Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಯಶಸ್ಸು, ಕೀರ್ತಿಗಾಗಿ ಯಾವ ರಾಶಿಯವರು ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು?
ಗಣೇಶನ ಆರಾಧನೆ ಮಾಡಿದರೆ ಬದುಕಿನಲ್ಲಿ ಎದುರಾಗಿರುವ ಎಲ್ಲಾ ವಿಘ್ನಗಳು ದೂರವಾಗುವುದು. ಭಕ್ತರು ಭಕ್ತಿಯಿಂದ ಬೇಡಿದ ವರವನ್ನು ಗಣೇಶ ಕರುಣಿಸುತ್ತಾನೆ, ಗಣೇಶನನ್ನು ಆರಾಧನೆ ಮಾಡುವುದರಿಂದ ಆಸ್ತಿ, ಅಂತಸ್ತು, ಕೀರ್ತಿ, ಜ್ಞಾನ ಎಲ್ಲವೂ ಹೆಚ್ಚಾಗುವುದು. ಯಾವುದೇ ಪೂಜೆಗೆ ಮುನ್ನ ಗಣೇಶನ ಪೂಜೆ ಮಾಡಲೇಬೇಕು. ಗಣೇಶನಿಗೆ ಪೂಜೆ ಸಲ್ಲಿಸದೆ ಯಾವುದೇ ಪೂಜೆ ಮಾಡಲ್ಲ.
ಗಣೇಶನ ಹೇಗೆ ಪೂಜೆ ಮಾಡಿದರೂ ಅವನು ತೃಪ್ತಿನಾಗುತ್ತಾನೆ, ಆದರೆ ನಿಮ್ಮ ರಾಶಿಗೆ ಅನುಗುಣವಾಗಿ ಮಾಡಿದರೂ ಇನ್ನೂ ಹೆಚ್ಚಿನ ಫಲ ಸಿಗುವುದು. ಜ್ಯೋತಿಷ್ಯವು ಗಣೇಶನನ್ನು ರಾಶಿಯ ಪ್ರಕಾರ ಹೇಗೆ ಆರಾಧಿಸಬೇಕು, ಗಣೇಶನ ಯಾವ ರೂಪವನ್ನು ಆರಾಧಿಸಬೇಕು ಎಂದು ಹೇಳಿದೆ. ನಮ್ಮ ಹಿಂದಿನ ಲೇಖನದಲ್ಲಿ ನಿಮ್ಮ ರಾಶಿಯ ಪ್ರಕಾರ ಗಣೇಶನಿಗೆ ಯಾವ ರೀತಿಯ ಪೂಜೆ ಸಲ್ಲಿಸಬೇಕು ಎಂದು ಹೇಳಿದ್ದೆವು, ಈ ಲೇಖನದಲ್ಲಿ ಯಾವ ರಾಶಿಯ ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು ಎಂದು ಹೇಳಲಾಗಿದೆ.
ನೀವು ನಿಮ್ಮ ರಾಶಿಗೆ ಅನುಗುಣವಾಗಿ ಗಣಪನನ್ನು ಆರಾಧಿಸುವುದರಿಂದ ಬದುಕಿನಲ್ಲಿರುವ ಸಮಸ್ಯೆಗಳು ದೂರಾಗುವುದು, ಯಶಸ್ಸು ದೊರೆಯುವುದು. ಬನ್ನಿ ನೀವು ಪ್ರತಿನಿತ್ಯ ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು ಎಂದು ನೋಡೋಣ:

ಮೇಷ ರಾಶಿ ಹಾಗೂ ವೃಶ್ಚಿಕ ರಾಶಿ
ಮೇಷ ಹಾಗೂ ವೃಶ್ಚಿಕ ರಾಶಿಯವರು ಹವಳದಿಂದ ಮಾಡಿದ ಗಣೇಶನ ಆರಾಧನೆ ಮಾಡಿ.

ವೃಷಭ ಹಾಗೂ ತುಲಾ ರಾಶಿ
ವೃಷಭ ಹಾಗೂ ತುಲಾ ರಾಶಿಯವರು ಶ್ವೇತಾರಕ್ ಗಣೇಶ (Aak Ganesh) ಮೂರ್ತಿಯನ್ನು ಆರಾಧಿಸಬೇಕು.

ಮಿಥುನ ಹಾಗೂ ಕನ್ಯಾ ರಾಶಿಯವರು
ಮಿಥುನ ಹಾಗೂ ಕನ್ಯಾ ರಾಶಿಯವರು ಯಾವುದೇ ಬಗೆಯ ಗಣೇಶನಿಗೆ ಆರಾಧನೆ ಮಾಡಬಹುದು.

ಕರ್ಕ ಹಾಗೂ ಸಿಂಹ ರಾಶಿಯವರು
ಕರ್ಕ ಹಾಗೂ ಸಿಂಹ ರಾಶಿಯವರು ಪೀತಾಂಬರ ಗಣೇಶನ ಆರಾಧನೆ ಮಾಡಬೇಕು.

ಧನು ಹಾಗೂ ಮೀನ ರಾಶಿಯವರು
ಧನು ಹಾಗೂ ಮೀನ ರಾಶಿಯವರು ಹರಿದ್ರಾ ಗಣೇಶನ ಆರಾಧನೆ ಮಾಡುವುದು ಒಳ್ಳೆಯದು.

ಕುಂಭ ಹಾಗೂ ಮಕರ ರಾಶಿ
ಕುಂಭ ಹಾಗೂ ಮಕರ ರಾಶಿಯವರು ಯಾವುದೇ ಲೋಹದಿಂದ ತಯಾರಿಸಿದ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯದು.



Click it and Unblock the Notifications