Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಜೂನ್ 6ಕ್ಕೆ ಅಪರಾ ಏಕಾದಶಿ: ಪೂಜಾವಿಧಿ ಹಾಗೂ ವ್ರತ ಕತೆಯ ಮಹತ್ವವೇನು?
ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿಯಂದು ಕರೆಯುತ್ತಾರೆ. ಈ ವರ್ಷ ಅಪರಾ ಏಕಾದಶಿಯನ್ನು ಜೂ. 6ಕ್ಕೆ ಆಚರಿಸಲಾಗುವುದು.
ಅಪರಾ ಏಕಾದಶಿ ಆಚರಣೆ ಮಾಡುವುದರಿಂದ ಜೀವನದಲ್ಲಿರುವ ದುಃಖ, ಕಷ್ಟ ಇವೆಲ್ಲಾ ದೂರವಾಗಿ ನೆಮ್ಮದಿಯ ಬದುಕು ಸಿಗುವುದು ಎಂಬ ನಂಬಿಕೆ. ಈ ಏಕಾದಶಿಯಂದು ಶ್ರೀ ವಿಷ್ಣುವಿನ ಮತ್ತೊಂದು ಅವತಾರವಾದ ವಾಮನ ಅವತಾರವನ್ನು ಪೂಜಿಸಲಾಗುವುದು. ಈ ದಿನ ವ್ರತ ಪಾಲಿಸುವುದರಿಂದ ಎಲ್ಲಾ ಪಾಪ ಕರ್ಮಗಳಿಂದ ಮುಕ್ತಿ ಸಿಗುವುದು ಎಂದು ಹೇಳಲಾಗುವುದು.
ಅಪರಾ ಏಕಾದಶಿಯ ಪೂಜಾ ವಿಧಿ, ಪೂಜೆಗೆ ಬೇಕಾದ ಸಾಮಗ್ರಿಗಳು, ಈ ವ್ರತದ ಹಿಂದಿರುವ ಪೌರಾಣಿಕ ಕತೆ ಇವುಗಳ ಬಗ್ಗೆ ತಿಳಿಯೋಣ:

ಅಪರಾ ಏಕಾದಶಿ ಸಮಯ
ಏಕಾದಶಿ ತಿಥಿ ಪ್ರಾರಂಭ: ಜೂನ್ 5, ಬೆಳಗ್ಗೆ 04:5ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಜೂನ್ 6, ಬೆಳಗ್ಗೆ 06:19ಕ್ಕೆ

ಅಪರಾ ಏಕಾದಶಿ ಪೂಜಾ ಸಾಮಗ್ರಿ ಮತ್ತು ಪೂಜಾ ವಿಧಿ
* ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಬಕೆಟ್ ನೀರಿಗೆ ಗಂಗಾ ಜಲ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ.
* ನಂತರ ಮಡಿ ಬಟ್ಟೆ ಧರಿಸಿ.
* ದೇವರಿಗೆ ತುಪ್ಪ ಅಥವಾ ಸಾಸಿವೆಯೆಣ್ಣೆಯ ದೀಪ ಹಚ್ಚಿ.
* ನಂತರ ವಿಷ್ಣುವನ್ನು ಪೂಜಿಸಿ
* 'ಓಂ ನಮೋ ಭಗವತೀ ವಾಸುದೇವಾಯ' ಅಂತ ಮಂತ್ರ ಪಠಿಸುತ್ತಾ ದೇವರಿಗೆ ನೀರು, ಹಣ್ಣು, ಹೂ, ಸುಗಂಧ ದ್ರವ್ಯಗಳನ್ನ ಅರ್ಪಿಸಿ.
* ನಂತರ ದೇವರಿಗೆ ನೈವೇದ್ಯ ಅರ್ಪಿಸಿ.
* ದೇವರಿಗೆ ವೀಳ್ಯೆದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಶ್ರೀಗಂಧ, ಅರಿಶಿಣ-ಕುಂಕುಮ ಅರ್ಪಿಸಿ
* ನಂತರ ಅಪರಾ ಏಕಾದಶಿ ಕತೆ ಓದಿ ಅಥವಾ ವಿಷ್ಣು ಸಹಸ್ರನಾಮ ಜಪ ಮಾಡಿ.

