Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಸೆ.7ಕ್ಕೆ ಗಣೇಶ ಪ್ರತಿಷ್ಠಾಪನೆಗೆ ಪೂಜಾ ಸಮಯ? ಗಣೇಶನನ್ನು ಮಧ್ಯಾಹ್ನ ಸಮಯದಲ್ಲಿ ಪೂಜಿಸುವುದೇಕೆ?
ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ, ಸಡಗರ-ಸಂಭ್ರಮದ ಹಬ್ಬ, ಈ ಸಡಗರ ಮನೆ-ಮನೆಗಳಿಗೆ ಸೀಮಿತವಾಗಿರದೆ ಊರಿಗೇ ಊರೇ ಸಿಂಗರಿಸಿಕೊಂಡಿರುತ್ತದೆ. ಕೆಲವರು ಮನೆಯಲ್ಲಿ ಗಣಪತಿ ಕೂರಿಸಿದರೆ, ಊರಿನವರು ಸೇರಿ ಗಣಪನ ಕೂರಿಸುತ್ತಾರೆ, ಬೆಂಗಳೂರು ಮುಂತಾದ ನಗರ ಪ್ರದೇಶಗಳಲ್ಲಿ ಪ್ರತಿಯೊಂದ ಗಲ್ಲಿಯಲ್ಲಿಯೂ ಗಣೆಶನ ಕೂರಿಸಿ ಆರಾಧಿಸಿಸುತ್ತಾರೆ.
ಕೆಲವು ಕಡೆ 3 ದಿನ ಗಣೇಶನ ಕೂರಿಸಿದರೆ , ಕೆಲವು ಕಡೆ 7 ದಿನ, 10 ದಿನ ಇಟ್ಟು ಗಣೇಶನಿಗೆ ಶಾಸ್ತ್ರೋಕ್ತವಾಗಿ ಪೂಜಿಸಿ ನಂತರ ವಿಸರ್ಜನೆ ಮಾಡಲಾಗುವುದು.

ಗಣೇಶನ ಪ್ರತಿಷ್ಠಾಪನೆ ಮಾಡುವಾಗ ಶ್ರಾಸ್ತೋಕ್ಷವಾಗಿ ಮಾಡಬೇಕು, ಗಣೇಶನ ಕೂರಿಸುವ ಕಡೆ ಈ ಬಗ್ಗೆ ಗಮನಹರಿಸಬೇಕು:
ಗಣೇಶನ ಪ್ರತಿಷ್ಠಾಪನೆ ಮಾಡುವ ಮುನ್ನ ಆ ಸ್ಥಳಗಳನ್ನು ಸುದ್ಧ ಮಾಡಬೇಕು.
ಗಣೇಶ ಮೂರ್ತಿಯನ್ನು ಆಯ್ಕೆ ಮಾಡುವಾಗ ಡೊಳ್ಳು ಹೊಟ್ಟೆಯ ಗಣಪನ ಆಯ್ಕೆ ಮಾಡಿ. ಡೊಳ್ಳು ಹೊಟ್ಟೆ ನಕರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ, ಆ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುವುದು ಎಂದು ಹೇಳಲಾಗುವುದು
ನಂತರ ಗಣೇಶನನ್ನು ಮಂತ್ರಗಳನ್ನು ಪಠಿಸುತ್ತಾ ಮಾಡಿ.
ಗಣೇಶನನ್ನು ಈ ಸಮಯದಲ್ಲಿ ಪ್ರತಿಷ್ಠಾಪಿಸಿ
ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ
ಪ್ರತಿಷ್ಟಾಪನೆ ಹಾಗೂ ಪೂಜಾ ಸಮಯ
ಮಧ್ಯಾಹ್ನ ಗಣೇಶ ಪೂಜಾ ಮುಹೂರ್ತ ಸೆಪ್ಟೆಂಬರ್ 7, 11:04ರಿಂದ 01:31ರವರೆಗೆ
ಸಮಯ: 2 ಗಂಟೆ 28 ನಿಮಿಷವಿದೆ.
