Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕಾಳ ಸರ್ಪ ದೋಷ ಪರಿಹಾರಕ್ಕೆ ಮಹಾಶಿವರಾತ್ರಿಯಂದು ಹೀಗೆ ಮಾಡಿ
ಈ ವರ್ಷ ಮಹಾಶಿವರಾತ್ರಿಯನ್ನು ಫೆಬ್ರವರಿ 18, 2023 ರಂದುಆಚರಿಸಲಾಗುವುದು. ಹಾವನ್ನೇ ಹಾರವನ್ನಾಗಿ ಧರಿಸಿರುವವನು ಶಿವ, ಆದ್ದರಿಂದ ಸರ್ಪ ದೋಷವಿದ್ದರೆ ಅದರ ನಿವಾರಣೆಗೆ ಮಹಾಶಿವರಾತ್ರಿ ತುಂಬಾ ಮುಖ್ಯವಾದ ದಿನವಾಗಿದೆ.

ಕೆಲವರಿಗೆ ಸರ್ಪ ದೋಷವಿರುತ್ತದೆ, ಸರ್ಪ ದೋಷವಿದ್ದರೆ ಬದುಕಿನಲ್ಲಿ ಅನೇಕ ಸವಾಲಗಳು ಉಂಟಾಗುವುದು, ಆರೋಗ್ಯ ಸಮಸ್ಯೆ ಉಂಟಾಗುವುದು, ತಮ್ಮ ಕೆಲಸ -ಕಾರ್ಯಗಳಲ್ಲಿ ಯಶಸ್ಸು ಸಿಗುವುದಿಲ್ಲ. ಕೆಲವರಿಗೆ ಮದುವೆ ವಿಳಂಬವಾದರೆ, ಇನ್ನು ಕೆಲವರಿಗೆ ಸಂತಾನಭಾಗ್ಯ ಇರುವುದಿಲ್ಲ. ಶಾಸ್ತ್ರದ ಪ್ರಕಾರ ಕಾಳ ಸರ್ಪ ದೋಷಕ್ಕೆ ಪರಿಹಾರ ಮಾಡಿದರೆ ಎಲ್ಲಾ ಕಷ್ಟಗಳು ದೂರಾಗುವುದು.
ಕಾಳ ಸರ್ಪದೋಷ ಎಂದರೇನು? ಇದರಿಂದಾಗುವ ತೊಂದರೆಗಳೇನು, ಮಹಾಶಿವರಾತ್ರಿಯಂದು ಏನು ಪರಿಹಾರ ಮಾಡಿದರೆ ಸರ್ಪ ದೋಷದಿಂದ ಮುಕ್ತಿ ಪಡೆಯಬಹುದು ನೋಡೋಣ ಬನ್ನಿ:
ಕಾಳ ಸರ್ಪ ದೋಷ ಯಾವಾಗ ಉಂಟಾಗುತ್ತದೆ?
ಜಾತಕದಲ್ಲಿ ರಾಹು ಮತ್ತು ಕೇತುಗಳ ನಡುವೆ ಗ್ರಹ ಬಂದರೆ ಈ ದೋಷವನ್ನು ಕಾಲಸರ್ಪ ದೋಷ ಎನ್ನುತ್ತಾರೆ. ಅನಂತ ಕಾಳಸರ್ಪ ದೋಷ, ಕುಳಿಕ ಕಾಳಸರ್ಪ ದೋಷ, ವಾಸುಕಿ ಕಾಳಸರ್ಪ ದೋಷ, ಶಂಖಪಾಲ ಕಾಳಸರ್ಪ ದೋಷ, ಪದ್ಮ ಕಾಳಸರ್ಪ ದೋಷ, ಮಹಾಪದ್ಮ ಕಾಳಸರ್ಪ ದೋಷ, ಹೀಗೆ ಹಲವು ವಿಧದ ಕಾಳಸರ್ಪ ದೋಷಗಳಿವೆ. ಕುಂಡಲಿ ರಾಹು ಕೇತು ಪ್ರಭಾವವಿದ್ದರೆ ಕಾಳ ಸರ್ಪ ದೋಷ ಉಂಟಾಗುವುದು.
ಕಾಳ ಸರ್ಪ ದೋಷವಿದ್ದಾಗ ನೀಡುವ ಸೂಚನೆಗಳೇನು?
ನಿದ್ದೆಯಲ್ಲಿ ಹಾವುಗಳ ಕನಸು ಬೀಳುವುದು, ಮನೆ ಸಂಪೂರ್ಣ ನೀರಿನಲ್ಲಿ ಮುಳುಗಿದಂತೆ, ಯಾರೋ ತೊಂದರೆ ಕೊಡುತ್ತಿರುವಂತೆ, ಆಪ್ತರ ಸಾವು, ಆಸ್ತಿ ಕಳೆದುಕೊಂಡಂತೆ ಹೀಗೆ ಅಶುಭ ಕನಸುಗಳು ಬೀಳುವುದು, ಈ ರೀತಿಯ ಕನಸುಗಳು ಆಗಾಗ ಬೀಳುತ್ತಿರುತ್ತದೆ. ಆಗ ಕಾಳ ಸರ್ಪದೋಷವಿದೆಯೆಂದು ಹೇಳಬಹುದು.
ಮದುವೆಯ ಮೇಲೆ ಕಾಲ್ ಸರ್ಪ್ ದೋಷದ ಪರಿಣಾಮಗಳು
7 ನೇ ಮನೆಯಲ್ಲಿ ಕೇತು ಮತ್ತು 1 ನೇ ಮನೆಯಲ್ಲಿ ರಾಹುವಿದ್ದರೆ ಸರ್ಪ ದೋಷ ಉಂಟಾಗಿ ಮದುವೆ ವಿಳಮಭವಾಗುವುದು. ಕಾಳ ಸರ್ಪ್ ದೋಷವು ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ವೈವಾಹಿಕ ಜೀವನವನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನೀಡುತ್ತದೆ.
