Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತ ಒಂದೇ ಅಲ್ಲ ಈ 9 ದೇಶದಲ್ಲಿ ರಾಮಾಯಣವಿದೆ..! 300ಕ್ಕೂ ಹೆಚ್ಚು ರಾಮಕಥೆಗಳಿವೆ..!
ಇಡೀ ದೇಶವು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ದಿನಕ್ಕೆ ಕಾದುಕುಳಿತಿದೆ. ಜನವರಿ 22ರಂದು ಮಂದಿರ ಉದ್ಘಾಟನೆಯಾಗುತ್ತಿದ್ದು, ಭಕ್ತರು ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಇದರ ನಡುವೆ ಹಲವು ಕಡೆಗಳಲ್ಲಿ ರಾಮಾಯಣ ಕಂಥಾ ಹಂದರದ ನಾಟಕ, ರಾಮಾಯಣ ಧಾರವಾಹಿಗಳ ಪ್ರಸಾರ ಮಾಡಲಾಗುತ್ತಿದೆ. ಆದರೆ ನಿಮಗೆ ಗೊತ್ತಿಲ್ಲದ ಅಚ್ಚರಿ ವಿಚಾರ ಏನಂದ್ರೆ ಭಾರತ ಮಾತ್ರವಲ್ಲ ವಿದೇಶದಲ್ಲೂ ರಾಮಾಯಣವಿದೆ.
ಹೌದು ಜಪಾನ್, ಮಲೇಷ್ಯಾ ಮತ್ತು ಮಂಗೋಲಿಯಾ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಜನರು ಬಹಳ ಹಿಂದಿನಿಂದಲೂ ರಾಮನನ್ನು ಆರಾಧಿಸುತ್ತಿದ್ದಾರೆ ಮತ್ತು ಈ ದೇಶಗಳು ತಮ್ಮದೇ ಆದ ರಾಮಾಯಣವನ್ನು ಹೊಂದಿವೆ. ರಾಮನ ಜೀವನಕ್ಕೆ ಸಂಬಂಧಿಸಿದ ವಿವಿಧ ಕಥೆಗಳನ್ನು ಕೇಳಬಹುದು.
ಪ್ರಪಂಚದ ವಿವಿಧ ಭಾಗಗಳಲ್ಲಿ 300 ಕ್ಕೂ ಹೆಚ್ಚು ರಾಮಯಣ ಕಥೆಗಳು ಚಾಲ್ತಿಯಲ್ಲಿವೆ. ಇದಲ್ಲದೇ 2ರಿಂದ 3 ಸಾವಿರ ಜನಪದ ಕಥೆಗಳು ರಾಮಕಥೆಗೆ ಸಂಬಂಧಿಸಿವೆ. ರಾಮನಿಗೆ ಸಂಬಂಧಿಸಿದ ಕಥೆಗಳು ಎಷ್ಟು ದೇಶಗಳು ಮತ್ತು ಭಾಷೆಗಳಲ್ಲಿ ಅಸ್ತಿತ್ವದಲ್ಲಿವೆ ಎಂದು ತಿಳಿಯೋಣ.
ವಾಲ್ಮೀಕಿಯ ರಾಮಾಯಣ ಅತ್ಯಂತ ಹಳೆಯ ರಾಮನ ಕಥೆಯಲ್ಲ
ರಾಮಾಯಣದ ಅತ್ಯಂತ ಹಳೆಯ ಆವೃತ್ತಿಯನ್ನು ಸಾಮಾನ್ಯವಾಗಿ ವಾಲ್ಮೀಕಿ ರಾಮಾಯಣ ಎಂದು ಪರಿಗಣಿಸಲಾಗುತ್ತದೆ. ಆದರೆ ರಾಮನ ಮೇಲೆ ಬರೆದ ಮೊದಲ ಪುಸ್ತಕ ವಾಲ್ಮೀಕಿಯ ರಾಮಾಯಣವಲ್ಲ ಆದರೆ ಮೊದಲ ಪುಸ್ತಕ ದಶರಥ ಜಾತಕ. ರಾಮಾಯಣ ಬರೆಯುವ 100 ವರ್ಷಗಳ ಹಿಂದೆ ಬರೆಯಲಾಗಿದೆ ಎಂದು ನಂಬಲಾಗಿದೆ.

