Latest Updates
-
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ! -
ಬಿಸಿಲ ಧಗೆಯಲ್ಲಿ ಮದುವೆ ಸಮಾರಂಭಗಳ ಸಂಕಟ: ಅತಿಥಿಗಳಿಗೂ ನಿಮಗೂ ಆರಾಮ ನೀಡುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ತತ್ತರ: ಎಸಿ ಇಲ್ಲದೆಯೇ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಸರಳ ಉಪಾಯಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮಗಳನ್ನು ಪಾಲಿಸಿ, ಆರೋಗ್ಯವಾಗಿರಿ! -
ಕಾನ್ ರೆಡ್ ಕಾರ್ಪೆಟ್ ಮೇಲೆ ದಿಶಾ ಮದನ್ ಅಬ್ಬರ: ಹಳೆಯ ಸೀರೆಯಿಂದ ಸೃಷ್ಟಿಯಾದ ಈ ಫ್ಯಾಷನ್ ಮ್ಯಾಜಿಕ್ ನೋಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯವಾಗದಂತೆ ತಡೆಯಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಸಾಲಿಗ್ರಾಮ ಮನೆಯಲ್ಲಿ ಪೂಜಿಸುವಾಗ ಈ ತಪ್ಪುಗಳನ್ನು ಮಾಡಲೇಬಾರದು
ಸಾಲಿಗ್ರಾಮವನ್ನು ಬಹಳ ಶಕ್ತಿವಂತ ಕಲ್ಲು ಎಂದು ಹೇಳಲಾಗುವುದು. ಇದು ಶ್ರೀ ವಿಷ್ಣುವಿನ ಸ್ವರೂಪ, ಇದರಲ್ಲಿ ಶ್ರೀ ವಿಷ್ಣು ನೆಲೆಸಿರುತ್ತಾನೆ ಎಂದು ಹೇಳಲಾಗುವುದು. ಕಪ್ಪಾದ, ದುಂಡಗಿನ, ನಯವಾಗಿರುವ ಕಲ್ಲು ಇದಾಗಿದ್ದು ಈ ಕಲ್ಲನ್ನು ಪೂಜಿಸಲಾಗುವುದು. ಈ ಕಲ್ಲನ್ನು ಮನೆಗೆ ತಂದು ಕೆಲವರು ಪೂಜಿಸುತ್ತಾರೆ.

ಸಾಲಿಗ್ರಾಮವನ್ನು ಪೂಜಿಸುವುದರಿಂದ ಶ್ರೀ ವಿಷ್ಣುವಿನ ವಿಶೇಷ ಅನುಗ್ರಹ ಸಿಗುವುದು, ಇಷ್ಟು ಇರುವ ಮನೆಯಲ್ಲಿ ಸಂತಸ, ಸಮೃದ್ದಿ ಇರುತ್ತದೆ. ಆದರೆ ಇದನ್ನು ಮನೆಯಲ್ಲಿಟ್ಟು ಪೂಜಿಸುವುದಾದರೆ ತುಂಬಾನೇ ಎಚ್ಚರಿಕೆವಹಿಸಬೇಕು. ಏಕೆಂದರೆ ಸಾಲಿಗ್ರಾಮ ಪೂಜೆಯಲ್ಲಿ ಚಿಕ್ಕ ದೋಷ ಉಂಟಾದರೂ ದೊಡ್ಡ ತೊಂದರೆಯೇ ಉಂಟಾಗುವುದು.
ಆದ್ದರಿಂದ ಸಾಲಿಗ್ರಾಮ ಪೂಜಿಸುವವರು ಅದರ ಪೂಜಾ ವಿಧಿಗಳ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕು. ಇಲ್ಲದಿದ್ದರೆ ದೋಷ ಉಂಟಾಗಿ ತುಂಬಾನೇ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ನೀವು ಸಾಲಿಗ್ರಾಮವನ್ನು ಮನೆಯಲ್ಲಿ ತಂದಿಟ್ಟು ಈ ತಪ್ಪುಗಳನ್ನು ಮಾಡದಿರಿ:

ಸಾಲಿಗ್ರಾಮವನ್ನು ನೀವು ದುಡಿದ ಹಣದಿಂದಲೇ ಖರೀದಿಸಬೇಕು
ಸಾಲಿಗ್ರಾಮವನ್ನು ನೀವು ಮನೆಯಲ್ಲಿ ಇಟ್ಟು ಪೂಜಿಸುವುದಾದರೆ ನೀವೇ ದುಡಿದ ಹಣದಿಂದ ಖರೀದಿಸಬೇಕು ಅಥವಾ ಸಂತ, ಸ್ವಾಮೀಜಿ ಕೊಟ್ಟಿರುವುದು ಆಗಿರಬೇಕು. ಇದನ್ನು ವಿವಾಹಿತ ವ್ಯಕ್ತಿ ಕೈಯಿಂದ ಪಡೆಯಬಾರದು ಅಲ್ಲದೆ ವಿವಾಹಿತನಿಗೆ ನೀಡಬಾರದು.

