Just In
- 1 hr ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 2 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 5 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 7 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Automobiles Hyundai: ಹ್ಯುಂಡೈ ಎಕ್ಸ್ಟರ್ ಮೊದಲ ಅಪಘಾತ: ಮುಗಿಬಿದ್ದು ಖರೀದಿಸಿದವರು ಇದನ್ನೊಮ್ಮೆ ನೋಡಿ
- News ಡಾ.ಮಂಜುನಾಥ್ ಅವರಿಗೆ ಕೇಂದ್ರ ಸಚಿವ ಸ್ಥಾನ: ಸುಳಿವು ಕೊಟ್ಟ ಹೆಚ್ ಡಿ ದೇವೇಗೌಡ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Movies "ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನ್ 6ಕ್ಕೆ ಅಪರಾ ಏಕಾದಶಿ: ಪೂಜಾವಿಧಿ ಹಾಗೂ ವ್ರತ ಕತೆಯ ಮಹತ್ವವೇನು?
ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಅಪರಾ ಅಥವಾ ಅಚಲ ಏಕಾದಶಿಯಂದು ಕರೆಯುತ್ತಾರೆ. ಈ ವರ್ಷ ಅಪರಾ ಏಕಾದಶಿಯನ್ನು ಜೂ. 6ಕ್ಕೆ ಆಚರಿಸಲಾಗುವುದು.
ಅಪರಾ ಏಕಾದಶಿ ಆಚರಣೆ ಮಾಡುವುದರಿಂದ ಜೀವನದಲ್ಲಿರುವ ದುಃಖ, ಕಷ್ಟ ಇವೆಲ್ಲಾ ದೂರವಾಗಿ ನೆಮ್ಮದಿಯ ಬದುಕು ಸಿಗುವುದು ಎಂಬ ನಂಬಿಕೆ. ಈ ಏಕಾದಶಿಯಂದು ಶ್ರೀ ವಿಷ್ಣುವಿನ ಮತ್ತೊಂದು ಅವತಾರವಾದ ವಾಮನ ಅವತಾರವನ್ನು ಪೂಜಿಸಲಾಗುವುದು. ಈ ದಿನ ವ್ರತ ಪಾಲಿಸುವುದರಿಂದ ಎಲ್ಲಾ ಪಾಪ ಕರ್ಮಗಳಿಂದ ಮುಕ್ತಿ ಸಿಗುವುದು ಎಂದು ಹೇಳಲಾಗುವುದು.
ಅಪರಾ ಏಕಾದಶಿಯ ಪೂಜಾ ವಿಧಿ, ಪೂಜೆಗೆ ಬೇಕಾದ ಸಾಮಗ್ರಿಗಳು, ಈ ವ್ರತದ ಹಿಂದಿರುವ ಪೌರಾಣಿಕ ಕತೆ ಇವುಗಳ ಬಗ್ಗೆ ತಿಳಿಯೋಣ:
ಅಪರಾ ಏಕಾದಶಿ ಸಮಯ
ಏಕಾದಶಿ ತಿಥಿ ಪ್ರಾರಂಭ: ಜೂನ್ 5, ಬೆಳಗ್ಗೆ 04:5ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಜೂನ್ 6, ಬೆಳಗ್ಗೆ 06:19ಕ್ಕೆ
ಅಪರಾ ಏಕಾದಶಿ ಪೂಜಾ ಸಾಮಗ್ರಿ ಮತ್ತು ಪೂಜಾ ವಿಧಿ
* ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಬಕೆಟ್ ನೀರಿಗೆ ಗಂಗಾ ಜಲ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ.
* ನಂತರ ಮಡಿ ಬಟ್ಟೆ ಧರಿಸಿ.
* ದೇವರಿಗೆ ತುಪ್ಪ ಅಥವಾ ಸಾಸಿವೆಯೆಣ್ಣೆಯ ದೀಪ ಹಚ್ಚಿ.
* ನಂತರ ವಿಷ್ಣುವನ್ನು ಪೂಜಿಸಿ
* 'ಓಂ ನಮೋ ಭಗವತೀ ವಾಸುದೇವಾಯ' ಅಂತ ಮಂತ್ರ ಪಠಿಸುತ್ತಾ ದೇವರಿಗೆ ನೀರು, ಹಣ್ಣು, ಹೂ, ಸುಗಂಧ ದ್ರವ್ಯಗಳನ್ನ ಅರ್ಪಿಸಿ.
* ನಂತರ ದೇವರಿಗೆ ನೈವೇದ್ಯ ಅರ್ಪಿಸಿ.
