Just In
- 9 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 9 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 10 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 11 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 4 ರಾಶಿಯವರಿಗೆ ಒತ್ತಡ ನಿಭಾಯಿಸಲು ಆಗಲ್ಲ, ತುಂಬಾನೇ ಕಷ್ಟ ಪಡುತ್ತಾರೆ!
ಜೀವನದಲ್ಲಿ ಪ್ರತಿಯೊಬ್ಬರಿಗೂ ಒತ್ತಡವೆನ್ನುವುದು ಇದ್ದೇ ಇರುತ್ತದೆ. ಒತ್ತಡಕ್ಕೆ ಒಳಗಾಗದೆ ಇರುವಂತಹ ವ್ಯಕ್ತಿಗಳು ಇಲ್ಲವೇ ಇಲ್ಲ. ಆದರೆ ಕೆಲವರಿಗೆ ಇಂತಹ ಒತ್ತಡ ನಿಭಾಯಿಸಲು ಬರುವುದಿಲ್ಲ. ಇದರಿಂದಾಗಿ ಅವರು ಸಮಸ್ಯೆಗೆ ಸಿಲುಕುವರು. ಇದರ ನೇರ ಪರಿಣಾಮ ಅವರ ಸಂಬಂಧದ ಮೇಲೆ ಆಗುವುದು. ಒತ್ತಡ ನಿಭಾಯಿಸಲು ಬರದೆ ಇರುವ ವ್ಯಕ್ತಿಯ ಜೀವನವು ಸಂಪೂರ್ಣವಾಗಿ ಸಮಸ್ಯೆಯ ಸುಳಿಗೆ ಸಿಲುಕಬಹುದು.
ಆದರೆ ಕೆಲವರಿಗೆ ಇದು ಹುಟ್ಟಿನಿಂದ ಬಂದಿರುವುದು. ಯಾಕೆಂದರೆ ಜನ್ಮರಾಶಿಯ ಅನುಗುಣವಾಗಿ ಕೆಲವರಿಗೆ ಒತ್ತಡ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಹೌದು, ಈ ಲೇಖನದಲ್ಲಿ ಒತ್ತಡ ನಿಭಾಯಿಸಲು ವಿಫಲರಾಗುವಂತಹ ಜನ್ಮರಾಶಿಯ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಒತ್ತಡ ನಿಭಾಯಿಸುವಲ್ಲಿ ತುಂಬಾ ಪರದಾಡುವ ರಾಶಿಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ...
ಮಿಥುನ: ಮೇ 21-ಜೂನ್ 20
ಮಿಥುನ ರಾಶಿಯವರು ಹಲವಾರು ರೀತಿಯ ವಿಷಯಗಳಿಗೆ ಬೇಗನೆ ಒತ್ತಡಕ್ಕೆ ಒಳಗಾಗುವರು. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದಾಗ ಈ ರಾಶಿಯವರು ತುಂಬಾ ಒತ್ತಡಕ್ಕೆ ಒಳಗಾಗುವರು. ಬೆಳಗ್ಗೆ ಎದ್ದು ಕಚೇರಿಗೆ ಹೋಗಲು ಯಾವ ಬಟ್ಟೆ ಹಾಕಬೇಕು ಎನ್ನುವುದರಿಂದ ಹಿಡಿದು ಬೇರೆ ನಿರ್ಧಾರ ಮಾಡುವ ತನಕ ಪ್ರತಿಯೊಂದಕ್ಕೂ ಒತ್ತಡಕ್ಕೆ ಒಳಗಾಗುವರು. ಆದರೆ ಈ ರಾಶಿಯವರ ಒಂದು ಗುಣ ಮೆಚ್ಚಲೇ ಬೇಕು. ಅದೇನೆಂದರೆ ಇವರು ಒತ್ತಡಕ್ಕೆ ಸಿಲುಕಿದರೂ ಆ ಸಮಸ್ಯೆಗೆ ಪರಿಹಾರ ಸಿಗುವ ತನಕ ಅದರಿಂದ ಹೊರಬರುವುದಿಲ್ಲ. ಈಗ ನಿರ್ಧಾರ ಮಾಡದೇ ಇದ್ದರೆ ಮುಂದೆಂದೂ ಅವರಿಗೆ ನಿರ್ಧಾರ ಮಾಡಲು ಸಾಧ್ಯವಾಗಲ್ಲವೆಂದು ಅವರಿಗವರೇ ಧೈರ್ಯ ತುಂಬುವರು. ಇನ್ನು ಈ ರಾಶಿಯವರು ದ್ವಂದ್ವತೆ ಮತ್ತು ಎರಡು ವಿಭಿನ್ನ ದೃಷ್ಟಿಕೋನಗಳಿಂದ ಸನ್ನಿವೇಶಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಿರುವ ಅತ್ಯಂತ ಬುದ್ಧಿವಂತ ರಾಶಿಚಕ್ರ ಚಿಹ್ನೆ. ಸಾಮಾನ್ಯವಾಗಿ ಮಿಥುನ ರಾಶಿಯವರು ಯಾವಾಗಲೂ ಸಮತೋಲನ ಕಂಡುಹಿಡಿಯುವ ಮತ್ತು ತಮ್ಮ ಘರ್ಷಣೆಗಳು ಪರಿಹರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಈ ರಾಶಿಚಕ್ರದವರು ಓದುವುದು, ವಿಶ್ಲೇಷಣೆ ನಡೆಸುವುದು ಮತ್ತು ಅವರ ಲಾಭಕ್ಕಾಗಿ ಮಾಹಿತಿಯನ್ನು ಪಡೆದುಕೊಳ್ಳುವುದರಲ್ಲಿ ಚತುರತೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು.