ಗಣೇಶನಿಗೆ ಮದ್ಯಾಹ್ನ ಸಮಯದಲ್ಲಿ ಪೂಜೆ ಸಲ್ಲಿಸುವುದೇಕೆ?
ಶ್ರೀ ಗಣೇಶನು ಮಧ್ಯಾಹ್ನದ ಹೊತ್ತಿನಲ್ಲಿ ಜನಿಸಿದನು ಎಂದು ಹೇಳಲಾಗುವುದು, ಹಾಗಾಗಿ ಗಣೇಶನನ್ನು ಮಧ್ಯಾಹ್ನದ ಹೊತ್ತಿನಲ್ಲಿ ಪೂಜಿಸಬೇಕು ಎಂದು ಹೇಳಲಾಗುವುದು.
ಗಣೇಶನ ಪ್ರತಿಷ್ಟಾಪನೆ ಮಾಡುವಾಗ ಷೋಡೋಪಚಾರ ಪೂಜೆಯ ಮೂಲಕ ಮಾಡಬೇಕು:
ಮೊದಲಿಗೆ ಆವಾಹನೆ ಮಾಡಬೇಕು:ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿ ಆವಾಹನೆ ಮಾಡಬೇಕು.
ಪ್ರತಿಷ್ಟಾಪನೆ
ಗಣೇಶನ ಆವಾಹನೆ ಮಾಡಿದ ಬಳಿಕ ಗಣೇಶನ ಪಾದಗಳಿಗೆ 5 ಎಲೆಗಳನ್ನು ಇಟ್ಟು, ನಂತರ ಅಡಿಕೆ, ಅರಿಶಿಣ ಪುಡಿ, ಕುಂಕುಮ ಹಾಕಿ.
ನಂತರ ಐದು ಹೂವುಗಳನ್ನು ತೆಗೆದುಕೊಂಡು ಕೈಗಳನ್ನು ಜೋಡಿಸಿ ಪೀಠಕ್ಕೆ ಹಾಕಬೇಕು.
ಪಾಡ್ಯಾ ಸರ್ಮಪಣೆ: ಗಣೇಶನ ಪಾದಗಳಿಗೆ ನೀರು ಹಾಕಿ.
ಆರ್ಘ್ಯ ಸಮರ್ಪಣೆ
ಪಾಡ್ಯಾ ಮಾಡಿದ ಬಳಿಕ ಆರ್ಘ್ಯ ಸಮರ್ಪಣೆ ಮಾಡಬೇಕು
ನಂತರ ಅಚಮನ ಅಂದರೆ ದೇವರಿಗೆ ನಿರನ್ನು ಅರ್ಪಿಸಬೇಕು.
ನಂತರ ಮೂರ್ತಿಗೆ ನೀರು, ಹಾಲು, ಮೊಸರು, ಜೇನು, ಸಕ್ಕರೆ, ಸುಗಂಧದ್ರವ್ಯ, ಶುದ್ಧ ನೀರು ಹಾಕಿ ಸ್ನಾನ ಮಾಡಿಸಿ
ನಂತರ ವಸ್ತ್ರ ಸಮರ್ಪಣೆ, ಉತ್ತೇರಿಯಾ ಸಮರ್ಪಣೆ ಮಾಡಲಾಗುವುದು
ಗಂಧವನ್ನು ಅರ್ಪಿಸಲಾಗುವುದು
ಅಕ್ಷತೆ ಅರ್ಪಿಸಿ
ಗರಿಕೆ ಹಾಗೂ ಪುಷ್ಪ ಮಾಲೆ ಅರ್ಪಿಸಿ ಗಣೇಶನಿಗೆ ಪೂಜೆ ಸಲ್ಲಿಸಬೇಕು.



Click it and Unblock the Notifications