Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಜಾತಕದಲ್ಲಿ ಕೇತುವಿನ ಅಶುಭ ಫಲವಿದ್ದರೆ ಪರಿಹಾರವೇನು?
ಹಿಂದೂ ಧರ್ಮದಲ್ಲಿ ನವಗ್ರಹಗಳಲ್ಲಿ ರಾಹು ಮತ್ತು ಕೇತು ಗ್ರಹಗಳನ್ನು ಪಾಪ ಗ್ರಹಗಳೆಂದು ಪರಿಗಣಿಸಲಾಗಿದೆ. ಪೌರಾಣಿಕ ಕತೆಯಲ್ಲಿ ಕೇತುವನ್ನು ರಾಹು ಗ್ರಹದ ಶರೀರವೆಂದು ಹೇಳಲಾಗಿದೆ. ರಾಹು-ಕೇತು ಗ್ರಹಗಳನ್ನು ಛಾಯಾ ಗ್ರಹಗಳು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಗ್ರಹಗಳು ದೈಹಿಕವಾಗಿ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಅವುಗಳ ಪ್ರಭಾವ ಮನುಷ್ಯರ ಮೇಲಿರುತ್ತದೆ ಎಂದು ಹೇಳಲಾಗುವುದು.
ಜಾತಕದಲ್ಲಿ ಕೇತುವಿನ ಋಣಾತ್ಮಕ ಪ್ರಭಾವವಿದ್ದರೆ ಇದರಿಂದಾಗಿ ಜೀವನದಲ್ಲಿ ಹಲವು ರೀತಿಯ ಕಷ್ಟಗಳು, ಸವಾಲುಗಳು ಎದುರಾಗುವುದು ಎಂದು ಹೇಳಲಾಗುವುದು. ಹಾಗಾದರೆ ಕೇತುವಿನ ಅಶುಭ ಪ್ರಭಾವಕ್ಕೆ ಪರಿಹಾರವಿದೆಯೇ ಎಂದು ನೋಡುವಾಗ ಜ್ಯೋತಿಷ್ಯದಲ್ಲಿ ಅದಕ್ಕೂ ಪರಿಹಾರ ಇದೆ.
ಕೇತುವಿನ ಕೆಟ್ಟ ಪ್ರಭಾವವಿದ್ದರೆ ಅದು ಹೋಗಲು ಏನು ಮಾಡಬೇಕೆಂದು ಹೇಳಲಾಗಿದೆ ನೋಡಿ:

ಗಣಪತಿ ಪೂಜೆ
ಎಲ್ಲಾ ವಿಘ್ನಗಳನ್ನು ತೊಡೆದು ಹಾಕಲು ಗಣೇಶನನ್ನು ಪೂಜಿಸಲಾಗುವುದು. ಕೇತು ನೀಡುವ ಕಷ್ಟದಿಂದ ಪಾರಾಗಲು ಕೂಡ ಗಣಪತಿಯನ್ನು ಪೂಜೆ ಮಾಡಿ. ಬುಧವಾರ ಗಣಪತಿಯ ಅಥರ್ವಶಿರ್ಷ ಪಠಿಸಿದರೆ ಶುಭ ಫಲಿತಾಂಶ ದೊರೆಯುವುದು.

ಕಪ್ಪು ಹಸು ದಾನ ಮಾಡಿ ಅಥವಾ ಗೋಶಾಲೆಗೆ ಮೇವನ್ನು ದಾನ ಮಾಡಿ
ಬ್ರಾಹ್ಮಣರಿಗೆ ಹಸುವನ್ನು ದಾನ ಮಾಡಿ ಇಲ್ಲದಿದ್ದರೆ ಗೋಶಾಲೆಗೆ ಅಕ್ಕಿ-ಬೆಲ್ಲ ದಾನ ಮಾಡಿ.

ನೀರಿಗೆ ಇದ್ದಿಲು ಹಾಕಿ
ಕೇತುವಿನ ಅಶುಭ ಫಲದಿಂದ ಮುಕ್ತಿ ಪಡೆಯಲು ಇದ್ದಿಲನ್ನು 8 ಭಾಗಗಳನ್ನಾಗಿ ಮಾಡಿ ಹರಿಯುವ ನೀರಿನಲ್ಲಿ ಬಿಡಬೇಕು. ಕೆಂಪು ಇರುವೆಗೆ ಆಹಾರ ನೀಡಬೇಕು. ಅಂಗವಿಕಲರಿಗೆ ಬಣ್ಣದ ವಸ್ತ್ರಗಳನ್ನು ದಾನ ಮಾಡಬೇಕು.

ಕಪ್ಪು ನಾಯಿಗೆ ಆಹಾರ ನೋಡಿ
ಕಪ್ಪು ನಾಯಿಗೆ ಆಹಾರವನ್ನು ನೀಡಬೇಕು ಅಲ್ಲದೆ ಕಪ್ಪು ಹಾಗೂ ಬಿಳಿ ಎಳ್ಳನ್ನು ನೀರಿನಲ್ಲಿ ಬಿಡಿ. ಮೀನುಗಳಿಗೆ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಹಾಕಿ.

ತುಪ್ಪದ ದೀಪ ಹಚ್ಚಿ
ಜಾತಕದಲ್ಲಿ ಕೇತು ದೋಷವಿದ್ದವರು ದೇವಾಲಯಕ್ಕೆ ಹೋಗಿ ತುಪ್ಪದ ದೀಪ ಹಚ್ಚಬೇಕು.
ಲೋಹ, ಎಳ್ಳು, ತೆಂಗಿನಕಾಯಿ, ಉದ್ದು, ಗೋವು ಇವುಳನ್ನು ದಾನ ಮಾಡಿ..

ಕೇತುವಿನ ಕೆಟ್ಟ ಪ್ರಭಾವ ತಗ್ಗಲು ಮಂತ್ರ ಪಠಿಸಿ:
ಕೇತು ವೈದಿಕ ಮಂತ್ರ
ಓಂ ಕೇತು ಕೃಣ್ವನ್ನಕೆತವೇ ಪೇಷೋ ಮರ್ಯಾ ಅಪೇಶ ಸೆ. ಸುಮುಷದ್ಭಿರಜಾಯತಃ
ಕೇತು ತಾಂತ್ರಿಕ ಮಂತ್ರ
ಓಂ ಸ್ತ್ರಂ ಸ್ತ್ರಿಂ ಸ್ತ್ರೌಂ ಸಃ ಕೆತವೇನಮಃ
ಕೇತು ಏಕಾಕ್ಷರಿ ಮಂತ್ರ
ಓಂ ಕೆತವೇನಮಃ



Click it and Unblock the Notifications