Just In
- 12 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 12 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 12 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 14 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Automobiles ನಿಮ್ಮ ಬಳಿ 7 ಲಕ್ಷ ರೂಪಾಯಿ ಇದ್ದರೆ ಸಾಕು.. ಕನಸಿನ ಕಾರನ್ನು ಮನೆ ತರಬಹುದು!
- Finance ತನ್ನ ಯುಪಿಐ ಬಳಕೆದಾರರನ್ನು ನಾಲ್ಕು ಬ್ಯಾಂಕ್ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿದ Paytm
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
29-12-2018: ಶನಿವಾರದ ದಿನ ಭವಿಷ್ಯ
ಕುಂಡಲಿಯಲ್ಲಿರುವ ದೋಷ ಪರಿಹಾರಕ್ಕಾಗಿ ಶನಿವಾರದ ವ್ರತ ಹಾಗೂ ಉಪವಾಸವನ್ನು ಕೈಗೊಳ್ಳುತ್ತಾರೆ. ಹಾಗೆಯೇ ಶನಿವಾರವೂ ಶನಿ ದೋಷ ಅಥವಾ ಇನ್ಯಾವುದೇ ಶನಿ ತೊಂದರೆಯ ಪರಿಹಾರಕ್ಕೆ ಪೂಜೆ ಸಲ್ಲಿಸುತ್ತಾರೆ ಎನ್ನುವುದು ನಿಮಗೆ ಗೊತ್ತಿರುತ್ತದೆ. ಹೌದು, ಸಾಡೇ ಸಾತು, ಅಷ್ಟಮ ಶನಿ, ಪಂಚಮ ಶನಿ, ಶನಿ ದೆಸೆ, ಶನಿ ದೋಷಗಳಿದ್ದರೆ ಪ್ರತಿ ಶನಿವಾರ ಶನಿ ದೇವರಿಗೆ ಹಾಗೂ ಶಿವನಿಗೆ ಪೂಜೆ ಸಲ್ಲಿಸಬೇಕು. ಶನಿ ಮತ್ತು ಶಿವನ ಪ್ರಾರ್ಥನೆ ಮಾಡುವುದರಿಂದ ಮಂಗಳವಾಗುವುದು.
ಶಿವನ ಆಶೀರ್ವಾದವು ವರ್ಷ ಪೂರ್ತಿ ದೊರೆಯುವುದು ಎಂದು ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಸಾಡೇ ಸಾತ್ ಶನಿ ಇರುವವರು ಕೆಲವು ಪ್ರಮುಖ ಧಾರ್ಮಿಕ ಆಚರಣೆ ಮಾಡಬೇಕು. ಆಗ ಕಷ್ಟಗಳ ಪ್ರಮಾಣ ತಗ್ಗುವುದು ಎಂದು ಹೇಳಲಾಗುವುದು. ಹಾಗಾದರೆ ಆ ವಿಧಿ-ವಿಧಾನಗಳು ಯಾವವು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ..