Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಸಾಲಿಗ್ರಾಮ ಮನೆಯಲ್ಲಿ ಪೂಜಿಸುವಾಗ ಈ ತಪ್ಪುಗಳನ್ನು ಮಾಡಲೇಬಾರದು
ಸಾಲಿಗ್ರಾಮವನ್ನು ಬಹಳ ಶಕ್ತಿವಂತ ಕಲ್ಲು ಎಂದು ಹೇಳಲಾಗುವುದು. ಇದು ಶ್ರೀ ವಿಷ್ಣುವಿನ ಸ್ವರೂಪ, ಇದರಲ್ಲಿ ಶ್ರೀ ವಿಷ್ಣು ನೆಲೆಸಿರುತ್ತಾನೆ ಎಂದು ಹೇಳಲಾಗುವುದು. ಕಪ್ಪಾದ, ದುಂಡಗಿನ, ನಯವಾಗಿರುವ ಕಲ್ಲು ಇದಾಗಿದ್ದು ಈ ಕಲ್ಲನ್ನು ಪೂಜಿಸಲಾಗುವುದು. ಈ ಕಲ್ಲನ್ನು ಮನೆಗೆ ತಂದು ಕೆಲವರು ಪೂಜಿಸುತ್ತಾರೆ.

ಸಾಲಿಗ್ರಾಮವನ್ನು ಪೂಜಿಸುವುದರಿಂದ ಶ್ರೀ ವಿಷ್ಣುವಿನ ವಿಶೇಷ ಅನುಗ್ರಹ ಸಿಗುವುದು, ಇಷ್ಟು ಇರುವ ಮನೆಯಲ್ಲಿ ಸಂತಸ, ಸಮೃದ್ದಿ ಇರುತ್ತದೆ. ಆದರೆ ಇದನ್ನು ಮನೆಯಲ್ಲಿಟ್ಟು ಪೂಜಿಸುವುದಾದರೆ ತುಂಬಾನೇ ಎಚ್ಚರಿಕೆವಹಿಸಬೇಕು. ಏಕೆಂದರೆ ಸಾಲಿಗ್ರಾಮ ಪೂಜೆಯಲ್ಲಿ ಚಿಕ್ಕ ದೋಷ ಉಂಟಾದರೂ ದೊಡ್ಡ ತೊಂದರೆಯೇ ಉಂಟಾಗುವುದು.
ಆದ್ದರಿಂದ ಸಾಲಿಗ್ರಾಮ ಪೂಜಿಸುವವರು ಅದರ ಪೂಜಾ ವಿಧಿಗಳ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕು. ಇಲ್ಲದಿದ್ದರೆ ದೋಷ ಉಂಟಾಗಿ ತುಂಬಾನೇ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ನೀವು ಸಾಲಿಗ್ರಾಮವನ್ನು ಮನೆಯಲ್ಲಿ ತಂದಿಟ್ಟು ಈ ತಪ್ಪುಗಳನ್ನು ಮಾಡದಿರಿ:

ಸಾಲಿಗ್ರಾಮವನ್ನು ನೀವು ದುಡಿದ ಹಣದಿಂದಲೇ ಖರೀದಿಸಬೇಕು
ಸಾಲಿಗ್ರಾಮವನ್ನು ನೀವು ಮನೆಯಲ್ಲಿ ಇಟ್ಟು ಪೂಜಿಸುವುದಾದರೆ ನೀವೇ ದುಡಿದ ಹಣದಿಂದ ಖರೀದಿಸಬೇಕು ಅಥವಾ ಸಂತ, ಸ್ವಾಮೀಜಿ ಕೊಟ್ಟಿರುವುದು ಆಗಿರಬೇಕು. ಇದನ್ನು ವಿವಾಹಿತ ವ್ಯಕ್ತಿ ಕೈಯಿಂದ ಪಡೆಯಬಾರದು ಅಲ್ಲದೆ ವಿವಾಹಿತನಿಗೆ ನೀಡಬಾರದು.

