Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಗರುಡ ಪುರಾಣ: ಈ ನಾಲ್ಕು ಸಂಗತಿ ಮಾಡಿದವರ ಆಯುಷ್ಯ ಕಡಿಮೆಯಾಗುವುದು
ಗರುಡ ಪುರಾಣವು ಹಿಂದೂ ಧರ್ಮದ ಮುಖ್ಯ ಪಠ್ಯಗಳಲ್ಲಿ ಒಂದು. ಹದಿನೆಂಟು ಮಹಾಪುರಾಣಗಳಲ್ಲಿ ಇದು ಕೂಡ ಒಂದು. ಗರುಡಪುರಾಣದಲ್ಲಿ ಹುಟ್ಟು, ಸಾವು ಮತ್ತು ಮರಣದ ನಂತರದ ಎಲ್ಲಾ ವಿಚಾರಗಳು ಉಲ್ಲೇಖವಾಗಿದೆ.

ಹುಟ್ಟು-ಸಾವನ್ನು ಯಾರಿಂದಲೂ ನಿರ್ಧರಿಸಲು ಸಾಧ್ಯವಿಲ್ಲ. ಆದರೆ ನಾವು ಮಾಡುವ ಕೆಲವೊಂದು ಚಟುವಟಿಕೆಗಳು ನಮ್ಮ ಆಯಸ್ಸನ್ನು ಕಡಿಮೆ ಮಾಡಲಿದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ. ಹಾಗಾದರೆ ಗರುಡ ಪುರಾಣದ ಪ್ರಕಾರ ನಾವು ಮಾಡಿದ ಯಾವ ತಪ್ಪುಗಳು ನಮ್ಮ ಜೀವನಾಯುಷ್ಯವನ್ನು ಕಡಿಮೆ ಮಾಡಿಲಿದೆ ಅನ್ನೋದನ್ನ ನೋಡೋಣ.
ಗರುಡ ಪುರಾಣವು ವಿಷ್ಣು ಹಾಗೂ ಗರುಡನ ನಡುವೆ ನಡೆಯುವ ಮಾತುಕತೆಯಾಗಿದೆ. ಒಂದು ಮನೆಯಲ್ಲಿ ಸಾವಾದರೆ ಮುಂದಿನ ಹದಿಮೂರು ದಿನಗಳ ಕಾಲ ಆ ಮನೆಯಲ್ಲಿ ಗರುಡ ಪುರಾಣವನ್ನು ಪಠಿಸಬೇಕು. ನಿಮಗೆಲ್ಲಾ ಗೊತ್ತಿರುವ ಹಾಗೆ ಗರುಡ ಪುರಾಣದಲ್ಲಿ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ನಿಗೂಢ ರಹಸ್ಯಗಳು ಉಲ್ಲೇಖವಾಗಿದೆ. ಇದೇ ಕಾರಣಕ್ಕೆ ಕೆಲವೊಂದು ತಪ್ಪುಗಳನ್ನು ಮಾಡುವಾಗ ಮುಂಜಾಗೃತೆಯಿಂದ ಇರಿ ಎಂದು ಗರುಡ ಪುರಾಣ ಹೇಳುತ್ತದೆ.
1. ಬೆಳಗ್ಗೆ ತಡವಾಗಿ ಎದ್ದೇಳುವುದು ಒಳ್ಳೆಯದಲ್ಲ
ಗರುಡ ಪುರಾಣದ ಪ್ರಕಾರ ಮುಂಜಾನೆ ಬೇಗನೆ ಏಳಬೇಕು. ಸೂರ್ಯ ಉದಯದ ನಂತರ ಎದ್ದರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಬೆಳಗ್ಗೆ ತಡವಾಗಿ ಏಳೋದು ಹಾಗೂ ರಾತ್ರಿ ತಡವಾಗಿ ಮಲಗೋದು ಸಾಮಾನ್ಯ ಎಂಬಂತಾಗಿದೆ. ತಡವಾಗಿ ಯಾವ ವ್ಯಕ್ತಿ ಏಳುತ್ತಾನೋ ಅವನಿಗೆ ಬೆಳಗ್ಗಿನ ಶುದ್ಧ ಗಾಳಿಯಾಗಲಿ, ಬೆಳಕಾಗಲಿ ಸಿಗೋದಿಲ್ಲ. ಹೀಗಾಗಿ ಅಂತಹ ವ್ಯಕ್ತಿಗಳ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.
2. ಸೂರ್ಯ ಮುಳುಗಿದ ನಂತರ ಮೊಸರನ್ನ ಸೇವಿಸಬೇಡಿ
ಗರುಡ ಪುರಾಣದ ಪ್ರಕಾರ ಸೂರ್ಯ ಮುಳುಗಿದ ನಂತರ ಅಂದರೆ ರಾತ್ರಿ ಹೊತ್ತಿನಲ್ಲಿ ಮೊಸರು ಸೇವನೆ ಒಳ್ಳೆಯದಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ಅತೀವ ಪರಿಣಾಮ ಬೀರುತ್ತದೆ. ಇದರ ಜೊತೆಗೆ ರಾತ್ರಿ ಹಾಲು ಕುಡಿಯುವ ಮೊದಲಾಗಲಿ ಹಾಲು ಕುಡಿದ ನಂತರವಾಗಲಿ ಮೊಸರು ಸೇವಿಸಲೇಬಾರದು.
3. ಮಾಂಸಹಾರಿ ಪದಾರ್ಥಗಳನ್ನು ತಿನ್ನುವಾಗ ಜಾಗರೂಕರಾಗಿರಿ
ಗರುಡ ಪುರಾಣದ ಪ್ರಕಾರ ಹಾಳಾದ ಅಥವಾ ಸರಿಯಾಗಿ ಬೇಯಿಸದ ಮಾಂಸಹಾರಗಳನ್ನು ತಿನ್ನಬೇಡಿ. ಇದು ವಿಷಕ್ಕೆ ಸಮಾನವಂತೆ. ಇಂತಹ ಮಾಂಸಗಳಲ್ಲಿ ಬ್ಯಾಕ್ಟೀರಿಯಾಗಳ ಹೆಚ್ಚಾಗಿದ್ದು, ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು. ಇದು ನಿಮ್ಮ ಜೀವನಾಯುಷ್ಯವನ್ನೇ ಕಡಿಮೆ ಮಾಡುತ್ತದೆ.
4. ಸೂರ್ಯ ಉದಯದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ
ಗರುಡ ಪುರಾಣದ ಪ್ರಕಾರ ಸೂರ್ಯ ಉದಯವಾದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು. ಇದು ನಿಮ್ಮ ದೇಹವನ್ನು ನಿಶಕ್ತಿಗೊಳಿಸುತ್ತದೆ. ಜೊತೆಗೆ ಹಲವಾರು ರೋಗಗಳಿಗೂ ಕಾರಣವಾಗುತ್ತಂತೆ.
ಈ ಮೇಲಿನ ನಾಲ್ಕು ಚಟುವಟಿಕೆಗಳನ್ನು ಮಾಡುವುದರಿಂದ ನಾವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ನಮ್ಮ ಜೀವನಾಯುಷ್ಯವನ್ನೇ ಕಡಿಮೆ ಮಾಡಬಹುದು. ಹೀಗಾಗಿ ಅಪಾಯವಿದೆ ಎಂದು ಗೊತ್ತಿದ್ದ ಮೇಲೂ ತಪ್ಪು ಮಾಡೋದಕ್ಕೆ ಹೋಗಬೇಡಿ.



Click it and Unblock the Notifications