ಸಾಡೇ ಸಾತ್ ಶನಿಯು ಏಳು ವರ್ಷಗಳ ಕಾಲ ಇರುತ್ತದೆ. ಈ ಅವಧಿಯಲ್ಲಿ ವ್ಯಕ್ತಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನೆ. ಜೊತೆಗೆ ಜೀವನದ ಆಗು-ಹೋಗುಗಳ ಬಗ್ಗೆ ತಿಳಿಯುತ್ತಾನೆ. ಜೀವನದಲ್ಲಿ ಸತ್ಯ ಧರ್ಮದಲ್ಲಿ ನಡೆಯುವುದು ಹೇಗೆ? ಎನ್ನುವುದು ತಿಳಿಯುತ್ತದೆ ಎಂದು ಹೇಳಲಾಗುವುದು. ಈ ಅವಧಿಯಲ್ಲಿ ವೈಯಕ್ತಿಕ ವಿಚಾರದಲ್ಲಿ ಹಾಗೂ ವೃತ್ತಿಯಲ್ಲಿಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುವುದು ಎಂದು ಹೇಳಲಾಗುತ್ತದೆ. ಆರ್ಥಿಕ ವಿಷಯ ಸೇರಿದಂತೆ ಎಲ್ಲಾ ವಿಚಾರದಲ್ಲೂ ವಿವಿಧ ತೊಂದರೆಗಳು ಎದುರಾಗುವುದು.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807
ಮೇಷ( 29 ಡಿಸೆಂಬರ್ 2018)
ನಿಮ್ಮದೇ ಯೋಚನೆ ಹಾಗೂ ಪ್ರಪಂಚದಿಂದ ಹೊರಗೆ ಬನ್ನಿ. ನಿಮಗಿಂತಲೂ ಬಹು ಕಷ್ಟಜೀವನ ನಡೆಸುತ್ತಿರುವವರು ನಿಮ್ಮ ಕಣ್ಣಿಗೆ ಬೀಳುವರು. ಆಗ ನೀವು ಅನುಭವಿಸುತ್ತಿರುವ ಕಷ್ಟ ಕಷ್ಟವೇ ಅಲ್ಲ ಎಂದು ಗೊತ್ತಾಗುವುದು. ಕೆಲಸದ ಸ್ಥಳಗಳಲ್ಲಿ ವಿಶೇಷ ಸ್ಥಾನಮಾನಗಳು ಲಭ್ಯವಾಗಲಿವೆ. ಇದಕ್ಕಾಗಿ ಹಲವರ ಸಹಕಾರವು ದೊರೆಯಲಿದೆ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ಮನಸ್ಸು ಉಲ್ಲಾಸಮಯವಾಗುವುದು.ನಿಮ್ಮನ್ನು ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೆ ಚಡಪಡಿಸುತ್ತಿದ್ದೀರಿ. ಆತಂಕರಾಗದಿರಿ. ಬಂದ ಸಮಸ್ಯೆಗಳು ಹಿರಿಯರ ಆಶೀರ್ವಾದದಿಂದ ಕಡಿಮೆ ಆಗುವುದು. ದುರ್ಗೆಯ ಆರಾಧನೆ ಮಾಡಿ.9845743807
ಅದೃಷ್ಟ ಸಂಖ್ಯೆ:2
ವೃಷಭ
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯಲಿದೆ. ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದ ವ್ಯಕ್ತಿಗಳು ನಿಮ್ಮದೆರು ಬಂದು ಕ್ಷ ಮೆ ಯಾಚಿಸುವ ಸಂದರ್ಭ ಎದುರಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹೆಚ್ಚಿನ ನಿರೀಕ್ಷೆಗಳಿಂದ ನಿರಾಸೆಯೇ ಉಂಟಾಗುವುದು. ಹಾಗಾಗಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ. ನಿಮಗೆ ದೊರಕಿದಷ್ಟರಲ್ಲೇ ತೃಪ್ತಿಯನ್ನು ಕಾಣಿ. ಇದರಿಂದ ನೀವು ಸಮಾಜದಲ್ಲಿ ಗೌರವಿಸಲ್ಪಡುವಿರಿ. ಬಾಳಸಂಗಾತಿಯೊಂದಿಗೆ ಕಲಹ ಸಾಧ್ಯತೆ ಇದೆ. ಇದನ್ನು ಜಾಣ್ಮೆಯಿಂದ ಎದುರಿಸಿದಲ್ಲಿ ಒಳಿತಾಗುವುದು. ಅವರ ವಿಚಾರಧಾರೆಗಳಿಗೂ ಬೆಲೆ ಕೊಡುವುದರಿಂದ ನಿಮಗೆ ಹೆಚ್ಚಿನ ಲಾಭವುಂಟಾ ಗುವುದು.9845743807 ಅದೃಷ್ಟ ಸಂಖ್ಯೆ:1
