Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಜೂನ್ 6ಕ್ಕೆ ಅಪರಾ ಏಕಾದಶಿ: ಪೂಜಾವಿಧಿ ಹಾಗೂ ವ್ರತ ಕತೆಯ ಮಹತ್ವವೇನು?
ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿಯಂದು ಕರೆಯುತ್ತಾರೆ. ಈ ವರ್ಷ ಅಪರಾ ಏಕಾದಶಿಯನ್ನು ಜೂ. 6ಕ್ಕೆ ಆಚರಿಸಲಾಗುವುದು.
ಅಪರಾ ಏಕಾದಶಿ ಆಚರಣೆ ಮಾಡುವುದರಿಂದ ಜೀವನದಲ್ಲಿರುವ ದುಃಖ, ಕಷ್ಟ ಇವೆಲ್ಲಾ ದೂರವಾಗಿ ನೆಮ್ಮದಿಯ ಬದುಕು ಸಿಗುವುದು ಎಂಬ ನಂಬಿಕೆ. ಈ ಏಕಾದಶಿಯಂದು ಶ್ರೀ ವಿಷ್ಣುವಿನ ಮತ್ತೊಂದು ಅವತಾರವಾದ ವಾಮನ ಅವತಾರವನ್ನು ಪೂಜಿಸಲಾಗುವುದು. ಈ ದಿನ ವ್ರತ ಪಾಲಿಸುವುದರಿಂದ ಎಲ್ಲಾ ಪಾಪ ಕರ್ಮಗಳಿಂದ ಮುಕ್ತಿ ಸಿಗುವುದು ಎಂದು ಹೇಳಲಾಗುವುದು.
ಅಪರಾ ಏಕಾದಶಿಯ ಪೂಜಾ ವಿಧಿ, ಪೂಜೆಗೆ ಬೇಕಾದ ಸಾಮಗ್ರಿಗಳು, ಈ ವ್ರತದ ಹಿಂದಿರುವ ಪೌರಾಣಿಕ ಕತೆ ಇವುಗಳ ಬಗ್ಗೆ ತಿಳಿಯೋಣ:

ಅಪರಾ ಏಕಾದಶಿ ಸಮಯ
ಏಕಾದಶಿ ತಿಥಿ ಪ್ರಾರಂಭ: ಜೂನ್ 5, ಬೆಳಗ್ಗೆ 04:5ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಜೂನ್ 6, ಬೆಳಗ್ಗೆ 06:19ಕ್ಕೆ

ಅಪರಾ ಏಕಾದಶಿ ಪೂಜಾ ಸಾಮಗ್ರಿ ಮತ್ತು ಪೂಜಾ ವಿಧಿ
* ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಬಕೆಟ್ ನೀರಿಗೆ ಗಂಗಾ ಜಲ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ.
* ನಂತರ ಮಡಿ ಬಟ್ಟೆ ಧರಿಸಿ.
* ದೇವರಿಗೆ ತುಪ್ಪ ಅಥವಾ ಸಾಸಿವೆಯೆಣ್ಣೆಯ ದೀಪ ಹಚ್ಚಿ.
* ನಂತರ ವಿಷ್ಣುವನ್ನು ಪೂಜಿಸಿ
* 'ಓಂ ನಮೋ ಭಗವತೀ ವಾಸುದೇವಾಯ' ಅಂತ ಮಂತ್ರ ಪಠಿಸುತ್ತಾ ದೇವರಿಗೆ ನೀರು, ಹಣ್ಣು, ಹೂ, ಸುಗಂಧ ದ್ರವ್ಯಗಳನ್ನ ಅರ್ಪಿಸಿ.
* ನಂತರ ದೇವರಿಗೆ ನೈವೇದ್ಯ ಅರ್ಪಿಸಿ.
* ದೇವರಿಗೆ ವೀಳ್ಯೆದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಶ್ರೀಗಂಧ, ಅರಿಶಿಣ-ಕುಂಕುಮ ಅರ್ಪಿಸಿ
* ನಂತರ ಅಪರಾ ಏಕಾದಶಿ ಕತೆ ಓದಿ ಅಥವಾ ವಿಷ್ಣು ಸಹಸ್ರನಾಮ ಜಪ ಮಾಡಿ.

