For Quick Alerts
ALLOW NOTIFICATIONS  
For Daily Alerts

28-12-2018: ಶುಕ್ರವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಶುಕ್ರ ರೇಖೆಯಅಧಿಪತಿ ಉಗ್ರಗುಣ ಈ ರೇಖೆಗೆ ಯಮ ಅಧಿದೇವತೆ ಹಿಡಿದ ಕೆಲಸವನ್ನು ಪೂರ್ಣವಾಗಿ ಮಾಡುವವರು, ರೋಗರಹಿತರು, ದುಃಖ ರಹಿತರು, ಚಂಚಲ ಚಿತ್ತರು, ಆಲಸ್ಯಗಾರರು,
ಇವರು ತಮ್ಮ ನಿರ್ಣಯಗಳನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಬೇರೆಯವರನ್ನು ಎಷ್ಟು ಹೊಗಳುವರೋ ಅಷ್ಟೇ ಕಟುವಾಗಿ ಟೀಕಿಸುವರು. ವಿಲಾಸ ವಸ್ತುಗಳು ಹಾಗೂ ಆಧುನಿಕ ವಸ್ತುಗಳನ್ನು ಕೊಳ್ಳುವಲ್ಲಿ ಮುಂದಿರುತ್ತಾರೆ.ಧನದ ಬಗ್ಗೆ ಸ್ತ್ರೀಯರ ಬಗ್ಗೆ ಮತ್ತು ಸುಗಂಧ ಪರಿಮಳದ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ.

horoscope

ಪತ್ನಿಯಿಂದ ಅದೃಷ್ಟವು ಕೂಡಿ ಬರುತ್ತದೆ.ಇವರಿಗೆ ಸ್ತ್ರೀಸಂತಾನ ಅಧಿಕವಾಗಿರುತ್ತದೆ ಸಂಘದಲ್ಲಿ ಗೌರವ, ಪ್ರತಿಷ್ಠೆಯನ್ನು ಹೊಂದಿರುತ್ತಾರೆ. ತಾವು ನಂಬಿದ ಸಿದ್ದಾಂತಗಳಿಗೆ ಒಳಪಟ್ಟುನಡೆದುಕೊಳ್ಳುತ್ತಾರೆ. ನಿತ್ಯ ಲಕ್ಷ್ಮಿಪೂಜೆ ಮಾಡಬೇಕು ದೇವಿ ಆರಾಧನೆ ಮಾಡಬೇಕು.
ಓಂ ಕೃಷ್ಣವರ್ಣೈ ವಿದ್ಮಹೇl
ದಂಡಧರಾಯೈ ಧೀಮಹಿl
ತನ್ನೋ ಭರಣೀ ಪ್ರಚೋದಯಾತ್ll
ಈ ಮಂತ್ರವನ್ನು ಪ್ರತಿದಿನ ಪಠಿಸಿದರೆ ಬರುವ ಕಷ್ಟ ದುಃಖಗಳು ಪರಿಹಾರವಾಗುತ್ತದೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ

ಮೇಷ

ನಿಮ್ಮ ಬಳಿ ವಿವಿಧ ರೀತಿಯ ಜನರು ಬಂದು ತಮ್ಮ ಸ್ವಾರ್ಥವನ್ನು ಮೊದಲು ಪೂರೈಕೊಳ್ಳುವರು. ಅಂಥವರನ್ನು ಎಚ್ಚರದಿಂದ ಸಾಗ ಹಾಕಿ. ನಿಮ್ಮ ಸಾಮಾಜಿಕ ಕಳಕಳಿ ಬಹು ಮೆಚ್ಚುಗೆಗೆ ಪಾತ್ರವಾಗುವುದು. ನಿಮ್ಮ ಮಾರ್ಗದರ್ಶನವನ್ನು ನೆರೆಹೊರೆಯವರು ಬಯಸುತ್ತಾರೆ. ಇದರಿಂದ ಅತಿ ಹೆಚ್ಚಿನ ಪ್ರಶಂಸೆ ಪಡೆಯುವಿರಿ. ಕೆಲಸದ ಸ್ಥಳದಲ್ಲಿ ಕೆಲವರು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುವರು. ಅವರನ್ನು ಚಾತುರ್ಯದಿಂದಲೇ ದೂರ ಇಡುವುದು ಒಳ್ಳೆಯದು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಅವರನ್ನು ದೂರವಿಡಿ..9845743807

