Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಸಾಲಿಗ್ರಾಮ ಮನೆಯಲ್ಲಿ ಪೂಜಿಸುವಾಗ ಈ ತಪ್ಪುಗಳನ್ನು ಮಾಡಲೇಬಾರದು
ಸಾಲಿಗ್ರಾಮವನ್ನು ಬಹಳ ಶಕ್ತಿವಂತ ಕಲ್ಲು ಎಂದು ಹೇಳಲಾಗುವುದು. ಇದು ಶ್ರೀ ವಿಷ್ಣುವಿನ ಸ್ವರೂಪ, ಇದರಲ್ಲಿ ಶ್ರೀ ವಿಷ್ಣು ನೆಲೆಸಿರುತ್ತಾನೆ ಎಂದು ಹೇಳಲಾಗುವುದು. ಕಪ್ಪಾದ, ದುಂಡಗಿನ, ನಯವಾಗಿರುವ ಕಲ್ಲು ಇದಾಗಿದ್ದು ಈ ಕಲ್ಲನ್ನು ಪೂಜಿಸಲಾಗುವುದು. ಈ ಕಲ್ಲನ್ನು ಮನೆಗೆ ತಂದು ಕೆಲವರು ಪೂಜಿಸುತ್ತಾರೆ.

ಸಾಲಿಗ್ರಾಮವನ್ನು ಪೂಜಿಸುವುದರಿಂದ ಶ್ರೀ ವಿಷ್ಣುವಿನ ವಿಶೇಷ ಅನುಗ್ರಹ ಸಿಗುವುದು, ಇಷ್ಟು ಇರುವ ಮನೆಯಲ್ಲಿ ಸಂತಸ, ಸಮೃದ್ದಿ ಇರುತ್ತದೆ. ಆದರೆ ಇದನ್ನು ಮನೆಯಲ್ಲಿಟ್ಟು ಪೂಜಿಸುವುದಾದರೆ ತುಂಬಾನೇ ಎಚ್ಚರಿಕೆವಹಿಸಬೇಕು. ಏಕೆಂದರೆ ಸಾಲಿಗ್ರಾಮ ಪೂಜೆಯಲ್ಲಿ ಚಿಕ್ಕ ದೋಷ ಉಂಟಾದರೂ ದೊಡ್ಡ ತೊಂದರೆಯೇ ಉಂಟಾಗುವುದು.
ಆದ್ದರಿಂದ ಸಾಲಿಗ್ರಾಮ ಪೂಜಿಸುವವರು ಅದರ ಪೂಜಾ ವಿಧಿಗಳ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕು. ಇಲ್ಲದಿದ್ದರೆ ದೋಷ ಉಂಟಾಗಿ ತುಂಬಾನೇ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ನೀವು ಸಾಲಿಗ್ರಾಮವನ್ನು ಮನೆಯಲ್ಲಿ ತಂದಿಟ್ಟು ಈ ತಪ್ಪುಗಳನ್ನು ಮಾಡದಿರಿ:

ಸಾಲಿಗ್ರಾಮವನ್ನು ನೀವು ದುಡಿದ ಹಣದಿಂದಲೇ ಖರೀದಿಸಬೇಕು
ಸಾಲಿಗ್ರಾಮವನ್ನು ನೀವು ಮನೆಯಲ್ಲಿ ಇಟ್ಟು ಪೂಜಿಸುವುದಾದರೆ ನೀವೇ ದುಡಿದ ಹಣದಿಂದ ಖರೀದಿಸಬೇಕು ಅಥವಾ ಸಂತ, ಸ್ವಾಮೀಜಿ ಕೊಟ್ಟಿರುವುದು ಆಗಿರಬೇಕು. ಇದನ್ನು ವಿವಾಹಿತ ವ್ಯಕ್ತಿ ಕೈಯಿಂದ ಪಡೆಯಬಾರದು ಅಲ್ಲದೆ ವಿವಾಹಿತನಿಗೆ ನೀಡಬಾರದು.

