Just In
- 54 min ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 2 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 3 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 4 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಮೂರು ರಾಶಿಚಕ್ರದವರು ಹೇಳುವ ವಿಚಾರಗಳು ಭವಿಷ್ಯದಲ್ಲಿ ನಿಜವಾಗುತ್ತದೆಯಂತೆ!
ಕಳೆದ ವಾರವಷ್ಟೇ ನಿಮ್ಮ ಸ್ನೇಹಿತರು ಅಥವಾ ಆತ್ಮೀಯರು ಹೇಳಿರುವ ವಿಚಾರವು ಈ ವಾರದಲ್ಲಿ ಸಂಭವಿಸಿದ್ದು ನಿಮ್ಮ ಗಮನಕ್ಕೆ ಬಂದಿರಬಹುದು. ಆ ಕುರಿತು ನಿಮಗೆ ಒಂದಿಷ್ಟು ಅಚ್ಚರಿಯು ಉಂಟಾಗಿರುವ ಸಾಧ್ಯತೆಗಳು ಇರುತ್ತವೆ. ಇಲ್ಲವೇ ನಿಮ್ಮ ಮನೆಯಲ್ಲಿರುವ ನಿಮ್ಮ ಆಪ್ತರು ಅಥವಾ ಸಹೋದರಿಯರು ಯಾರಾದರೂ ಈ ರೀತಿ ಮುಂಚಿತವಾಗಿ ಹೇಳಿದ ವಿಷಯಗಳು ಮುಂದಿನ ದಿನದ ಭವಿಷ್ಯದಲ್ಲಿ ಸಂಭವಿಸುತ್ತದೆ ಎನ್ನುವುದನ್ನು ಗಮನಿಸಿದ್ದೀರಾ?
ಅವರಿಗೆ ಹೇಗೆ ಆಭಾವನಗೆಗಳು ಬರುತ್ತದೆ?
ಕೆಲವು ಜನರು ಊಹಿಸಿದಂತೆ ಸನ್ನಿವೇಶಗಳು ಜರುಗುತ್ತವೆ. ಅವರು ಹೇಳಿದಂತೆಯೇ ಪರಿಸ್ಥಿತಿಗಳು ಬದಲಾವಣೆಯನ್ನು ಕಾಣಬಹುದು. ಹೌದು, ಕರುಳು ಭಾವನೆ ಹಾಗೂ ಅಂತಃಸ್ಮರಣೆಯ ಶಕ್ತಿಯಿಂದ ಕೆಲವರು ಮುಂದೆ ನಡೆಯುವ ವಿಚಾರಗಳನ್ನು ಸುಲಭವಾಗಿ ಊಹಿಸುತ್ತಾರೆ. ವಾಸ್ತವವಾಗಿ ಅಂತಹ ವ್ಯಕ್ತಿಗಳಿಗೆ ಅಂತದೃಷ್ಟಿಯು ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ. ಭವಿಷ್ಯದ ಬಗ್ಗೆ ಅವರಿಗೆ ಒಂದು ಬಗೆಯ ಸೂಚನೆ ಹಾಗೂ ಆಲೋಚನೆಗಳು ಇರುತ್ತವೆ ಎಂದು ಹೇಳಲಾಗುವುದು. ಅಲ್ಲದೆ ಭವಿಷ್ಯದ ನೋಟಗಳ ಬಗ್ಗೆ ಅವರು ಸ್ಪಷ್ಟವಾಗಿ ಚಿಂತನೆನಡೆಸುತ್ತಾರೆ.
ಇವೆಲ್ಲವೂ ನಕ್ಷತ್ರಗಳ ಆಟ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯ ನುಡಿಯುವುದು ಅಥವಾ ಮುಂದಿನ ಸಂಗತಿಯನ್ನು ಈಗಲೇ ಹೇಳುವ ಸಾಮಥ್ರ್ಯವನ್ನು ವ್ಯಕ್ತಿ ಆತನ ನಕ್ಷತ್ರ ಹಾಗೂ ಗ್ರಗಳ ಪ್ರಭಾವದಿಂದ ಹೇಳುತ್ತಾನೆ ಎಂದು ಹೇಳಲಾಗುವುದು. ನಾವು ಹುಟ್ಟಿದ ಘಳಿಗೆಯಿಂದ ಹಿಡಿದು ನಮ್ಮ ಜೀವನದುದ್ದಕ್ಕೂ ನಕ್ಷತ್ರಗಳು ಮತ್ತು ಗ್ರಹಗಳು ಮಹತ್ತರವಾದ ಬದಲಾವಣೆ ಹಾಗೂ ಪ್ರಭಾವವನ್ನು ಬೀರುತ್ತಲೇ ಇರುತ್ತವೆ ಎಂದು ಹೇಳಲಾಗುವುದು. ಹಾಗಾಗಿಯೇ ರಾಶಿಚಕ್ರಗಳ ಅನ್ವಯದಲ್ಲಿ ವ್ಯಕ್ತಿ ವಿಶೇಷತೆಯನ್ನು ಪಡೆದುಕೊಂಡಿರುತ್ತಾನೆ ಎನ್ನಲಾಗುವುದು.
