Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಹಾಕಾಲ ದರ್ಶನ ಪಡೆದ ವಿರೂಷ್ಕಾ ದಂಪತಿ: ಉಜ್ಜಯಿನಿ ಜ್ಯೋತಿರ್ಲಿಂಗ ಹಾಗೂ ಇಲ್ಲಿಯ ಭಸ್ಮ ಆರತಿ ವಿಶೇಷತೆಯೇನು?
ಭಾರತದಲ್ಲಿ 12 ಪ್ರಮುಖ ಜ್ಯೋತಿರ್ಲಿಂಗಗಳಿವೆ. ಪ್ರತಿಯೊಂದು ಜ್ಯೋತಿರ್ಲಿಂಗ ತುಂಬಾನೇ ವಿಶೇಷತೆಯನ್ನು ಹೊಂದಿದೆ. ಈ ಅದರಲ್ಲೊಂದು ಉಜ್ಜಯಿನಿನಲ್ಲಿರುವ ಜ್ಯೋತಿರ್ಲಿಂಗ.

ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇತ್ತೀಷೆಗಷ್ಟೇ ಕೊಹ್ಲಿ ಪತ್ನಿ ಸಮೇತ ಭೇಟಿ ನೀಡಿದ್ದರು. ಉಜ್ಜಯಿನಿನಲ್ಲಿರುವ ಈ ಜ್ಯೋತಿರ್ಲಿಂಗದ ವಿಶೇಷತೆಯೇನು, ಇಲ್ಲಿಯ ಭಷ್ಮ ಆರತಿ ಕೂಡ ತುಂಬಾ ವಿಶೇಷತೆಯನ್ನು ಹೊಂದಿದೆ.
ಈ ದೇವಾಲಯದ ವಿಶೇಷತೆಯೇನು, ಪೌರಾಣಿಕ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:
ಜ್ಯೋತಿರ್ಲಿಂಗಗಳಲ್ಲಿ ಮಹಾಕಾಲ ಅತ್ಯಂತ ವಿಶೇಷವಾಗಿದೆ
ಉಜ್ಜಯಿನ್ನ ಮಹಾಕಾಲ ಶಿವಲಿಂಗವನ್ನು ವಿಶೇಷ ಶಿವಲಿಂಗವೆಂದು ಹೇಳಲಾಗಿದೆ. ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಮೂರು ಭಾಗಗಳಲ್ಲಿದೆ. ಕೆಳಗಿನ ವಿಭಾಗದಲ್ಲಿ ಮಹಾಕಾಳೇಶ್ವರ, ಎರಡನೇ ವಿಭಾಗದಲ್ಲಿ ಓಂಕಾರೇಶ್ವರ ಮತ್ತು ಮೂರನೇ ವಿಭಾಗದಲ್ಲಿ ನಾಗಚಂದ್ರೇಶ್ವರ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿಯ ನಾಗಚಂದ್ರೇಶ್ವರ ಶಿವಲಿಂಗದ ದರ್ಶನವನ್ನು ವರ್ಷಕ್ಕೊಮ್ಮೆ ನಾಗ ಪಂಚಮಿಯ ದಿನದಂದು ಮಾತ್ರ ಪಡೆಯಬಹುದು.
ಉಜ್ಜಯಿನಿಯಲ್ಲಿ ಮೂರು ಮಹಾಕಾಲಗಳಿವೆ
ಉಜ್ಜಯಿನಿಯಲ್ಲಿ ಮೂರು ಮಹಾಕಾಲಗಳು ಕುಳಿತಿದ್ದಾರೆ. ಮೊದಲನೆಯದು ಕಾಲ ಭೈರವ ಮಹಾಕಾಲ, ಎರಡನೆಯದು ಗಡ್ಕಲಿಕಾ ಮತ್ತು ಮೂರನೆಯದು ಅರ್ಧ ಕಾಲ ಭೈರವ.
ಇಲ್ಲಿಯ ಭಷ್ಮ ಆರತಿ ತುಂಬಾ ವಿಶೆಷತೆಯಿಂದ ಕೂಡಿದೆ
ಮಹಾಕಾಲ ನಗರದಲ್ಲಿ ಭಸ್ಮ ಆರತಿಗೆ ವಿಶೇಷ ಮಹತ್ವವಿದೆ. ಇಲ್ಲಿ ಮಹೇಶ್ವರನಿಗೆ ಪ್ರತಿದಿನ ವಿಭೂತಿ ಹಚ್ಚಿ ಆರತಿ ಎತ್ತಲಾಗುವುದು. ಇಲ್ಲಿಗೆ ಹೋದಾಗ ಭಸ್ಮ ಆರತಿ ನೋಡಬೇಕೆಂದರೆ ಆನ್ಲೈನ್ ಮೂಲಕ ಮುಂಗಡ ಟಿಕೆಟ್ ಪಡೆಯಿರಿ.
