ನಿಮಗೆ ಗೊತ್ತಾ? ಪುರಿ ಜಗನ್ನಾಥ ದೇವಾಲಯದ ಮೇಲೆ ಹಾರಲ್ಲ ಹದ್ದು-ಕಾಗೆ! ಏನಿದು ರಹಸ್ಯ?

ನಂಬಿಕೆ ಬೇರೆ, ಸತ್ಯ ಬೇರೆ. ಪುರಿ ಜಗನ್ನಾಥ ದೇವಾಲಯದ ಮೇಲೆ ಹಾರಾಡದ ಹದ್ದು ಮತ್ತು ಕಾಗೆಗಳು! ಏನಿದು ರಹಸ್ಯ? ಪುರಿಯ ಜಗನ್ನಾಥ ದೇವಾಲಯದ (Jagannath Temple) ಮೇಲೆ ವಿಮಾನಗಳು ಹಾರಾಟ ನಡೆಸದಿರಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಕೆಲವು ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದವಾಗಿವೆ, ಇನ್ನು ಕೆಲವು ವೈಜ್ಞಾನಿಕ ಕಾರಣಗಳನ್ನು ಹೊಂದಿವೆ. ಅದರಂತೆಯೇ, ಪುರಿ ದೇವಸ್ಥಾನದ ಮೇಲೆ ಹದ್ದುಗಳು ಮತ್ತು ಕಾಗೆಗಳು ಹಾರುವುದಿಲ್ಲ. ಇದರ ಹಿಂದೆಯೂ ಕೆಲವು (Jagannath Puri Temple Mystery) ಕಾರಣಗಳಿವೆ. ಆದ್ದರಿಂದಲೇ, ಭಾರತದ ಇತರೆ ದೇವಾಲಯಗಳಲ್ಲಿ ಇದು ಅಪರೂಪ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಪುರಿಯ ಪ್ರಸಿದ್ಧ ಜಗನ್ನಾಥ ದೇವಾಲಯವು ಭಕ್ತರಿಗೆ ಬಹಳ ಮಹತ್ವವುಳ್ಳ ಸ್ಥಳ. ಇದು ಭಾರತದ ಚಾರ್ ಧಾಮ್ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ದೇವಾಲಯವು ತನ್ನ ಧಾರ್ಮಿಕ ಮಹತ್ವದ ಜೊತೆಗೆ, ಅನೇಕ ರಹಸ್ಯಗಳು ಮತ್ತು ಪವಾಡಗಳಿಗೂ ಹೆಸರುವಾಸಿ. ಈಗಾಗಲೇ ಪುರಿಯಲ್ಲಿ ರಥಯಾತ್ರೆ (Jagannath Rath Yatra 2025) ಪ್ರಾರಂಭವಾಗಿದೆ. ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪುರಿ ಜಗನ್ನಾಥ ದೇವಾಲಯದ ಕುರಿತಾದ ಒಂದು ಅಚ್ಚರಿಯ ವಿಷಯವೆಂದರೆ, ಈ ದೇವಾಲಯದ ಮೇಲೆ ಯಾವುದೇ ಪಕ್ಷಿಗಳು ಹಾರಾಡುವುದಿಲ್ಲ. ಹದ್ದು, ಕಾಗೆ ಅಥವಾ ಯಾವುದೇ ರೀತಿಯ ಪಕ್ಷಿಗಳಾಗಲಿ, ಈ ದೇವಾಲಯದ ಮೇಲಿನ ಆಕಾಶವು ಸಂಪೂರ್ಣವಾಗಿ ಖಾಲಿ ಖಾಲಿ. ಹೀಗೇಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಅದಕ್ಕೆ ಇಲ್ಲಿದೆ ಉತ್ತರ.

Puri Jagannath Temple

ದೇವಸ್ಥಾನದ ಮೇಲೆ ಪಕ್ಷಿಗಳು ಏಕೆ ಹಾರಾಡಲ್ಲ?