ಭಾರತವಲ್ಲದೆ ಈ ದೇಶಗಳಲ್ಲೂ ರಾಮಾಯಣವಿದೆ
ಭಾರತವಲ್ಲದೆ, ಬರ್ಮಾ, ಇಂಡೋನೇಷಿಯಾ, ಕಾಂಬೋಡಿಯಾ, ಲಾವೋಸ್, ಫಿಲಿಪೈನ್ಸ್, ಶ್ರೀಲಂಕಾ, ನೇಪಾಳ, ಥೈಲ್ಯಾಂಡ್, ಮಲೇಷ್ಯಾ, ಜಪಾನ್, ಮಂಗೋಲಿಯಾ, ವಿಯೆಟ್ನಾಂ ಮತ್ತು ಚೀನಾದಲ್ಲಿ ರಾಮಾಯಣದ ಆವೃತ್ತಿಗಳು ಲಭ್ಯವಿವೆ. ಹೆಚ್ಚಿನ ಆವೃತ್ತಿಗಳು ವಾಲ್ಮೀಕಿ ಋಷಿ ಬರೆದ ಆವೃತ್ತಿಯ ಸುತ್ತ ಸುತ್ತುತ್ತವೆ. ಅನೇಕ ಆವೃತ್ತಿಗಳು ಈ ಕಥೆಗಳ ಮೇಲೆ ಕೇಂದ್ರೀಕರಿಸುತ್ತವೆ. ಆದರೆ ಅಲ್ಲಿಯ ಹಿರಿಯರು ಈ ಕಥೆಗಳ ಬರೆದರು ಎನ್ನಲಾಗಿದೆ.
ಭಾರತದ ಪ್ರತಿಯೊಂದು ಭಾಷೆಗೂ ತನ್ನದೇ ಆದ ರಾಮಾಯಣವಿದೆ
ಸಂಸ್ಕೃತವಲ್ಲದೆ ಗುಜರಾತಿ, ಒರಿಯಾ, ತೆಲುಗು, ಕನ್ನಡ, ಬೆಂಗಾಲಿ, ಮರಾಠಿ, ಪಂಜಾಬಿ ಕಾಶ್ಮೀರಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ರಾಮಾಯಣ ಲಭ್ಯವಿದೆ. ಭಾರತದ ಪ್ರತಿಯೊಂದು ಭಾಷೆಯಲ್ಲೂ ರಾಮಕಥೆ ಇದೆ. ಸಂಸ್ಕೃತದಲ್ಲಿ ವಾಲ್ಮೀಕಿ, ವಶಿಷ್ಠ, ಅಗಸ್ತ್ಯ ಮತ್ತು ಕಾಳಿದಾಸರಂತಹ ಋಷಿಗಳು ಮತ್ತು ಕವಿಗಳ ಕೃತಿಗಳನ್ನು ಒಳಗೊಂಡಿರುವ ಸುಮಾರು 17 ರೀತಿಯ ಸಣ್ಣ ಮತ್ತು ದೊಡ್ಡ ರಾಮಕಥೆಗಳಿವೆ. ಒರಿಯಾ ಭಾಷೆಯಲ್ಲಿ ಸುಮಾರು 14 ಬಗೆಯ ರಾಮಕಥೆಗಳಿವೆ. ಎಲ್ಲಾ ಕಥಾವಸ್ತುಗಳು ಮೂಲತಃ ವಾಲ್ಮೀಕಿ ರಾಮಾಯಣದಿಂದ ಪ್ರೇರಿತವಾಗಿವೆ. ಗುಜರಾತಿಯಲ್ಲಿ ಇದರ 40ಕ್ಕೂ ಹೆಚ್ಚು ಆವೃತ್ತಿಗಳಿವೆ.
