Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಜಾತಕದಲ್ಲಿ ಕೇತುವಿನ ಅಶುಭ ಫಲವಿದ್ದರೆ ಪರಿಹಾರವೇನು?
ಹಿಂದೂ ಧರ್ಮದಲ್ಲಿ ನವಗ್ರಹಗಳಲ್ಲಿ ರಾಹು ಮತ್ತು ಕೇತು ಗ್ರಹಗಳನ್ನು ಪಾಪ ಗ್ರಹಗಳೆಂದು ಪರಿಗಣಿಸಲಾಗಿದೆ. ಪೌರಾಣಿಕ ಕತೆಯಲ್ಲಿ ಕೇತುವನ್ನು ರಾಹು ಗ್ರಹದ ಶರೀರವೆಂದು ಹೇಳಲಾಗಿದೆ. ರಾಹು-ಕೇತು ಗ್ರಹಗಳನ್ನು ಛಾಯಾ ಗ್ರಹಗಳು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಗ್ರಹಗಳು ದೈಹಿಕವಾಗಿ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಅವುಗಳ ಪ್ರಭಾವ ಮನುಷ್ಯರ ಮೇಲಿರುತ್ತದೆ ಎಂದು ಹೇಳಲಾಗುವುದು.
ಜಾತಕದಲ್ಲಿ ಕೇತುವಿನ ಋಣಾತ್ಮಕ ಪ್ರಭಾವವಿದ್ದರೆ ಇದರಿಂದಾಗಿ ಜೀವನದಲ್ಲಿ ಹಲವು ರೀತಿಯ ಕಷ್ಟಗಳು, ಸವಾಲುಗಳು ಎದುರಾಗುವುದು ಎಂದು ಹೇಳಲಾಗುವುದು. ಹಾಗಾದರೆ ಕೇತುವಿನ ಅಶುಭ ಪ್ರಭಾವಕ್ಕೆ ಪರಿಹಾರವಿದೆಯೇ ಎಂದು ನೋಡುವಾಗ ಜ್ಯೋತಿಷ್ಯದಲ್ಲಿ ಅದಕ್ಕೂ ಪರಿಹಾರ ಇದೆ.
ಕೇತುವಿನ ಕೆಟ್ಟ ಪ್ರಭಾವವಿದ್ದರೆ ಅದು ಹೋಗಲು ಏನು ಮಾಡಬೇಕೆಂದು ಹೇಳಲಾಗಿದೆ ನೋಡಿ:

ಗಣಪತಿ ಪೂಜೆ
ಎಲ್ಲಾ ವಿಘ್ನಗಳನ್ನು ತೊಡೆದು ಹಾಕಲು ಗಣೇಶನನ್ನು ಪೂಜಿಸಲಾಗುವುದು. ಕೇತು ನೀಡುವ ಕಷ್ಟದಿಂದ ಪಾರಾಗಲು ಕೂಡ ಗಣಪತಿಯನ್ನು ಪೂಜೆ ಮಾಡಿ. ಬುಧವಾರ ಗಣಪತಿಯ ಅಥರ್ವಶಿರ್ಷ ಪಠಿಸಿದರೆ ಶುಭ ಫಲಿತಾಂಶ ದೊರೆಯುವುದು.

ಕಪ್ಪು ಹಸು ದಾನ ಮಾಡಿ ಅಥವಾ ಗೋಶಾಲೆಗೆ ಮೇವನ್ನು ದಾನ ಮಾಡಿ
ಬ್ರಾಹ್ಮಣರಿಗೆ ಹಸುವನ್ನು ದಾನ ಮಾಡಿ ಇಲ್ಲದಿದ್ದರೆ ಗೋಶಾಲೆಗೆ ಅಕ್ಕಿ-ಬೆಲ್ಲ ದಾನ ಮಾಡಿ.

ನೀರಿಗೆ ಇದ್ದಿಲು ಹಾಕಿ
ಕೇತುವಿನ ಅಶುಭ ಫಲದಿಂದ ಮುಕ್ತಿ ಪಡೆಯಲು ಇದ್ದಿಲನ್ನು 8 ಭಾಗಗಳನ್ನಾಗಿ ಮಾಡಿ ಹರಿಯುವ ನೀರಿನಲ್ಲಿ ಬಿಡಬೇಕು. ಕೆಂಪು ಇರುವೆಗೆ ಆಹಾರ ನೀಡಬೇಕು. ಅಂಗವಿಕಲರಿಗೆ ಬಣ್ಣದ ವಸ್ತ್ರಗಳನ್ನು ದಾನ ಮಾಡಬೇಕು.

ಕಪ್ಪು ನಾಯಿಗೆ ಆಹಾರ ನೋಡಿ
ಕಪ್ಪು ನಾಯಿಗೆ ಆಹಾರವನ್ನು ನೀಡಬೇಕು ಅಲ್ಲದೆ ಕಪ್ಪು ಹಾಗೂ ಬಿಳಿ ಎಳ್ಳನ್ನು ನೀರಿನಲ್ಲಿ ಬಿಡಿ. ಮೀನುಗಳಿಗೆ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಹಾಕಿ.

ತುಪ್ಪದ ದೀಪ ಹಚ್ಚಿ
ಜಾತಕದಲ್ಲಿ ಕೇತು ದೋಷವಿದ್ದವರು ದೇವಾಲಯಕ್ಕೆ ಹೋಗಿ ತುಪ್ಪದ ದೀಪ ಹಚ್ಚಬೇಕು.
ಲೋಹ, ಎಳ್ಳು, ತೆಂಗಿನಕಾಯಿ, ಉದ್ದು, ಗೋವು ಇವುಳನ್ನು ದಾನ ಮಾಡಿ..

ಕೇತುವಿನ ಕೆಟ್ಟ ಪ್ರಭಾವ ತಗ್ಗಲು ಮಂತ್ರ ಪಠಿಸಿ:
ಕೇತು ವೈದಿಕ ಮಂತ್ರ
ಓಂ ಕೇತು ಕೃಣ್ವನ್ನಕೆತವೇ ಪೇಷೋ ಮರ್ಯಾ ಅಪೇಶ ಸೆ. ಸುಮುಷದ್ಭಿರಜಾಯತಃ
ಕೇತು ತಾಂತ್ರಿಕ ಮಂತ್ರ
ಓಂ ಸ್ತ್ರಂ ಸ್ತ್ರಿಂ ಸ್ತ್ರೌಂ ಸಃ ಕೆತವೇನಮಃ
ಕೇತು ಏಕಾಕ್ಷರಿ ಮಂತ್ರ
ಓಂ ಕೆತವೇನಮಃ



Click it and Unblock the Notifications