ಮಿಥುನ
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಮಾಜದಲ್ಲಿ ಕೀರ್ತಿ ಗೌರವ ಆದರಗಳಿಂದ ಮನಸ್ಸಿಗೆ ಸಂತೋಷ ಎನಿಸುವುದು. ವದಂತಿಗಳಿಗೆ ಕಿವಿಗೊಡದಿರಿ. ಮನೆಯ ಹಿರಿಯರನ್ನು ಗೌರವಿಸಿ ಹಿರಿತನದಿಂದ ಬಾಳಿ.ವ್ಯಾಪಾರ, ವ್ಯವಹಾರಗಳಿಗೆ ಮೀಸಲಿಟ್ಟ ಹಣ ಆರೋಗ್ಯದ ಸಲುವಾಗಿ ಖರ್ಚಾಗುವ ಸಾಧ್ಯತೆ ಇದೆ ಅಥವಾ ಟ್ಯಾಕ್ಸ್ ಕಟ್ಟುವುದಕ್ಕಾಗಿ ಉಪಯೋಗಿಸಬೇಕಾಗುವುದು. ಸರ್ಕಾರಕ್ಕೆ ಸಲ್ಲಿಸಬೇಕಾದ ಕರವನ್ನು ಸಕಾಲಕ್ಕೆ ಪಾವತಿಸಿ.ಹಳೆಯ ಸಾಲದ ತೀರುವಳಿ ಆಗುವುದು. ಕೆಲವರು ವೃತ್ತಿಯಲ್ಲಿ ಬದಲಾವಣೆ ಬಗ್ಗೆ ಚಿಂತಿಸಿದರೆ ಮತ್ತೆ ಕೆಲವರು ಮನೆ ಬದಲಾಯಿಸುವ ಚಿಂತೆಯಲ್ಲಿದ್ದೀರಿ. ಮನೆ ಬದಲಾವಣೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು.9845743807ಅದೃಷ್ಟ ಸಂಖ್ಯೆ:4
ಕಟಕ
ಮರಕ್ಕಿಂತ ಮರ ದೊಡ್ಡದು. ಅಂತೆಯೇ ನಿಮ್ಮ ಬುದ್ಧಿವಂತಿಕೆಯನ್ನು ಮೀರಿಸುವ ಜನರು ಜಗತ್ತಿನಲ್ಲಿ ಕಾಣಬರುತ್ತಾರೆ. ಹಾಗಾಗಿ ನಿಮ್ಮ ಬುದ್ಧಿಮತ್ತೆಯ ವಿಚಾರವಾಗಿ ಅಹಂಕಾರ ಪಡುವುದು ಸೂಕ್ತವಲ್ಲ.ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗದೇ ಚಡಪಡಿಸಲಿದ್ದೀರಿ. ಈ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಮಾರ್ಗದರ್ಶಕರನ್ನು ಕಂಡು ನಿಮ್ಮ ಸಮಸ್ಯೆ, ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಿ.ಮನೆಯಲ್ಲಿನ ಮಂಗಳಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಇದರಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ಮೂಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ದೂರದಿಂದ ಬರುವ ವಾರ್ತೆಯು ನಿಮಗೆ ಮುದ ನೀಡುವುದು.9845743807
ಅದೃಷ್ಟ ಸಂಖ್ಯೆ:6
ಸಿಂಹ