ಅಪರಾ ಏಕಾದಶಿ ಕತೆ
ಶ್ರೀ ಕೃಷ್ಣ ಯುಧಿಷ್ಠಿರನಿಗೆ " ಹೇ ರಾಜ ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯ ಹೆಸರು ಅಪರಾ ಏಕಾದಶಯೆಂದು. ಈ ಏಕಾದಶಿ ವ್ರತ ಆಚರಿಸಿದರೆ ಅಪಾರ ಧನ ಲಭಿಸುವುದು, ಪಾಪಗಳಿಂದ ಮುಕ್ತಿ ಸಿಗುವುದು
* ಯಾರು ಪರಸ್ತ್ರೀ ಜೊತೆಗಿನ ಸಂಬಂಧ ಹೊಂದಿರುತ್ತರೋ ಅವರು ಸುಳ್ಳು ಮತನಾಡುವುದು, ಅಸತ್ಯವನ್ನು ನುಡಿಯುವವರೂ ಆಗಿರುತ್ತಾರೆ. ಈ ವ್ರತ ಪಾಲಿಸಿದರೆ ಆ ಪಾಪಗಳಿಗೆ ಮುಕ್ತಿ ಸಿಗುವುದು.
* ಯಾರು ಯುದ್ಧ ಮಾಡುವಾಗ ಹೇಡಿಯಂತೆ ಓಡಿ ಹೋಗುತ್ತಾನೋ, ಅವನಿಗೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಈ ವ್ರತ ಪಾಲಿಸಿದರೆ ಅಂಥವರಿಗೆ ಸ್ವರ್ಗ ಸಿಗುವುದು.
* ಗುರುವಿನ ನಿಂದಿಸಿದ ಶಿಷ್ಯನ ಪಾಪವು ಈ ವ್ರತ ಆಚರಣೆಯಿಂದ ತೊಳೆದು ಹೋಗುತ್ತದೆ.
* ಕಾರ್ತಿಕ ಮಾಸದಲ್ಲಿ ಮಾಡುವ ಪುಣ್ಯ ಸ್ನಾನದ ಫಲ, ಪಿತೃ ದರ್ಪಣ ಮಾಡುವ ಪುಣ್ಯ ಫಲದಷ್ಟೇ ಈ ವ್ರತಾಚರಣೆಯಿಂದ ಪುಣ್ಯ ಲಭಿಸುವುದು.
* ಯಜ್ಞ-ಯಾಗ ಮಾಡುವಾಗ ಸಿಗುವ ಫಲ ಅಪರಾ ಏಕಾದಶಿ ಆಚರಣೆಯಿಂದ ಲಭಿಸುವುದು.
ಈ ವ್ರತ ಎಲ್ಲಾ ವ್ರತಕ್ಕಿಂತ ಶ್ರೇಷ್ಠವಾದದ್ದು. ಈ ದಿನ ಭಕ್ತಿಯಿಂದ ವಿಷ್ಣುವನ್ನು ಆರಾಧಿಸಿದರೆ ವಿಷ್ಣು ಪದವಿಯು ಪ್ರಾಪ್ತಿಯಾಗುವುದು ಎಂದು ಶ್ರೀ ಕೃಷ್ಣ ಹೇಳಿದ್ದಾನೆ'

ವ್ರತ ಕತೆ ಓದುವುದು ಹಾಗೂ ಕೇಳುವುದರ ಮಹತ್ವ
ಶ್ರೀ ಕೃಷ್ಣನು " ಇದನ್ನು ನಾನು ಲೋಕದ ಹಿತಕ್ಕಾಗಿ ಹೇಳುತ್ತಿದ್ದೇನೆ, ಅಪರಾ ಏಕಾದಶಿ ವ್ರತ ಓದುವುದರಿಂದ ಅಥವಾ ಕೇಳುವುದರಿಂದ ಕೂಡ ಪಾಪ ವಿಮೋಚನೆಯಾಗುವುದು" ಎಂದಿದ್ದಾನೆ.



Click it and Unblock the Notifications