Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸಂತಾನಹರಣ ಚಿಕಿತ್ಸೆ ಮಾಡಿಸಿಯೂ ಪತ್ನಿ ಗರ್ಭಿಣಿಯಾದಳು!
ಗರ್ಭಧಾರಣೆ ಮಾಡುವುದು ತುಂಬಾ ಸಂಭ್ರಮದ ಕ್ಷಣ. ಆದರೆ ಗರ್ಭ ಧರಿಸಲು ನಿಮಗೆ ಇಷ್ಟವಿಲ್ಲದೆ ಇರುವಾಗ ಇದು ನಡೆದರೆ ಆಗ ಖಂಡಿತವಾಗಿಯೂ ಆಘಾತ ಆಗುವುದು. ಕೆಲವೊಂದು ತಡೆಗಳನ್ನು ನಿವಾರಣೆ ಮಾಡಿಕೊಂಡು ದಂಪತಿಯು ಗರ್ಭನಿರೋಧಕ ವ್ಯವಸ್ಥೆ ಮಾಡಿಕೊಳ್ಳುವರು. ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿಯೂ ಗರ್ಭ ನಿಲ್ಲದಂತೆ ಮಾಡಬಹುದು. ಒಂದೆರಡು ಮಕ್ಕಳಾದ ಬಳಿಕ ಮಹಿಳೆಯು ಗರ್ಭ ನಿಲ್ಲದಂತೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಳು ಅಥವಾ ಪುರುಷ ಕೂಡ ಹಾಗೆ ಮಾಡಬಹುದು.

ಆದರೆ ಇಂತಹ ಮುನ್ನೆಚ್ಚರಿಕೆ ಕ್ರಮಗಳು ವಿಫಲವಾದರೆ ಆಗ ಏನು ಮಾಡಬೇಕು ಮತ್ತು ನೀವು ಮುನ್ನೆಚ್ಚರಿಕೆ ವಹಿಸಿಯೂ ಗರ್ಭಧಾರಣೆ ಮಾಡಿದರೆ? ಪುರುಷನು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಾನೆ. ಆದರೂ ಆತನ ಪತ್ನಿ ಮಾತ್ರ ಗರ್ಭಧರಿಸಿದರೆ ಆಗ ಹೇಗಾಗಬಹುದು ಎಂದು ಊಹಿಸಿ. ಈ ಸಂಪೂರ್ಣ ಘಟನೆ ಬಗ್ಗೆ ನೀವು ಓದಿಕೊಳ್ಳಿ.

ಇನ್ನು ಮಕ್ಕಳು ಬೇಡ ಎಂದು ದಂಪತಿ ನಿರ್ಧರಿಸಿದರು
ತೈಪೇಯಿಯ ದಂಪತಿಗೆ ಅದಾಗಲೇ ಮೂರು ಮಂದಿ ಮಕ್ಕಳಿದ್ದ ಕಾರಣದಿಂದಾಗಿ ಇನ್ನು ಮುಂದೆ ಮಕ್ಕಳು ಬೇಡ ಎಂದು ನಿರ್ಧಾರ ಮಾಡಿಬಿಟ್ಟರು ಮತ್ತು ಇನ್ನು ಹೆಚ್ಚು ಮಕ್ಕಳನ್ನು ಸಾಕಲು ಅವರಿಗೆ ಸಾಧ್ಯವಿರಲಿಲ್ಲ.

ಸಂತಾನಹರಣ ಚಿಕಿತ್ಸೆ ಮಾಡಲು ದಂಪತಿ ನಿರ್ಧರಿಸಿದರು
ದಂಪತಿಯು ಸಂತಾನಹರಣ ಚಿಕಿತ್ಸೆ ಮಾಡಲು ನಿರ್ಧಾರ ಮಾಡಿದರು. ಇದರಿಂದ ಲೈಂಗಿಕ ಜೀವನವನ್ನು ಹೆಚ್ಚು ಆನಂದಿಸಲು ಪುರುಷನು ಸಂತಾನಹರಣ ಚಿಕಿತ್ಸೆಗೆ ಮುಂದಾದ.

ದಂಪತಿಗೆ ಆಘಾತ ಕಾದಿತ್ತು
ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ಎರಡು ವರ್ಷಗಳ ಬಳಿಕ ಪತ್ನಿ ಮತ್ತೆ ಗರ್ಭಿಣಿಯಾಗಿದ್ದಳು. ಸಂತಾನಹರಣ ಚಿಕಿತ್ಸೆಯು ವಿಫಲವಾಗಿದೆ ಮತ್ತು ಗರ್ಭಧಾರಣೆಯನ್ನು ಮುಂದುವರಿಸಲು ಅವರು ನಿರ್ಧಾರ ಮಾಡಿದರು.

ವೈದ್ಯರು ವಿಭಿನ್ನ ಸಂಶೋಧನೆ ಮಾಡಿದರು
ಸ್ತ್ರೀರೋಗ ತಜ್ಞರು ಸಂತಾನಹರಣ ಚಿಕಿತ್ಸೆ ವಿಫಲವಾಗಿದೆ ಮತ್ತು ಮೂತ್ರ ತಜ್ಞರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದರು. ಈ ಪರೀಕ್ಷೆ ಮಾಡಿಸಿಕೊಂಡ ವೇಳೆ ಅವರಿಗೆ ದೊಡ್ಡ ಆಘಾತ ಕಾದಿತ್ತು. ಯಾಕೆಂದರೆ ಆ ವ್ಯಕ್ತಿಯ ವೀರ್ಯಗಳು ತುಂಬಾ ಬಲಿಷ್ಠವಾಗಿದ್ದವು ಮತ್ತು ಇದರಿಂದ ಅದು ತುಂಬಾ ಚೆನ್ನಾಗಿ ಈಜಿಕೊಂಡು ಹೋಗಿ ಪತ್ನಿಯನ್ನು ಗರ್ಭಿಣಿಯನ್ನಾಗಿ ಮಾಡಿದೆ.



Click it and Unblock the Notifications