ಸಾಲಿಗ್ರಾಮ ಪವಿತ್ರವಾಗಿಡಬೇಕು
ಮನೆಯಲ್ಲಿ ಸಾಲಿಗ್ರಾಮವಿದ್ದರೆ ಅದನ್ನು ಪೂಜಾಸ್ಥಳದಲ್ಲಿ ಪವಿತ್ರವಾಗಿಡಬೇಕು, ಆ ರೀತಿ ಇಡಲು ಕಷ್ಟವಾದರೆ ಅದನ್ನು ದೇವಾಲಯಕ್ಕೆ ನೀಡಿ, ಇಲ್ಲದಿದ್ದರೆ ಮನೆಯ ನೆಮ್ಮದಿ ಹಾಳಾಗುವುದು. ಆದ್ದರಿಂದ ಸಾಲಿಗ್ರಾಮ ಮನೆಗೆ ತರುವಾಗ ಈ ಬಗ್ಗೆ ಎಚ್ಚರಿಕೆವಹಿಸಿ ನಂತರ ತರುವುದು ಒಳ್ಳೆಯದು.

ಸಾಲಿಗ್ರಾಮ ಮೇಲೆ ಅಕ್ಷತೆ ಹಾಕಬಾರದು
ನಾವು ಪೂಜೆ ಮಾಡಿ ಅಕ್ಷತೆ ಹಾಕುತ್ತೇವೆ ಆದರೆ ಸಾಲಿಗ್ರಾಮದ ಮೇಲೆ ಅಕ್ಷತೆ ಹಾಕಬಾರದು, ಕೆಲವೊಂದು ವಿಶೇಷ ಸಂದರ್ಭದಲ್ಲಿ ಅರಿಶಿಣ ಹಚ್ಚಿ ನಂತರ ಅಕ್ಷತೆ ಹಾಕಲಾಗುವುದು.

ಸಾಲಿಗ್ರಾಮ ಪೂಜೆಯಲ್ಲಿ ತುಳಸಿ ಕಡ್ಡಾಯ
ಸಾಲಿಗ್ರಾಮ ತುಳಸಿಯ ಪ್ರತಿರೂಪ, ಆದ್ದರಿಂದ ದೇವರ ಪೂಜೆಯಲ್ಲಿ ತುಳಸಿಯನ್ನು ಕಡ್ಡಾಯವಾಗಿ ಅರ್ಪಿಸಬೇಕು, ಪೂಜೆಯನ್ನು ಅರ್ಧದಲ್ಲಿ ನಿಲ್ಲಿಸಬಾರದು, ಹೀಗೆ ಮಾಡಿದರೆ ದೋಷ ಉಂಟಾಗುವುದು. ಸಾಲಿಗ್ರಾಮವನ್ನು ದಿನಾ ಪೂಜಿಸಬೇಕು.

ಸಾಲಿಗ್ರಾಮ ಎಲ್ಲಿಂದ ತರಲಾಗುವುದು
ಸಾಲಿಗ್ರಾಮವನ್ನು ನೇಪಾಳದ ಮುಕ್ತಿನಾಥ, ಕಾಳಿ ಗಂಡಕಿ ನದಿಯಿಂದ ಸಂಗ್ರಹಿಸಿ ತರಲಾಗುವುದು. ಈ ಸಾಲಿಗ್ರಾಮ ಶಿವಲಿಂಗದಷ್ಟೇ ಶಕ್ತಿಯುತವಾದದ್ದು, ಇದೀಗ ಅಯೋಧ್ಯೆಗೆ ಎರಡು ಸಾಲಿಗ್ರಾಮ ತರಲಾಗಿದ್ದು ಅದನ್ನು ನೇಪಾಳದಿಂದ ತರಲಾಗಿದೆ.



Click it and Unblock the Notifications