Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಯಶಸ್ಸು, ಕೀರ್ತಿಗಾಗಿ ಯಾವ ರಾಶಿಯವರು ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು?
ಗಣೇಶನ ಆರಾಧನೆ ಮಾಡಿದರೆ ಬದುಕಿನಲ್ಲಿ ಎದುರಾಗಿರುವ ಎಲ್ಲಾ ವಿಘ್ನಗಳು ದೂರವಾಗುವುದು. ಭಕ್ತರು ಭಕ್ತಿಯಿಂದ ಬೇಡಿದ ವರವನ್ನು ಗಣೇಶ ಕರುಣಿಸುತ್ತಾನೆ, ಗಣೇಶನನ್ನು ಆರಾಧನೆ ಮಾಡುವುದರಿಂದ ಆಸ್ತಿ, ಅಂತಸ್ತು, ಕೀರ್ತಿ, ಜ್ಞಾನ ಎಲ್ಲವೂ ಹೆಚ್ಚಾಗುವುದು. ಯಾವುದೇ ಪೂಜೆಗೆ ಮುನ್ನ ಗಣೇಶನ ಪೂಜೆ ಮಾಡಲೇಬೇಕು. ಗಣೇಶನಿಗೆ ಪೂಜೆ ಸಲ್ಲಿಸದೆ ಯಾವುದೇ ಪೂಜೆ ಮಾಡಲ್ಲ.
ಗಣೇಶನ ಹೇಗೆ ಪೂಜೆ ಮಾಡಿದರೂ ಅವನು ತೃಪ್ತಿನಾಗುತ್ತಾನೆ, ಆದರೆ ನಿಮ್ಮ ರಾಶಿಗೆ ಅನುಗುಣವಾಗಿ ಮಾಡಿದರೂ ಇನ್ನೂ ಹೆಚ್ಚಿನ ಫಲ ಸಿಗುವುದು. ಜ್ಯೋತಿಷ್ಯವು ಗಣೇಶನನ್ನು ರಾಶಿಯ ಪ್ರಕಾರ ಹೇಗೆ ಆರಾಧಿಸಬೇಕು, ಗಣೇಶನ ಯಾವ ರೂಪವನ್ನು ಆರಾಧಿಸಬೇಕು ಎಂದು ಹೇಳಿದೆ. ನಮ್ಮ ಹಿಂದಿನ ಲೇಖನದಲ್ಲಿ ನಿಮ್ಮ ರಾಶಿಯ ಪ್ರಕಾರ ಗಣೇಶನಿಗೆ ಯಾವ ರೀತಿಯ ಪೂಜೆ ಸಲ್ಲಿಸಬೇಕು ಎಂದು ಹೇಳಿದ್ದೆವು, ಈ ಲೇಖನದಲ್ಲಿ ಯಾವ ರಾಶಿಯ ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು ಎಂದು ಹೇಳಲಾಗಿದೆ.
ನೀವು ನಿಮ್ಮ ರಾಶಿಗೆ ಅನುಗುಣವಾಗಿ ಗಣಪನನ್ನು ಆರಾಧಿಸುವುದರಿಂದ ಬದುಕಿನಲ್ಲಿರುವ ಸಮಸ್ಯೆಗಳು ದೂರಾಗುವುದು, ಯಶಸ್ಸು ದೊರೆಯುವುದು. ಬನ್ನಿ ನೀವು ಪ್ರತಿನಿತ್ಯ ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು ಎಂದು ನೋಡೋಣ:

ಮೇಷ ರಾಶಿ ಹಾಗೂ ವೃಶ್ಚಿಕ ರಾಶಿ
ಮೇಷ ಹಾಗೂ ವೃಶ್ಚಿಕ ರಾಶಿಯವರು ಹವಳದಿಂದ ಮಾಡಿದ ಗಣೇಶನ ಆರಾಧನೆ ಮಾಡಿ.

ವೃಷಭ ಹಾಗೂ ತುಲಾ ರಾಶಿ
ವೃಷಭ ಹಾಗೂ ತುಲಾ ರಾಶಿಯವರು ಶ್ವೇತಾರಕ್ ಗಣೇಶ (Aak Ganesh) ಮೂರ್ತಿಯನ್ನು ಆರಾಧಿಸಬೇಕು.

ಮಿಥುನ ಹಾಗೂ ಕನ್ಯಾ ರಾಶಿಯವರು
ಮಿಥುನ ಹಾಗೂ ಕನ್ಯಾ ರಾಶಿಯವರು ಯಾವುದೇ ಬಗೆಯ ಗಣೇಶನಿಗೆ ಆರಾಧನೆ ಮಾಡಬಹುದು.

ಕರ್ಕ ಹಾಗೂ ಸಿಂಹ ರಾಶಿಯವರು
ಕರ್ಕ ಹಾಗೂ ಸಿಂಹ ರಾಶಿಯವರು ಪೀತಾಂಬರ ಗಣೇಶನ ಆರಾಧನೆ ಮಾಡಬೇಕು.

ಧನು ಹಾಗೂ ಮೀನ ರಾಶಿಯವರು
ಧನು ಹಾಗೂ ಮೀನ ರಾಶಿಯವರು ಹರಿದ್ರಾ ಗಣೇಶನ ಆರಾಧನೆ ಮಾಡುವುದು ಒಳ್ಳೆಯದು.

ಕುಂಭ ಹಾಗೂ ಮಕರ ರಾಶಿ
ಕುಂಭ ಹಾಗೂ ಮಕರ ರಾಶಿಯವರು ಯಾವುದೇ ಲೋಹದಿಂದ ತಯಾರಿಸಿದ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯದು.



Click it and Unblock the Notifications