ಪುರಿಯ ಸ್ಥಳೀಯರು ಮತ್ತು ಅರ್ಚಕರ ಪ್ರಕಾರ, ಜಗನ್ನಾಥನ ದೈವತ್ವವು ತುಂಬಾ ಪ್ರಬಲವಾಗಿದೆ. ಹೀಗಾಗಿ, ದೇವಾಲಯದ ಮೇಲೆ ಯಾವುದೇ ಜೀವಿಗಳು ಹಾರಲು ಸಾಧ್ಯವಿಲ್ಲ. ಈ ನಂಬಿಕೆ ಹಲವು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ನೀವು ದೇವಾಲಯದ ಆವರಣವನ್ನು ಪ್ರವೇಶಿಸಿ ಮೇಲೆ ನೋಡಿದಾಗ, ಒಂದು ಪಕ್ಷಿಯೂ ಕಾಣಿಸುವುದಿಲ್ಲ. ಅಲ್ಲದೆ, ಯಾವುದೇ ವಿಮಾನಗಳು ಸಹ ಆ ದಿಕ್ಕಿನಲ್ಲಿ ಚಲಿಸುವುದಿಲ್ಲ. ಇದು ಅಚ್ಚರಿಯನ್ನುಂಟು ಮಾಡುತ್ತದೆ. ವಿಮಾನಗಳು ದೇವಾಲಯದ ಮೇಲೆ ಹಾರಾಡುವುದಿಲ್ಲ. ರಾಜ್ಯ ಸರ್ಕಾರವು ಈ ಪ್ರದೇಶವನ್ನು ನಿಷೇಧಿತ ವಲಯವೆಂದು ಘೋಷಿಸಿಲ್ಲ. ಆದರೂ, ಇಲ್ಲಿ ಯಾವುದೇ ವಿಮಾನಗಳು ಹಾರಾಡುವುದಿಲ್ಲ. ಇದು ದೈವಿಕ ಶಕ್ತಿಯಿಂದ ಮಾತ್ರ ಸಾಧ್ಯ.

ಧಾರ್ಮಿಕ ನಂಬಿಕೆ ಏನು ಹೇಳುತ್ತದೆ?

ಇದರ ಹಿಂದಿನ ಧಾರ್ಮಿಕ ರಹಸ್ಯ ಹೀಗಿದೆ. ಪುರಿ ದೇವಾಲಯದ ಮೇಲೆ ಗರುಡ ದೇವನು, ವಿಷ್ಣುವಿನ ವಾಹನವು ಸದಾ ರಕ್ಷಿಸುತ್ತಿರುತ್ತದೆ ಎಂದು ಹೇಳಲಾಗುತ್ತದೆ. ಗರುಡನ ಉಪಸ್ಥಿತಿಯಿಂದಾಗಿ ಇತರೆ ಪಕ್ಷಿಗಳು ಆ ಪ್ರದೇಶವನ್ನು ಪ್ರವೇಶಿಸುವುದಿಲ್ಲ. ಮತ್ತೊಂದು ನಂಬಿಕೆಯ ಪ್ರಕಾರ, ಇದು ದೇವತೆಗಳ ಪ್ರದೇಶವಾಗಿರುವುದರಿಂದ, ಮನುಷ್ಯರು ಮತ್ತು ಪ್ರಾಣಿ-ಪಕ್ಷಿಗಳ ಸಾಮಾನ್ಯ ಚಟುವಟಿಕೆಗಳು ಇಲ್ಲಿ ಸಾಧ್ಯವಾಗುವುದಿಲ್ಲ ಎಂಬ ನಂಬಿಕೆಯಿದೆ. ದೇವಾಲಯದ ಮೇಲ್ಭಾಗದಲ್ಲಿರುವ ನೀಲಚಕ್ರದಲ್ಲಿ ಯಾವ ರೀತಿಯ ಲೋಹವನ್ನು ಬಳಸಲಾಗಿದೆ ಎಂದು ಇಲ್ಲಿಯವರೆಗೆ ವಿಶ್ಲೇಷಿಸಲಾಗಿಲ್ಲ. ಒಂದು ವೇಳೆ ವಿಮಾನವು ನೀಲಚಕ್ರದ ಸಮೀಪಕ್ಕೆ ಬಂದರೆ ಏನಾಗುತ್ತದೆಯೋ ಎಂಬ ಭಯ ಎಲ್ಲರಲ್ಲಿದೆ.

ವೈಜ್ಞಾನಿಕ ದೃಷ್ಟಿಕೋನ ಏನು?

