Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಯಶಸ್ಸು, ಕೀರ್ತಿಗಾಗಿ ಯಾವ ರಾಶಿಯವರು ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು?
ಗಣೇಶನ ಆರಾಧನೆ ಮಾಡಿದರೆ ಬದುಕಿನಲ್ಲಿ ಎದುರಾಗಿರುವ ಎಲ್ಲಾ ವಿಘ್ನಗಳು ದೂರವಾಗುವುದು. ಭಕ್ತರು ಭಕ್ತಿಯಿಂದ ಬೇಡಿದ ವರವನ್ನು ಗಣೇಶ ಕರುಣಿಸುತ್ತಾನೆ, ಗಣೇಶನನ್ನು ಆರಾಧನೆ ಮಾಡುವುದರಿಂದ ಆಸ್ತಿ, ಅಂತಸ್ತು, ಕೀರ್ತಿ, ಜ್ಞಾನ ಎಲ್ಲವೂ ಹೆಚ್ಚಾಗುವುದು. ಯಾವುದೇ ಪೂಜೆಗೆ ಮುನ್ನ ಗಣೇಶನ ಪೂಜೆ ಮಾಡಲೇಬೇಕು. ಗಣೇಶನಿಗೆ ಪೂಜೆ ಸಲ್ಲಿಸದೆ ಯಾವುದೇ ಪೂಜೆ ಮಾಡಲ್ಲ.
ಗಣೇಶನ ಹೇಗೆ ಪೂಜೆ ಮಾಡಿದರೂ ಅವನು ತೃಪ್ತಿನಾಗುತ್ತಾನೆ, ಆದರೆ ನಿಮ್ಮ ರಾಶಿಗೆ ಅನುಗುಣವಾಗಿ ಮಾಡಿದರೂ ಇನ್ನೂ ಹೆಚ್ಚಿನ ಫಲ ಸಿಗುವುದು. ಜ್ಯೋತಿಷ್ಯವು ಗಣೇಶನನ್ನು ರಾಶಿಯ ಪ್ರಕಾರ ಹೇಗೆ ಆರಾಧಿಸಬೇಕು, ಗಣೇಶನ ಯಾವ ರೂಪವನ್ನು ಆರಾಧಿಸಬೇಕು ಎಂದು ಹೇಳಿದೆ. ನಮ್ಮ ಹಿಂದಿನ ಲೇಖನದಲ್ಲಿ ನಿಮ್ಮ ರಾಶಿಯ ಪ್ರಕಾರ ಗಣೇಶನಿಗೆ ಯಾವ ರೀತಿಯ ಪೂಜೆ ಸಲ್ಲಿಸಬೇಕು ಎಂದು ಹೇಳಿದ್ದೆವು, ಈ ಲೇಖನದಲ್ಲಿ ಯಾವ ರಾಶಿಯ ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು ಎಂದು ಹೇಳಲಾಗಿದೆ.
ನೀವು ನಿಮ್ಮ ರಾಶಿಗೆ ಅನುಗುಣವಾಗಿ ಗಣಪನನ್ನು ಆರಾಧಿಸುವುದರಿಂದ ಬದುಕಿನಲ್ಲಿರುವ ಸಮಸ್ಯೆಗಳು ದೂರಾಗುವುದು, ಯಶಸ್ಸು ದೊರೆಯುವುದು. ಬನ್ನಿ ನೀವು ಪ್ರತಿನಿತ್ಯ ಯಾವ ರೂಪದ ಗಣೇಶನ ಆರಾಧನೆ ಮಾಡಬೇಕು ಎಂದು ನೋಡೋಣ:

ಮೇಷ ರಾಶಿ ಹಾಗೂ ವೃಶ್ಚಿಕ ರಾಶಿ
ಮೇಷ ಹಾಗೂ ವೃಶ್ಚಿಕ ರಾಶಿಯವರು ಹವಳದಿಂದ ಮಾಡಿದ ಗಣೇಶನ ಆರಾಧನೆ ಮಾಡಿ.

ವೃಷಭ ಹಾಗೂ ತುಲಾ ರಾಶಿ
ವೃಷಭ ಹಾಗೂ ತುಲಾ ರಾಶಿಯವರು ಶ್ವೇತಾರಕ್ ಗಣೇಶ (Aak Ganesh) ಮೂರ್ತಿಯನ್ನು ಆರಾಧಿಸಬೇಕು.

ಮಿಥುನ ಹಾಗೂ ಕನ್ಯಾ ರಾಶಿಯವರು
ಮಿಥುನ ಹಾಗೂ ಕನ್ಯಾ ರಾಶಿಯವರು ಯಾವುದೇ ಬಗೆಯ ಗಣೇಶನಿಗೆ ಆರಾಧನೆ ಮಾಡಬಹುದು.

ಕರ್ಕ ಹಾಗೂ ಸಿಂಹ ರಾಶಿಯವರು
ಕರ್ಕ ಹಾಗೂ ಸಿಂಹ ರಾಶಿಯವರು ಪೀತಾಂಬರ ಗಣೇಶನ ಆರಾಧನೆ ಮಾಡಬೇಕು.

ಧನು ಹಾಗೂ ಮೀನ ರಾಶಿಯವರು
ಧನು ಹಾಗೂ ಮೀನ ರಾಶಿಯವರು ಹರಿದ್ರಾ ಗಣೇಶನ ಆರಾಧನೆ ಮಾಡುವುದು ಒಳ್ಳೆಯದು.

ಕುಂಭ ಹಾಗೂ ಮಕರ ರಾಶಿ
ಕುಂಭ ಹಾಗೂ ಮಕರ ರಾಶಿಯವರು ಯಾವುದೇ ಲೋಹದಿಂದ ತಯಾರಿಸಿದ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯದು.



Click it and Unblock the Notifications