Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಏ.20ಕ್ಕೆ ಸೂರ್ಯಗ್ರಹಣ: ಗ್ರಹಣ ಸಮಯದಲ್ಲಿ ದೇವಾಲಯಗಳ ಬಾಗಿಲು ಮುಚ್ಚುವುದೇಕೆ?
ಏಪ್ರಿಲ್ 20ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣದ ವಿಶೇಷವೆಂದರೆ ಇದು ಅಪರೂಪದ ಸೂರ್ಯಗ್ರಹಣವಾಗಿದೆ. ಈ ಸೂರ್ಯಗ್ರಹಣವನ್ನು ಹೈಬ್ರಿಡ್ ನಿಂಗಲೂ ಗ್ರಹಣ ಎಂದು ಕರೆಯಲಾಗುವುದು. ಗ್ರಹಣ ಸಮಯದಲ್ಲಿ ಹಲವಾರು ಧಾರ್ಮಿಕ ನಂಬಿಕೆಗಳನ್ನು ಪಾಲಿಸಲಾಗುವುದು.
ಗ್ರಹಣ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗುವುದು, ಗ್ರಹಣದ ಸೂತಕ ಮುಗಿಯುವವರೆಗೆ ಬಾಗಿಲು ತೆರೆಯುವುದಿಲ್ಲ. ದೇವಾಲಯಗಳ ಬಾಗಿಲು ಯಾಕೆ ತೆರೆಯುವುದಿಲ್ಲ? ಇದರ ಹಿಂದಿರುವ ಕಾರಣವೇನು ಎಂದು ನೋಡೋಣ ಬನ್ನಿ:

ದೇವಾಲಯಗಳಲ್ಲಿ ದೈವಿಕ ಶಕ್ತಿ ಇರುತ್ತದೆ
ನೀವು ಯಾವುದೇ ದೇವಾಲಯಕ್ಕೆ ಭೇಟಿ ನೀಡಿದರೂ ಮನಸ್ಸಿಗೆ ನೆಮ್ಮದಿ ಅನಿಸುವುದು. ನಿಮ್ಮ ಮನಸ್ಸಿನಲ್ಲಿರುವ ಭಾರವೆಲ್ಲಾ ಕಡಿಮೆಯದಂತೆ ಅನಿಸುವುದು, ಅದಕ್ಕೆ ದೇವಾಲಯದಲ್ಲಿರು ಧನಾತ್ಮಕ ಶಕ್ತಿ ಕಾರಣ. ದೇವಾಲಯದಲ್ಲಿರುವ ದೇವರ ಮೂರ್ತಿಗಳಿಂದ ಧನಾತ್ಮಕ ಶಕ್ತಿ ಆ ಪ್ರದೇಶದಲ್ಲಿ ಹರಡುವುದು. ಆದ್ದರಿಂದ ಮನಸ್ಸಿನ ನೋವುಗಳು, ಒತ್ತಡಗಳು ಎಲ್ಲವೂ ಆ ಪ್ರದೇಶಕ್ಕೆ ಬಂದರೆ ದೂರಾಗುವುದು.
ಗ್ರಹಣದ ಸಮಯದಲ್ಲಿ ಬಾಗಿಲು ಮುಚ್ಚುವುದು ಏಕೆ?
ಸೂರ್ಯ ಹಾಗೂ ಚಂದ್ರ ಭೂಮಿಗೆ ಬೆಳಕು ನೀಡುವ ಗ್ರಹಗಳಾಗಿವೆ. ಗ್ರಹಣವಾದಾಗ ಅವುಗಳ ಬೆಳಕು ಭೂಮಿಗೆ ತಲುಪುವುದಿಲ್ಲ, ಈ ಅವಧಿಯಲ್ಲಿ ನೆಗೆಟಿವ್ ಎನರ್ಜಿ ತುಂಬಾ ಇರುತ್ತದೆ, ಈ ಸಮಯದಲ್ಲಿ ಬಾಗಿಲು ತೆರೆದಿಟ್ಟರೆ ದೇವಾಲಯದಲ್ಲಿರು ದೈವಿಕ ಶಕ್ತಿ ಮೇಲೆ ಪ್ರಭಾವ ಬೀರುವುದು, ಈ ಕಾರಣದಿಂದಾಗಿ ದೇವಾಲಯದ ಬಾಗಿಲು ಗ್ರಹಣದ ಸಮಯದಲ್ಲಿ ಮುಚ್ಚಿರಲಾಗುವುದು.
ಗ್ರಹಣದ ದೋಷ ತಟ್ಟದಿರಲು ತುಳಸಿ ಎಲೆ ಹಾಕಲಾಗುವುದು
ದೇವಾಲಯದ ವಿಗ್ರಹಗಳಿಗೆ ಗ್ರಹಣದ ಋಣಾತ್ಮಕ ಶಕ್ತಿ ತಾಗದಿರಲು ತುಳಸಿ ಎಲೆಗಳನ್ನು ಹಾಕಿಡಲಾಗುವುದು, ಹಾನಿಕಾರಕ ಕಿರಣಗಳನ್ನು ಹೀರಿಕೊಳ್ಳುವ ಶಕ್ತಿ ತುಳಸಿಎಲೆಗೆ ಇದೆ, ಹಾಗಾಗಿ ಹೀಗೆ ಮಾಡಲಾಗುವುದು.
ಭಾರತದಲ್ಲಿ ಒಂದೇ ಒಂದು ದೇವಾಲಯದ ಬಾಗಿಲು ತೆರೆದಿರುತ್ತದೆ
ಗ್ರಹಣದ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗುವುದು, ಆದರೆ ಶ್ರೀ ಕಾಳಹಸ್ತಿಯಲ್ಲಿರುವ ಕಾಳಹಸ್ತೀಶ್ವರ ದೇವಾಲಯದ ಬಾಗಿಲು ಮಾತ್ರ ತೆರೆದಿರುತ್ತದೆ. ಇಲ್ಲಿ ರಾಹು-ಕೇತುಗಳಿಗೆ ಪೂಜೆಯನ್ನು ಮಾಡಲಾಗುವುದು ಹಾಗಾಗಿ ಗ್ರಹಣದ ಪ್ರಭಾವ ಈ ದೇವಾಲಯದ ಮೇಲೆ ಬರುವುದಿಲ್ಲ.
ಪಂಚಾಂಗದ ಪ್ರಕಾರ ಗ್ರಹಣ ಉಂಟಾಗಲು ಕಾರಣ ರಾಹು-ಕೇತು. ಈ ದೇವಾಲಯದಲ್ಲಿ ರಾಹು-ಕೇತುವನ್ನು ಪೂಜಿಸುತ್ತಿರುವುದರಿಂದ ಗ್ರಹಣದ ಸಮಯದಲ್ಲೂ ಬಾಗಿಲು ತೆರೆದಿರುತ್ತದೆ.



Click it and Unblock the Notifications