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ತೀರಾ ಸರಳ ಮಾರ್ಗದಿಂದ ಧನ ಲಾಭದ ದಾರಿ ತೆರೆದುಕೊಳ್ಳುವುದೆಂಬ ದಡ್ಡತನವನ್ನು ಬಿಟ್ಟರೆ ಒಳಿತಾಗುವುದು. ಕಠಿಣ ಪರಿಶ್ರಮವಿಲ್ಲದೆ ಹಣ ದೊರೆಯುವುದಿಲ್ಲ.ಸಮಾಜದಲ್ಲಿ ಜನಾನುರಾಗಿಗಳಾಗುವಂತಹ ವಿಶಿಷ್ಟ ಅವಕಾಶವೊಂದನ್ನು ನೀವು ಸಂಪಾದಿಸುವಿರಿ. ಅನುಪಮ ಶಕ್ತಿಯೊಂದು ನಿಮ್ಮ ಬೆಂಗಾವಲಿಗೆ ನಿಲ್ಲುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ನಡೆಯಬೇಕಾದ ದೂರವನ್ನು ಕ್ರಮಿಸುವ ಶಕ್ತಿ ನಿಮಗಿದೆ. ನೀವು ಕ್ರಮಿಸುವದಾರಿನೇರಮತ್ತುಕಠಿಣವಾಗಿರುವುದು. ಅದಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂಬುದನ್ನು ಅರಿಯಿರಿ. ಭಗವಂತನ ನಾಮಸ್ಮರಣೆ ನಿಮಗೆ ಮಾರ್ಗಸೂಚಿ ಆಗುವುದು..9845743807

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಬಹು ದಿನಗಳಿಂದಲೂ ಅಪೂರ್ಣವಾಗಿದ್ದ ನಿಮ್ಮ ಸಂಶೋಧನೆಯ ಕೆಲಸಗಳು ಪೂರ್ಣಗೊಳ್ಳುವವು. ನಿಮಗೆ ಮಾರ್ಗದರ್ಶನ ನೀಡುತ್ತಿದ್ದ ವ್ಯಕ್ತಿ ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು. ಬರೀ ಕಷ್ಟಗಳಿಂದಾಗಿ ನಿಮಗೆ ಬೇಸರ ಬಂದಿರುವ ಸಾಧ್ಯತೆ ಇದೆ. ಇದರಿಂದ ಮನಸ್ಸು ಗಲಿಬಿಲಿಗೊಂಡು ವಾಹನದಲ್ಲಿ ಸಂಚರಿಸುವಾಗ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಮನಸ್ಸು ವಿಚಲಿತವಾಗಿದ್ದಾಗ ವಾಹನ ಚಲಾಯಿಸಬೇಡಿ.

ಎಲ್ಲಾ ಕೆಲಸಗಳು ವಿಳಂಬವಾಗುವವು. ನಿಧಾನವೇ ಪ್ರಧಾನ ಎಂದು ಅರಿತು ನಡೆಯದೆ ವಿಧಿಯಿಲ್ಲ. ಆಂಜನೇಯ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ. ಹಣಕಾಸು ಸ್ಥಿತಿ ಸಾಧಾರಣವಾಗಿರುತ್ತದೆ..9845743807

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ನೀವು ಮಾಡುತ್ತಿರುವ ಕೆಲಸಗಳಲ್ಲಿ ಕೆಲವರು ಮೂಗು ತೂರಿಸಿ ಇಲ್ಲಸಲ್ಲದ ಸಲಹೆಗಳನ್ನು ನೀಡಿ ನಿಮ್ಮ ದಾರಿ ತಪ್ಪಿಸಲು ಹೊಂಚು ಹಾಕುತ್ತಿರುತ್ತಾರೆ. ನಿಮ್ಮ ಬುದ್ಧಿಮತ್ತೆಯನ್ನು ನಂಬಿ ಕೆಲಸ ಮಾಡಿ.ನಿಮ್ಮ ಪ್ರತಿಭೆಯನ್ನು ಧಾರಾಳವಾಗಿ ಪ್ರದರ್ಶಿಸಲು ಎಲ್ಲಾ ರೀತಿಯ ಅವಕಾಶಗಳು ಬರುವವು. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ತಾನಾಗಿ ಬಂದ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ.

ನಿಮ್ಮದು ಮೀನಿನಂತೆ ಚುರುಕಾದ ಓಡಾಟ, ನಡೆನುಡಿ ಇದ್ದರೂ ಗಾಳಕ್ಕೆ ಸಿಕ್ಕ ಮೀನು ಒದ್ದಾಡುವಂತೆ ಒದ್ದಾಡುವಿರಿ. ವಿವೇಚನೆ ಬಳಸಿ ಕಾರ್ಯ ಪ್ರವೃತ್ತರಾಗಿ. ಅನವಶ್ಯಕ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಡಿ..9845743807

