದ್ರಾಕ್ಷಿ ಅಥವಾ ಸಪ್ತಮುಖಿ ರುದ್ರಾಕ್ಷಿಯನ್ನು ಶನಿಮಾಲೆಯ ಜೊತೆ ಧರಿಸಿದರೆ ಕಷ್ಟಗಳು ಕಡಿಮೆಯಾಗುವುದು ನಂಬಲಾಗುವುದು.
ಈ ದಿನ ಹನುಮಾನ್ ಚಾಲೀಸಾ ಪಠಿಸಿ: , ಶನಿ ಸಾಡೇಸಾತಿ ಇರುವವರು ಶನಿಯ ಕೆಟ್ಟದೃಷ್ಟಿಯಿಂದ ಪಾರಾಗಲು ಸಾಧ್ಯವೇ ಇಲ್ಲ ಎಂದು ಹೇಳಲಾಗುವುದು, ಆದರೆ ಶನಿಯ ಕೆಟ್ಟ ಪರಿಣಾಮ ಕಡಿಮೆ ಮಾಡುವ ಶಕ್ತಿ ಹನುಮಾನ್ ಚಾಲೀಸಾಗೆ ಇದೆ. ಹನುಮಾನ್ ಚಾಲೀಸಾ ಪಠಣೆ ಮಾಡುವುದರಂದ ಎದುರಾಗುವ ಸವಾಲುಗಳು ದೂರಾಗುವುದು. ಶನಿಯ ತೀಕ್ಷ್ಣ ಪರಿಣಾಮ ಕಡಿಮೆಯಾಗುವುದು ಎಂದು ಹೇಳಲಾಗುವುದು.
ಈ ಮಂತ್ರಗಳನ್ನು ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ '
ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ



Click it and Unblock the Notifications