ವಿಚಿತ್ರವಾದ ಗೊಂದಲಗಳ ನಡುವೆ ಸಿಕ್ಕಿಬೀಳುವ ಸಂದಿಗ್ಧತೆ ಎದುರಾಗಲಿದೆ. ಅದರಿಂದಾಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಹೆಣಗಾಡುವಿರಿ. ಹಿರಿಯರ ಆಶೀರ್ವಾದ ಪಡೆಯಿರಿ. ಒಳಿತಾಗುವುದು.ನಿಮಗೆ ಜನ್ಮದತ್ತವಾಗಿ ಬಂದ ಕೆಲವು ಸಂಗತಿಗಳನ್ನು ಮರೆಮಾಚದಿರಿ. ಅವುಗಳಿಂದ ನಿಮ್ಮ ಕೀರ್ತಿ ಶಿಖರಕ್ಕೆ ಏರಲು ಅನುಕೂಲವಾಗುವುದು. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಹಾಗಾಗಿ ನೀವು ನಿಮ್ಮ ಕೀಳರಿಮೆಯಿಂದ ಹೊರಬನ್ನಿ. ನಿಮ್ಮಲ್ಲಿ ಅನೇಕರು ಬಂಡಾಯದ ಕಹಳೆಯನ್ನು ಊದುವ ತವಕದಲ್ಲಿದ್ದೀರಿ. ಆದರೆ ನಿಮ್ಮವರಿಂದಲೇ ನಿಮಗೆ ಹಿನ್ನಡೆ ಉಂಟಾಗುವುದು. ಹಾಗಾಗಿ ನಿಮಗೆ ಒಂಟಿತನ ಕಾಡುವುದು.9845743807. ಅದೃಷ್ಟ ಸಂಖ್ಯೆ:4
ಕನ್ಯಾ
ಹಿತಶತ್ರುಗಳು ನಿಮ್ಮ ಬಗ್ಗೆ ಅಲ್ಲಸಲ್ಲದ ಅಪವಾದಗಳನ್ನು ಹೇರುವ ಸಾಧ್ಯತೆ ಇದೆ. ಆದರೆ ಅದು ಸುಳ್ಳೆಂದು ಗೊತ್ತಾದಾಗ ಅವರು ನಿಮ್ಮ ಬಳಿಕ್ಷಮೆಯಾಚಿಸುವ ಪ್ರಸಂಗ ಎದುರಾಗುವುದು. ಅವಸರದ ನಿರ್ಣಯಗೈದು ತಪ್ಪು ಹಾದಿ ತುಳಿಯದಿರಿ. ಈ ಬಗ್ಗೆ ಹಿರಿಯರ ಮತ್ತು ಅನುಭವಿಕರ ಅನುಭವಗಳನ್ನು ಆಲಿಸಿ. ಆದಾಗ್ಯೂ ನಿಮಗೆ ದೈವಕೃಪೆಯಿಂದ ಒಳಿತಾಗುವುದು.ಉತ್ತಮವಾದ ಪುರಸ್ಕಾರವೊಂದು ಬರಲು ದಿನವು ಪ್ರಶಸ್ತವಾಗಿದೆ. ಇದಕ್ಕೆ ಬಾಳಸಂಗಾತಿಯ ಬೆಂಬಲವೂ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಆದರೆ ಇದೆಲ್ಲವನ್ನು ಸ್ವೀಕರಿಸುವ ಸಮಯ ನಿಮಗೆ ಸಿಗದೆ ಹೋಗಬಹುದು. 9845743807 ಅದೃಷ್ಟ ಸಂಖ್ಯೆ:8
ತುಲಾ
ಅನೇಕ ಕೊರತೆಗಳ ಸರಮಾಲೆ ದಿಢೀರನೆ ಎದುರಾಗಬಹುದು. ಆರ್ಥಿಕ ಮುಗ್ಗಟ್ಟಿನ ತೊಂದರೆಯು ಬೃಹದಾಕಾರವಾಗಿ ಎದುರು ನಿಲ್ಲುವುದು. ಸ್ನೇಹಿತರು, ಬಂಧುಗಳು ನಿಮಗೆ ಹಣ ಸಹಾಯ ಮಾಡಬಹುದು. ಆದರೆ ನೀವು ಅವರ ವಿಶ್ವಾಸವನ್ನು ಗಳಿಸಬೇಕಾಗುವುದು.ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರಿಗೆ ಸಂಕಷ್ಟದ ದಿನ.ನೀವು ಮಾಡದೆ ಇರುವ ತಪ್ಪಿಗೆ ಹೊಣೆ ಗಾರರಾಗಬೇಕಿದೆ. ಇದರಿಂದ ಹೊರಬಂದು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.ಕೆಲಸದ ಒತ್ತಡದಿಂದ ಕರ್ತವ್ಯ ನಿರ್ವಹಣೆ ದುಸ್ತರವಾಗುವುದು. ಇದಕ್ಕಾಗಿ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಸಾಧ್ಯವಾದರೆ ಕಡಲೇಕಾಳನ್ನು ದಾನ ಮಾಡಿ. ಇಲ್ಲವೆ ಹಸುವಿಗೆ ನೀಡಿ. ಬಡವರಿಗೆ ಆಹಾರವನ್ನು ನೀಡಿ.9845743807