ಅನಂತ ಕಾಳ ಸರ್ಪವಿದ್ದರೆ
ಇದು 27 ವರ್ಷಗಳ ಕಾಲ ಬಾಧಿಸುವುದು. ರಾಹು 1ನೇ ಮನೆಯಲ್ಲಿ ಕೇತು 7ನೇ ಮನೆಯಲ್ಲಿದ್ದರೆ ಅನಂಥ ಕಾಳ ಸರ್ಪ ಯೋಗ ಎಂದು ಹೇಳಲಾಗುವುದು. ಈ ಸರ್ಪದೋಷ ಹೊಂದಿದ್ದರೆ ದೀರ್ಘ ಸಮಯ ಕಷ್ಟ, ನಷ್ಟ ಅನುಭವಿಸಬೇಕಾಗುವುದು.
ವಾಸುಕಿ ಕಾಳ ಸರ್ಪ ದೋಷ
ಕುಂಡಲಿಯಲ್ಲಿ 3ನೇ ಮನೆಯಲ್ಲಿ ರಾಹುವಿದ್ದು, 9ನೇ ಮನೆಯಲ್ಲಿ ಕೇತು ಕುಳಿತುಕೊಂಡಿದ್ದರೆ ಆಗ ವಾಸುಕಿ ಸರ್ಪ ದೋಷ ಉಂಟಾಗುವುದು. ಈ ದೋಷವಿದ್ದರೆ ಅಕಾಲಿಕ ಮರಣ ಸಂಭವಿಸಬಹುದು, ಜೀವನದಲ್ಲಿ ತುಂಬಾ ಕಷ್ಟಗಳು ಎದುರಾಗುವುದು.
ಪದ್ಮನಾಭ ಕಾಳ ಸರ್ಪ ದೋಷ
ಈ ದೋಷ 48 ವರ್ಷಗಳವರೆಗೆ ಇರಲಿದೆ. ಜನ್ಮ ಕುಂಡಲಿಯ 5ನೇ ಮನೆಯಲ್ಲಿ ರಾಹು ಮತ್ತು 11ನೇ ಮನೆಯಲ್ಲಿ ಕೇತುವಿದ್ದಾಗ ಈ ದೋಷ ಉಂಟಾಗುವುದು. ಇವರಿಗೆ ಸಂತಾನ ಹೀನತೆ ಉಂಟಾಗುವುದು.
ಶಂಕಪಾಲ ಕಾಳ ಸರ್ಪದೋಷ
ರಾಹು 4ನೇ ಮನೆಯಲ್ಲಿ ಹಾಗೂ ಕೇತು 10ನೇ ಮನೆಯಲ್ಲಿ ಇದ್ದಾಗ ಶಂಕಪಾಲ ಕಾಳ ಸರ್ಪ ದೋಷವು ಉಂಟಾಗುವುದು. ಇದು 42 ವರ್ಷಗಳ ಕಾಲ ಕಾಡುತ್ತದೆ.
ಮಹಾಪದ್ಮ ಕಾಳ ಸರ್ಪ ದೋಷ
ಕುಂಡಲಿಯಲ್ಲಿ 6ನೇ ಮನೆಯಲ್ಲಿ ರಾಹು ಮತ್ತು 12ನೇ ಮನೆಯಲ್ಲಿ ಕೇತುವಿದ್ದಾಗ ಈ ದೋಷವ ಉಂಟಾಗುವುದು. ಇದು ಇದ್ದರೆ 54 ವರ್ಷಗಳ ಕಾಲ ಕಾಡುವುದು. ತುಂಬಾನೇ ಆರೋಗ್ಯ ಸಮಸ್ಯೆ ಉಂಟಾಗುವುದು.
ಮಹಾಶಿವರಾತ್ರಿಗೆ ಕಾಳ ಸರ್ಪ ದೋಷಕ್ಕೆ ಪರಿಹಾರ
* ಮಹಾಶಿವರಾತ್ರಿಯಂದು ಶಿವನಿಗೆ ರುದ್ರಾಭಿಷೇಕ ಮಾಡಿ, ಇದು ಜನ್ಮ ಕುಂಡಲಿಯಲ್ಲಿನ ದೋಷ ನಿವಾರಣೆ ಮಾಡುತ್ತದೆ.
* ಈ ದಿನ ಕಾಳಸರ್ಪ ದೋಷವನ್ನು ತಪ್ಪಿಸಲು, ಮಹಾಶಿವರಾತ್ರಿಯಂದು ಶಿವನಿಗೆ ಒಂದು ಜೋಡಿ ಬೆಳ್ಳಿ ಹಾವುಗಳನ್ನು ಅರ್ಪಿಸಿ.
* ಮಹಾಶಿವರಾತ್ರಿಯ ದಿನದಿಂದ ದಿನಕ್ಕೆ ಎರಡು ಬಾರಿ ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸಬೇಕು.
ಮಹಾಶಿವರಾತ್ರಿಯ ದಿನದಂದು "ಓಂ ನಾಗಕುಲಾಯ ವಿದ್ಮಹೇ ವಿಶ್ದಂತಾಯ ಧೀಮಹಿ ತನ್ನೋ ಸರ್ಪ್: ಪ್ರಚೋದಯಾತ್" ಎಂದು ಜಪಿಸಿ.



Click it and Unblock the Notifications