ಅಪರಾ ಏಕಾದಶಿ ಕತೆ
ಶ್ರೀ ಕೃಷ್ಣ ಯುಧಿಷ್ಠಿರನಿಗೆ " ಹೇ ರಾಜ ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯ ಹೆಸರು ಅಪರಾ ಏಕಾದಶಯೆಂದು. ಈ ಏಕಾದಶಿ ವ್ರತ ಆಚರಿಸಿದರೆ ಅಪಾರ ಧನ ಲಭಿಸುವುದು, ಪಾಪಗಳಿಂದ ಮುಕ್ತಿ ಸಿಗುವುದು
* ಯಾರು ಪರಸ್ತ್ರೀ ಜೊತೆಗಿನ ಸಂಬಂಧ ಹೊಂದಿರುತ್ತರೋ ಅವರು ಸುಳ್ಳು ಮತನಾಡುವುದು, ಅಸತ್ಯವನ್ನು ನುಡಿಯುವವರೂ ಆಗಿರುತ್ತಾರೆ. ಈ ವ್ರತ ಪಾಲಿಸಿದರೆ ಆ ಪಾಪಗಳಿಗೆ ಮುಕ್ತಿ ಸಿಗುವುದು.
* ಯಾರು ಯುದ್ಧ ಮಾಡುವಾಗ ಹೇಡಿಯಂತೆ ಓಡಿ ಹೋಗುತ್ತಾನೋ, ಅವನಿಗೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಈ ವ್ರತ ಪಾಲಿಸಿದರೆ ಅಂಥವರಿಗೆ ಸ್ವರ್ಗ ಸಿಗುವುದು.
* ಗುರುವಿನ ನಿಂದಿಸಿದ ಶಿಷ್ಯನ ಪಾಪವು ಈ ವ್ರತ ಆಚರಣೆಯಿಂದ ತೊಳೆದು ಹೋಗುತ್ತದೆ.
* ಕಾರ್ತಿಕ ಮಾಸದಲ್ಲಿ ಮಾಡುವ ಪುಣ್ಯ ಸ್ನಾನದ ಫಲ, ಪಿತೃ ದರ್ಪಣ ಮಾಡುವ ಪುಣ್ಯ ಫಲದಷ್ಟೇ ಈ ವ್ರತಾಚರಣೆಯಿಂದ ಪುಣ್ಯ ಲಭಿಸುವುದು.
* ಯಜ್ಞ-ಯಾಗ ಮಾಡುವಾಗ ಸಿಗುವ ಫಲ ಅಪರಾ ಏಕಾದಶಿ ಆಚರಣೆಯಿಂದ ಲಭಿಸುವುದು.
ಈ ವ್ರತ ಎಲ್ಲಾ ವ್ರತಕ್ಕಿಂತ ಶ್ರೇಷ್ಠವಾದದ್ದು. ಈ ದಿನ ಭಕ್ತಿಯಿಂದ ವಿಷ್ಣುವನ್ನು ಆರಾಧಿಸಿದರೆ ವಿಷ್ಣು ಪದವಿಯು ಪ್ರಾಪ್ತಿಯಾಗುವುದು ಎಂದು ಶ್ರೀ ಕೃಷ್ಣ ಹೇಳಿದ್ದಾನೆ'

ವ್ರತ ಕತೆ ಓದುವುದು ಹಾಗೂ ಕೇಳುವುದರ ಮಹತ್ವ
ಶ್ರೀ ಕೃಷ್ಣನು " ಇದನ್ನು ನಾನು ಲೋಕದ ಹಿತಕ್ಕಾಗಿ ಹೇಳುತ್ತಿದ್ದೇನೆ, ಅಪರಾ ಏಕಾದಶಿ ವ್ರತ ಓದುವುದರಿಂದ ಅಥವಾ ಕೇಳುವುದರಿಂದ ಕೂಡ ಪಾಪ ವಿಮೋಚನೆಯಾಗುವುದು" ಎಂದಿದ್ದಾನೆ.



Click it and Unblock the Notifications