ಪುಟ್ಟಪರ್ತಿ ಟು ವೆನಿಜುವೆಲಾ.. ಅಂದಿನ ಅಧ್ಯಕ್ಷರಿಂದ ಇಂದಿನ ಅಧ್ಯಕ್ಷರವರೆಗೆ ಎಲ್ಲರೂ ಸಾಯಿ ಭಕ್ತರೇ! ಯಾರ್ಯಾರು?

ಸತ್ಯಸಾಯಿ ಬಾಬಾ ಪವಾಡ.. ವೆನಿಜುವೆಲಾ ಅಧ್ಯಕ್ಷರೇ ಪುಟ್ಟಪರ್ತಿಯ ಭಕ್ತರಾದ ರೋಚಕ ಕಥೆ! ಜಾಗತಿಕ ನಾಯಕರನ್ನು ಸೆಳೆದ ಸತ್ಯಸಾಯಿ ಮಹಿಮೆ. ಮದುರೋ, ಡೆಲ್ಸಿಯಂತಹವರ ಆಧ್ಯಾತ್ಮಿಕ ನಂಟು. ಇಲ್ಲಿದೆ ಕುತೂಹಲಕಾರಿ ಮಾಹಿತಿ. ಹೌದು, ಪುಟ್ಟಪರ್ತಿ (Puttaparthi) ಕೇವಲ ಭಾರತಕ್ಕೆ ಸೀಮಿತವಲ್ಲ, ಇದು ವಿಶ್ವಾದ್ಯಂತ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರ.

ದಕ್ಷಿಣ ಅಮೆರಿಕಾದ ವೆನಿಜುವೆಲಾ ಮತ್ತು ಪುಟ್ಟಪರ್ತಿ (puttaparthi to Venezuela) ನಡುವೆ ವಿಶೇಷ ಆಧ್ಯಾತ್ಮಿಕ ಸಂಬಂಧವಿದೆ. ಮಾಜಿ ಅಧ್ಯಕ್ಷ ನಿಕೋಲಸ್ ಮದುರೋರಿಂದ (nicolas maduro) ಪ್ರಸ್ತುತ ಪ್ರಮುಖ ನಾಯಕಿ ಡೆಲ್ಸಿ ರೊಡ್ರಿಗಸ್‌ವರೆಗೂ (Delcy Rodriguez) ಹಲವು ಗಣ್ಯರು ಸತ್ಯಸಾಯಿ ಬಾಬಾ ಅವರ ಅಚಲ ಭಕ್ತರು (sathya sai devotee). ವೆನಿಜುವೆಲಾ ನಾಯಕರು ಸಾಯಿ ಬಾಬಾರತ್ತ ಆಕರ್ಷಿತರಾದ ಕಥೆ ಇಲ್ಲಿದೆ.

Venezuela President Visit to Puttaparthi
Photo Credit: ಸಂಗ್ರಹ ಚಿತ್ರ

ಆಧ್ಯಾತ್ಮಿಕತೆಗೆ ಗಡಿಗಳಿಲ್ಲ ಎಂಬುದಕ್ಕೆ ಪುಟ್ಟಪರ್ತಿ ಜೀವಂತ ಸಾಕ್ಷಿ. ಸತ್ಯಸಾಯಿ ಬಾಬಾ ಅವರ ಸಂದೇಶಗಳು ಭಾರತವನ್ನು ಮೀರಿ ಖಂಡಾಂತರಗಳನ್ನು ದಾಟಿವೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ, ವೆನಿಜುವೆಲಾದ ಉನ್ನತ ನಾಯಕರಿಗೂ ಮತ್ತು ಪ್ರಶಾಂತಿ ನಿಲಯಕ್ಕೂ ಇರುವ ವಿಶೇಷ ಸಂಬಂಧವು ಜಾಗತಿಕವಾಗಿ ಚರ್ಚೆಗೊಳಗಾಗಿ ಕುತೂಹಲ ಕೆರಳಿಸಿದೆ.