* ದೇವರಿಗೆ ವೀಳ್ಯೆದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಶ್ರೀಗಂಧ, ಅರಿಶಿಣ-ಕುಂಕುಮ ಅರ್ಪಿಸಿ
* ನಂತರ ಅಪರಾ ಏಕಾದಶಿ ಕತೆ ಓದಿ ಅಥವಾ ವಿಷ್ಣು ಸಹಸ್ರನಾಮ ಜಪ ಮಾಡಿ.
ಅಪರಾ ಏಕಾದಶಿ ಕತೆ
ಶ್ರೀ ಕೃಷ್ಣ ಯುಧಿಷ್ಠಿರನಿಗೆ " ಹೇ ರಾಜ ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯ ಹೆಸರು ಅಪರಾ ಏಕಾದಶಯೆಂದು. ಈ ಏಕಾದಶಿ ವ್ರತ ಆಚರಿಸಿದರೆ ಅಪಾರ ಧನ ಲಭಿಸುವುದು, ಪಾಪಗಳಿಂದ ಮುಕ್ತಿ ಸಿಗುವುದು
* ಯಾರು ಪರಸ್ತ್ರೀ ಜೊತೆಗಿನ ಸಂಬಂಧ ಹೊಂದಿರುತ್ತರೋ ಅವರು ಸುಳ್ಳು ಮತನಾಡುವುದು, ಅಸತ್ಯವನ್ನು ನುಡಿಯುವವರೂ ಆಗಿರುತ್ತಾರೆ. ಈ ವ್ರತ ಪಾಲಿಸಿದರೆ ಆ ಪಾಪಗಳಿಗೆ ಮುಕ್ತಿ ಸಿಗುವುದು.
* ಯಾರು ಯುದ್ಧ ಮಾಡುವಾಗ ಹೇಡಿಯಂತೆ ಓಡಿ ಹೋಗುತ್ತಾನೋ, ಅವನಿಗೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ, ಈ ವ್ರತ ಪಾಲಿಸಿದರೆ ಅಂಥವರಿಗೆ ಸ್ವರ್ಗ ಸಿಗುವುದು.
* ಗುರುವಿನ ನಿಂದಿಸಿದ ಶಿಷ್ಯನ ಪಾಪವು ಈ ವ್ರತ ಆಚರಣೆಯಿಂದ ತೊಳೆದು ಹೋಗುತ್ತದೆ.
* ಕಾರ್ತಿಕ ಮಾಸದಲ್ಲಿ ಮಾಡುವ ಪುಣ್ಯ ಸ್ನಾನದ ಫಲ, ಪಿತೃ ದರ್ಪಣ ಮಾಡುವ ಪುಣ್ಯ ಫಲದಷ್ಟೇ ಈ ವ್ರತಾಚರಣೆಯಿಂದ ಪುಣ್ಯ ಲಭಿಸುವುದು.
* ಯಜ್ಞ-ಯಾಗ ಮಾಡುವಾಗ ಸಿಗುವ ಫಲ ಅಪರಾ ಏಕಾದಶಿ ಆಚರಣೆಯಿಂದ ಲಭಿಸುವುದು.
ಈ ವ್ರತ ಎಲ್ಲಾ ವ್ರತಕ್ಕಿಂತ ಶ್ರೇಷ್ಠವಾದದ್ದು. ಈ ದಿನ ಭಕ್ತಿಯಿಂದ ವಿಷ್ಣುವನ್ನು ಆರಾಧಿಸಿದರೆ ವಿಷ್ಣು ಪದವಿಯು ಪ್ರಾಪ್ತಿಯಾಗುವುದು ಎಂದು ಶ್ರೀ ಕೃಷ್ಣ ಹೇಳಿದ್ದಾನೆ'
ವ್ರತ ಕತೆ ಓದುವುದು ಹಾಗೂ ಕೇಳುವುದರ ಮಹತ್ವ
ಶ್ರೀ ಕೃಷ್ಣನು " ಇದನ್ನು ನಾನು ಲೋಕದ ಹಿತಕ್ಕಾಗಿ ಹೇಳುತ್ತಿದ್ದೇನೆ, ಅಪರಾ ಏಕಾದಶಿ ವ್ರತ ಓದುವುದರಿಂದ ಅಥವಾ ಕೇಳುವುದರಿಂದ ಕೂಡ ಪಾಪ ವಿಮೋಚನೆಯಾಗುವುದು" ಎಂದಿದ್ದಾನೆ.