Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನಿಜ ಜೀವನದಲ್ಲಿ ಸ್ಪೈಡರ್ ಮ್ಯಾನ್ ನೋಡಿದ್ದೀರಾ..? ಇಲ್ಲಿದ್ದಾನೆ ನೋಡಿ..!
ನೀವು ಹಾಲಿವುಡ್ನ ಸೂಪರ್ ಹಿಟ್ ಮೂವಿ ಸ್ಪೈಡರ್ ಮ್ಯಾನ್ ನೋಡಿರಬಹುದು. ಈಗಂತು ಈ ಸ್ಪೈಡರ್ ಮ್ಯಾನ್ ಸಿನಿಮಾದ ಮುಂದುವರೆದ ಭಾಗಗಳು ಸಹ ಬಂದಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಪೈಡರ್ ಮ್ಯಾನ್ ಸಿನಿಮಾ ನೋಡಿ ಆನಂದಿಸಿರುತ್ತಾರೆ.
ಸಿನಿಮಾದಲ್ಲಿ ದೊಡ್ಡ ಕಥೆ ಏನು ಇಲ್ಲದಿದ್ದರೂ ಕಷ್ಟದಲ್ಲಿರುವ ಜನರನ್ನು ಆ ಸಂಕಷ್ಟಗಳಿಂದ ಪಾರು ಮಾಡುವುದೇ ಈ ಸ್ಪೈಡರ್ ಮ್ಯಾನ್ನ ಕೆಲಸವಾಗಿರುತ್ತದೆ. ಹೀಗಾಗಿ ಇದೊಂದಿ ಸೂಪರ್ ಹೀರೋ ಸಿನಿಮಾ ಆಗಿತ್ತು. ಆರಂಭದಲ್ಲಿ ಇದೊಂದು ಕಾಮಿಕ್ ಬುಕ್ ರೀತಿ ಕಥೆಗಳಾಗಿ ಬರಲು ಆರಂಭಿಸಿದ್ದು, ಅದರ ಇತಿಹಾಸವೆಲ್ಲ ನಿಮಗೆ ಗೊತ್ತಿರಬಹುದು.

ಆದ್ರೆ ನಿಜ ಜೀವನದಲ್ಲಿ ಸ್ಪೈಡರ್ ಮ್ಯಾನ್ ಅನ್ನು ನೀವು ಎಲ್ಲಾದ್ರು ನೋಡಿದ್ದೀರಾ? ಕಷ್ಟದಲ್ಲಿರುವ ವ್ಯಕ್ತಿಯನ್ನ ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ಜೀವ ಉಳಿಸಿದ ನಿಜ ಜೀವನದ ಸ್ಪೈಡರ್ ಮ್ಯಾನ ಕಥೆ ಇದು. ಹೌದು ಕೇರಳದಲ್ಲಿ ಕಂಡಕ್ಟರ್ ಒಬ್ಬ ತನ್ನ ಕಾರ್ಯದಿಂದಾಗಿ ಈಗ ಭಾರತದ ದೇಸಿ ಸ್ಪೈಡರ್ ಮ್ಯಾನ್ ಎಂಬ ಬಿರುದು ಪಡೆದಿದ್ದಾನೆ.
ಬಸ್ನಲ್ಲಿ ಪ್ರಯಾಣಿಕನೊಬ್ಬ ಬಸ್ನಿಂದ ಕೆಳಗೆ ಬೀಳುವಾಗ ಒಂದೇ ಕೈನಲ್ಲಿ ಆತನ ಜೀವ ಉಳಿಸಿದ ಆತನ ವಿಡಿಯೋ ವೈರಲ್ ಆಗಿದ್ದು, ಎಲ್ಲರು ಆತನ ಕಾರ್ಯ ಕಂಡು ಈತ ನಿಜವಾದ ಸ್ಪೈಡರ್ ಮ್ಯಾನ್ ಎನ್ನುತ್ತಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಸಹ ಆಗಿದ್ದು ಎಲ್ಲರು ಇದು ಸಾಧ್ಯವಾಗಿದ್ದು ಹೇಗೆ ಎಂಬ ಅಚ್ಚರಿಗೆ ಒಳಗಾಗಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಖಾಸಗಿ ಬಸ್ನಲ್ಲಿ ಕಂಡಕ್ಟರ್ ಟಿಕೆಟ್ ನೀಡುತ್ತಿದ್ದರೆ ಆತನ ಪಕ್ಕದಲ್ಲೇ ಒಬ್ಬ ಪ್ರಯಾಣಿಕ ನಿಂತಿರುವುದನ್ನು ನಾವು ನೋಡಬಹುದು. ಆದರೆ ಬಸ್ ವೇಗವಾಗಿ ಹೋಗುವಾಗ ಆತ ಆಯತಪ್ಪಿ ಇನ್ನೇನು ಕೇಳಗೆ ಬೀಳುತ್ತಾನೆ ಎನ್ನುವಷ್ಟರಲ್ಲಿ ಕಂಡಕ್ಟರ್ ಒಂದೇ ಕೈನಲ್ಲಿ ಆತನ ಹಿಡಿದುಕೊಳ್ಳುತ್ತಾನೆ. ಇದರಿಂದ ಆತ ಬಸ್ನಿಂದ ರೋಡಿಗೆ ಬೀಳುವುದರಿಂದ ಕ್ಷಣದಲ್ಲಿ ಪಾರಾಗುತ್ತಾನೆ. ಇದೆಲ್ಲವು ಕಣ್ಣು ಮಿಟುಕಿಸಿ ಬಿಡುವ ನಡುವೆ ನಡೆದು ಹೋಗುತ್ತದೆ.
