Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮಹಾ ಶಿವರಾತ್ರಿಯಂದು ಈ ವಸ್ತು ನೋಡಿದ್ರೆ ಅದೃಷ್ಟ ಬದಲಾಗುತ್ತೆ! ಆ ವಸ್ತು ಯಾವುದು ಗೊತ್ತಾ?
ಹಿಂದೂಗಳ ಪವಿತ್ರ ಹಬ್ಬವಾಗಿರುವ ಮಹಾ ಶಿವರಾತ್ರಿ ಹತ್ತಿರವಾಗುತ್ತಿದೆ. ಈ ಶಿವರಾತ್ರಿಯ ಸಮಯದಲ್ಲಿ ಶಿವನ ಆರಾಧಿಸುವುದು ಜೀವನದಲ್ಲಿ ಸುಖ, ಸಂಪತ್ತು ಒಲಿಯಲಿದೆ, ಶಿವನ ಆಶೀರ್ವಾದ ಪಡೆಯುವ ಮಂದಿ ಆತನಿಂದ ಜೀವನದ ದೊಡ್ಡ ದೊಡ್ಡ ಯಶಸ್ಸನ್ನು ಸುಲಭವಾಗಿ ಪಡೆಯಬಹುದು. ಹಾಗೆ ಶಿವನ ಅನುಗ್ರಹವು ನಿಮ್ಮಲ್ಲಿ ಧನಾತ್ಮಕ ವಿಚಾರಗಳನ್ನು ಹೆಚ್ಚಾಗಿಸಲಿದ್ದಾನೆ.
ಈ ಶಿವರಾತ್ರಿ ಸಮಯದಲ್ಲಿ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಜಾಗರಣೆ ನೋಡಬಹುದು. ಇದರಿಂದ ಶಿವನು ಸಂಪನ್ನನಾಗುತ್ತಾನೆ ಎಂದು ಹೇಳಲಾಗಿದೆ. ಈ ಪವಿತ್ರ ದಿನದಂದು ಹಸ ಕಾರ್ಯಗಳು, ಆರಂಭಗಳು, ಅಥವಾ ಹೊಸ ಪ್ರತಿಜ್ಞೆಗಳ ಮಾಡುವುದು ಹೊಸ ಜೀವನ ರೂಪಿಸಲು ಕಾರಣವಾಗಲಿದೆ ಎಂದು ನಂಬಲಾಗಿದೆ. ಹೀಗಾಗಿ ಶಿವರಾತ್ರಿಯಲ್ಲಿ ಶಿವನ ದೇವಾಲಯಗಳು, ಪ್ರಾರ್ಥನ ಸ್ಥಳಗಳಲ್ಲಿ ಭಕ್ತರು ನೆರೆಯುತ್ತಾರೆ.

ಹಾಗೆ ಶಿವರಾತ್ರಿಯ ದಿನದಂದು ಕೆಲವೊಂದು ವಸ್ತುಗಳು ಕೂಡ ನಿಮಗೆ ಶುಭ ತರಲಿವೆ. ಶಿವರಾತ್ರಿ ದಿನದಂದು ಈ ರೀತಿಯ ಶಕುನಗಳು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳ ತರಲಿದೆ. ಹಾಗಾದ್ರೆ ಶಿವರಾತ್ರಿಯಲ್ಲಿ ಯಾವ ವಸ್ತುಗಳ ನೋಡಿದ್ರೆ ನಿಮಗೆ ಶುಭವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಬಿಲ್ವಪತ್ರೆ
ಬಿಲ್ವಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದ ಎಲೆಯಾಗಿದೆ. ಶಿವನ ಪೂಜೆಯಲ್ಲಿ ಈ ಎಲೆಯನ್ನು ಯಾವಾಗಲು ಬಳಸುತ್ತಾರೆ. ಹಾಗೆ ಸೋಮವಾರದ ಶಿವನ ಪೂಜೆಯಲ್ಲಿ ಬಿಲ್ವಾ ಪತ್ರೆ ಬಹಳ ಪ್ರಮುಖ ವಸ್ತು ಆಗಿರಲಿದೆ. ಇನ್ನು ಶಿವರಾತ್ರಿಯ ದಿನದಂದು ಬಿಲ್ವಪತ್ರೆ ಎಲೆಯನ್ನು ಅಥವಾ ಬಿಲ್ವ ಮರವನ್ನು ನೋಡುವುದು ಪ್ರಸಾದವಾಗಿ ಪಡೆಯುವುದು ಶುಭಕರ. ಹಾಗೆ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದು ನಿಮ್ಮ ಜೀವನದಲ್ಲಿನ ಅಡ್ಡಿಗಳು, ಈಡೇರದ ಬಯಕೆಗಳನ್ನು ಈಡೇರಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
ರುದ್ರಾಕ್ಷಿ
ರುದ್ರಾಕ್ಷಿಯು ಶಾಂತಿ ಹಾಗೂ ಸಕಾರಾತ್ಮಕ ಶಕ್ತಿಯ ಹೊಂದಿರುವ ರುದ್ರಾಕ್ಷಿಯನ್ನು ಈ ದಿನದಂದು ನೋಡುವುದು ಅಥವಾ ಧರಿಸುವುದು ಬಹಳ ಉತ್ತಮ. ಶಿವನ ಕರುಣೆಯ ಪ್ರತಿರೂಪಕವಾಗಿ ರುದ್ರಾಕ್ಷಿ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ. ಈ ದಿನ ಶಿವನಲ್ಲಿ ಪೂಜೆ ಸಲ್ಲಿಸಿ ರುದ್ರಾಕ್ಷಿ ಮಾಲೆ ಧರಿಸುವುದು ಯೋಗವನ್ನು ತರಲಿದೆ ಎಂದು ಹೇಳಲಾಗಿದೆ. ರುದ್ರಾಕ್ಷಿಯನ್ನು ಧರಿಸುವುದು ಮಾನಸಿಕ ನೆಮ್ಮದಿ ಹಾಗೂ ನಿಮ್ಮ ಆಧ್ಯಾತ್ಮಿಕ ಒಲವಿಗೆ ಕಾರಣವಾಗಲಿದೆ. ಹಾಗೆ ಈ ದಿನ ರುದ್ರಾಕ್ಷಿಯನ್ನು ಮನೆಗೆ ತರುವುದು ಕೂಡ ಶುಭವೆಂದು ಪರಿಗಣಿಸಲಾಗುತ್ತದೆ.
ನಂದಿ ಮತ್ತು ನೀಲಕಂಠ
ಶಿವನ ವಾಹನವಾದ ನಂದಿಯನ್ನು ನೋಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಶಿವರಾತ್ರಿಯಂದು ನಂದಿಯ ಮುಂದೆ ದೀಪ ಹಚ್ಚುವಾಗ ನಿಮ್ಮ ಮನಸ್ಸಿನಲ್ಲಿ ಶಾಂತಿಯನ್ನು ಅನುಭವಿಸಲಿದ್ದೀರಿ. ಅದೇ ರೀತಿ ನೀಲಕಂಠ ಪಕ್ಷಿಯನ್ನು ನೋಡುವುದು ಸಹ ಶುಭವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಪ್ರಗತಿ, ಒತ್ತಡ ನಿವಾರಣೆಗೆ ಈ ನಂದಿ ಮತ್ತು ನೀಲಕಂಠ ಪಕ್ಷಿಯು ಉತ್ತಮ ಸಂಕೇತಗಳ ತರಲಿದೆ ಎಂದು ಹೇಳಲಾಗಿದೆ.
ಶಿವನ ಮೂರ್ತಿ ಅಥವಾ ಫೋಟೋ
ಈ ಶಿವರಾತ್ರಿಯ ದಿನ ಶಿವನ ಮೂರ್ತಿ ಅಥವಾ ಶಿವನ ಫೋಟೋವನ್ನು ಮನೆಗೆ ತರುವುದು ಶುಭವೆಂದು ಹೇಳಲಾಗಿದೆ. ಅದ್ರಲ್ಲೂ ಪಾವರ್ತಿಯೊಂದಿಗೆ ಇರುವ ಶಿವನ ಫೋಟೋ ಅಥವಾ ಮೂರ್ತಿ ಬಹಳ ಶ್ರೇಷ್ಠ ಎಂದು ಕರೆಯಲಾಗಿದೆ. ಈ ದಿನ ಮನೆಯಲ್ಲಿ ಈ ಮೂರ್ತಿಯ ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಶುಭ ತರಲಿದೆ.



Click it and Unblock the Notifications