Latest Updates
-
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ?
ಸಂತಾನಹರಣ ಚಿಕಿತ್ಸೆ ಮಾಡಿಸಿಯೂ ಪತ್ನಿ ಗರ್ಭಿಣಿಯಾದಳು!
ಗರ್ಭಧಾರಣೆ ಮಾಡುವುದು ತುಂಬಾ ಸಂಭ್ರಮದ ಕ್ಷಣ. ಆದರೆ ಗರ್ಭ ಧರಿಸಲು ನಿಮಗೆ ಇಷ್ಟವಿಲ್ಲದೆ ಇರುವಾಗ ಇದು ನಡೆದರೆ ಆಗ ಖಂಡಿತವಾಗಿಯೂ ಆಘಾತ ಆಗುವುದು. ಕೆಲವೊಂದು ತಡೆಗಳನ್ನು ನಿವಾರಣೆ ಮಾಡಿಕೊಂಡು ದಂಪತಿಯು ಗರ್ಭನಿರೋಧಕ ವ್ಯವಸ್ಥೆ ಮಾಡಿಕೊಳ್ಳುವರು. ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿಯೂ ಗರ್ಭ ನಿಲ್ಲದಂತೆ ಮಾಡಬಹುದು. ಒಂದೆರಡು ಮಕ್ಕಳಾದ ಬಳಿಕ ಮಹಿಳೆಯು ಗರ್ಭ ನಿಲ್ಲದಂತೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಳು ಅಥವಾ ಪುರುಷ ಕೂಡ ಹಾಗೆ ಮಾಡಬಹುದು.

ಆದರೆ ಇಂತಹ ಮುನ್ನೆಚ್ಚರಿಕೆ ಕ್ರಮಗಳು ವಿಫಲವಾದರೆ ಆಗ ಏನು ಮಾಡಬೇಕು ಮತ್ತು ನೀವು ಮುನ್ನೆಚ್ಚರಿಕೆ ವಹಿಸಿಯೂ ಗರ್ಭಧಾರಣೆ ಮಾಡಿದರೆ? ಪುರುಷನು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಾನೆ. ಆದರೂ ಆತನ ಪತ್ನಿ ಮಾತ್ರ ಗರ್ಭಧರಿಸಿದರೆ ಆಗ ಹೇಗಾಗಬಹುದು ಎಂದು ಊಹಿಸಿ. ಈ ಸಂಪೂರ್ಣ ಘಟನೆ ಬಗ್ಗೆ ನೀವು ಓದಿಕೊಳ್ಳಿ.

ಇನ್ನು ಮಕ್ಕಳು ಬೇಡ ಎಂದು ದಂಪತಿ ನಿರ್ಧರಿಸಿದರು
ತೈಪೇಯಿಯ ದಂಪತಿಗೆ ಅದಾಗಲೇ ಮೂರು ಮಂದಿ ಮಕ್ಕಳಿದ್ದ ಕಾರಣದಿಂದಾಗಿ ಇನ್ನು ಮುಂದೆ ಮಕ್ಕಳು ಬೇಡ ಎಂದು ನಿರ್ಧಾರ ಮಾಡಿಬಿಟ್ಟರು ಮತ್ತು ಇನ್ನು ಹೆಚ್ಚು ಮಕ್ಕಳನ್ನು ಸಾಕಲು ಅವರಿಗೆ ಸಾಧ್ಯವಿರಲಿಲ್ಲ.

ಸಂತಾನಹರಣ ಚಿಕಿತ್ಸೆ ಮಾಡಲು ದಂಪತಿ ನಿರ್ಧರಿಸಿದರು
ದಂಪತಿಯು ಸಂತಾನಹರಣ ಚಿಕಿತ್ಸೆ ಮಾಡಲು ನಿರ್ಧಾರ ಮಾಡಿದರು. ಇದರಿಂದ ಲೈಂಗಿಕ ಜೀವನವನ್ನು ಹೆಚ್ಚು ಆನಂದಿಸಲು ಪುರುಷನು ಸಂತಾನಹರಣ ಚಿಕಿತ್ಸೆಗೆ ಮುಂದಾದ.

ದಂಪತಿಗೆ ಆಘಾತ ಕಾದಿತ್ತು
ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ಎರಡು ವರ್ಷಗಳ ಬಳಿಕ ಪತ್ನಿ ಮತ್ತೆ ಗರ್ಭಿಣಿಯಾಗಿದ್ದಳು. ಸಂತಾನಹರಣ ಚಿಕಿತ್ಸೆಯು ವಿಫಲವಾಗಿದೆ ಮತ್ತು ಗರ್ಭಧಾರಣೆಯನ್ನು ಮುಂದುವರಿಸಲು ಅವರು ನಿರ್ಧಾರ ಮಾಡಿದರು.

ವೈದ್ಯರು ವಿಭಿನ್ನ ಸಂಶೋಧನೆ ಮಾಡಿದರು
ಸ್ತ್ರೀರೋಗ ತಜ್ಞರು ಸಂತಾನಹರಣ ಚಿಕಿತ್ಸೆ ವಿಫಲವಾಗಿದೆ ಮತ್ತು ಮೂತ್ರ ತಜ್ಞರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದರು. ಈ ಪರೀಕ್ಷೆ ಮಾಡಿಸಿಕೊಂಡ ವೇಳೆ ಅವರಿಗೆ ದೊಡ್ಡ ಆಘಾತ ಕಾದಿತ್ತು. ಯಾಕೆಂದರೆ ಆ ವ್ಯಕ್ತಿಯ ವೀರ್ಯಗಳು ತುಂಬಾ ಬಲಿಷ್ಠವಾಗಿದ್ದವು ಮತ್ತು ಇದರಿಂದ ಅದು ತುಂಬಾ ಚೆನ್ನಾಗಿ ಈಜಿಕೊಂಡು ಹೋಗಿ ಪತ್ನಿಯನ್ನು ಗರ್ಭಿಣಿಯನ್ನಾಗಿ ಮಾಡಿದೆ.



Click it and Unblock the Notifications