Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಸೆ.7ಕ್ಕೆ ಗಣೇಶ ಪ್ರತಿಷ್ಠಾಪನೆಗೆ ಪೂಜಾ ಸಮಯ? ಗಣೇಶನನ್ನು ಮಧ್ಯಾಹ್ನ ಸಮಯದಲ್ಲಿ ಪೂಜಿಸುವುದೇಕೆ?
ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ, ಸಡಗರ-ಸಂಭ್ರಮದ ಹಬ್ಬ, ಈ ಸಡಗರ ಮನೆ-ಮನೆಗಳಿಗೆ ಸೀಮಿತವಾಗಿರದೆ ಊರಿಗೇ ಊರೇ ಸಿಂಗರಿಸಿಕೊಂಡಿರುತ್ತದೆ. ಕೆಲವರು ಮನೆಯಲ್ಲಿ ಗಣಪತಿ ಕೂರಿಸಿದರೆ, ಊರಿನವರು ಸೇರಿ ಗಣಪನ ಕೂರಿಸುತ್ತಾರೆ, ಬೆಂಗಳೂರು ಮುಂತಾದ ನಗರ ಪ್ರದೇಶಗಳಲ್ಲಿ ಪ್ರತಿಯೊಂದ ಗಲ್ಲಿಯಲ್ಲಿಯೂ ಗಣೆಶನ ಕೂರಿಸಿ ಆರಾಧಿಸಿಸುತ್ತಾರೆ.
ಕೆಲವು ಕಡೆ 3 ದಿನ ಗಣೇಶನ ಕೂರಿಸಿದರೆ , ಕೆಲವು ಕಡೆ 7 ದಿನ, 10 ದಿನ ಇಟ್ಟು ಗಣೇಶನಿಗೆ ಶಾಸ್ತ್ರೋಕ್ತವಾಗಿ ಪೂಜಿಸಿ ನಂತರ ವಿಸರ್ಜನೆ ಮಾಡಲಾಗುವುದು.

ಗಣೇಶನ ಪ್ರತಿಷ್ಠಾಪನೆ ಮಾಡುವಾಗ ಶ್ರಾಸ್ತೋಕ್ಷವಾಗಿ ಮಾಡಬೇಕು, ಗಣೇಶನ ಕೂರಿಸುವ ಕಡೆ ಈ ಬಗ್ಗೆ ಗಮನಹರಿಸಬೇಕು:
ಗಣೇಶನ ಪ್ರತಿಷ್ಠಾಪನೆ ಮಾಡುವ ಮುನ್ನ ಆ ಸ್ಥಳಗಳನ್ನು ಸುದ್ಧ ಮಾಡಬೇಕು.
ಗಣೇಶ ಮೂರ್ತಿಯನ್ನು ಆಯ್ಕೆ ಮಾಡುವಾಗ ಡೊಳ್ಳು ಹೊಟ್ಟೆಯ ಗಣಪನ ಆಯ್ಕೆ ಮಾಡಿ. ಡೊಳ್ಳು ಹೊಟ್ಟೆ ನಕರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ, ಆ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುವುದು ಎಂದು ಹೇಳಲಾಗುವುದು
ನಂತರ ಗಣೇಶನನ್ನು ಮಂತ್ರಗಳನ್ನು ಪಠಿಸುತ್ತಾ ಮಾಡಿ.
ಗಣೇಶನನ್ನು ಈ ಸಮಯದಲ್ಲಿ ಪ್ರತಿಷ್ಠಾಪಿಸಿ
ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ
ಪ್ರತಿಷ್ಟಾಪನೆ ಹಾಗೂ ಪೂಜಾ ಸಮಯ
ಮಧ್ಯಾಹ್ನ ಗಣೇಶ ಪೂಜಾ ಮುಹೂರ್ತ ಸೆಪ್ಟೆಂಬರ್ 7, 11:04ರಿಂದ 01:31ರವರೆಗೆ
ಸಮಯ: 2 ಗಂಟೆ 28 ನಿಮಿಷವಿದೆ.
