Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಸಾಲಿಗ್ರಾಮ ಮನೆಯಲ್ಲಿ ಪೂಜಿಸುವಾಗ ಈ ತಪ್ಪುಗಳನ್ನು ಮಾಡಲೇಬಾರದು
ಸಾಲಿಗ್ರಾಮವನ್ನು ಬಹಳ ಶಕ್ತಿವಂತ ಕಲ್ಲು ಎಂದು ಹೇಳಲಾಗುವುದು. ಇದು ಶ್ರೀ ವಿಷ್ಣುವಿನ ಸ್ವರೂಪ, ಇದರಲ್ಲಿ ಶ್ರೀ ವಿಷ್ಣು ನೆಲೆಸಿರುತ್ತಾನೆ ಎಂದು ಹೇಳಲಾಗುವುದು. ಕಪ್ಪಾದ, ದುಂಡಗಿನ, ನಯವಾಗಿರುವ ಕಲ್ಲು ಇದಾಗಿದ್ದು ಈ ಕಲ್ಲನ್ನು ಪೂಜಿಸಲಾಗುವುದು. ಈ ಕಲ್ಲನ್ನು ಮನೆಗೆ ತಂದು ಕೆಲವರು ಪೂಜಿಸುತ್ತಾರೆ.

ಸಾಲಿಗ್ರಾಮವನ್ನು ಪೂಜಿಸುವುದರಿಂದ ಶ್ರೀ ವಿಷ್ಣುವಿನ ವಿಶೇಷ ಅನುಗ್ರಹ ಸಿಗುವುದು, ಇಷ್ಟು ಇರುವ ಮನೆಯಲ್ಲಿ ಸಂತಸ, ಸಮೃದ್ದಿ ಇರುತ್ತದೆ. ಆದರೆ ಇದನ್ನು ಮನೆಯಲ್ಲಿಟ್ಟು ಪೂಜಿಸುವುದಾದರೆ ತುಂಬಾನೇ ಎಚ್ಚರಿಕೆವಹಿಸಬೇಕು. ಏಕೆಂದರೆ ಸಾಲಿಗ್ರಾಮ ಪೂಜೆಯಲ್ಲಿ ಚಿಕ್ಕ ದೋಷ ಉಂಟಾದರೂ ದೊಡ್ಡ ತೊಂದರೆಯೇ ಉಂಟಾಗುವುದು.
ಆದ್ದರಿಂದ ಸಾಲಿಗ್ರಾಮ ಪೂಜಿಸುವವರು ಅದರ ಪೂಜಾ ವಿಧಿಗಳ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕು. ಇಲ್ಲದಿದ್ದರೆ ದೋಷ ಉಂಟಾಗಿ ತುಂಬಾನೇ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ನೀವು ಸಾಲಿಗ್ರಾಮವನ್ನು ಮನೆಯಲ್ಲಿ ತಂದಿಟ್ಟು ಈ ತಪ್ಪುಗಳನ್ನು ಮಾಡದಿರಿ:

ಸಾಲಿಗ್ರಾಮವನ್ನು ನೀವು ದುಡಿದ ಹಣದಿಂದಲೇ ಖರೀದಿಸಬೇಕು
ಸಾಲಿಗ್ರಾಮವನ್ನು ನೀವು ಮನೆಯಲ್ಲಿ ಇಟ್ಟು ಪೂಜಿಸುವುದಾದರೆ ನೀವೇ ದುಡಿದ ಹಣದಿಂದ ಖರೀದಿಸಬೇಕು ಅಥವಾ ಸಂತ, ಸ್ವಾಮೀಜಿ ಕೊಟ್ಟಿರುವುದು ಆಗಿರಬೇಕು. ಇದನ್ನು ವಿವಾಹಿತ ವ್ಯಕ್ತಿ ಕೈಯಿಂದ ಪಡೆಯಬಾರದು ಅಲ್ಲದೆ ವಿವಾಹಿತನಿಗೆ ನೀಡಬಾರದು.

