Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಏ.20ಕ್ಕೆ ಸೂರ್ಯಗ್ರಹಣ: ಗ್ರಹಣ ಸಮಯದಲ್ಲಿ ದೇವಾಲಯಗಳ ಬಾಗಿಲು ಮುಚ್ಚುವುದೇಕೆ?
ಏಪ್ರಿಲ್ 20ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣದ ವಿಶೇಷವೆಂದರೆ ಇದು ಅಪರೂಪದ ಸೂರ್ಯಗ್ರಹಣವಾಗಿದೆ. ಈ ಸೂರ್ಯಗ್ರಹಣವನ್ನು ಹೈಬ್ರಿಡ್ ನಿಂಗಲೂ ಗ್ರಹಣ ಎಂದು ಕರೆಯಲಾಗುವುದು. ಗ್ರಹಣ ಸಮಯದಲ್ಲಿ ಹಲವಾರು ಧಾರ್ಮಿಕ ನಂಬಿಕೆಗಳನ್ನು ಪಾಲಿಸಲಾಗುವುದು.
ಗ್ರಹಣ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗುವುದು, ಗ್ರಹಣದ ಸೂತಕ ಮುಗಿಯುವವರೆಗೆ ಬಾಗಿಲು ತೆರೆಯುವುದಿಲ್ಲ. ದೇವಾಲಯಗಳ ಬಾಗಿಲು ಯಾಕೆ ತೆರೆಯುವುದಿಲ್ಲ? ಇದರ ಹಿಂದಿರುವ ಕಾರಣವೇನು ಎಂದು ನೋಡೋಣ ಬನ್ನಿ:

ದೇವಾಲಯಗಳಲ್ಲಿ ದೈವಿಕ ಶಕ್ತಿ ಇರುತ್ತದೆ
ನೀವು ಯಾವುದೇ ದೇವಾಲಯಕ್ಕೆ ಭೇಟಿ ನೀಡಿದರೂ ಮನಸ್ಸಿಗೆ ನೆಮ್ಮದಿ ಅನಿಸುವುದು. ನಿಮ್ಮ ಮನಸ್ಸಿನಲ್ಲಿರುವ ಭಾರವೆಲ್ಲಾ ಕಡಿಮೆಯದಂತೆ ಅನಿಸುವುದು, ಅದಕ್ಕೆ ದೇವಾಲಯದಲ್ಲಿರು ಧನಾತ್ಮಕ ಶಕ್ತಿ ಕಾರಣ. ದೇವಾಲಯದಲ್ಲಿರುವ ದೇವರ ಮೂರ್ತಿಗಳಿಂದ ಧನಾತ್ಮಕ ಶಕ್ತಿ ಆ ಪ್ರದೇಶದಲ್ಲಿ ಹರಡುವುದು. ಆದ್ದರಿಂದ ಮನಸ್ಸಿನ ನೋವುಗಳು, ಒತ್ತಡಗಳು ಎಲ್ಲವೂ ಆ ಪ್ರದೇಶಕ್ಕೆ ಬಂದರೆ ದೂರಾಗುವುದು.
ಗ್ರಹಣದ ಸಮಯದಲ್ಲಿ ಬಾಗಿಲು ಮುಚ್ಚುವುದು ಏಕೆ?
ಸೂರ್ಯ ಹಾಗೂ ಚಂದ್ರ ಭೂಮಿಗೆ ಬೆಳಕು ನೀಡುವ ಗ್ರಹಗಳಾಗಿವೆ. ಗ್ರಹಣವಾದಾಗ ಅವುಗಳ ಬೆಳಕು ಭೂಮಿಗೆ ತಲುಪುವುದಿಲ್ಲ, ಈ ಅವಧಿಯಲ್ಲಿ ನೆಗೆಟಿವ್ ಎನರ್ಜಿ ತುಂಬಾ ಇರುತ್ತದೆ, ಈ ಸಮಯದಲ್ಲಿ ಬಾಗಿಲು ತೆರೆದಿಟ್ಟರೆ ದೇವಾಲಯದಲ್ಲಿರು ದೈವಿಕ ಶಕ್ತಿ ಮೇಲೆ ಪ್ರಭಾವ ಬೀರುವುದು, ಈ ಕಾರಣದಿಂದಾಗಿ ದೇವಾಲಯದ ಬಾಗಿಲು ಗ್ರಹಣದ ಸಮಯದಲ್ಲಿ ಮುಚ್ಚಿರಲಾಗುವುದು.
ಗ್ರಹಣದ ದೋಷ ತಟ್ಟದಿರಲು ತುಳಸಿ ಎಲೆ ಹಾಕಲಾಗುವುದು
ದೇವಾಲಯದ ವಿಗ್ರಹಗಳಿಗೆ ಗ್ರಹಣದ ಋಣಾತ್ಮಕ ಶಕ್ತಿ ತಾಗದಿರಲು ತುಳಸಿ ಎಲೆಗಳನ್ನು ಹಾಕಿಡಲಾಗುವುದು, ಹಾನಿಕಾರಕ ಕಿರಣಗಳನ್ನು ಹೀರಿಕೊಳ್ಳುವ ಶಕ್ತಿ ತುಳಸಿಎಲೆಗೆ ಇದೆ, ಹಾಗಾಗಿ ಹೀಗೆ ಮಾಡಲಾಗುವುದು.
ಭಾರತದಲ್ಲಿ ಒಂದೇ ಒಂದು ದೇವಾಲಯದ ಬಾಗಿಲು ತೆರೆದಿರುತ್ತದೆ
ಗ್ರಹಣದ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗುವುದು, ಆದರೆ ಶ್ರೀ ಕಾಳಹಸ್ತಿಯಲ್ಲಿರುವ ಕಾಳಹಸ್ತೀಶ್ವರ ದೇವಾಲಯದ ಬಾಗಿಲು ಮಾತ್ರ ತೆರೆದಿರುತ್ತದೆ. ಇಲ್ಲಿ ರಾಹು-ಕೇತುಗಳಿಗೆ ಪೂಜೆಯನ್ನು ಮಾಡಲಾಗುವುದು ಹಾಗಾಗಿ ಗ್ರಹಣದ ಪ್ರಭಾವ ಈ ದೇವಾಲಯದ ಮೇಲೆ ಬರುವುದಿಲ್ಲ.
ಪಂಚಾಂಗದ ಪ್ರಕಾರ ಗ್ರಹಣ ಉಂಟಾಗಲು ಕಾರಣ ರಾಹು-ಕೇತು. ಈ ದೇವಾಲಯದಲ್ಲಿ ರಾಹು-ಕೇತುವನ್ನು ಪೂಜಿಸುತ್ತಿರುವುದರಿಂದ ಗ್ರಹಣದ ಸಮಯದಲ್ಲೂ ಬಾಗಿಲು ತೆರೆದಿರುತ್ತದೆ.



Click it and Unblock the Notifications

