Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪತಿ ಸಂತಾಹರಣ ಚಿಕಿತ್ಸೆ ಮಾಡಿದರೂ ಗರ್ಭ ಧರಿಸಿದ ಮಹಿಳೆ!!
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಿಮಗೆ ಮಕ್ಕಳು ಬೇಕೆಂದು ಅನಿಸುವುದಿಲ್ಲ. ಇದರಿಂದ ವಿವಿಧ ರೀತಿಯ ಗರ್ಭಧಾರಣೆ ತಡೆಯಲು ಪ್ರಯತ್ನಿಸುವಿರಿ. ಕೆಲವು ದಂಪತಿ ಕಾಂಡೋಮ್ ಬಳಸಿದರೆ, ಇನ್ನು ಕೆಲವರು ಗರ್ಭ ನಿರೋಧಕ ಮಾತ್ರೆ ಸೇವಿಸುವರು. ಹೀಗಿದ್ದರೂ ನೀವು ಗರ್ಭ ಧರಿಸಿದರೆ ಆಗ ಖಂಡಿತವಾಗಿಯೂ ನಿಮಗೆ ತುಂಬಾ ನಿರಾಶೆ ಹಾಗೂ ಆಘಾತವಾಗುವುದು.

ಅದರಲ್ಲೂ ಪುರುಷನೊಬ್ಬ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ಬಳಿಕ ಮಹಿಳೆಯು ಗರ್ಭ ಧರಿಸಿದರೆ ಆಗ ಅಲ್ಲಿನ ಪರಿಸ್ಥಿತಿ ಊಹಿಸುವುದು ತುಂಬಾ ಕಷ್ಟ. ಪತಿಯು ತನ್ನ ಪತ್ನಿಗೆ ಇನ್ನು ಮಕ್ಕಳು ಬೇಡವೆಂದು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ಆದರೆ ಮುಂದೆ ಆಗಿರುವುದೇ ಬೇರೆ...ಇದನ್ನು ಓದಲು ನೀವು ತಯಾರಾಗಿ...

ಇನ್ನು ಮಕ್ಕಳು ಬೇಡವೆಂದು ದಂಪತಿ ನಿರ್ಧರಿಸಿದರು
ತೈಪೇಯಿಯ ದಂಪತಿಗೆ ಅದಾಗಲೇ ಮೂರು ಮಕ್ಕಳಿದ್ದರು ಮತ್ತು ಇನ್ನು ಹೆಚ್ಚಿನ ಮಕ್ಕಳ ಖರ್ಚುವೆಚ್ಚ ನೋಡಲು ಕಷ್ಟವಾಗಿದ್ದ ಕಾರಣದಿಂದಾಗಿ ಅವರು ಮುಂದೆ ಮಕ್ಕಳು ಬೇಡವೆಂದು ನಿರ್ಧಾರ ಮಾಡಿದರು.

ಸಂತಾನಹರಣ ಚಿಕಿತ್ಸೆ ಮಾಡಲು ನಿರ್ಧರಿಸಿದರು
ಪತಿ ಸಂತಾಣಹರಣ ಚಿಕಿತ್ಸೆ ಮಾಡಿಸಿಕೊಂಡರೆ ಆಗ ಆತ ಲೈಂಗಿಕ ಜೀವನವನ್ನು ಆನಂದಿಸಬಹುದು ಎಂದು ಆ ದಂಪತಿಯು ನಿರ್ಧಾರ ಮಾಡಿದ್ದರು.

ದಂಪತಿಗೆ ಆಘಾತ ಕಾದಿತ್ತು
ಸಂತಾನಹರಣ ಚಿಕಿತ್ಸೆ ನಡೆಸಿದ ಎರಡು ವರ್ಷಗಳ ಬಳಿಕ ಪತ್ನಿಯು ಗರ್ಭಿಣಿಯಾಗಿರುವುದು ಕಂಡುಬಂದಿದೆ. ಸಂತಾನಹರಣ ಚಿಕಿತ್ಸೆಯು ವಿಫಲವಾಗಿದೆ ಮತ್ತು ಗರ್ಭ ಉಳಿಸಿಕೊಳ್ಳಲು ಅವರು ನಿರ್ಧಾರ ಮಾಡಿದರು.

ವೈದ್ಯರು ವಿಭಿನ್ನ ಶೋಧ ಮಾಡಿದರು
ಸ್ತ್ರೀರೋಗ ತಜ್ಞರು ಸಂತಾನಹರಣ ಚಿಕಿತ್ಸೆಯು ವಿಫಲವಾಗಿದೆ ಎಂದು ತಿಳಿಸಿದ ಬಳಿಕ ಪತಿಗೆ ಶಸ್ತ್ರಚಿಕಿತ್ಸೆ ಮಾಡಿರುವಂತಹ ವೈದ್ಯರನ್ನು ಭೇಟಿ ಮಾಡಿ ಅವರಿಂದ ಪರೀಕ್ಷಿಸಿಕೊಳ್ಳಲು ಸೂಚಿಸಿದರು. ಈ ವೇಳೆ ಪರೀಕ್ಷೆ ಮಾಡಿದ ವೈದ್ಯರಿಗೆ ದೊಡ್ಡ ಆಘಾತ ಕಾದಿತ್ತು ಮತ್ತು ಆತನ ವೀರ್ಯವು ಅದ್ಭುತವಾಗಿ ಬಲಿಷ್ಠವಾಗಿತ್ತು ಮತ್ತು ಇದರ ಪರಿಣಾಮವಾಗಿ ಅದು ಪತ್ನಿಯನ್ನು ಗರ್ಭಿಣಿಯನ್ನಾಗಿ ಮಾಡಿದೆ.



Click it and Unblock the Notifications