ಅದೃಷ್ಟ ಸಂಖ್ಯೆ:6
ವೃಶ್ಚಿಕ
ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಬರುವುದು. ಗುರುಜನ ಮಾನ್ಯರ ಕರೆದು ಆದರ ಆತಿಥ್ಯವನ್ನು ಮಾಡುವಿರಿ. ಅವರ ಆಶೀರ್ವಾದದಿಂದ ನಿಮಗೆ ಒಳಿತಾಗುವುದು. ಸಾಂಸಾರಿಕ ಜೀವನ ಉತ್ತಮ ಮಟ್ಟದ್ದಾಗಿರುತ್ತದೆ.ನಿಮ್ಮ ಕೆಲಸದ ಒತ್ತಡದ ಮಧ್ಯೆ ನಿಮ್ಮ ಕೆಲವು ಪ್ರತಿಭಾಯುಕ್ತ ಹವ್ಯಾಸಗಳನ್ನು ಅಲಕ್ಷ್ಯ ಮಾಡದಿರಿ. ಇಂತಹ ಹವ್ಯಾಸಗಳಿಂದ ನೆಮ್ಮದಿ ದೊರೆಯುವುದು. ವಿಷ್ಣು ಸಹಸ್ರನಾಮ ತಪ್ಪದೇ ಪಠಿಸಿ.ಕಚೇರಿಯ ಕೆಲಸದಲ್ಲಿಸಮಯಾವಾಧಾನದಿಂದ ಉತ್ಕೃಷ್ಟ ಫಲವನ್ನು ಹೊಂದುವಿರಿ. ಇದರಿಂದ ಮೇಲಧಿಕಾರಿಗಳ ಪ್ರಶಂಸೆಗೆ ಕಾರಣರಾಗುವಿರಿ. ಸಹೋದ್ಯೋಗಿಗಳು ಕೂಡಾ ನಿಮ್ಮ ಬಗ್ಗೆ
ಮೆಚ್ಚುಗೆಯ ನೋಟವನ್ನು ಹರಿಸುವರು.9845743807 ಅದೃಷ್ಟ ಸಂಖ್ಯೆ:2
ಧನುಸ್ಸು
ನಿಮಗೆ ಶುಭ ತರುವ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಅದಕ್ಕೆ ಪೂರಕವಾಗಿ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಇದರಿಂದ ಹೆಚ್ಚಿನ ಪ್ರಯೋಜನವಾಗುವುದು. ಪರಸ್ಪರ ಮುಕ್ತ ಮಾತುಕತೆಗಳ ಮೂಲಕ ಕೌಟುಂಬಿಕ ಜೀವನದ ಭಿನ್ನಾಭಿಪ್ರಾಯಗಳು ಕಡಿಮೆ ಆಗುವವು. ಕಚೇರಿ ಕೆಲಸಗಳು ಸರಾಗವಾಗಿ ನಡೆಯುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಹಾಗಂತ ಇತರರನ್ನು ಎದುರು ಹಾಕಿಕೊಳ್ಳುವುದು ಸೂಕ್ತವಲ್ಲ. ನೂತನ ವಾಹನ ಖರೀದಿಯನ್ನು ಮುಂದೂಡಿ. ತಾಯಿಯ ಆರೋಗ್ಯದ ಕಡೆ ಗಮನ ಕೊಡಿ.9845743807 ಅದೃಷ್ಟ ಸಂಖ್ಯೆ:8
ಮಕರ
ಹೊಸದಾದ ಪಾರ್ಟನರ್ಶಿಪ್ ವ್ಯವಹಾರ ಬೇಡ. ಸ್ವಂತ ದುಡಿಮೆಯಿಂದಲೇ ಸಾಕಷ್ಟು ಹಣಕಾಸು ಬರುವುದು. ಸಹೋದರರು ಇಂದಿನ ಕಾರ್ಯಕ್ಕೆ ಸಹಕಾರ ನೀಡಲಿರುವರು. ಹಣಕಾಸು ಉತ್ತಮವಾಗಿರುತ್ತದೆ.ನಿಮ್ಮ ಊಹಾಶಕ್ತಿ, ಸಂಕಲ್ಪ ಶಕ್ತಿ ಮತ್ತು ಆರನೆಯ ಇಂದ್ರಿಯದ ಕಲ್ಪನಾತೀತ ತರ್ಕದಿಂದ ನಿಮ್ಮ ಬದುಕಿನ ದಾರಿಯಲ್ಲಿ ಜಯವನ್ನು ಕಾಣುವಿರಿ. ಉನ್ನತ ವ್ಯಾಸಂಗದಲ್ಲೂ ಹೆಚ್ಚಿನ ಪ್ರಗತಿ ಕಂಡುಬರುವುದು.