Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಯಶಸ್ಸು, ಕೀರ್ತಿಗಾಗಿ ಯಾವ ರಾಶಿಯವರು ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು?
ಗಣೇಶನ ಆರಾಧನೆ ಮಾಡಿದರೆ ಬದುಕಿನಲ್ಲಿ ಎದುರಾಗಿರುವ ಎಲ್ಲಾ ವಿಘ್ನಗಳು ದೂರವಾಗುವುದು. ಭಕ್ತರು ಭಕ್ತಿಯಿಂದ ಬೇಡಿದ ವರವನ್ನು ಗಣೇಶ ಕರುಣಿಸುತ್ತಾನೆ, ಗಣೇಶನನ್ನು ಆರಾಧನೆ ಮಾಡುವುದರಿಂದ ಆಸ್ತಿ, ಅಂತಸ್ತು, ಕೀರ್ತಿ, ಜ್ಞಾನ ಎಲ್ಲವೂ ಹೆಚ್ಚಾಗುವುದು. ಯಾವುದೇ ಪೂಜೆಗೆ ಮುನ್ನ ಗಣೇಶನ ಪೂಜೆ ಮಾಡಲೇಬೇಕು. ಗಣೇಶನಿಗೆ ಪೂಜೆ ಸಲ್ಲಿಸದೆ ಯಾವುದೇ ಪೂಜೆ ಮಾಡಲ್ಲ.
ಗಣೇಶನ ಹೇಗೆ ಪೂಜೆ ಮಾಡಿದರೂ ಅವನು ತೃಪ್ತಿನಾಗುತ್ತಾನೆ, ಆದರೆ ನಿಮ್ಮ ರಾಶಿಗೆ ಅನುಗುಣವಾಗಿ ಮಾಡಿದರೂ ಇನ್ನೂ ಹೆಚ್ಚಿನ ಫಲ ಸಿಗುವುದು. ಜ್ಯೋತಿಷ್ಯವು ಗಣೇಶನನ್ನು ರಾಶಿಯ ಪ್ರಕಾರ ಹೇಗೆ ಆರಾಧಿಸಬೇಕು, ಗಣೇಶನ ಯಾವ ರೂಪವನ್ನು ಆರಾಧಿಸಬೇಕು ಎಂದು ಹೇಳಿದೆ. ನಮ್ಮ ಹಿಂದಿನ ಲೇಖನದಲ್ಲಿ ನಿಮ್ಮ ರಾಶಿಯ ಪ್ರಕಾರ ಗಣೇಶನಿಗೆ ಯಾವ ರೀತಿಯ ಪೂಜೆ ಸಲ್ಲಿಸಬೇಕು ಎಂದು ಹೇಳಿದ್ದೆವು, ಈ ಲೇಖನದಲ್ಲಿ ಯಾವ ರಾಶಿಯ ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು ಎಂದು ಹೇಳಲಾಗಿದೆ.
ನೀವು ನಿಮ್ಮ ರಾಶಿಗೆ ಅನುಗುಣವಾಗಿ ಗಣಪನನ್ನು ಆರಾಧಿಸುವುದರಿಂದ ಬದುಕಿನಲ್ಲಿರುವ ಸಮಸ್ಯೆಗಳು ದೂರಾಗುವುದು, ಯಶಸ್ಸು ದೊರೆಯುವುದು. ಬನ್ನಿ ನೀವು ಪ್ರತಿನಿತ್ಯ ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು ಎಂದು ನೋಡೋಣ:

ಮೇಷ ರಾಶಿ ಹಾಗೂ ವೃಶ್ಚಿಕ ರಾಶಿ
ಮೇಷ ಹಾಗೂ ವೃಶ್ಚಿಕ ರಾಶಿಯವರು ಹವಳದಿಂದ ಮಾಡಿದ ಗಣೇಶನ ಆರಾಧನೆ ಮಾಡಿ.

ವೃಷಭ ಹಾಗೂ ತುಲಾ ರಾಶಿ
ವೃಷಭ ಹಾಗೂ ತುಲಾ ರಾಶಿಯವರು ಶ್ವೇತಾರಕ್ ಗಣೇಶ (Aak Ganesh) ಮೂರ್ತಿಯನ್ನು ಆರಾಧಿಸಬೇಕು.

ಮಿಥುನ ಹಾಗೂ ಕನ್ಯಾ ರಾಶಿಯವರು
ಮಿಥುನ ಹಾಗೂ ಕನ್ಯಾ ರಾಶಿಯವರು ಯಾವುದೇ ಬಗೆಯ ಗಣೇಶನಿಗೆ ಆರಾಧನೆ ಮಾಡಬಹುದು.

ಕರ್ಕ ಹಾಗೂ ಸಿಂಹ ರಾಶಿಯವರು
ಕರ್ಕ ಹಾಗೂ ಸಿಂಹ ರಾಶಿಯವರು ಪೀತಾಂಬರ ಗಣೇಶನ ಆರಾಧನೆ ಮಾಡಬೇಕು.

ಧನು ಹಾಗೂ ಮೀನ ರಾಶಿಯವರು
ಧನು ಹಾಗೂ ಮೀನ ರಾಶಿಯವರು ಹರಿದ್ರಾ ಗಣೇಶನ ಆರಾಧನೆ ಮಾಡುವುದು ಒಳ್ಳೆಯದು.

ಕುಂಭ ಹಾಗೂ ಮಕರ ರಾಶಿ
ಕುಂಭ ಹಾಗೂ ಮಕರ ರಾಶಿಯವರು ಯಾವುದೇ ಲೋಹದಿಂದ ತಯಾರಿಸಿದ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯದು.



Click it and Unblock the Notifications