Latest Updates
-
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ! -
ದೆಹಲಿ ಮೆಟ್ರೋ ಸಂಚಾರ ವ್ಯತ್ಯಯ: ಸಂಗಾತಿಯೊಂದಿಗೆ ಟೆನ್ಷನ್ ಇಲ್ಲದೆ ಪ್ರಯಾಣಿಸುವುದು ಹೇಗೆ? -
ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್: ಭಾರಿ ಮಳೆ ಮತ್ತು ಭೂಕುಸಿತದಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ದೆಹಲಿಯಲ್ಲಿ ಯೆಲ್ಲೋ ಅಲರ್ಟ್: ಮಳೆಗಾಲದಲ್ಲಿ ಕಚೇರಿಗೆ ಹೋಗುವವರು ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ -
ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್: ಹೊಸ ಫೋಲ್ಡಬಲ್ ಫೋನ್ಗಳ ಲಾಂಚ್ಗೆ ಕೌಂಟ್ಡೌನ್, ನೀವು ರೆಡಿನಾ?
ಜೂನ್ 6ಕ್ಕೆ ಅಪರಾ ಏಕಾದಶಿ: ಪೂಜಾವಿಧಿ ಹಾಗೂ ವ್ರತ ಕತೆಯ ಮಹತ್ವವೇನು?
ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿಯಂದು ಕರೆಯುತ್ತಾರೆ. ಈ ವರ್ಷ ಅಪರಾ ಏಕಾದಶಿಯನ್ನು ಜೂ. 6ಕ್ಕೆ ಆಚರಿಸಲಾಗುವುದು.
ಅಪರಾ ಏಕಾದಶಿ ಆಚರಣೆ ಮಾಡುವುದರಿಂದ ಜೀವನದಲ್ಲಿರುವ ದುಃಖ, ಕಷ್ಟ ಇವೆಲ್ಲಾ ದೂರವಾಗಿ ನೆಮ್ಮದಿಯ ಬದುಕು ಸಿಗುವುದು ಎಂಬ ನಂಬಿಕೆ. ಈ ಏಕಾದಶಿಯಂದು ಶ್ರೀ ವಿಷ್ಣುವಿನ ಮತ್ತೊಂದು ಅವತಾರವಾದ ವಾಮನ ಅವತಾರವನ್ನು ಪೂಜಿಸಲಾಗುವುದು. ಈ ದಿನ ವ್ರತ ಪಾಲಿಸುವುದರಿಂದ ಎಲ್ಲಾ ಪಾಪ ಕರ್ಮಗಳಿಂದ ಮುಕ್ತಿ ಸಿಗುವುದು ಎಂದು ಹೇಳಲಾಗುವುದು.
ಅಪರಾ ಏಕಾದಶಿಯ ಪೂಜಾ ವಿಧಿ, ಪೂಜೆಗೆ ಬೇಕಾದ ಸಾಮಗ್ರಿಗಳು, ಈ ವ್ರತದ ಹಿಂದಿರುವ ಪೌರಾಣಿಕ ಕತೆ ಇವುಗಳ ಬಗ್ಗೆ ತಿಳಿಯೋಣ:

ಅಪರಾ ಏಕಾದಶಿ ಸಮಯ
ಏಕಾದಶಿ ತಿಥಿ ಪ್ರಾರಂಭ: ಜೂನ್ 5, ಬೆಳಗ್ಗೆ 04:5ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಜೂನ್ 6, ಬೆಳಗ್ಗೆ 06:19ಕ್ಕೆ

ಅಪರಾ ಏಕಾದಶಿ ಪೂಜಾ ಸಾಮಗ್ರಿ ಮತ್ತು ಪೂಜಾ ವಿಧಿ
* ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಬಕೆಟ್ ನೀರಿಗೆ ಗಂಗಾ ಜಲ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ.
* ನಂತರ ಮಡಿ ಬಟ್ಟೆ ಧರಿಸಿ.
* ದೇವರಿಗೆ ತುಪ್ಪ ಅಥವಾ ಸಾಸಿವೆಯೆಣ್ಣೆಯ ದೀಪ ಹಚ್ಚಿ.
* ನಂತರ ವಿಷ್ಣುವನ್ನು ಪೂಜಿಸಿ
* 'ಓಂ ನಮೋ ಭಗವತೀ ವಾಸುದೇವಾಯ' ಅಂತ ಮಂತ್ರ ಪಠಿಸುತ್ತಾ ದೇವರಿಗೆ ನೀರು, ಹಣ್ಣು, ಹೂ, ಸುಗಂಧ ದ್ರವ್ಯಗಳನ್ನ ಅರ್ಪಿಸಿ.
* ನಂತರ ದೇವರಿಗೆ ನೈವೇದ್ಯ ಅರ್ಪಿಸಿ.
* ದೇವರಿಗೆ ವೀಳ್ಯೆದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಶ್ರೀಗಂಧ, ಅರಿಶಿಣ-ಕುಂಕುಮ ಅರ್ಪಿಸಿ
* ನಂತರ ಅಪರಾ ಏಕಾದಶಿ ಕತೆ ಓದಿ ಅಥವಾ ವಿಷ್ಣು ಸಹಸ್ರನಾಮ ಜಪ ಮಾಡಿ.

