Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಸೆ.7ಕ್ಕೆ ಗಣೇಶ ಪ್ರತಿಷ್ಠಾಪನೆಗೆ ಪೂಜಾ ಸಮಯ? ಗಣೇಶನನ್ನು ಮಧ್ಯಾಹ್ನ ಸಮಯದಲ್ಲಿ ಪೂಜಿಸುವುದೇಕೆ?
ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ, ಸಡಗರ-ಸಂಭ್ರಮದ ಹಬ್ಬ, ಈ ಸಡಗರ ಮನೆ-ಮನೆಗಳಿಗೆ ಸೀಮಿತವಾಗಿರದೆ ಊರಿಗೇ ಊರೇ ಸಿಂಗರಿಸಿಕೊಂಡಿರುತ್ತದೆ. ಕೆಲವರು ಮನೆಯಲ್ಲಿ ಗಣಪತಿ ಕೂರಿಸಿದರೆ, ಊರಿನವರು ಸೇರಿ ಗಣಪನ ಕೂರಿಸುತ್ತಾರೆ, ಬೆಂಗಳೂರು ಮುಂತಾದ ನಗರ ಪ್ರದೇಶಗಳಲ್ಲಿ ಪ್ರತಿಯೊಂದ ಗಲ್ಲಿಯಲ್ಲಿಯೂ ಗಣೆಶನ ಕೂರಿಸಿ ಆರಾಧಿಸಿಸುತ್ತಾರೆ.
ಕೆಲವು ಕಡೆ 3 ದಿನ ಗಣೇಶನ ಕೂರಿಸಿದರೆ , ಕೆಲವು ಕಡೆ 7 ದಿನ, 10 ದಿನ ಇಟ್ಟು ಗಣೇಶನಿಗೆ ಶಾಸ್ತ್ರೋಕ್ತವಾಗಿ ಪೂಜಿಸಿ ನಂತರ ವಿಸರ್ಜನೆ ಮಾಡಲಾಗುವುದು.

ಗಣೇಶನ ಪ್ರತಿಷ್ಠಾಪನೆ ಮಾಡುವಾಗ ಶ್ರಾಸ್ತೋಕ್ಷವಾಗಿ ಮಾಡಬೇಕು, ಗಣೇಶನ ಕೂರಿಸುವ ಕಡೆ ಈ ಬಗ್ಗೆ ಗಮನಹರಿಸಬೇಕು:
ಗಣೇಶನ ಪ್ರತಿಷ್ಠಾಪನೆ ಮಾಡುವ ಮುನ್ನ ಆ ಸ್ಥಳಗಳನ್ನು ಸುದ್ಧ ಮಾಡಬೇಕು.
ಗಣೇಶ ಮೂರ್ತಿಯನ್ನು ಆಯ್ಕೆ ಮಾಡುವಾಗ ಡೊಳ್ಳು ಹೊಟ್ಟೆಯ ಗಣಪನ ಆಯ್ಕೆ ಮಾಡಿ. ಡೊಳ್ಳು ಹೊಟ್ಟೆ ನಕರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ, ಆ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುವುದು ಎಂದು ಹೇಳಲಾಗುವುದು
ನಂತರ ಗಣೇಶನನ್ನು ಮಂತ್ರಗಳನ್ನು ಪಠಿಸುತ್ತಾ ಮಾಡಿ.
ಗಣೇಶನನ್ನು ಈ ಸಮಯದಲ್ಲಿ ಪ್ರತಿಷ್ಠಾಪಿಸಿ
ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ
ಪ್ರತಿಷ್ಟಾಪನೆ ಹಾಗೂ ಪೂಜಾ ಸಮಯ
ಮಧ್ಯಾಹ್ನ ಗಣೇಶ ಪೂಜಾ ಮುಹೂರ್ತ ಸೆಪ್ಟೆಂಬರ್ 7, 11:04ರಿಂದ 01:31ರವರೆಗೆ
ಸಮಯ: 2 ಗಂಟೆ 28 ನಿಮಿಷವಿದೆ.