ಸಾಲಿಗ್ರಾಮ ಪವಿತ್ರವಾಗಿಡಬೇಕು
ಮನೆಯಲ್ಲಿ ಸಾಲಿಗ್ರಾಮವಿದ್ದರೆ ಅದನ್ನು ಪೂಜಾಸ್ಥಳದಲ್ಲಿ ಪವಿತ್ರವಾಗಿಡಬೇಕು, ಆ ರೀತಿ ಇಡಲು ಕಷ್ಟವಾದರೆ ಅದನ್ನು ದೇವಾಲಯಕ್ಕೆ ನೀಡಿ, ಇಲ್ಲದಿದ್ದರೆ ಮನೆಯ ನೆಮ್ಮದಿ ಹಾಳಾಗುವುದು. ಆದ್ದರಿಂದ ಸಾಲಿಗ್ರಾಮ ಮನೆಗೆ ತರುವಾಗ ಈ ಬಗ್ಗೆ ಎಚ್ಚರಿಕೆವಹಿಸಿ ನಂತರ ತರುವುದು ಒಳ್ಳೆಯದು.

ಸಾಲಿಗ್ರಾಮ ಮೇಲೆ ಅಕ್ಷತೆ ಹಾಕಬಾರದು
ನಾವು ಪೂಜೆ ಮಾಡಿ ಅಕ್ಷತೆ ಹಾಕುತ್ತೇವೆ ಆದರೆ ಸಾಲಿಗ್ರಾಮದ ಮೇಲೆ ಅಕ್ಷತೆ ಹಾಕಬಾರದು, ಕೆಲವೊಂದು ವಿಶೇಷ ಸಂದರ್ಭದಲ್ಲಿ ಅರಿಶಿಣ ಹಚ್ಚಿ ನಂತರ ಅಕ್ಷತೆ ಹಾಕಲಾಗುವುದು.

ಸಾಲಿಗ್ರಾಮ ಪೂಜೆಯಲ್ಲಿ ತುಳಸಿ ಕಡ್ಡಾಯ
ಸಾಲಿಗ್ರಾಮ ತುಳಸಿಯ ಪ್ರತಿರೂಪ, ಆದ್ದರಿಂದ ದೇವರ ಪೂಜೆಯಲ್ಲಿ ತುಳಸಿಯನ್ನು ಕಡ್ಡಾಯವಾಗಿ ಅರ್ಪಿಸಬೇಕು, ಪೂಜೆಯನ್ನು ಅರ್ಧದಲ್ಲಿ ನಿಲ್ಲಿಸಬಾರದು, ಹೀಗೆ ಮಾಡಿದರೆ ದೋಷ ಉಂಟಾಗುವುದು. ಸಾಲಿಗ್ರಾಮವನ್ನು ದಿನಾ ಪೂಜಿಸಬೇಕು.

ಸಾಲಿಗ್ರಾಮ ಎಲ್ಲಿಂದ ತರಲಾಗುವುದು
ಸಾಲಿಗ್ರಾಮವನ್ನು ನೇಪಾಳದ ಮುಕ್ತಿನಾಥ, ಕಾಳಿ ಗಂಡಕಿ ನದಿಯಿಂದ ಸಂಗ್ರಹಿಸಿ ತರಲಾಗುವುದು. ಈ ಸಾಲಿಗ್ರಾಮ ಶಿವಲಿಂಗದಷ್ಟೇ ಶಕ್ತಿಯುತವಾದದ್ದು, ಇದೀಗ ಅಯೋಧ್ಯೆಗೆ ಎರಡು ಸಾಲಿಗ್ರಾಮ ತರಲಾಗಿದ್ದು ಅದನ್ನು ನೇಪಾಳದಿಂದ ತರಲಾಗಿದೆ.



Click it and Unblock the Notifications
