Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಹಾಕಾಲ ದರ್ಶನ ಪಡೆದ ವಿರೂಷ್ಕಾ ದಂಪತಿ: ಉಜ್ಜಯಿನಿ ಜ್ಯೋತಿರ್ಲಿಂಗ ಹಾಗೂ ಇಲ್ಲಿಯ ಭಸ್ಮ ಆರತಿ ವಿಶೇಷತೆಯೇನು?
ಭಾರತದಲ್ಲಿ 12 ಪ್ರಮುಖ ಜ್ಯೋತಿರ್ಲಿಂಗಗಳಿವೆ. ಪ್ರತಿಯೊಂದು ಜ್ಯೋತಿರ್ಲಿಂಗ ತುಂಬಾನೇ ವಿಶೇಷತೆಯನ್ನು ಹೊಂದಿದೆ. ಈ ಅದರಲ್ಲೊಂದು ಉಜ್ಜಯಿನಿನಲ್ಲಿರುವ ಜ್ಯೋತಿರ್ಲಿಂಗ.

ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇತ್ತೀಷೆಗಷ್ಟೇ ಕೊಹ್ಲಿ ಪತ್ನಿ ಸಮೇತ ಭೇಟಿ ನೀಡಿದ್ದರು. ಉಜ್ಜಯಿನಿನಲ್ಲಿರುವ ಈ ಜ್ಯೋತಿರ್ಲಿಂಗದ ವಿಶೇಷತೆಯೇನು, ಇಲ್ಲಿಯ ಭಷ್ಮ ಆರತಿ ಕೂಡ ತುಂಬಾ ವಿಶೇಷತೆಯನ್ನು ಹೊಂದಿದೆ.
ಈ ದೇವಾಲಯದ ವಿಶೇಷತೆಯೇನು, ಪೌರಾಣಿಕ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:
ಜ್ಯೋತಿರ್ಲಿಂಗಗಳಲ್ಲಿ ಮಹಾಕಾಲ ಅತ್ಯಂತ ವಿಶೇಷವಾಗಿದೆ
ಉಜ್ಜಯಿನ್ನ ಮಹಾಕಾಲ ಶಿವಲಿಂಗವನ್ನು ವಿಶೇಷ ಶಿವಲಿಂಗವೆಂದು ಹೇಳಲಾಗಿದೆ. ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಮೂರು ಭಾಗಗಳಲ್ಲಿದೆ. ಕೆಳಗಿನ ವಿಭಾಗದಲ್ಲಿ ಮಹಾಕಾಳೇಶ್ವರ, ಎರಡನೇ ವಿಭಾಗದಲ್ಲಿ ಓಂಕಾರೇಶ್ವರ ಮತ್ತು ಮೂರನೇ ವಿಭಾಗದಲ್ಲಿ ನಾಗಚಂದ್ರೇಶ್ವರ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿಯ ನಾಗಚಂದ್ರೇಶ್ವರ ಶಿವಲಿಂಗದ ದರ್ಶನವನ್ನು ವರ್ಷಕ್ಕೊಮ್ಮೆ ನಾಗ ಪಂಚಮಿಯ ದಿನದಂದು ಮಾತ್ರ ಪಡೆಯಬಹುದು.
ಉಜ್ಜಯಿನಿಯಲ್ಲಿ ಮೂರು ಮಹಾಕಾಲಗಳಿವೆ
ಉಜ್ಜಯಿನಿಯಲ್ಲಿ ಮೂರು ಮಹಾಕಾಲಗಳು ಕುಳಿತಿದ್ದಾರೆ. ಮೊದಲನೆಯದು ಕಾಲ ಭೈರವ ಮಹಾಕಾಲ, ಎರಡನೆಯದು ಗಡ್ಕಲಿಕಾ ಮತ್ತು ಮೂರನೆಯದು ಅರ್ಧ ಕಾಲ ಭೈರವ.
ಇಲ್ಲಿಯ ಭಷ್ಮ ಆರತಿ ತುಂಬಾ ವಿಶೆಷತೆಯಿಂದ ಕೂಡಿದೆ
ಮಹಾಕಾಲ ನಗರದಲ್ಲಿ ಭಸ್ಮ ಆರತಿಗೆ ವಿಶೇಷ ಮಹತ್ವವಿದೆ. ಇಲ್ಲಿ ಮಹೇಶ್ವರನಿಗೆ ಪ್ರತಿದಿನ ವಿಭೂತಿ ಹಚ್ಚಿ ಆರತಿ ಎತ್ತಲಾಗುವುದು. ಇಲ್ಲಿಗೆ ಹೋದಾಗ ಭಸ್ಮ ಆರತಿ ನೋಡಬೇಕೆಂದರೆ ಆನ್ಲೈನ್ ಮೂಲಕ ಮುಂಗಡ ಟಿಕೆಟ್ ಪಡೆಯಿರಿ.
