Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಗರುಡ ಪುರಾಣ: ಈ ನಾಲ್ಕು ಸಂಗತಿ ಮಾಡಿದವರ ಆಯುಷ್ಯ ಕಡಿಮೆಯಾಗುವುದು
ಗರುಡ ಪುರಾಣವು ಹಿಂದೂ ಧರ್ಮದ ಮುಖ್ಯ ಪಠ್ಯಗಳಲ್ಲಿ ಒಂದು. ಹದಿನೆಂಟು ಮಹಾಪುರಾಣಗಳಲ್ಲಿ ಇದು ಕೂಡ ಒಂದು. ಗರುಡಪುರಾಣದಲ್ಲಿ ಹುಟ್ಟು, ಸಾವು ಮತ್ತು ಮರಣದ ನಂತರದ ಎಲ್ಲಾ ವಿಚಾರಗಳು ಉಲ್ಲೇಖವಾಗಿದೆ.

ಹುಟ್ಟು-ಸಾವನ್ನು ಯಾರಿಂದಲೂ ನಿರ್ಧರಿಸಲು ಸಾಧ್ಯವಿಲ್ಲ. ಆದರೆ ನಾವು ಮಾಡುವ ಕೆಲವೊಂದು ಚಟುವಟಿಕೆಗಳು ನಮ್ಮ ಆಯಸ್ಸನ್ನು ಕಡಿಮೆ ಮಾಡಲಿದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ. ಹಾಗಾದರೆ ಗರುಡ ಪುರಾಣದ ಪ್ರಕಾರ ನಾವು ಮಾಡಿದ ಯಾವ ತಪ್ಪುಗಳು ನಮ್ಮ ಜೀವನಾಯುಷ್ಯವನ್ನು ಕಡಿಮೆ ಮಾಡಿಲಿದೆ ಅನ್ನೋದನ್ನ ನೋಡೋಣ.
ಗರುಡ ಪುರಾಣವು ವಿಷ್ಣು ಹಾಗೂ ಗರುಡನ ನಡುವೆ ನಡೆಯುವ ಮಾತುಕತೆಯಾಗಿದೆ. ಒಂದು ಮನೆಯಲ್ಲಿ ಸಾವಾದರೆ ಮುಂದಿನ ಹದಿಮೂರು ದಿನಗಳ ಕಾಲ ಆ ಮನೆಯಲ್ಲಿ ಗರುಡ ಪುರಾಣವನ್ನು ಪಠಿಸಬೇಕು. ನಿಮಗೆಲ್ಲಾ ಗೊತ್ತಿರುವ ಹಾಗೆ ಗರುಡ ಪುರಾಣದಲ್ಲಿ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ನಿಗೂಢ ರಹಸ್ಯಗಳು ಉಲ್ಲೇಖವಾಗಿದೆ. ಇದೇ ಕಾರಣಕ್ಕೆ ಕೆಲವೊಂದು ತಪ್ಪುಗಳನ್ನು ಮಾಡುವಾಗ ಮುಂಜಾಗೃತೆಯಿಂದ ಇರಿ ಎಂದು ಗರುಡ ಪುರಾಣ ಹೇಳುತ್ತದೆ.
1. ಬೆಳಗ್ಗೆ ತಡವಾಗಿ ಎದ್ದೇಳುವುದು ಒಳ್ಳೆಯದಲ್ಲ
ಗರುಡ ಪುರಾಣದ ಪ್ರಕಾರ ಮುಂಜಾನೆ ಬೇಗನೆ ಏಳಬೇಕು. ಸೂರ್ಯ ಉದಯದ ನಂತರ ಎದ್ದರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಬೆಳಗ್ಗೆ ತಡವಾಗಿ ಏಳೋದು ಹಾಗೂ ರಾತ್ರಿ ತಡವಾಗಿ ಮಲಗೋದು ಸಾಮಾನ್ಯ ಎಂಬಂತಾಗಿದೆ. ತಡವಾಗಿ ಯಾವ ವ್ಯಕ್ತಿ ಏಳುತ್ತಾನೋ ಅವನಿಗೆ ಬೆಳಗ್ಗಿನ ಶುದ್ಧ ಗಾಳಿಯಾಗಲಿ, ಬೆಳಕಾಗಲಿ ಸಿಗೋದಿಲ್ಲ. ಹೀಗಾಗಿ ಅಂತಹ ವ್ಯಕ್ತಿಗಳ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.
2. ಸೂರ್ಯ ಮುಳುಗಿದ ನಂತರ ಮೊಸರನ್ನ ಸೇವಿಸಬೇಡಿ
ಗರುಡ ಪುರಾಣದ ಪ್ರಕಾರ ಸೂರ್ಯ ಮುಳುಗಿದ ನಂತರ ಅಂದರೆ ರಾತ್ರಿ ಹೊತ್ತಿನಲ್ಲಿ ಮೊಸರು ಸೇವನೆ ಒಳ್ಳೆಯದಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ಅತೀವ ಪರಿಣಾಮ ಬೀರುತ್ತದೆ. ಇದರ ಜೊತೆಗೆ ರಾತ್ರಿ ಹಾಲು ಕುಡಿಯುವ ಮೊದಲಾಗಲಿ ಹಾಲು ಕುಡಿದ ನಂತರವಾಗಲಿ ಮೊಸರು ಸೇವಿಸಲೇಬಾರದು.
3. ಮಾಂಸಹಾರಿ ಪದಾರ್ಥಗಳನ್ನು ತಿನ್ನುವಾಗ ಜಾಗರೂಕರಾಗಿರಿ
ಗರುಡ ಪುರಾಣದ ಪ್ರಕಾರ ಹಾಳಾದ ಅಥವಾ ಸರಿಯಾಗಿ ಬೇಯಿಸದ ಮಾಂಸಹಾರಗಳನ್ನು ತಿನ್ನಬೇಡಿ. ಇದು ವಿಷಕ್ಕೆ ಸಮಾನವಂತೆ. ಇಂತಹ ಮಾಂಸಗಳಲ್ಲಿ ಬ್ಯಾಕ್ಟೀರಿಯಾಗಳ ಹೆಚ್ಚಾಗಿದ್ದು, ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು. ಇದು ನಿಮ್ಮ ಜೀವನಾಯುಷ್ಯವನ್ನೇ ಕಡಿಮೆ ಮಾಡುತ್ತದೆ.
4. ಸೂರ್ಯ ಉದಯದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ
ಗರುಡ ಪುರಾಣದ ಪ್ರಕಾರ ಸೂರ್ಯ ಉದಯವಾದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು. ಇದು ನಿಮ್ಮ ದೇಹವನ್ನು ನಿಶಕ್ತಿಗೊಳಿಸುತ್ತದೆ. ಜೊತೆಗೆ ಹಲವಾರು ರೋಗಗಳಿಗೂ ಕಾರಣವಾಗುತ್ತಂತೆ.
ಈ ಮೇಲಿನ ನಾಲ್ಕು ಚಟುವಟಿಕೆಗಳನ್ನು ಮಾಡುವುದರಿಂದ ನಾವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ನಮ್ಮ ಜೀವನಾಯುಷ್ಯವನ್ನೇ ಕಡಿಮೆ ಮಾಡಬಹುದು. ಹೀಗಾಗಿ ಅಪಾಯವಿದೆ ಎಂದು ಗೊತ್ತಿದ್ದ ಮೇಲೂ ತಪ್ಪು ಮಾಡೋದಕ್ಕೆ ಹೋಗಬೇಡಿ.



Click it and Unblock the Notifications