ಬಂಧು ಒಬ್ಬರಿಂದ ಕೆಲ ಆಸ್ತಿಯ ವಿಚಾರದಲ್ಲಿ ನಿಮಗೆ ಲಾಭವಾಗುವುದು. ನಿಮ್ಮ ಹಿಂಜರಿಕೆಯ ಸ್ವಭಾವದಿಂದ ಮನೆ ಮಾಡಲು ಅಥವಾ ಖರೀದಿ ಮಾಡಲು ಆಗುತ್ತಿಲ್ಲ. ಧೈರ್ಯದಿಂದ ಮುನ್ನುಗ್ಗಿದಲ್ಲಿ ಅನುಕೂಲವಾಗುವುದು.9845743807 ಅದೃಷ್ಟ ಸಂಖ್ಯೆ:9
ಕುಂಭ
ಹಳೆಯ ತಕರಾರುಗಳು ಬಹುಮಟ್ಟಿಗೆ ನಿರ್ಣಾಯಕ ಹಂತವನ್ನು ತಲುಪಲಿದ್ದು ಆ ಮೂಲಕ ಬರಬೇಕಾದ ಹಣಕಾಸಿನ ವ್ಯವಹಾರಕ್ಕೆ ನಿರ್ದಿಷ್ಟ ದಿನಾಂಕ ಗೊತ್ತಾಗುವುದು. ಇದರಿಂದ ನಿಮ್ಮ ಮುಂದಿನ ಕಾರ್ಯ ಯೋಜನೆಗೆ ಸಹಕಾರ ದೊರೆಯುವುದು. ಜನ್ಮಶನಿಯ ಬಿಡುಗಡೆ ಆಗಿದ್ದರೂ ಧನಸ್ಥಾನದ ಶನಿಯಿಂದಾಗಿ ಹೊಸ ಬಂಡವಾಳದೊಂದಿಗೆ ವ್ಯಾಪಾರ ಆರಂಭಿಸುವುದು ಸೂಕ್ತವಲ್ಲ. ನೆರೆಹೊರೆಯವರೊಡನೆ ಕಲಹ ಬೇಡ. ಅವರೊಂದಿಗೆ ಸ್ನೇಹ, ಸೌಹಾರ್ದತೆಯಿಂದ ವರ್ತಿಸಿ. ಮನಸ್ಸು ಗಾಬರಿಗೊಳ್ಳುವುದು. ಅಂದುಕೊಂಡ ಕಾರ್ಯಗಳು ಸಕಾಲದಲ್ಲಿ ಮುಗಿಯದೆ ಬೇಸರವುಂಟು ಮಾಡುವುದು. ಕೆಲವರಿಗೆ ಸ್ಥಾನ ಬದಲಾವಣೆ ಯಿಂದ ಮನಸ್ಸಿಗೆ ಕಿರಿಕಿರಿ ಆಗುವುದು.9845743807
ಅದೃಷ್ಟ ಸಂಖ್ಯೆ:2
ಮೀನ
ಕೆಲವರಿಗೆ ಕೆಲಸದ ಸ್ಥಳದಲ್ಲಿ ಪದೋನ್ನತಿ ದೊರೆಯುವುದು. ಹಿರಿಯರ ಆಸ್ತಿಗೆ ಸಂಬಂಧಪಟ್ಟಂತೆ ಶುಭ ಸೂಚನೆ ದೊರೆಯುವುದು. ಕಾರ್ಯ ನೆರವೇರಲು ಅಧಿಕ ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ. ಕಲಾಕಾರರು, ಕುಶಲಕರ್ಮಿಗಳು ಚಿತ್ರ ಕಲಾವಿದರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಧನಲಾಭಕ್ಕೆ ಕೂಡ ಅನೇಕ ದಾರಿಗಳು ತೆರೆದುಕೊಳ್ಳುವುದು. ಕೆಲವರಿಗೆ ವಿವಾಹ ಭಾಗ್ಯ ದೊರೆಯುವುದು. ಅರ್ಥಾತ್ ಮಾತುಕತೆಯು ಪೂರ್ಣಗೊಳ್ಳುವುದು. ಉದ್ಯೋಗದಲ್ಲಿ ಭಡ್ತಿ, ನಿರುದ್ಯೋಗಿಗಳಿಗೆ ನೌಕರಿ ದೊರೆಯುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಂಡು ಬರುವುದು. ಹಳೆಯ ಗೆಳೆಯರ ಭೇಟಿ ಸಾಧ್ಯತೆ ಇದೆ. ಕುಲದೇವರ ದರ್ಶನದಿಂದ ಆತ್ಮತೃಪ್ತಿ ಉಂಟಾಗಲಿದೆ.9845743807 ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp