Latest Updates
-
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್!
ಯಾವ ಹೆಣ್ಮಕ್ಕಳ ಮೇಲೆ ಅತ್ಯಾಚಾರ ಮಾಡಬೇಡಿ, ನಮ್ಮ ಬಳಿ ಬನ್ನಿ: ರೆಡ್ ಲೈಟ್ ಏರಿಯಾ ಮಹಿಳೆ ಮಾತಿಗೆ ಅಪಾರ ಮೆಚ್ಚುಗೆ
ಮಗುವಿನ ಮೆಲೆ ಅತ್ಯಾಚಾರ, ವೃದ್ಧೆಯ ಮೇಲೆ ಅತ್ಯಾಚಾರ, ಕೆಲಸಕ್ಕೆ, ಓದಲು ಅಂತ ಹೋಗಿರುವ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ತಾನು ಕೆಲಸ ಮಾಡುತ್ತಿರುವ ಜಾಗದಲ್ಲಿಯೇ ಅತ್ಯಾಚಾರ ಇಂಥ ಸುದ್ದಿಯನ್ನು ಪ್ರತಿನಿತ್ಯ ಕೇಳುತ್ತಿರುತ್ತೇವೆ. 2022ರ ವರದಿ ಪ್ರಕಾರ ಪ್ರತಿದಿನ 92 ಹಾಗೂ ಅದಕ್ಕಿಂತ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಪೊಲೀಸ್ ಋಆಣೆಯಲ್ಲಿ ದಾಖಲಾಗುತ್ತಿವೆ, ಕೆಲವು ಪ್ರಕರಣಗಳು ಹೊರಬರುವುದೇ ಇಲ್ಲ. ಹಾಗಾದರೆ ಈ ಹೆಣ್ಣಿಗೆ ನಿಜವಾದ ಸ್ವಾತಂತ್ರ್ಯ ಸಿಗುವುದು.

ವಿಶ್ವದ ಗಮನ ಸೆಳೆದ ಕೋಲ್ಕತ್ತಾ ಪ್ರಕರಣ
ಕೋಲ್ಕತ್ತಾ ಆಸ್ಪತ್ರೆಯಲ್ಲಿಯೇ ಟ್ರೈನಿ ಡಾಕ್ಟರ್ ಮೇಲಾದ ಅತ್ಯಾಚಾರ ಹಾಗೂ ಕೊಲೆ ಭಾರತವನ್ನು ಬೇರೆ ದೇಶದ ಮುಂದೆ ಮುಜುಗರಕ್ಕೀಡಾಗುವಂತೆ ಮಾಡಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ವೈದ್ಯರುಗಳು ಬೀದಿಗೆ ಇಳಿದು ಪ್ರತಿಭಟನೆ ಮಾಡಿದರು. ಈ ಘಟನೆಯನ್ನು ಪ್ರತಿಯೊಬ್ಬರು ಖಂಡಿಸುತ್ತಿದ್ದಾರೆ, ಮನುಷ್ಯತ್ವ ಮರೆತು ರಾಕ್ಷಸ ಕೃತ್ಯ ಮಾಡಿರುವ ಯಾರೇ ಅಗಿರಲಿ ಮುಂದೆ ಇಂಥ ಘಟನೆ ತಡೆಗಟ್ಟಲು ಭಯಪಡುವಂಥ ಶಿಕ್ಷೆ ಈ ಕೇಸ್ನಲ್ಲಿ ಅಗಬೇಕಾಗಿದೆ.
ನೆಟ್ಟಿಗರ ಮನಗೆದ್ದ ರೆಡ್ಲೈಟ್ ಏರಿಯಾದ ಮಹಿಳೆ ಹೇಳಿದ ಮಾತುಗಳು
ದೇಶದ ಉದ್ದಗಲಕ್ಕೂ ಅತ್ಯಾಚಾರಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಕೂಗುಬ ಬಲವಾಗಿದೆ. ಯಾವ ಹೆಣ್ಣಿಗೂ ಆ ವೈದ್ಯೆಗೆ ಅದ ಗತಿ ಬರಬಾರದು, ಹೆಣ್ಮಕ್ಕಳು ಓದಲು-ಕೆಲಸಕ್ಕೆ ಅಂತ ಹೊರಗಡೆ ಹೋದರೆ ಭಯಪಟ್ಟು ಕೂರುವಂಥ ಪರಿಸ್ಥಿತಿ ಇರಬಾರದು, ಅತ್ಯಾಚಾರದ ಬಗ್ಗೆ ಯೋಚಿಸಲೇ ಭಯವಂಥ ಶಿಕ್ಷೆ ಆಗಲೇಬೇಕಾಗಿದೆ.
ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ಜನ ಸಾಮಾನ್ಯರ ಅಭಿಪ್ರಾಯವನ್ನು ಮಾಧ್ಯಮ ಪ್ರತಿನಿಧಿಯೊಬ್ಬರು ಸಂಗ್ರಹಿಸುತ್ತಿದ್ದರು. ಆವಾಗ ಮಹಿಳೆಯೊಬ್ಬರು ಹೇಳಿದ ಮಾತುಗಳು ನೆಟ್ಟಿಗರ ಮನಗೆದ್ದಿದೆ, ಆಕೆ ದೇಹ ಮಾರಿ ಬದುಕುವ ಮಹಿಳೆಯಾದರೂ ಆಕೆಯ ಮೇಲೆ ಗೌರವ ಹೆಚ್ಚಾಗಿದೆ.