ಸಾಲಿಗ್ರಾಮ ಪವಿತ್ರವಾಗಿಡಬೇಕು
ಮನೆಯಲ್ಲಿ ಸಾಲಿಗ್ರಾಮವಿದ್ದರೆ ಅದನ್ನು ಪೂಜಾಸ್ಥಳದಲ್ಲಿ ಪವಿತ್ರವಾಗಿಡಬೇಕು, ಆ ರೀತಿ ಇಡಲು ಕಷ್ಟವಾದರೆ ಅದನ್ನು ದೇವಾಲಯಕ್ಕೆ ನೀಡಿ, ಇಲ್ಲದಿದ್ದರೆ ಮನೆಯ ನೆಮ್ಮದಿ ಹಾಳಾಗುವುದು. ಆದ್ದರಿಂದ ಸಾಲಿಗ್ರಾಮ ಮನೆಗೆ ತರುವಾಗ ಈ ಬಗ್ಗೆ ಎಚ್ಚರಿಕೆವಹಿಸಿ ನಂತರ ತರುವುದು ಒಳ್ಳೆಯದು.

ಸಾಲಿಗ್ರಾಮ ಮೇಲೆ ಅಕ್ಷತೆ ಹಾಕಬಾರದು
ನಾವು ಪೂಜೆ ಮಾಡಿ ಅಕ್ಷತೆ ಹಾಕುತ್ತೇವೆ ಆದರೆ ಸಾಲಿಗ್ರಾಮದ ಮೇಲೆ ಅಕ್ಷತೆ ಹಾಕಬಾರದು, ಕೆಲವೊಂದು ವಿಶೇಷ ಸಂದರ್ಭದಲ್ಲಿ ಅರಿಶಿಣ ಹಚ್ಚಿ ನಂತರ ಅಕ್ಷತೆ ಹಾಕಲಾಗುವುದು.

ಸಾಲಿಗ್ರಾಮ ಪೂಜೆಯಲ್ಲಿ ತುಳಸಿ ಕಡ್ಡಾಯ
ಸಾಲಿಗ್ರಾಮ ತುಳಸಿಯ ಪ್ರತಿರೂಪ, ಆದ್ದರಿಂದ ದೇವರ ಪೂಜೆಯಲ್ಲಿ ತುಳಸಿಯನ್ನು ಕಡ್ಡಾಯವಾಗಿ ಅರ್ಪಿಸಬೇಕು, ಪೂಜೆಯನ್ನು ಅರ್ಧದಲ್ಲಿ ನಿಲ್ಲಿಸಬಾರದು, ಹೀಗೆ ಮಾಡಿದರೆ ದೋಷ ಉಂಟಾಗುವುದು. ಸಾಲಿಗ್ರಾಮವನ್ನು ದಿನಾ ಪೂಜಿಸಬೇಕು.

ಸಾಲಿಗ್ರಾಮ ಎಲ್ಲಿಂದ ತರಲಾಗುವುದು
ಸಾಲಿಗ್ರಾಮವನ್ನು ನೇಪಾಳದ ಮುಕ್ತಿನಾಥ, ಕಾಳಿ ಗಂಡಕಿ ನದಿಯಿಂದ ಸಂಗ್ರಹಿಸಿ ತರಲಾಗುವುದು. ಈ ಸಾಲಿಗ್ರಾಮ ಶಿವಲಿಂಗದಷ್ಟೇ ಶಕ್ತಿಯುತವಾದದ್ದು, ಇದೀಗ ಅಯೋಧ್ಯೆಗೆ ಎರಡು ಸಾಲಿಗ್ರಾಮ ತರಲಾಗಿದ್ದು ಅದನ್ನು ನೇಪಾಳದಿಂದ ತರಲಾಗಿದೆ.



Click it and Unblock the Notifications