Latest Updates
-
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ!
ನಿಜ ಜೀವನದಲ್ಲಿ ಸ್ಪೈಡರ್ ಮ್ಯಾನ್ ನೋಡಿದ್ದೀರಾ..? ಇಲ್ಲಿದ್ದಾನೆ ನೋಡಿ..!
ನೀವು ಹಾಲಿವುಡ್ನ ಸೂಪರ್ ಹಿಟ್ ಮೂವಿ ಸ್ಪೈಡರ್ ಮ್ಯಾನ್ ನೋಡಿರಬಹುದು. ಈಗಂತು ಈ ಸ್ಪೈಡರ್ ಮ್ಯಾನ್ ಸಿನಿಮಾದ ಮುಂದುವರೆದ ಭಾಗಗಳು ಸಹ ಬಂದಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಪೈಡರ್ ಮ್ಯಾನ್ ಸಿನಿಮಾ ನೋಡಿ ಆನಂದಿಸಿರುತ್ತಾರೆ.
ಸಿನಿಮಾದಲ್ಲಿ ದೊಡ್ಡ ಕಥೆ ಏನು ಇಲ್ಲದಿದ್ದರೂ ಕಷ್ಟದಲ್ಲಿರುವ ಜನರನ್ನು ಆ ಸಂಕಷ್ಟಗಳಿಂದ ಪಾರು ಮಾಡುವುದೇ ಈ ಸ್ಪೈಡರ್ ಮ್ಯಾನ್ನ ಕೆಲಸವಾಗಿರುತ್ತದೆ. ಹೀಗಾಗಿ ಇದೊಂದಿ ಸೂಪರ್ ಹೀರೋ ಸಿನಿಮಾ ಆಗಿತ್ತು. ಆರಂಭದಲ್ಲಿ ಇದೊಂದು ಕಾಮಿಕ್ ಬುಕ್ ರೀತಿ ಕಥೆಗಳಾಗಿ ಬರಲು ಆರಂಭಿಸಿದ್ದು, ಅದರ ಇತಿಹಾಸವೆಲ್ಲ ನಿಮಗೆ ಗೊತ್ತಿರಬಹುದು.

ಆದ್ರೆ ನಿಜ ಜೀವನದಲ್ಲಿ ಸ್ಪೈಡರ್ ಮ್ಯಾನ್ ಅನ್ನು ನೀವು ಎಲ್ಲಾದ್ರು ನೋಡಿದ್ದೀರಾ? ಕಷ್ಟದಲ್ಲಿರುವ ವ್ಯಕ್ತಿಯನ್ನ ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ಜೀವ ಉಳಿಸಿದ ನಿಜ ಜೀವನದ ಸ್ಪೈಡರ್ ಮ್ಯಾನ ಕಥೆ ಇದು. ಹೌದು ಕೇರಳದಲ್ಲಿ ಕಂಡಕ್ಟರ್ ಒಬ್ಬ ತನ್ನ ಕಾರ್ಯದಿಂದಾಗಿ ಈಗ ಭಾರತದ ದೇಸಿ ಸ್ಪೈಡರ್ ಮ್ಯಾನ್ ಎಂಬ ಬಿರುದು ಪಡೆದಿದ್ದಾನೆ.
