Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
Vrushabha Rashi Ugadi Bhavishya 2022 : ಯುಗಾದಿ ಪಂಚಾಂಗ: ವೃಷಭ ರಾಶಿಯವರಿಗೆ ಹೊಸ ಸಂವತ್ಸರ ಹೇಗಿರಲಿದೆ?
ಹಿಂದೂಗಳಿಗೆ ಹೊಸ ವರ್ಷವೆಂದರೆ ಅದು ಯುಗಾದಿ, ಈ ದಿನದಿಂದ ಹೊಸ ಸಂವತ್ಸರ ಪ್ರಾರಂಭವಾಗುವುದು, ಹೊಸ ಸಂವತ್ಸರವನ್ನು ಬೇವು-ಬೆಲ್ಲ ಸವಿಯುತ್ತಾ ಸಡಗರ-ಸಂಭ್ರಮದಿಂದ ಸ್ವಾಗತಿಸುವುದೇ ಯುಗಾದಿ. ಈ ವರ್ಷ ಶ್ರೀ ಶುಭಕೃತ ನಾಮ ಸಂವತ್ಸರ.

ಈ ಹೊಸ ವರ್ಷದಲ್ಲಿ ಯುಗಾದಿ ಪಂಚಾಂಗ ಪ್ರಕಾರ ನಿಮ್ಮ ರಾಶಿ ಭವಿಷ್ಯ ಹೇಳಲಾಗುವುದು. ನಾವಿಲ್ಲಿಈ ಶುಭಕೃತ ನಾಮ ಸಂವತ್ಸರದಲ್ಲಿ ವೃಷಭ ರಾಶಿಯ ಭವಿಷ್ಯ ಹೇಗಿರಲಿದೆ ಎಂದು ವಿವರವಾಗಿ ನೀಡಲಾಗಿದೆ ನೋಡಿ:
ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ. ಯುಗಾದಿ ಪಂಚಾಂಗ ಪ್ರಕಾರ ನಿಮಗೆ ಆದಾಯ 8 ಇದ್ದರೆ ವ್ಯಯ ಕೂಡ 8 ಇರುತ್ತದೆ, ಅಂದರೆ ಗಳಿಸಿದ್ದು ಹಾಗೆಯೇ ಖರ್ಚಾಗುವುದು, ಇನ್ನು ಯೋಗ 6 ಇದ್ದರೆ ಅವಮಾನ 6 ಇದೆ.
ವೃಷಭ ರಾಶಿಯಲ್ಲಿ ಕೃತಿಕಾ ನಕ್ಷತ್ರ 2, 3, 4ನೇ ಪಾದ, ರೋಹಿಣಿ ನಕ್ಷತ್ರ 4 ಪಾದ, ಮೃಗಶಿರ ನಕ್ಷತ್ರ 1 ಮತ್ತು 2ನೇ ಪಾದದಲ್ಲಿದೆ.
ಈ ವರ್ಷ ಆದಾಯ ಚೆನ್ನಾಗಿರುತ್ತದೆ, ಹಣ ಲಾಭ ಪಡೆಯುವಿರಿ, ವೃತ್ತಿಯಲ್ಲಿ ಪ್ರಗತಿ ಪಡೆಯುವಿರಿ. ಗುರು 11ನೇ ಮನೆಯಲ್ಲಿ ಇರುವುದರಿಂದ ಉದ್ಯೋಗಸ್ಥರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ಕಳೆದ ವರ್ಷಕ್ಕಿಂತ ಚೆನ್ನಾಗಿ ಆದಾಯ ಗಳಿಸಲು ಸಾಧ್ಯವಾಗುವುದು. ಅಲ್ಲದೆ 9ನೇ ಮನೆಯಲ್ಲಿ ಶನಿ ಸಾಗುವುದರಿಂದ ನಿಮಗೇ ತುಂಬಾನೇ ಒಳ್ಳೆಯದು ಆಗಲಿದೆ.
ವಿದೇಶದಲ್ಲಿ ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವುದು. ಸ್ಪರ್ಧಾತ್ಮಾಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದರೆ ಒಳ್ಳೆಯ ಫಲಿತಾಂಶ ಸಿಗಲಿದೆ. ಹೆಣ್ಣು ಮಕ್ಕಳು ಉನ್ನತಿಯನ್ನು ಕಾಣುವಿರಿ, ಹೂಡಿಕೆ ಮಾಡುವವರಿಗೂ ಒಳ್ಳೆಯದಾಗಲಿದೆ. ಲಾಭದ ಸ್ಥಾನದಲ್ಲಿ ಗುರು ಇರುವುದರಿಂದ ಒಳ್ಳೆಯದಾಗಲಿದೆ.
ಈ ವರ್ಷ ಮಧ್ಯದಲ್ಲಿ ಗುರುವಿನ ಸ್ಥಾನ ಬದಲಾವಣೆಯನ್ನು ಆಸ್ತಿ ಖರೀದಿಸುವ ಸಾಧ್ಯತೆ ಇದೆ ಅಥವಾ ಹಿರಿಯರ ಪಾಲು ದೊರೆಯಬಹುದು. ಪಿತೃಕರ್ಮ ತಪ್ಪದೆ ಮಾಡಿ. ರಾಹು ಹನ್ನೆರಡನೇಯ ಮನೆಯಲ್ಲಿರುವುದರಿಂದ ಒಳ್ಳೆಯದು, ಆದರೆ ಕೇತು 6 ನೇ ಮನೆಯಲ್ಲಿ ಇರುವುದರಿಂದ ಶತ್ರುವಿನ ಭಾದೆ ಇರಬಹುದು. ಅವರ ಬಗ್ಗೆ ಜಾಗ್ರತೆ.
ಮನೆಯಲ್ಲಿ ಶುಭ ಕಾರ್ಯಗಳಿಗೆ ಖರ್ಚು ಮಾಡುವಿರಿ. ಸೆಪ್ಟೆಂಬರ್ನಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಲವಾಗುವುದು. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಲಿದೆ. ಮದುವೆ ವಯಸ್ಸಿನಲ್ಲಿ ಇರುವವರಿಗೆ ಕಂಕಣ ಬಲ ಕೂಡಿ ಬರಲಿದೆ.
ಆರೋಗ್ಯದ ಬಗ್ಗೆ ಹೇಳುವುದಾದರೆ ಈ ವರ್ಷ ಅಂಥ ಯಾವುದೇ ದೊಡ್ಡ ತೊಂದರೆಯಿಲ್ಲ, ಆರೋಗ್ಯಕರ ಆಹಾರ ಸೇವನೆ ಒಳ್ಳೆಯದು.
ಅದೃಷ್ಟದ ಬಣ್ಣ: ಬಿಳಿ
ಪರಿಹಾರ:
ಗುರುವಾರ ಗುರುವಿನ ಆರಾಧನೆ, ಶನಿವಾರ ಶನೇಶ್ವರನ ಆರಾಧನೆ ಮಾಡಿ
7 ಮಂಗಳವಾರ ದುರ್ಗೆಯನ್ನು ಪೂಜಿಸಿ.



Click it and Unblock the Notifications