Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
Ugadi 2023 Horoscope : ವೃಶ್ಚಿಕ ರಾಶಿ ಯುಗಾದಿ ರಾಶಿಫಲ 2023: ಹೊಸ ಸಂವತ್ಸರ ಹೇಗಿರಲಿದೆ?
ಮಾರ್ಚ್ 22ಕ್ಕೆ ಹಳೆ ಸಂವತ್ಸರ ಕಳೆದು ಹೊಸ ಶೋಭಾಕೃತ ಸಂವತ್ಸರ ಪ್ರಾರಂಭವಾಗಲಿದೆ. ಯುಗಾದಿಯ ವಿಶೇಷ ಎಂದರೆ ಬೇವು ಬೆಲ್ಲ. ಬೇವು ಬೆಲ್ಲ ಸವಿಯುವ ಮೂಲಕ ನಾವು ಯುಗಾದಿ ಆಚರಿಸುತ್ತೇವೆ, ಬದುಕಿನಲ್ಲಿ ಒಳ್ಳೆಯದು-ಕೆಟ್ಟದ್ದು ಎರಡೂ ಇರುತ್ತದೆ, ಎರಡನ್ನೂ ಸಮಾನಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಹಬ್ಬ ನೀಡುತ್ತದೆ.

ನಾವಿಲ್ಲಿ ಈ ಯುಗಾದಿ ಹೊಸ ವರ್ಷ ವೃಶ್ಚಿಕ ರಾಶಿಯವರಿಗೆ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ವೃಶ್ಚಿಕ ರಾಶಿಯವರಲ್ಲಿ ಗ್ರಹಗಳ ಸ್ಥಾನ
ವೃಶ್ಚಿಕ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನಿಮ್ಮ ಶನಿಯಲ್ಲಿ ಶನಿ ಮತ್ತು ಗುರು 6ನೇ ಮನೆಯಲ್ಲಿ ಇರಲಿದೆ. ಏಪ್ರಿಲ್ 22ಕ್ಕೆ ಗುರು ನಿಮ್ಮ ರಾಶಿಯನ್ನು ಪ್ರವೇಶಿಸಿದರೆ ರಾಹು ನವೆಂಬರ್ 29ರವರೆಗೆ ನಿಮ್ಮ ರಾಶಿಯಲ್ಲಿಯೇ ಇರಲಿದೆ. ಶನಿಯು ನಿಮ್ಮ ನಾಲ್ಕನೇ ಮನೆಯಲ್ಲಿ ಕೇತು ನಿಮ್ಮ ಲಗ್ನ ಮನೆಯಲ್ಲಿ ಅಂದರೆ ಮೊದಲನೇ ಮನೆಯಲ್ಲಿ ಇರಲಿದೆ.

ವೃತ್ತಿ ಜೀವನ
ಶನಿಯು 4ನೇ ಮನೆಯಲ್ಲಿರುವುದರಿಂದ ನಿಮ್ಮ ಕೆಲಸದ ಮೇಲೆ ಇದರ ಪ್ರಭಾವ ಅನುಕೂಲಕರವಾಗಿರುವುದಿಲ್ಲ. ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ನೀವು ಬಯಸಿದ ಪ್ರಗತಿ ಕಾಣದೇ ಇರಬಹುದು, ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂದನಿಸಲಾರಂಭಿಸುವುದು, ಅಲ್ಲದೆ ಕೆಲಸದಲ್ಲಿ ಅಭದ್ರತೆ ಉಂಟಾಗುವುದು. ಈ ವರ್ಷ ಕೆಲಸದ ಒತ್ತಡ ಅಧಿಕವಾಗಲಿದೆ. ನೀವು ಕೆಲಸವನ್ನು ಬದಲಾಯಿಸುವುದರಿಂದ ಪರಿಸ್ಥಿತಿ ಬದಲಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನೀವು ಮಾಡುತ್ತಿರುವ ಕೆಲಸದ ಕಡೆ ಅಧಿಕ ಗಮನಹರಿಸಿ, ತಪ್ಪುಗಳಾಗದಂತೆ ಎಚ್ಚರವಹಿಸಿ. ಒಂದು ಕೆಲಸ ಸಿಕ್ಕಿದ ಬಳಿಕವಷ್ಟೇ ಕೆಲಸ ಬದಲಾಯಿಸಿ, ಇಲ್ಲದಿದ್ದರೆ ತೊಂದರೆಯಾಗಬಹುದು.

ಆರ್ಥಿಕ ಸ್ಥಿತಿ
ಗುರು 6ನೇ ಮನೆಯಲ್ಲಿದ್ದಾನೆ. ಇದು ವ್ಯಯದ ಮನೆ, ಈ ಅವಧಿಯಲ್ಲಿ ನೀವು ನಿಮ್ಮ ಬಜೆಟ್ಗಿಂತ ಅಧಿಕ ಸಾಲ ಮಾಡುತ್ತೀರಿ. ಆದರೆ ನೀವು ಸಾಲವನ್ನು ಎಷ್ಟು ಕಡಿಮೆ ಮಾಡುತ್ತೀರೋ ಅಷ್ಟೇ ಒಳ್ಳೆಯದು. ಈ ವರ್ಷ ನಿಮ್ಮ ಉಳಿತಾಯದ ಹಣವನ್ನು ಮನೆ, ಆಸ್ತಿ ಅಥವಾ ಗಾಡಿ ಖರೀದಿಸಲು ಬಳಸಬಹುದು. ನೀವು ಈ ವರ್ಷ ತುಂಬಾ ಸಾಲ ಮಾಡಲು ಹೋಗಬೇಡಿ. ಅಲ್ಲದೆ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬೇಡಿ.

ವೈಯಕ್ತಿಕ ಜೀವನ
ಒಂದು ಕಡೆ ಕೆಲಸದ ಒತ್ತಡ, ಮತ್ತೊಂದೆಡೆ ಮನೆಯಲ್ಲಿ ಒತ್ತಡ ಇವೆಲ್ಲಾ ನಿಮ್ಮ ಮನಸ್ಸಿನ ಮೇಲೆ ತುಂಬಾ ಗಂಭೀರ ಪ್ರಭಾವ ಬೀರುವುದು. ಕೆಲಸದ ಒತ್ತಡ ಕುಟುಂಬ ಜೀವನದ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಿ.
ಆರೋಗ್ಯ
ಈ ವರ್ಷ ಆರೋಗ್ಯ ಸಮಸ್ಯೆಗಳಿರುತ್ತದೆ. ಆರೋಗ್ಯದ ಕಡೆಗೆ ಗಮನ ಹರಿಸಿ. ಆರೋಗ್ಯಕರ ಜೀವಶೈಲಿ ಕಡೆ ಗಮನ ಹರಿಸುವುದು ಒಳ್ಳೆಯದು'
ಪರಿಹಾರ
ಶನಿ ದೋಷದಿಂದ ಪಾರಾಗಲು ಪ್ರತಿ ಶನಿವಾರ ನೀವು ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಹಾಗೂ ಕಪ್ಪು ಎಳ್ಳು ಅರ್ಪಿಸಿ
* ಶನಿವಾರ ಬಡವರಿಗೆ ಆಹಾರ ದಾನ ಮಾಡಿ. ಕಪ್ಪು ಹೊದಿಕೆಯನ್ನು ನೀಡಿ
* ಮಂಗಳವಾರ, ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕುಂಕುಮ ಅರ್ಪಿಸಿ.



Click it and Unblock the Notifications