ಉಜ್ಜಯಿನಿ ಇತಿಹಾಸ
ಹಿಂದೆ ಉಜ್ಜಯಿನಿಯನ್ನು ರಾಜರುಗಳು ಆಳ್ವಿಕೆ ಮಾಡುತ್ತಿದ್ದರು. ಈ ನಗರವನ್ನು ವಂತಿಕಾ, ಅಮರಾವತಿ ಮತ್ತು ಇಂದ್ರಪುರಿಯೆಂಬ ಹೆಸರುಗಳಿಂದ ಕೂಡ ಕ್ರೆಯಲಾಗುತ್ತಿತ್ತು. ಇಲ್ಲಿ ಹೆಚ್ಚು ದೇವಾಲಯಗಳಿದ್ದು ಅವುಗಳ ಗೋಪುರವನ್ನು ಚಿನ್ನದಲ್ಲಿ ನಿರ್ಮಿಸಿರುವುದರಿಂದ 'ಸ್ವರ್ಣ ಶೃಂಗ' ಎಂದು ಕೂಡ ಕರೆಯಲಾಗಿದೆ.
ಭಾರತದ ಪವಿತ್ರ ಸ್ಥಳವಾಗಿರುವ ಇದು 28 ತೀರ್ಥಗಳನ್ನು, 7 ಸಾಗರ ತೀರ್ಥಗಳನ್ನು ಹೊಂದಿದೆ. ಈ ನಗರದಲ್ಲಿ 30 ಶಿವಲಿಂಗಳಿದ್ದು ಅವುಗಳಲ್ಲಿ ಮಹಾಕಾಲ ಜ್ಯೋತಿರ್ಲಿಂಗ ಪ್ರಮುಖವಾಗಿದೆ.
ಈ ಜ್ಯೋತಿರ್ಲಿಂಗವನ್ನು 3 ಮತ್ತು 4 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಐತಿಹಾಸಿಕ ಪುರಾವೆಗಳು ಹೇಳುತ್ತವೆ.
ಪೌರಾಣಿಕ ಕತೆ
ಉಜ್ಜಯಿನಿ ನಗರದಲ್ಲಿ ಒಬ್ಬ ಬ್ರಾಹ್ಮಣ ಇದ್ದ ಅವನು ತನ್ನ ನಾಲ್ಕು ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ ಆದರೆ ಅಲ್ಲಿಗೆ ಬಂದ ದುಶಾನ ಎಂಬ ರಾಕ್ಷಸ ಶಿವನಿಂದ ವರ ಪಡೆದು ತುಂಬಾ ಅಹಂಕಾರಿಯಾಗಿ, ಕ್ರೂರಿಯಾಗಿ ವರ್ತಿಸುತ್ತಿದ್ದ. ಆ ರಾಕ್ಷಸ ಬ್ರಾಹ್ಮಣನಿಗೂ ತೊಂದರೆ ಕೊಡಲಾರಂಭಿಸುತ್ತಶನೆ. ಆ ಬ್ರಾಹ್ಮಣ ತನ್ನನ್ನು ರಕ್ಷಿಸಲು ಶಿವನ ಮೊರೆ ಹೋಗುತ್ತಾನೆ. ಆಗ ಭೂಮಿ ಬಾಯ್ದೆರೆದು ಶಿವನು ಮಹಾಕಾಲ ರೂಪದಲ್ಲಿ ಪ್ರತ್ಯಕ್ಷಗೊಂಡು ದುಶಾನಿಗೆ ಯಾರಿಗೂ ತೊಂದರೆ ಕೊಡಬೇಡ ಎಂದು ಹೇಳುತ್ತಾನೆ, ಆದರೆ ಅದನ್ನು ದುಶಾನ ಕಿವಿಗೆ ಹಾಕಿಕೊಳ್ಳುವುದಿಲ್ಲ. ಇದರಿಂದ ಕೋಪೋದ್ರಿಕ್ತಗೊಂಡ ಶಿವನು ದುಶಾನನ್ನು ತುಂಡುಗಳನ್ನಾಗಿ ಮಾಡಿ ಸುಟ್ಟುಬಿಟ್ಟ. ಆದರೂ ಮಹಾಕಾಲನ ಕೋಪ ತಣ್ಣಗಾಗುವುದಿಲ್ಲ. ಶಿವ, ಬ್ರಹ್ಮ ವಿಷ್ಣು ಮತ್ತು ಇತರ ದೇವತೆಗಳು ಪ್ರತ್ಯಕ್ಷರಾಗಿ ಅವರನ್ನು ಶಾಂತಗೊಳಿಸುತ್ತಾರೆ ಎಂಬ ಪೌರಾಣಿಕ ಕತೆ ಇದೆ.



Click it and Unblock the Notifications