ಕರ್ಕಾಟಕ: ಜೂನ್ 21- ಜುಲೈ22
ಕರ್ಕಾಟಕ ರಾಶಿಯವರು ದಿನನಿತ್ಯವು ಬೇರೆಯವರ ಬಗ್ಗೆ ಯೋಚಿಸಲು ಆರಂಭಿಸಿದ ವೇಳೆ ಒತ್ತಡಕ್ಕೆ ಒಳಗಾಗುವರರು. ಇವರು ಸ್ವಭಾವದಲ್ಲಿ ಅಂತರ್ಮುಖಿಯಾಗಿದ್ದರೂ ನೆರವು ನೀಡುವರು. ತಮ್ಮ ಸ್ನೇಹಿತರು ಮತ್ತು ಕುಟುಂಬದವರ ಭಾವನೆಗಳನ್ನು ಇವರು ಅರ್ಥ ಮಾಡಿಕೊಳ್ಳುವರು. ಇವರು ತಮ್ಮ ಬಗ್ಗೆ ಮತ್ತು ತಮ್ಮದೇ ಆದ ಸಮಸ್ಯೆ ಬಗ್ಗೆ ಹೆಚ್ಚು ಚಿಂತೆ ಮಾಡುವರು. ಕೆಲವೊಮ್ಮೆ ಇದರ ಬಗ್ಗೆ ಅವರಿಗೆ ಪಶ್ಚಾತ್ತಾಪವಾಗುವುದು ಇದೆ. ಚಿಂತೆ ಮಾಡುವ ಮೂಲಕ ಇವರು ಹೆಚ್ಚಿನ ಒತ್ತಡಕ್ಕೆ ಸಿಲುಕುವರು. ತಮ್ಮ ಪ್ರೀತಿಪಾತ್ರರ ಜೀವನದ ಅವಿಭಾಜ್ಯ ಅಂಗವಾಗಿರುವುದನ್ನು ಅವರು ತುಂಬಾ ಇಷ್ಟಪಡುವರು. ಇನ್ನು ಈ ರಾಶಿಯ ಜನರು ತಮ್ಮ ಸುತ್ತಲಿನವರೊಂದಿಗೆ ತುಂಬಾ ಒಳ್ಳೆಯ ವರ್ತನೆ ತೋರಿಸುವರು. ಜನರು ತಮ್ಮ ಸ್ವಾರ್ಥಕ್ಕಾಗಿ ಅವರ ಒಳ್ಳೆಯತನವನ್ನು ಬಳಸಿಕೊಂಡರೂ ಅವರಿಗೆ ಇದರ ಬಗ್ಗೆ ಚಿಂತಿಸುವುದಿಲ್ಲ.ತಮ್ಮ ಒಳ್ಳೆಯತನ ಉಳಿಸಿಕೊಳ್ಳಲು ಈ ರಾಶಿಯವರು ತುಂಬಾ ಸೂಕ್ಷ್ಮತೆ ಕಾಪಾಡುವರು. ಕೆಲವು ಕೆಲಸಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಳಗೊಳ್ಳದೆ ಇದ್ದರೂ ಬೇರೆಯವರಿಗೆ ನೆರವಾಗುವರು.