ಹಿಂದೂ ಧರ್ಮದ ಹೊರತಾಗಿ ಇತರ ಧರ್ಮಗಳಲ್ಲೂ ರಾಮನ ಉಲ್ಲೇಖವಿದೆ. ರಾಮನ ಮೇಲೆ ಬರೆದ ಮೊದಲ ಪಠ್ಯವಾದ ದಶರಥ ಜಾತಕವು ರಾಮಾಯಣದ ಬೌದ್ಧ ಆವೃತ್ತಿಯಾಗಿದೆ. ವಾಲ್ಮೀಕಿಯ ರಾಮಾಯಣ ಮತ್ತು ದಶರಥ ಜಾತಕದ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ರಾಜ ದಶರಥನು ತನ್ನ ಮಹತ್ವಾಕಾಂಕ್ಷೆಯ ಮೂರನೇ ಹೆಂಡತಿಯಿಂದ ರಕ್ಷಿಸಲು ರಾಮ, ಸೀತೆ ಮತ್ತು ಲಕ್ಷ್ಮಣರನ್ನು ಕಾಡಿನಲ್ಲಿ ವಾಸಿಸಲು ಕಳುಹಿಸಿದನು. ಇದರಲ್ಲಿ ಸೀತೆಯ ಅಪಹರಣದ ಉಲ್ಲೇಖವಿಲ್ಲ.
ಜೈನ ಧರ್ಮದ ರಾಮಾಯಣದಲ್ಲಿ ಲಕ್ಷ್ಮಣ ರಾವಣನನ್ನು ಕೊಂದನು
ರಾಮಾಯಣ ಮಹಾಕಾವ್ಯ ಜೈನ ಧರ್ಮದಲ್ಲಿ ಬಹಳ ಪ್ರಸಿದ್ಧವಾಗಿದೆ. ಅದರ ಎಲ್ಲಾ ಪಾತ್ರಗಳೂ ಜೈನರು. ಜೈನ ಧರ್ಮದ ರಾಮಾಯಣದ ಅತ್ಯಂತ ಪ್ರಭಾವಶಾಲಿ ಆವೃತ್ತಿಯಾದ ಪೌಮಾಚಾರಿಯಂ, ಎಲ್ಲಾ ಪಾತ್ರಗಳು ಮರ್ತ್ಯ ಎಂದು ಹೇಳುತ್ತದೆ. ಅವನಿಗೆ ಅಲೌಕಿಕ ಶಕ್ತಿಗಳಿಲ್ಲ. ಪಾತ್ರಗಳು ಕಾಡಿನಲ್ಲಿ ಇರುವಾಗ ಜೈನ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸುತ್ತವೆ. ರಾಮನು ಅಹಿಂಸಾವಾದಿ ಮತ್ತು ರಾವಣನನ್ನು ಕೊಲ್ಲುವವನು ಲಕ್ಷ್ಮಣ ಎಂದು ಆವೃತ್ತಿಯು ಹೇಳುತ್ತದೆ. ರಾವಣ ಮತ್ತು ಲಕ್ಷ್ಮಣ ಇಬ್ಬರೂ ನರಕಕ್ಕೆ ಹೋಗುತ್ತಾರೆ, ರಾಮನು ಜೈನ ಸನ್ಯಾಸಿಯಾಗುತ್ತಾನೆ ಮತ್ತು ಮೋಕ್ಷವನ್ನು ಪಡೆಯುತ್ತಾನೆ ಎಂದಿದೆ.
ರಮಾನಂದ ಸಾಗರ್ ಅವರ ರಾಮಾಯಣವು ಕೇವಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿಲ್ಲ
ಟಿವಿ ಧಾರಾವಾಹಿ ರಾಮಾಯಣ ಮಾಡುವಾಗ, ನಿರ್ದೇಶಕ ರಮಾನಂದ್ ಸಾಗರ್ ತಂಡವು 25 ಕ್ಕೂ ಹೆಚ್ಚು ರಾಮಕಥೆಗಳ ಮೇಲೆ ಸಂಶೋಧನೆ ನಡೆಸಿತು. ಆದರೆ, ರಾಮಕಥೆಗಳು ಇದಕ್ಕಿಂತ ಹೆಚ್ಚು. ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ, ರಾಮಚರಿತ ಮಾನಸ, ವಾಲ್ಮೀಕಿ ರಾಮಾಯಣವನ್ನು ಹೊರತುಪಡಿಸಿ, ತಮಿಳಿನಲ್ಲಿ ಬರೆದ ಕಂಬ ರಾಮಾಯಣದ ಘಟನೆಗಳನ್ನು ತೆಗೆದುಕೊಳ್ಳಲಾಗಿದೆ.



Click it and Unblock the Notifications