ನಿಕೋಲಸ್ ಮದುರೋ ಮತ್ತು ಸಾಯಿ ಭಕ್ತಿ

ವೆನಿಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮದುರೋ ಬಂಧನಾ ನಂತರ, ಸತ್ಯಸಾಯಿ ಬಾಬಾ ಅವರೊಂದಿಗಿನ ಅವರ ಭಕ್ತಿಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದವು. ಅಮೆರಿಕಾದ ವಿಶೇಷ ಪಡೆಗಳಿಂದ ಬಂಧನಕ್ಕೊಳಗಾದ ಮದುರೋ, ದಶಕಗಳಿಂದ ಸಾಯಿ ಬಾಬಾ ಅವರ ಕಟ್ಟಾ ಭಕ್ತರಾಗಿದ್ದರು. ಅವರ ಈ ನಂಬಿಕೆ ಸಾರ್ವಜನಿಕವಾಗಿ ಚಿರಪರಿಚಿತವಾಗಿತ್ತು.

ಮದುರೋ ಅವರಿಗೆ ಮದುವೆಗೂ ಮುನ್ನವೇ ಪತ್ನಿ ಮೂಲಕ ಸಾಯಿ ಬಾಬಾ ಪರಿಚಯವಾಯಿತು. 2005ರಲ್ಲಿ ವಿದೇಶಾಂಗ ಸಚಿವರಾಗಿದ್ದಾಗ ಪತ್ನಿಯೊಂದಿಗೆ ಪುಟ್ಟಪರ್ತಿಗೆ ಭೇಟಿ ನೀಡಿ, ಬಾಬಾ ದರ್ಶನ ಪಡೆದರು. ಅವರ ಕಚೇರಿಯಲ್ಲಿ ಸದಾ ಸತ್ಯಸಾಯಿ ಬಾಬಾ ಭಾವಚಿತ್ರವಿರುತ್ತಿತ್ತು ಎಂಬುದು ಅವರ ಅಚಲ ನಂಬಿಕೆಗೆ ಸಾಕ್ಷಿ.

ನೂತನ ಅಧ್ಯಕ್ಷರ ಪುಟ್ಟಪರ್ತಿ ಪಯಣ

ಮದುರೋ ಬಂಧನಾ ನಂತರ, ವೆನಿಜುವೆಲಾದ ಸುಪ್ರೀಂ ಕೋರ್ಟ್ ಅಂದಿನ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್‌ರನ್ನು ತಾತ್ಕಾಲಿಕ ಅಧ್ಯಕ್ಷೆಯನ್ನಾಗಿ ನೇಮಿಸಿತು. ಅಚ್ಚರಿ ಎಂದರೆ, ಡೆಲ್ಸಿ ರೊಡ್ರಿಗಸ್ ಕೂಡ ಪುಟ್ಟಪರ್ತಿಯ ಸಾಯಿ ಬಾಬಾ ಅವರ ಪರಮ ಭಕ್ತೆ. ಅವರು ಕೇವಲ ಅನುಯಾಯಿಯಷ್ಟೇ ಅಲ್ಲದೆ, ಪುಟ್ಟಪರ್ತಿಗೆ ಹಲವು ಬಾರಿ ಭೇಟಿ ನೀಡಿದ ಇತಿಹಾಸವನ್ನೂ ಹೊಂದಿದ್ದಾರೆ.

ಪ್ರಶಾಂತಿ ನಿಲಯದಲ್ಲಿ ಡೆಲ್ಸಿ ಕಳೆದ ಸಮಯ

ಉಪಾಧ್ಯಕ್ಷೆಯಾಗಿ ಅಧಿಕಾರದಲ್ಲಿದ್ದಾಗ ಡೆಲ್ಸಿ ರೊಡ್ರಿಗಸ್ 2023ರ ಆಗಸ್ಟ್ ಮತ್ತು 2024ರ ಅಕ್ಟೋಬರ್‌ನಲ್ಲಿ ಪುಟ್ಟಪರ್ತಿಗೆ ಭೇಟಿ ನೀಡಿದ್ದರು. ಸಾಯಿ ಕುಲ್ವಂತ್ ಮಂಟಪದಲ್ಲಿರುವ ಸತ್ಯಸಾಯಿ ಮಹಾ ಸಮಾಧಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು. ಅಕ್ಟೋಬರ್ ಭೇಟಿಯ ಸಮಯದಲ್ಲಿ, ಭಾರತದಲ್ಲಿನ ವೆನಿಜುವೆಲಾ ರಾಯಭಾರಿ ಕಾಪಯಾ ಗೊನ್ಜಾಲೆಜ್ ಕೂಡ ಅವರೊಂದಿಗೆ ಇದ್ದರು.

ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಆರ್.ಜೆ. ರತ್ನಾಕರ್ ಅವರು ಡೆಲ್ಸಿಯವರನ್ನು ಸ್ವಾಗತಿಸಿ, ಆಶ್ರಮದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಭಾವುಕರಾದ ಡೆಲ್ಸಿ, "ಬಾಬಾ ಅವರ ದಿವ್ಯ ಸನ್ನಿಧಿಯಲ್ಲಿ ಕಾಲ ಕಳೆಯುವುದರಿಂದ ನನಗೆ ಅಪಾರ ಮಾನಸಿಕ ಶಾಂತಿ ಮತ್ತು ಸಮಾಧಾನ ಲಭಿಸಿದೆ" ಎಂದು ನುಡಿದರು.

ವೆನಿಜುವೆಲಾದಲ್ಲಿ ಭಾರತೀಯ ಆಧ್ಯಾತ್ಮಿಕತೆ

ವೆನಿಜುವೆಲಾ ರಾಷ್ಟ್ರ ಭಾರತೀಯ ಆಧ್ಯಾತ್ಮಿಕ ಚಿಂತನೆಗಳಿಗೆ ಮುಕ್ತವಾಗಿದೆ. ಸತ್ಯಸಾಯಿ ಸೇವಾ ಕೇಂದ್ರಗಳೊಂದಿಗೆ ಬ್ರಹ್ಮಕುಮಾರಿಗಳು ಮತ್ತು ರಾಧಾ ಸ್ವಾಮಿಗಳಂತಹ ಹಲವು ಆಧ್ಯಾತ್ಮಿಕ ಸಂಸ್ಥೆಗಳು ಅಲ್ಲಿ ಸಕ್ರಿಯವಾಗಿವೆ. ಪ್ರಸ್ತುತ ದೇಶದ ಸರ್ವೋಚ್ಚ ಅಧಿಕಾರದಲ್ಲಿರುವ ಡೆಲ್ಸಿ ರೊಡ್ರಿಗಸ್ ಸಾಯಿ ಭಕ್ತರಾಗಿರುವುದು ಭಾರತದ "ವಸುಧೈವ ಕುಟುಂಬಕಂ" ತತ್ವಕ್ಕೆ ಕೈಗನ್ನಡಿಯಾಗಿದೆ.

ರಾಜಕೀಯ ಸಂಘರ್ಷ ಹಾಗೂ ಬಿಕ್ಕಟ್ಟುಗಳ ನಡುವೆಯೂ, ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಮೇಲಿನ ನಂಬಿಕೆ ವೆನಿಜುವೆಲಾ ನಾಯಕರನ್ನು ಭಾರತದೊಂದಿಗೆ ಬೆಸೆದಿದೆ. ಒಬ್ಬ ಅಧ್ಯಕ್ಷರು ಬಂಧಿತರಾದರೂ, ನೂತನ ಅಧ್ಯಕ್ಷರು ಅದೇ ಆಧ್ಯಾತ್ಮಿಕ ಮಾರ್ಗದಲ್ಲಿ ಮುಂದುವರಿಯುತ್ತಿರುವುದು ಅಚ್ಚರಿಯ ಸಂಗತಿ. ದಕ್ಷಿಣ ಅಮೆರಿಕಾದ ರಾಜಕೀಯ ವಲಯದಲ್ಲೂ ಸಾಯಿ ಶಾಂತಿ ಮಂತ್ರ ಮೊಳಗುತ್ತಿರುವುದು ವಿಶೇಷ.

English summary

Puttaparthi's Spiritual Link with Venezuela: From Nicolas Maduro to New President Delcy Rodriguez

Puttaparthi's Spiritual Link with Venezuela: From Nicolas Maduro to New President Delcy Rodriguez
X
Desktop Bottom Promotion