ದೇವಾಲಯದ ಎತ್ತರ ಮತ್ತು ಸುತ್ತಮುತ್ತಲಿನ ಕಾಂತೀಯ ಚಟುವಟಿಕೆಗಳಿಂದಾಗಿ ಪಕ್ಷಿಗಳು ಈ ಪ್ರದೇಶದಿಂದ ದೂರವಿರುತ್ತವೆ ಎಂಬುದು ಕೆಲವು ತಜ್ಞರ ಅಭಿಪ್ರಾಯ. ದೇವಾಲಯದ ಮೇಲ್ಭಾಗದಲ್ಲಿ ವಾಯುರೋಧಕ ನಿರ್ಮಾಣ ವ್ಯವಸ್ಥೆಯಿದ್ದು, ಅದು ಗಾಳಿಯ ದಿಕ್ಕನ್ನು ಮೇಲಕ್ಕೆ ತಳ್ಳುತ್ತದೆ. ಇದು ಪಕ್ಷಿಗಳು ಹಾರಲು ಅನುಕೂಲಕರವಾಗಿರುವುದಿಲ್ಲ. ಕೆಲವು ವರದಿಗಳ ಪ್ರಕಾರ, ವಾತಾವರಣದಲ್ಲಿನ ವಿದ್ಯುತ್ ಆವೇಶ ಮತ್ತು ವಿದ್ಯುತ್ಕಾಂತೀಯ ಕ್ಷೇತ್ರವು ಈ ಪ್ರದೇಶವನ್ನು ಪಕ್ಷಿಗಳಿಗೆ ಅಹಿತಕರವಾಗಿಸುತ್ತದೆ.

ಜಗನ್ನಾಥ ದೇವಾಲಯದ ರಚನೆ

ಜಗನ್ನಾಥ ದೇವಾಲಯದ ರಚನೆಯು ಅದ್ಭುತವಾಗಿದೆ. ದಿನದ ಯಾವುದೇ ಸಮಯದಲ್ಲಿ ಇದರ ನೆರಳು ಬೀಳುವುದಿಲ್ಲ. ಇದು ಎಂಜಿನಿಯರಿಂಗ್ ಅದ್ಭುತವೋ ಅಥವಾ ದೈವಿಕ ಶಕ್ತಿಯಿಂದ ಸಾಧ್ಯವಾಯಿತೋ ಎಂಬುದು ಇನ್ನೂ ತಿಳಿದಿಲ್ಲ. ದೇವಾಲಯಕ್ಕೆ ನಾಲ್ಕು ದ್ವಾರಗಳಿವೆ. ಸಿಂಹದ್ವಾರವು ದೇವಾಲಯದ ಮುಖ್ಯ ದ್ವಾರವಾಗಿದೆ. ನೀವು ಸಿಂಹದ್ವಾರದ ಮೂಲಕ ಒಳಗೆ ಪ್ರವೇಶಿಸುವಾಗ, ಸಮುದ್ರದ ಅಲೆಗಳ ಶಬ್ದವು ಸ್ಪಷ್ಟವಾಗಿ ಕೇಳಿಸುತ್ತದೆ. ಆದರೆ, ಒಮ್ಮೆ ನೀವು ಸಿಂಹದ್ವಾರವನ್ನು ದಾಟಿ, ಹಿಂದಕ್ಕೆ ತಿರುಗಿ ಅದೇ ದಿಕ್ಕಿನಲ್ಲಿ ನಡೆದರೆ, ನಿಮಗೆ ಅಲೆಗಳ ಶಬ್ದ ಕೇಳಿಸುವುದಿಲ್ಲ. ನೀವು ದೇವಾಲಯದ ಒಳಗೆ ಇರುವವರೆಗೂ ನಿಮಗೆ ಅಲೆಗಳ ಶಬ್ದ ಕೇಳಿಸುವುದಿಲ್ಲ.

ಒಟ್ಟಾರೆಯಾಗಿ, ಪುರಿ ಜಗನ್ನಾಥ ದೇವಾಲಯದ ಮೇಲೆ ಪಕ್ಷಿಗಳು ಮತ್ತು ವಿಮಾನಗಳು ಹಾರಾಡದಿರಲು ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಈ ಕಾರಣಗಳಿಂದಾಗಿಯೇ, ಈ ದೇವಾಲಯವು ರಹಸ್ಯಮಯವಾಗಿಯೂ ಉಳಿದುಕೊಂಡಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿವೆ.

English summary

Puri Jagannath Temple Mystery: Why do birds and planes not fly above the Jagannath Temple of Puri?

Puri Jagannath Temple Mystery: Why do birds and planes not fly above the Jagannath Temple of Puri?
Story first published: Monday, June 30, 2025, 18:10 [IST]
X
Desktop Bottom Promotion