ಗಣೇಶನಿಗೆ ಮದ್ಯಾಹ್ನ ಸಮಯದಲ್ಲಿ ಪೂಜೆ ಸಲ್ಲಿಸುವುದೇಕೆ?
ಶ್ರೀ ಗಣೇಶನು ಮಧ್ಯಾಹ್ನದ ಹೊತ್ತಿನಲ್ಲಿ ಜನಿಸಿದನು ಎಂದು ಹೇಳಲಾಗುವುದು, ಹಾಗಾಗಿ ಗಣೇಶನನ್ನು ಮಧ್ಯಾಹ್ನದ ಹೊತ್ತಿನಲ್ಲಿ ಪೂಜಿಸಬೇಕು ಎಂದು ಹೇಳಲಾಗುವುದು.
ಗಣೇಶನ ಪ್ರತಿಷ್ಟಾಪನೆ ಮಾಡುವಾಗ ಷೋಡೋಪಚಾರ ಪೂಜೆಯ ಮೂಲಕ ಮಾಡಬೇಕು:
ಮೊದಲಿಗೆ ಆವಾಹನೆ ಮಾಡಬೇಕು:ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿ ಆವಾಹನೆ ಮಾಡಬೇಕು.
ಪ್ರತಿಷ್ಟಾಪನೆ
ಗಣೇಶನ ಆವಾಹನೆ ಮಾಡಿದ ಬಳಿಕ ಗಣೇಶನ ಪಾದಗಳಿಗೆ 5 ಎಲೆಗಳನ್ನು ಇಟ್ಟು, ನಂತರ ಅಡಿಕೆ, ಅರಿಶಿಣ ಪುಡಿ, ಕುಂಕುಮ ಹಾಕಿ.
ನಂತರ ಐದು ಹೂವುಗಳನ್ನು ತೆಗೆದುಕೊಂಡು ಕೈಗಳನ್ನು ಜೋಡಿಸಿ ಪೀಠಕ್ಕೆ ಹಾಕಬೇಕು.
ಪಾಡ್ಯಾ ಸರ್ಮಪಣೆ: ಗಣೇಶನ ಪಾದಗಳಿಗೆ ನೀರು ಹಾಕಿ.
ಆರ್ಘ್ಯ ಸಮರ್ಪಣೆ
ಪಾಡ್ಯಾ ಮಾಡಿದ ಬಳಿಕ ಆರ್ಘ್ಯ ಸಮರ್ಪಣೆ ಮಾಡಬೇಕು
ನಂತರ ಅಚಮನ ಅಂದರೆ ದೇವರಿಗೆ ನಿರನ್ನು ಅರ್ಪಿಸಬೇಕು.
ನಂತರ ಮೂರ್ತಿಗೆ ನೀರು, ಹಾಲು, ಮೊಸರು, ಜೇನು, ಸಕ್ಕರೆ, ಸುಗಂಧದ್ರವ್ಯ, ಶುದ್ಧ ನೀರು ಹಾಕಿ ಸ್ನಾನ ಮಾಡಿಸಿ
ನಂತರ ವಸ್ತ್ರ ಸಮರ್ಪಣೆ, ಉತ್ತೇರಿಯಾ ಸಮರ್ಪಣೆ ಮಾಡಲಾಗುವುದು
ಗಂಧವನ್ನು ಅರ್ಪಿಸಲಾಗುವುದು
ಅಕ್ಷತೆ ಅರ್ಪಿಸಿ
ಗರಿಕೆ ಹಾಗೂ ಪುಷ್ಪ ಮಾಲೆ ಅರ್ಪಿಸಿ ಗಣೇಶನಿಗೆ ಪೂಜೆ ಸಲ್ಲಿಸಬೇಕು.



Click it and Unblock the Notifications