ಉಜ್ಜಯಿನಿ ಇತಿಹಾಸ
ಹಿಂದೆ ಉಜ್ಜಯಿನಿಯನ್ನು ರಾಜರುಗಳು ಆಳ್ವಿಕೆ ಮಾಡುತ್ತಿದ್ದರು. ಈ ನಗರವನ್ನು ವಂತಿಕಾ, ಅಮರಾವತಿ ಮತ್ತು ಇಂದ್ರಪುರಿಯೆಂಬ ಹೆಸರುಗಳಿಂದ ಕೂಡ ಕ್ರೆಯಲಾಗುತ್ತಿತ್ತು. ಇಲ್ಲಿ ಹೆಚ್ಚು ದೇವಾಲಯಗಳಿದ್ದು ಅವುಗಳ ಗೋಪುರವನ್ನು ಚಿನ್ನದಲ್ಲಿ ನಿರ್ಮಿಸಿರುವುದರಿಂದ 'ಸ್ವರ್ಣ ಶೃಂಗ' ಎಂದು ಕೂಡ ಕರೆಯಲಾಗಿದೆ.
ಭಾರತದ ಪವಿತ್ರ ಸ್ಥಳವಾಗಿರುವ ಇದು 28 ತೀರ್ಥಗಳನ್ನು, 7 ಸಾಗರ ತೀರ್ಥಗಳನ್ನು ಹೊಂದಿದೆ. ಈ ನಗರದಲ್ಲಿ 30 ಶಿವಲಿಂಗಳಿದ್ದು ಅವುಗಳಲ್ಲಿ ಮಹಾಕಾಲ ಜ್ಯೋತಿರ್ಲಿಂಗ ಪ್ರಮುಖವಾಗಿದೆ.
ಈ ಜ್ಯೋತಿರ್ಲಿಂಗವನ್ನು 3 ಮತ್ತು 4 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಐತಿಹಾಸಿಕ ಪುರಾವೆಗಳು ಹೇಳುತ್ತವೆ.
ಪೌರಾಣಿಕ ಕತೆ
ಉಜ್ಜಯಿನಿ ನಗರದಲ್ಲಿ ಒಬ್ಬ ಬ್ರಾಹ್ಮಣ ಇದ್ದ ಅವನು ತನ್ನ ನಾಲ್ಕು ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ ಆದರೆ ಅಲ್ಲಿಗೆ ಬಂದ ದುಶಾನ ಎಂಬ ರಾಕ್ಷಸ ಶಿವನಿಂದ ವರ ಪಡೆದು ತುಂಬಾ ಅಹಂಕಾರಿಯಾಗಿ, ಕ್ರೂರಿಯಾಗಿ ವರ್ತಿಸುತ್ತಿದ್ದ. ಆ ರಾಕ್ಷಸ ಬ್ರಾಹ್ಮಣನಿಗೂ ತೊಂದರೆ ಕೊಡಲಾರಂಭಿಸುತ್ತಶನೆ. ಆ ಬ್ರಾಹ್ಮಣ ತನ್ನನ್ನು ರಕ್ಷಿಸಲು ಶಿವನ ಮೊರೆ ಹೋಗುತ್ತಾನೆ. ಆಗ ಭೂಮಿ ಬಾಯ್ದೆರೆದು ಶಿವನು ಮಹಾಕಾಲ ರೂಪದಲ್ಲಿ ಪ್ರತ್ಯಕ್ಷಗೊಂಡು ದುಶಾನಿಗೆ ಯಾರಿಗೂ ತೊಂದರೆ ಕೊಡಬೇಡ ಎಂದು ಹೇಳುತ್ತಾನೆ, ಆದರೆ ಅದನ್ನು ದುಶಾನ ಕಿವಿಗೆ ಹಾಕಿಕೊಳ್ಳುವುದಿಲ್ಲ. ಇದರಿಂದ ಕೋಪೋದ್ರಿಕ್ತಗೊಂಡ ಶಿವನು ದುಶಾನನ್ನು ತುಂಡುಗಳನ್ನಾಗಿ ಮಾಡಿ ಸುಟ್ಟುಬಿಟ್ಟ. ಆದರೂ ಮಹಾಕಾಲನ ಕೋಪ ತಣ್ಣಗಾಗುವುದಿಲ್ಲ. ಶಿವ, ಬ್ರಹ್ಮ ವಿಷ್ಣು ಮತ್ತು ಇತರ ದೇವತೆಗಳು ಪ್ರತ್ಯಕ್ಷರಾಗಿ ಅವರನ್ನು ಶಾಂತಗೊಳಿಸುತ್ತಾರೆ ಎಂಬ ಪೌರಾಣಿಕ ಕತೆ ಇದೆ.



Click it and Unblock the Notifications