ಗಣೇಶನಿಗೆ ಮದ್ಯಾಹ್ನ ಸಮಯದಲ್ಲಿ ಪೂಜೆ ಸಲ್ಲಿಸುವುದೇಕೆ?
ಶ್ರೀ ಗಣೇಶನು ಮಧ್ಯಾಹ್ನದ ಹೊತ್ತಿನಲ್ಲಿ ಜನಿಸಿದನು ಎಂದು ಹೇಳಲಾಗುವುದು, ಹಾಗಾಗಿ ಗಣೇಶನನ್ನು ಮಧ್ಯಾಹ್ನದ ಹೊತ್ತಿನಲ್ಲಿ ಪೂಜಿಸಬೇಕು ಎಂದು ಹೇಳಲಾಗುವುದು.
ಗಣೇಶನ ಪ್ರತಿಷ್ಟಾಪನೆ ಮಾಡುವಾಗ ಷೋಡೋಪಚಾರ ಪೂಜೆಯ ಮೂಲಕ ಮಾಡಬೇಕು:
ಮೊದಲಿಗೆ ಆವಾಹನೆ ಮಾಡಬೇಕು:ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿ ಆವಾಹನೆ ಮಾಡಬೇಕು.
ಪ್ರತಿಷ್ಟಾಪನೆ
ಗಣೇಶನ ಆವಾಹನೆ ಮಾಡಿದ ಬಳಿಕ ಗಣೇಶನ ಪಾದಗಳಿಗೆ 5 ಎಲೆಗಳನ್ನು ಇಟ್ಟು, ನಂತರ ಅಡಿಕೆ, ಅರಿಶಿಣ ಪುಡಿ, ಕುಂಕುಮ ಹಾಕಿ.
ನಂತರ ಐದು ಹೂವುಗಳನ್ನು ತೆಗೆದುಕೊಂಡು ಕೈಗಳನ್ನು ಜೋಡಿಸಿ ಪೀಠಕ್ಕೆ ಹಾಕಬೇಕು.
ಪಾಡ್ಯಾ ಸರ್ಮಪಣೆ: ಗಣೇಶನ ಪಾದಗಳಿಗೆ ನೀರು ಹಾಕಿ.
ಆರ್ಘ್ಯ ಸಮರ್ಪಣೆ
ಪಾಡ್ಯಾ ಮಾಡಿದ ಬಳಿಕ ಆರ್ಘ್ಯ ಸಮರ್ಪಣೆ ಮಾಡಬೇಕು
ನಂತರ ಅಚಮನ ಅಂದರೆ ದೇವರಿಗೆ ನಿರನ್ನು ಅರ್ಪಿಸಬೇಕು.
ನಂತರ ಮೂರ್ತಿಗೆ ನೀರು, ಹಾಲು, ಮೊಸರು, ಜೇನು, ಸಕ್ಕರೆ, ಸುಗಂಧದ್ರವ್ಯ, ಶುದ್ಧ ನೀರು ಹಾಕಿ ಸ್ನಾನ ಮಾಡಿಸಿ
ನಂತರ ವಸ್ತ್ರ ಸಮರ್ಪಣೆ, ಉತ್ತೇರಿಯಾ ಸಮರ್ಪಣೆ ಮಾಡಲಾಗುವುದು
ಗಂಧವನ್ನು ಅರ್ಪಿಸಲಾಗುವುದು
ಅಕ್ಷತೆ ಅರ್ಪಿಸಿ
ಗರಿಕೆ ಹಾಗೂ ಪುಷ್ಪ ಮಾಲೆ ಅರ್ಪಿಸಿ ಗಣೇಶನಿಗೆ ಪೂಜೆ ಸಲ್ಲಿಸಬೇಕು.



Click it and Unblock the Notifications