ಕಂಡಕ್ಟರ್ ಆತನ ಮೇಲೆ ಎತ್ತಿ ಬಸ್ ಒಳಗೆ ಎಳೆದುಕೊಳ್ಳುತ್ತಾನೆ. ಬಳಿಕ ಬಸ್ನೊಳಗೆ ಇದ್ದ ಮಂದಿ ಬಸ್ನ ಡೋರ್ ಹಾಕಿಕೊಳ್ಳುತ್ತಾರೆ. ಈ ಘಟನೆ ಬಸ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರು ಥ್ರಿಲ್ಗೆ ಒಳಗಾಗಿದ್ದಾರೆ. ಏಕೆಂದರೆ ಕಂಡಕ್ಟರ್ನ ಸಮಯ ಪ್ರಜ್ಞೆಯಿಂದಾಗಿ ಒಂದು ಜೀವ ಉಳಿದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡುವ ಜೊತೆಗೆ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಜೊತೆಗೆ ಸಾವಿರಾರು ಮಂದಿ ಕಂಡಕ್ಟರ್ ಕಾರ್ಯ ಕಂಡು ಬೆರಗಾಗಿದ್ದಾರೆ. ಅಲ್ಲದೆ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡಿದ್ದಾರೆ.
"ಆ ವ್ಯಕ್ತಿ ನಿಜವಾಗಿಯೂ ರಜನಿಕಾಂತ್ ಅವರ ಪುನರ್ಜನ್ಮ" ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಹಾಸ್ಯಮಯವಾಗಿ 'ಆತ ಹಣ ನೀಡದೆ ಬಸ್ ಇಳಿಯಲು ಮುಂದಾದಾಗ ಕಂಡಕ್ಟರ್ ಕಷ್ಟ ಪಟ್ಟು ಹಿಡಿದಿದ್ಧಾನೆ' ಎಂದು ಹೇಳಿದ್ದಾರೆ.
ಆದ್ರೆ ಹಲವರು ಈತ ಭಾರತದ ನಿಜವಾದ ಸ್ಪೈಡರ್ ಮ್ಯಾನ್ ಎಂದಿದ್ದಾರೆ. ಪ್ರಯಾಣಿಕನಿಗೆ ಮರು ಜೀವ ನೀಡಿದ ಕಂಡಕ್ಟರ್ಗೆ ನಮ್ಮದೊಂದು ಸೆಲ್ಯೂಟ್ ಎಂದಿದ್ದಾರೆ. ಮತ್ತೆ ಕೆಲವರು ಬಸ್ನಲ್ಲಿ ಓಡಾಡುವಾಗ ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಒಂದು ಕ್ಷಣ ಮೈಮರೆತು ಇಂತಹ ದುರಂತಕ್ಕೆ ಬಲಿಯಾದರೆ ನಿಮ್ಮ ಕುಟುಂಬ ಬೀದಿಗೆ ಬರಲಿದೆ ಎಂದು ಬಳಕೆದಾರರೊಬ್ಬರು ಜಾಗೃತಿಯ ಮಾತುಗಳ ಆಡಿದ್ದಾರೆ. ಸದ್ಯ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.



Click it and Unblock the Notifications