ಕನ್ಯಾ: ಆಗಸ್ಟ್ 23-ಸೆ.22
ಕನ್ಯಾ ರಾಶಿಯವರಿಗೆ ತಮ್ಮೊಳಗಿನಿಂದಲೇ ಒತ್ತಡವು ಬರುವುದು. ಇವರು ಮಾನಸಿಕ, ದೈಹಿಕ ಅಥವಾ ಭಾವನಾತ್ಮಕವಾಗಿ ಯಾವುದೇ ವಿಚಾರವನ್ನು ಒಂದೇ ಸಲ ಹಿಡಿದುಕೊಳ್ಳುವರು. ಇವರು ಒಳ್ಳೆಯ ಗೆಳೆಯ ಅಥವಾ ಜೀವನ ಸಂಗಾತಿಯಾಗಲು ಪ್ರಯತ್ನಿಸುವರು. ಇನ್ನೊಂದು ಕಡೆಯಲ್ಲಿ ಇವರು ಸ್ವಆರೈಕೆ ಬಗ್ಗೆ ಹೆಚ್ಚು ಗಮನ ಹರಿಸುವರು ಮತ್ತು ತಾನು ಯಾವತ್ತೂ ಜತೆಯಾಗಿ ಇರಲು ಸಾಧ್ಯವಿಲ್ಲವೆಂದು ತಮ್ಮ ಸುತ್ತಲು ಇರುವವರಿಗೆ ಅರ್ಥ ಮಾಡಿಸಲು ಪ್ರಯತ್ನಿಸುವರು. ಇದನ್ನು ಹೊರತುಪಡಿಸಿ ಒತ್ತಡವು ಅವರನ್ನು ಚೂರುಚೂರು ಮಾಡಬಹುದು ಮತ್ತು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂದು ಅವರು ಅರ್ಥ ಮಾಡಿಕೊಳ್ಳಬೇಕು. ಇನ್ನು ಕನ್ಯಾ ರಾಶಿಯವರು ಒಳ್ಳೆಯ ಸ್ನೇಹಿತರಾಗಿರುವರು ಮತ್ತು ಯಾವಾಗಲೂ ತಮ್ಮ ನೆರವು ನೀಡಲು ಮುಂದಾಗವರು. ಸ್ನೇಹಿತರು ನೆರವು ಕೇಳಲು ಹಿಂಜರಿದರೂ ಇವರಾಗಿಯೇ ನೆರವಾಗುವರು.ಪ್ರತಿಯೊಬ್ಬರೊಂದಿಗೆ ಒಳ್ಳೆಯವರಾಗಿರುವುದರ ಪರಿಣಾಮ ಕೆಲವೊಂದು ಸಲ ಜನರು ಇದರ ಲಾಭ ಪಡೆದುಕೊಳ್ಳುವರು. ಕನ್ಯಾ ರಾಶಿಯವರಿಗೆ ಇಲ್ಲವೆನ್ನಲು ಬರುವುದೇ ಇಲ್ಲ. ತುಂಬಾ ಕಠಿಣ ಪರಿಸ್ಥಿತಿಯಲ್ಲಿದ್ದರೂ ಸಹಿತ ಇವರು ನೆರವು ಕೇಳಿದವರಿಗೆ ಇಲ್ಲವೆನ್ನುವುದಿಲ್ಲ.
ತುಂಬಾ ಪ್ರಾಯೋಗಿಕವಾಗಿರುವ ರಾಶಿಗಳು
ಕುಂಭ: ಜನವರಿ 20-ಫೆ.18
ಕುಂಭ ರಾಶಿಯವರು ಯಾವಾಗಲೂ ಒತ್ತಡವು ತಮ್ಮ ಮೆದುಳಿನೊಳಗೆ ಪ್ರವೇಶಿಸಬಾರದು ಎಂದು ಪ್ರಯತ್ನಿಸುತ್ತಾ ಇರುತ್ತಾರೆ. ಆದರೆ ಅವರೆಷ್ಟೇ ಪ್ರಯತ್ನಿಸಿದರೂ ಅದು ತನ್ನ ಹಾದಿ ಹಿಡಿಯುತ್ತದೆ. ಅವರ ಒತ್ತಡವು ಯಾವುದೇ ಆಗಿರಬಹುದು. ಇತರ ಕೆಲವು ರಾಶಿಯವರು ಯೋಚಿಸಲು ಸಾಧ್ಯವಾಗದೆ ಇರುವಂತೆ ಇವರು ಒತ್ತಡ ನಿಭಾಯಿಸುವರು. ಒತ್ತಡವು ತಮ್ಮನ್ನು ನುಂಗಿ ಹಾಕದೆ ಇರುವಂತೆ ಇವರು ಯಾವಾಗಲೂ ಪ್ರಯತ್ನಿಸುವರು. ಏನೇ ಆದರೂ ತಮ್ಮ ಜೀವನದ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು ಎಂದು ಅವರು ತಿಳಿಯಬೇಕು. ಇದನ್ನು ಅವರು ಅರ್ಥಮಾಡಿಕೊಂಡರೆ ಎಲ್ಲವೂ ಸರಿಯಾಗಿರುವುದು. ಇನ್ನು ಈ ರಾಶಿಯವರಿಗೆ ಅಧಿಪತಿ ಶನಿಯಾಗಿದ್ದು ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೂ ತಮ್ಮದೇ ವಿಚಾರಗಳನ್ನು ಮಂಡಿಸುತ್ತಾರೆ.ಇವರು ಹೆಚ್ಚು ಪ್ರತ್ಯಕ್ಷಜನಿತರೂ ಹಾಗೂ ಪ್ರತಿಫಲಾಪೇಕ್ಷಿಗಳೂ ಆಗಿರುತ್ತಾರೆ. ಇವರು ಜನ್ಮತಃ ಸಮಾಜದ ಕುಂದು ಕೊರತೆಗಳನ್ನು ಪ್ರಶ್ನಿಸುವ ಎದೆಗಾರಿಕೆ ಹೊಂದಿರುತ್ತಾರೆ ಹಾಗೂ ದೂರ ದೃಷ್ಟಿಯುಳ್ಳವರಾಗಿರುತ್ತಾರೆ. ಈ ಕಾರಣಗಳಿಂದ ಇವರಿಗೆ ಜಾಣರು ಎಂಬ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.