ಆಕೆ ಹೇಳಿದ್ದು ಹೀಗೆ ನೀವ್ಯಾಕೆ ಅತ್ಯಾಚಾರ ಮಾಡುತ್ತಿದ್ದೀರಿ, ನಾವು ಇಷ್ಟೊಂದು ಜನ ರೆಡ್ಲೈಟ್ ಏರಿಯಾದಲ್ಲಿ ಇದ್ದೀವಿ, ಇಲ್ಲಿಗೆ ಬನ್ನಿ, ಹೆಣ್ಣಕ್ಕಳು ಭಯವಿಲ್ಲದೆ ಹೋಗಲಿ, ಹುಡುಗಿಯರು ಕೆಲಸಕ್ಕೆ ಹೋಗಲಿ, ವೈದ್ಯರು ಅವರ ಕೆಲಸ ಮಾಡಲು ಹೋಗಲಿ, ನೀವು ಇಲ್ಲಿಗೆ ಬನ್ನಿ 50, 100 ರುಪಾಯಿಗೆ ನಿಮ್ಮ ಕೆಲಸಕ್ಕೆ ನಾವು ಸಿದ್ಧರಾಗಿದ್ದೇವೆ, ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಹೇಳಿದ್ದಾರೆ. ಇವರು ಹೇಳಿರುವ ಮಾತುಗಳು ಎಷ್ಟೊಮದು ಅರ್ಥಪೂರ್ಣವಾಗಿದೆ, ದೇಹ ಮಾರಿ ಮಾರುವ ಅವರು ನೀವು ಯಾವ ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿ ಅವರ ಭವಿಷ್ಯ ಹಾಳು ಮಾಡಬೇಡಿ, ಇಲ್ಲಿಗೆ ಬನ್ನಿ ನಿಮ್ಮ ಕೆಲಸ ತೀರಿಸಿಕೊಳ್ಳಿ, ಹೊರಗಡೆ ಸಮಾಜದಲ್ಲಿ ಹೆಣ್ಮಕ್ಕಳು ಭಯವಿಲ್ಲದೆ ಓಡಾಡುವಂತಾಗಲಿ ಎಂದು ಹೇಳಿದ್ದಾರೆ.
https://www.facebook.com/reel/1488676738679767
ಅತ್ಯಾಚಾರಿಗೆ ಆಗಲೇಬೇಕಾಗಿದೆ ಕಠಿಣ ಶಿಕ್ಷೆ
ಇಷ್ಟೊಂದು ಅತ್ಯಾಚಾರ ಪ್ರಕರಣಗಳು ಏಕೆ ದಾಖಲಾಗುತ್ತಿದೆ? ಅತ್ಯಾಚಾರಿಗಳಿಗೆ ಕಾನೂನಿನ ಭಯವಿಲ್ಲದಿರುವುದು. ಒಂದು ವೇಳೆ ನಾವು ಸಿಕ್ಕಿ ಬಿದ್ದರೂ ಕೆಲವೊಂದು ವರ್ಷ ಜೈಲಿನಲ್ಲಿದ್ದು ನಂತರ ಆರಾಮವಾಗಿ ಹೊರಬಹುದು ಅಥವಾ ಜೈಲಿನಲ್ಲಿ ಉಂಡು-ತಿಂದು ಇರಬಹುದು ಎಂಬ ಆಲೋಚನೆಯಿಂದಾಗಿ ಅತ್ಯಾಚಾರ ಮಾಡಲು ಭಯಪಡುತ್ತಿಲ್ಲ. ಅತ್ಯಾಚಾರಿ ಸಿಕ್ಕಿದ ಕೂಡಲೇ ಅವನು ಆ ಕೃತ್ಯ ಎಸಗಿದ್ದಾನೆ ಎಂದು ಶೇ. 100ರಷ್ಟು ಸಾಬೀತಾದರೆ ಒಂದಿಷ್ಟು ಸಮಯ ವ್ಯರ್ಥ ಮಾಡದೆ ಆ ಕ್ರೂರಿಯನ್ನು ಗಲ್ಲಿಗೇರಿಸುವ ಕಾನೂನು ಬಂದರೆ ಮಾತ್ರ ನಮ್ಮ ಭಾರತದಲ್ಲಿ ಹೆಣ್ಮಕ್ಕಳಿಗೆ ಸ್ವಲ್ಪವಾದರೂ ಸುರಕ್ಷತೆ ಅನಿಸುವುದು.
ಭೇಟಿ ಪಡೆವೋ ಭೇಟಿ ಬಚಾವೋ ಅಂತ ಘೋಷಣೆ ಕೂಗಿದರೆ ಸಾಲದು ಅತ್ಯಾಚಾರಿಗಳ ನಿರ್ಮೂಲನೆ ಮಾಡಿ ಎಂಬ ಕಾನೂನು ಶೀಘ್ರವೇ ಜಾರಿಯಾಗಬೇಕಾಗಿದೆ.



Click it and Unblock the Notifications