ಇವರಿಗೆ ಗ್ರಹಗಳು ಸೂಚಿಸುವಂತೆ ನಡೆದುಕೊಳ್ಳುವರು
ಕೆಲವು ರಾಶಿಚಕ್ರದವರು ಹೇಳುವ ಸಂಗತಿಗಳು ನಿಜವಾಗಬಹುದು. ಇಲ್ಲವೇ ಮುಂದೆ ನಡೆಯುವ ಸಂಗತಿಯನ್ನು ಮುಂಚೆಯೇ ಹೇಳಬಹುದು. ಇದಕ್ಕೆ ಕಾರಣ ರಾಶಿಚಕ್ರದೊಂದಿಗೆ ಹೊಂದಿರುವ ಸಂಬಂಧ ಅಥವಾ ಶಕ್ತಿಯೇ ಕಾರಣ ಎಂದು ಹೇಳಲಾಗುವುದು. ಇದು ಬ್ರಹ್ಮಾಂಡದ ಹತ್ತಿರದ ಘಟನೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ವಿಶೇಷ ರಾಶಿಚಕ್ರದ ವ್ಯಕ್ತಿಗಳು ಕೆಲವು ವಿಷಯಗಳನ್ನು ಬಳ ಆಳವಾಗಿ ಅನುಭವಿಸುವರು. ಅದನ್ನು ಜೀವನದಲ್ಲಿ ಆಕಸ್ಮಿಕವಾಗಿ ಅನುಭವಿಸುವ ಸಾಧ್ಯತೆಗಳು ಇರುತ್ತವೆ. ಈ ರೀತಿಯ ಶಕ್ತಿಯನ್ನು ಹೊಂದಿರುವ ರಾಶಿಚಕ್ರ ಹಾಗೂ ಅವರ ಅಂತಃಪ್ರಜ್ಞೆಯ ಬಗ್ಗೆ ಈ ಮುಂದೆ ವಿವರಿಸಲಾಗಿದೆ.
ಕರ್ಕ
ಈ ರಾಶಿಚಕ್ರದ ವ್ಯಕ್ತಿಗಳು ಬಹಳ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಇವರು ಇತರರಿಗೆ ಸಹಾನುಭೂತಿ ಹಾಗೂ ಅವರ ಭಾವನೆಯನ್ನು ಬಹುಬೇಗ ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಇತರರ ಅಗತ್ಯತೆಗಳನ್ನು ಬಹುಬೇಗ ಅರ್ಥಮಾಡಿಕೊಳ್ಳುತ್ತಾರೆ. ಕರ್ಕ ರಾಶಿಯವರಿಗೆ ದುಃಖದ ಸಂಗತಿಗಳನ್ನು ನೋಡುವಾಗ ಹೃದಯ ಬಹಳ ಮರುಗುವುದು. ಇವರು ಚಂದ್ರನಿಂದ ಹೆಚ್ಚು ಪ್ರಭಾವ ಹೊಂದಿರುವುದರಿಂದ ಮುಂದೆ ನಡೆಯುವ ಸಂಗತಿಯನ್ನು ಊಹಿಸಬಲ್ಲ ಶಕ್ತಿಯನ್ನು ಒಳಗೊಂಡಿರುತ್ತಾರೆ ಎಂದು ಹೇಳಲಾಗುವುದು.
ವೃಶ್ಚಿಕ
ಈ ರಾಶಿಯ ವ್ಯಕ್ತಿಗಳು ಹೆಚ್ಚು ಮಾತನಾಡುವುದಿಲ್ಲ. ಹಾಗೊಮ್ಮೆ ಮಾತನಾಡಲು ಪ್ರಾರಂಭಿಸಿದರೆ ತಮಾಷೆಗಳ ಮಳೆಯನ್ನು ಸುರಿಸುತ್ತಾರೆ. ಇವರು ಮುಂದೆ ಏನಾದರೂ ತಪ್ಪು ಸಂಭವಿಸುವುದು ಎನ್ನುವುದನ್ನು ಬಹುಬೇಗ ಊಹಿಸುತ್ತಾರೆ. ಅಂತೆಯೇ ಭವಿಷ್ಯದಲ್ಲಿ ಅದು ಸಂಭವಿಸುವುದು. ಇವರು ಮಂಗಳ ಗ್ರಹದಿಂದ ಹೆಚ್ಚು ಪ್ರಭಾವಿತರಾಗಿರುತ್ತಾರೆ. ಹಾಗಾಗಿಯೇ ಭವಿಷ್ಯದ ಸಂಗತಿಯನ್ನು ಸುಂದರವಾಗಿ ಹಾಗೂ ಸುಲಭವಾಗಿ ಊಹಿಸುತ್ತಾರೆ ಎನ್ನಲಾಗುವುದು.
ಮೀನ
ಇವರು ನೆಫ್ಚೂನ್ ಗ್ರಹದಿಂದ ಆಳಲ್ಪಟ್ಟ ರಾಶಿಯವರಾಗಿರುತ್ತಾರೆ. ಹಾಗಾಗಿಯೇ ಇವರು ಎಲ್ಲವನ್ನೂ ಹೇಗೆ ಬೇಕಾದರೂ ಅನುಭವಿಸುವ ಹಾಗೂ ಊಹಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಇವರು ತಮ್ಮ ಸುತ್ತಲಿನ ಜನರ ಭಾವನೆಯನ್ನು ಬಹಳ ಸುಲಭವಾಗಿ ಊಹಿಸಬಲ್ಲರು. ಇವರು ತಮ್ಮದೇ ಆದ ಜಗತ್ತಿನಲ್ಲಿ ಮುಳುಗಿರುತ್ತಾರೆ. ಎಲ್ಲಾ ಸಮಯದಲ್ಲಿ ಎಲ್ಲವನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತಮ್ಮ ಸುತ್ತಲಿನಲ್ಲಿ ನಡೆಯುವ ಹಠಾತ್ ಬದಲಾವಣೆಯನ್ನು ಬಹಳ ವೇಗವಾಗಿ ಗುರುತಿಸುವರು. ಜೊತೆಗೆ ಮುಂದೆ ನಡೆಯುವ ಸಂಗತಿಗಳ ಬಗ್ಗೆ ಸೂಕ್ತ ರೀತಿಯಲ್ಲಿ ಊಹಿಸಬಲ್ಲರು.