ಬಸ್ನಲ್ಲಿ ಪ್ರಯಾಣಿಕನೊಬ್ಬ ಬಸ್ನಿಂದ ಕೆಳಗೆ ಬೀಳುವಾಗ ಒಂದೇ ಕೈನಲ್ಲಿ ಆತನ ಜೀವ ಉಳಿಸಿದ ಆತನ ವಿಡಿಯೋ ವೈರಲ್ ಆಗಿದ್ದು, ಎಲ್ಲರು ಆತನ ಕಾರ್ಯ ಕಂಡು ಈತ ನಿಜವಾದ ಸ್ಪೈಡರ್ ಮ್ಯಾನ್ ಎನ್ನುತ್ತಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಸಹ ಆಗಿದ್ದು ಎಲ್ಲರು ಇದು ಸಾಧ್ಯವಾಗಿದ್ದು ಹೇಗೆ ಎಂಬ ಅಚ್ಚರಿಗೆ ಒಳಗಾಗಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಖಾಸಗಿ ಬಸ್ನಲ್ಲಿ ಕಂಡಕ್ಟರ್ ಟಿಕೆಟ್ ನೀಡುತ್ತಿದ್ದರೆ ಆತನ ಪಕ್ಕದಲ್ಲೇ ಒಬ್ಬ ಪ್ರಯಾಣಿಕ ನಿಂತಿರುವುದನ್ನು ನಾವು ನೋಡಬಹುದು. ಆದರೆ ಬಸ್ ವೇಗವಾಗಿ ಹೋಗುವಾಗ ಆತ ಆಯತಪ್ಪಿ ಇನ್ನೇನು ಕೇಳಗೆ ಬೀಳುತ್ತಾನೆ ಎನ್ನುವಷ್ಟರಲ್ಲಿ ಕಂಡಕ್ಟರ್ ಒಂದೇ ಕೈನಲ್ಲಿ ಆತನ ಹಿಡಿದುಕೊಳ್ಳುತ್ತಾನೆ. ಇದರಿಂದ ಆತ ಬಸ್ನಿಂದ ರೋಡಿಗೆ ಬೀಳುವುದರಿಂದ ಕ್ಷಣದಲ್ಲಿ ಪಾರಾಗುತ್ತಾನೆ. ಇದೆಲ್ಲವು ಕಣ್ಣು ಮಿಟುಕಿಸಿ ಬಿಡುವ ನಡುವೆ ನಡೆದು ಹೋಗುತ್ತದೆ.
ಕಂಡಕ್ಟರ್ ಆತನ ಮೇಲೆ ಎತ್ತಿ ಬಸ್ ಒಳಗೆ ಎಳೆದುಕೊಳ್ಳುತ್ತಾನೆ. ಬಳಿಕ ಬಸ್ನೊಳಗೆ ಇದ್ದ ಮಂದಿ ಬಸ್ನ ಡೋರ್ ಹಾಕಿಕೊಳ್ಳುತ್ತಾರೆ. ಈ ಘಟನೆ ಬಸ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರು ಥ್ರಿಲ್ಗೆ ಒಳಗಾಗಿದ್ದಾರೆ. ಏಕೆಂದರೆ ಕಂಡಕ್ಟರ್ನ ಸಮಯ ಪ್ರಜ್ಞೆಯಿಂದಾಗಿ ಒಂದು ಜೀವ ಉಳಿದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡುವ ಜೊತೆಗೆ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಜೊತೆಗೆ ಸಾವಿರಾರು ಮಂದಿ ಕಂಡಕ್ಟರ್ ಕಾರ್ಯ ಕಂಡು ಬೆರಗಾಗಿದ್ದಾರೆ. ಅಲ್ಲದೆ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡಿದ್ದಾರೆ.
"ಆ ವ್ಯಕ್ತಿ ನಿಜವಾಗಿಯೂ ರಜನಿಕಾಂತ್ ಅವರ ಪುನರ್ಜನ್ಮ" ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಹಾಸ್ಯಮಯವಾಗಿ 'ಆತ ಹಣ ನೀಡದೆ ಬಸ್ ಇಳಿಯಲು ಮುಂದಾದಾಗ ಕಂಡಕ್ಟರ್ ಕಷ್ಟ ಪಟ್ಟು ಹಿಡಿದಿದ್ಧಾನೆ' ಎಂದು ಹೇಳಿದ್ದಾರೆ.
ಆದ್ರೆ ಹಲವರು ಈತ ಭಾರತದ ನಿಜವಾದ ಸ್ಪೈಡರ್ ಮ್ಯಾನ್ ಎಂದಿದ್ದಾರೆ. ಪ್ರಯಾಣಿಕನಿಗೆ ಮರು ಜೀವ ನೀಡಿದ ಕಂಡಕ್ಟರ್ಗೆ ನಮ್ಮದೊಂದು ಸೆಲ್ಯೂಟ್ ಎಂದಿದ್ದಾರೆ. ಮತ್ತೆ ಕೆಲವರು ಬಸ್ನಲ್ಲಿ ಓಡಾಡುವಾಗ ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಒಂದು ಕ್ಷಣ ಮೈಮರೆತು ಇಂತಹ ದುರಂತಕ್ಕೆ ಬಲಿಯಾದರೆ ನಿಮ್ಮ ಕುಟುಂಬ ಬೀದಿಗೆ ಬರಲಿದೆ ಎಂದು ಬಳಕೆದಾರರೊಬ್ಬರು ಜಾಗೃತಿಯ ಮಾತುಗಳ ಆಡಿದ್ದಾರೆ. ಸದ್ಯ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.



Click it and Unblock the Notifications