ಅಪರಾ ಏಕಾದಶಿ ಕತೆ
ಶ್ರೀ ಕೃಷ್ಣ ಯುಧಿಷ್ಠಿರನಿಗೆ " ಹೇ ರಾಜ ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯ ಹೆಸರು ಅಪರಾ ಏಕಾದಶಯೆಂದು. ಈ ಏಕಾದಶಿ ವ್ರತ ಆಚರಿಸಿದರೆ ಅಪಾರ ಧನ ಲಭಿಸುವುದು, ಪಾಪಗಳಿಂದ ಮುಕ್ತಿ ಸಿಗುವುದು
* ಯಾರು ಪರಸ್ತ್ರೀ ಜೊತೆಗಿನ ಸಂಬಂಧ ಹೊಂದಿರುತ್ತರೋ ಅವರು ಸುಳ್ಳು ಮತನಾಡುವುದು, ಅಸತ್ಯವನ್ನು ನುಡಿಯುವವರೂ ಆಗಿರುತ್ತಾರೆ. ಈ ವ್ರತ ಪಾಲಿಸಿದರೆ ಆ ಪಾಪಗಳಿಗೆ ಮುಕ್ತಿ ಸಿಗುವುದು.
* ಯಾರು ಯುದ್ಧ ಮಾಡುವಾಗ ಹೇಡಿಯಂತೆ ಓಡಿ ಹೋಗುತ್ತಾನೋ, ಅವನಿಗೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಈ ವ್ರತ ಪಾಲಿಸಿದರೆ ಅಂಥವರಿಗೆ ಸ್ವರ್ಗ ಸಿಗುವುದು.
* ಗುರುವಿನ ನಿಂದಿಸಿದ ಶಿಷ್ಯನ ಪಾಪವು ಈ ವ್ರತ ಆಚರಣೆಯಿಂದ ತೊಳೆದು ಹೋಗುತ್ತದೆ.
* ಕಾರ್ತಿಕ ಮಾಸದಲ್ಲಿ ಮಾಡುವ ಪುಣ್ಯ ಸ್ನಾನದ ಫಲ, ಪಿತೃ ದರ್ಪಣ ಮಾಡುವ ಪುಣ್ಯ ಫಲದಷ್ಟೇ ಈ ವ್ರತಾಚರಣೆಯಿಂದ ಪುಣ್ಯ ಲಭಿಸುವುದು.
* ಯಜ್ಞ-ಯಾಗ ಮಾಡುವಾಗ ಸಿಗುವ ಫಲ ಅಪರಾ ಏಕಾದಶಿ ಆಚರಣೆಯಿಂದ ಲಭಿಸುವುದು.
ಈ ವ್ರತ ಎಲ್ಲಾ ವ್ರತಕ್ಕಿಂತ ಶ್ರೇಷ್ಠವಾದದ್ದು. ಈ ದಿನ ಭಕ್ತಿಯಿಂದ ವಿಷ್ಣುವನ್ನು ಆರಾಧಿಸಿದರೆ ವಿಷ್ಣು ಪದವಿಯು ಪ್ರಾಪ್ತಿಯಾಗುವುದು ಎಂದು ಶ್ರೀ ಕೃಷ್ಣ ಹೇಳಿದ್ದಾನೆ'

ವ್ರತ ಕತೆ ಓದುವುದು ಹಾಗೂ ಕೇಳುವುದರ ಮಹತ್ವ
ಶ್ರೀ ಕೃಷ್ಣನು " ಇದನ್ನು ನಾನು ಲೋಕದ ಹಿತಕ್ಕಾಗಿ ಹೇಳುತ್ತಿದ್ದೇನೆ, ಅಪರಾ ಏಕಾದಶಿ ವ್ರತ ಓದುವುದರಿಂದ ಅಥವಾ ಕೇಳುವುದರಿಂದ ಕೂಡ ಪಾಪ ವಿಮೋಚನೆಯಾಗುವುದು" ಎಂದಿದ್ದಾನೆ.



Click it and Unblock the Notifications