ಸಾಲಿಗ್ರಾಮ ಪವಿತ್ರವಾಗಿಡಬೇಕು
ಮನೆಯಲ್ಲಿ ಸಾಲಿಗ್ರಾಮವಿದ್ದರೆ ಅದನ್ನು ಪೂಜಾಸ್ಥಳದಲ್ಲಿ ಪವಿತ್ರವಾಗಿಡಬೇಕು, ಆ ರೀತಿ ಇಡಲು ಕಷ್ಟವಾದರೆ ಅದನ್ನು ದೇವಾಲಯಕ್ಕೆ ನೀಡಿ, ಇಲ್ಲದಿದ್ದರೆ ಮನೆಯ ನೆಮ್ಮದಿ ಹಾಳಾಗುವುದು. ಆದ್ದರಿಂದ ಸಾಲಿಗ್ರಾಮ ಮನೆಗೆ ತರುವಾಗ ಈ ಬಗ್ಗೆ ಎಚ್ಚರಿಕೆವಹಿಸಿ ನಂತರ ತರುವುದು ಒಳ್ಳೆಯದು.

ಸಾಲಿಗ್ರಾಮ ಮೇಲೆ ಅಕ್ಷತೆ ಹಾಕಬಾರದು
ನಾವು ಪೂಜೆ ಮಾಡಿ ಅಕ್ಷತೆ ಹಾಕುತ್ತೇವೆ ಆದರೆ ಸಾಲಿಗ್ರಾಮದ ಮೇಲೆ ಅಕ್ಷತೆ ಹಾಕಬಾರದು, ಕೆಲವೊಂದು ವಿಶೇಷ ಸಂದರ್ಭದಲ್ಲಿ ಅರಿಶಿಣ ಹಚ್ಚಿ ನಂತರ ಅಕ್ಷತೆ ಹಾಕಲಾಗುವುದು.

ಸಾಲಿಗ್ರಾಮ ಪೂಜೆಯಲ್ಲಿ ತುಳಸಿ ಕಡ್ಡಾಯ
ಸಾಲಿಗ್ರಾಮ ತುಳಸಿಯ ಪ್ರತಿರೂಪ, ಆದ್ದರಿಂದ ದೇವರ ಪೂಜೆಯಲ್ಲಿ ತುಳಸಿಯನ್ನು ಕಡ್ಡಾಯವಾಗಿ ಅರ್ಪಿಸಬೇಕು, ಪೂಜೆಯನ್ನು ಅರ್ಧದಲ್ಲಿ ನಿಲ್ಲಿಸಬಾರದು, ಹೀಗೆ ಮಾಡಿದರೆ ದೋಷ ಉಂಟಾಗುವುದು. ಸಾಲಿಗ್ರಾಮವನ್ನು ದಿನಾ ಪೂಜಿಸಬೇಕು.

ಸಾಲಿಗ್ರಾಮ ಎಲ್ಲಿಂದ ತರಲಾಗುವುದು
ಸಾಲಿಗ್ರಾಮವನ್ನು ನೇಪಾಳದ ಮುಕ್ತಿನಾಥ, ಕಾಳಿ ಗಂಡಕಿ ನದಿಯಿಂದ ಸಂಗ್ರಹಿಸಿ ತರಲಾಗುವುದು. ಈ ಸಾಲಿಗ್ರಾಮ ಶಿವಲಿಂಗದಷ್ಟೇ ಶಕ್ತಿಯುತವಾದದ್ದು, ಇದೀಗ ಅಯೋಧ್ಯೆಗೆ ಎರಡು ಸಾಲಿಗ್ರಾಮ ತರಲಾಗಿದ್ದು ಅದನ್ನು ನೇಪಾಳದಿಂದ ತರಲಾಗಿದೆ.



Click it and Unblock the Notifications