Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Ugadi 2023 Horoscope : ವೃಶ್ಚಿಕ ರಾಶಿ ಯುಗಾದಿ ರಾಶಿಫಲ 2023: ಹೊಸ ಸಂವತ್ಸರ ಹೇಗಿರಲಿದೆ?
ಮಾರ್ಚ್ 22ಕ್ಕೆ ಹಳೆ ಸಂವತ್ಸರ ಕಳೆದು ಹೊಸ ಶೋಭಾಕೃತ ಸಂವತ್ಸರ ಪ್ರಾರಂಭವಾಗಲಿದೆ. ಯುಗಾದಿಯ ವಿಶೇಷ ಎಂದರೆ ಬೇವು ಬೆಲ್ಲ. ಬೇವು ಬೆಲ್ಲ ಸವಿಯುವ ಮೂಲಕ ನಾವು ಯುಗಾದಿ ಆಚರಿಸುತ್ತೇವೆ, ಬದುಕಿನಲ್ಲಿ ಒಳ್ಳೆಯದು-ಕೆಟ್ಟದ್ದು ಎರಡೂ ಇರುತ್ತದೆ, ಎರಡನ್ನೂ ಸಮಾನಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಹಬ್ಬ ನೀಡುತ್ತದೆ.

ನಾವಿಲ್ಲಿ ಈ ಯುಗಾದಿ ಹೊಸ ವರ್ಷ ವೃಶ್ಚಿಕ ರಾಶಿಯವರಿಗೆ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ವೃಶ್ಚಿಕ ರಾಶಿಯವರಲ್ಲಿ ಗ್ರಹಗಳ ಸ್ಥಾನ
ವೃಶ್ಚಿಕ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನಿಮ್ಮ ಶನಿಯಲ್ಲಿ ಶನಿ ಮತ್ತು ಗುರು 6ನೇ ಮನೆಯಲ್ಲಿ ಇರಲಿದೆ. ಏಪ್ರಿಲ್ 22ಕ್ಕೆ ಗುರು ನಿಮ್ಮ ರಾಶಿಯನ್ನು ಪ್ರವೇಶಿಸಿದರೆ ರಾಹು ನವೆಂಬರ್ 29ರವರೆಗೆ ನಿಮ್ಮ ರಾಶಿಯಲ್ಲಿಯೇ ಇರಲಿದೆ. ಶನಿಯು ನಿಮ್ಮ ನಾಲ್ಕನೇ ಮನೆಯಲ್ಲಿ ಕೇತು ನಿಮ್ಮ ಲಗ್ನ ಮನೆಯಲ್ಲಿ ಅಂದರೆ ಮೊದಲನೇ ಮನೆಯಲ್ಲಿ ಇರಲಿದೆ.

ವೃತ್ತಿ ಜೀವನ
ಶನಿಯು 4ನೇ ಮನೆಯಲ್ಲಿರುವುದರಿಂದ ನಿಮ್ಮ ಕೆಲಸದ ಮೇಲೆ ಇದರ ಪ್ರಭಾವ ಅನುಕೂಲಕರವಾಗಿರುವುದಿಲ್ಲ. ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ನೀವು ಬಯಸಿದ ಪ್ರಗತಿ ಕಾಣದೇ ಇರಬಹುದು, ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂದನಿಸಲಾರಂಭಿಸುವುದು, ಅಲ್ಲದೆ ಕೆಲಸದಲ್ಲಿ ಅಭದ್ರತೆ ಉಂಟಾಗುವುದು. ಈ ವರ್ಷ ಕೆಲಸದ ಒತ್ತಡ ಅಧಿಕವಾಗಲಿದೆ. ನೀವು ಕೆಲಸವನ್ನು ಬದಲಾಯಿಸುವುದರಿಂದ ಪರಿಸ್ಥಿತಿ ಬದಲಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನೀವು ಮಾಡುತ್ತಿರುವ ಕೆಲಸದ ಕಡೆ ಅಧಿಕ ಗಮನಹರಿಸಿ, ತಪ್ಪುಗಳಾಗದಂತೆ ಎಚ್ಚರವಹಿಸಿ. ಒಂದು ಕೆಲಸ ಸಿಕ್ಕಿದ ಬಳಿಕವಷ್ಟೇ ಕೆಲಸ ಬದಲಾಯಿಸಿ, ಇಲ್ಲದಿದ್ದರೆ ತೊಂದರೆಯಾಗಬಹುದು.

ಆರ್ಥಿಕ ಸ್ಥಿತಿ
ಗುರು 6ನೇ ಮನೆಯಲ್ಲಿದ್ದಾನೆ. ಇದು ವ್ಯಯದ ಮನೆ, ಈ ಅವಧಿಯಲ್ಲಿ ನೀವು ನಿಮ್ಮ ಬಜೆಟ್ಗಿಂತ ಅಧಿಕ ಸಾಲ ಮಾಡುತ್ತೀರಿ. ಆದರೆ ನೀವು ಸಾಲವನ್ನು ಎಷ್ಟು ಕಡಿಮೆ ಮಾಡುತ್ತೀರೋ ಅಷ್ಟೇ ಒಳ್ಳೆಯದು. ಈ ವರ್ಷ ನಿಮ್ಮ ಉಳಿತಾಯದ ಹಣವನ್ನು ಮನೆ, ಆಸ್ತಿ ಅಥವಾ ಗಾಡಿ ಖರೀದಿಸಲು ಬಳಸಬಹುದು. ನೀವು ಈ ವರ್ಷ ತುಂಬಾ ಸಾಲ ಮಾಡಲು ಹೋಗಬೇಡಿ. ಅಲ್ಲದೆ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬೇಡಿ.

ವೈಯಕ್ತಿಕ ಜೀವನ
ಒಂದು ಕಡೆ ಕೆಲಸದ ಒತ್ತಡ, ಮತ್ತೊಂದೆಡೆ ಮನೆಯಲ್ಲಿ ಒತ್ತಡ ಇವೆಲ್ಲಾ ನಿಮ್ಮ ಮನಸ್ಸಿನ ಮೇಲೆ ತುಂಬಾ ಗಂಭೀರ ಪ್ರಭಾವ ಬೀರುವುದು. ಕೆಲಸದ ಒತ್ತಡ ಕುಟುಂಬ ಜೀವನದ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಿ.
ಆರೋಗ್ಯ
ಈ ವರ್ಷ ಆರೋಗ್ಯ ಸಮಸ್ಯೆಗಳಿರುತ್ತದೆ. ಆರೋಗ್ಯದ ಕಡೆಗೆ ಗಮನ ಹರಿಸಿ. ಆರೋಗ್ಯಕರ ಜೀವಶೈಲಿ ಕಡೆ ಗಮನ ಹರಿಸುವುದು ಒಳ್ಳೆಯದು'
ಪರಿಹಾರ
ಶನಿ ದೋಷದಿಂದ ಪಾರಾಗಲು ಪ್ರತಿ ಶನಿವಾರ ನೀವು ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಹಾಗೂ ಕಪ್ಪು ಎಳ್ಳು ಅರ್ಪಿಸಿ
* ಶನಿವಾರ ಬಡವರಿಗೆ ಆಹಾರ ದಾನ ಮಾಡಿ. ಕಪ್ಪು ಹೊದಿಕೆಯನ್ನು ನೀಡಿ
* ಮಂಗಳವಾರ, ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕುಂಕುಮ ಅರ್ಪಿಸಿ.



Click it and Unblock the Notifications