ಅದೃಷ್ಟ ಸಂಖ್ಯೆ:4

ಸಿಂಹ

ಸಿಂಹ

ಎಲ್ಲರೊಂದಿಗೆ ಸಂಭಾಳಿಸಿಕೊಂಡು ಹೋಗುವ ನಿಮ್ಮ ವಿಚಾರಗಳು ನಿಮಗೆ ಜನಪ್ರಿಯತೆಯನ್ನು ತಂದು ಕೊಡುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿದ್ದು, ನಿಮ್ಮ ಬಳಿಯಾಚಿಸುವವ್ಯಕ್ತಿಗಳಿಗೆಧನಸಹಾಯಮಾಡುವಿರಿ. ನಿಮ್ಮ ಬಂಧು ಬಾಂಧವರು ವಿವಿಧ ರೀತಿಯಲ್ಲಿ ಸಹಾಯ ಮಾಡುವರು. ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುವುದು. ಮಕ್ಕಳ ಅಭಿವೃದ್ಧಿಯು ನಿಮಗೆ ಹೆಚ್ಚಿನ ಸಂತೋಷವನ್ನು ತಂದುಕೊಡುವುದು. ಮನೆಯ ಹಿರಿಯರೊಡನೆ ಸ್ನೇಹದಿಂದ ವರ್ತಿಸಿ. ಕಟ್ಟಡ ವಿನ್ಯಾಸಕಾರರಿಗೆ ಹಾಗೂ ಕಂಟ್ರ್ಯಾಕ್ಟರ್‌ಗಳಿಗೆ ಉತ್ತಮ ಆದಾಯದ ಜತೆಗೆ ನೂತನ ಕೆಲಸ ಕಾರ್ಯಗಳು ದೊರೆಯುವವು. ನೂತನ ಕೆಲಸ ಕಾರ್ಯಗಳಿಗೆ ಟೆಂಡರ್‌ ಹಾಕುವುದಕ್ಕೆ ಸಕಾಲವಾಗಿದೆ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯುವುದು..9845743807

ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ಸುಮ್ಮನೆ ತೊಂದರೆ, ಕಿರಿಕಿರಿ ಮಾಡುವ ಜನ ಹತ್ತಿರದಲ್ಲೇ ಇರುತ್ತಾರೆ. ಆದರೆ ತಾಳ್ಮೆ ಕಳೆದುಕೊಳ್ಳದೆ ಅವರೊಂದಿಗೆ ವ್ಯವಹರಿಸಿ. ಇದರಿಂದ ನಿಮಗೆ ಒಳಿತಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. ಮುಂಗೋಪ ಬಿಟ್ಟುಬಿಡಿ. ಕೋಪವು ಮನುಜನ ಮೊದಲ ಶತ್ರು. ಸರ್ವ ಚಿತ್ತಾರ ಮಸಿ ನುಂಗಿತು ಎನ್ನುವಂತೆ ನಿಮ್ಮಲ್ಲಿ ಎಷ್ಟೇ ಒಳ್ಳೆಯ ಗುಣಗಳಿದ್ದರೂ ಅವೆಲ್ಲವೂ ನಿಮ್ಮ ಮುಂಗೋಪದಿಂದ ಮುಚ್ಚಿಹೋಗುವುದು.ಬಾಳಸಂಗಾತಿಯೊಡನೆ ಅನವಶ್ಯಕವಾದ ಮನಸ್ತಾಪಗಳಿಗೆ ಅವಕಾಶ ಕೊಡಬೇಡಿ. ಅವರ ವಿಚಾರಧಾರೆಗಳು ಅವರಿಗೆ ಸರಿ ಎನಿಸುವುದು. ನಿಮ್ಮ ವಿಚಾರಧಾರೆಗಳು ನಿಮಗೆ ಸರಿ ಎನಿಸುವುದು. ಇದು ನಿಮ್ಮ ನಡುವೆ ವೈಮನಸ್ಸಿಗೆ ದಾರಿಯಾಗಬಹುದು..9845743807

ಅದೃಷ್ಟ ಸಂಖ್ಯೆ:4

ತುಲಾ

ತುಲಾ

ದಿಢೀರನೆ ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಮಾಡದಿರಿ. ನೀವು ಸಾಗುವ ದಾರಿ ಬಹಳ ಇರುವುದರಿಂದ ಕೂತು ಮಲಗುವ ಅಭ್ಯಾಸ ಮಾಡಿಕೊಳ್ಳಿ. ನೀವು ಸವೆಸಬೇಕಾಗಿರುವ ದಾರಿಯ ಸ್ಪಷ್ಟತೆಯನ್ನು ಅರಿಯಿರಿ.ಕೆಲವೊಮ್ಮೆ ಹಣೆಬರಹ ಎಂದು ಕೊರಗುತ್ತಾ ಸುಮ್ಮನೆ ಕೂರುವುದು ತರವಲ್ಲ. ಧೈರ್ಯದಿಂದ ಮುನ್ನುಗ್ಗಿ ಹೋಗುವುದನ್ನು ಕಲಿತುಕೊಳ್ಳಿ. ಧೈರ್ಯವಂತರಿಗೆ ಭಗವಂತನು ಕೂಡಾ ಸಹಾಯ ಮಾಡುವನು. ಭೂಮಿ ವಿಕ್ರಯ, ರಿಯಲ್‌ ಎಸ್ಟೇಟ್‌, ಮೈನಿಂಗ್‌ ಇತ್ಯಾದಿ ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಜಾಗರೂಕತೆಯಿಂದ ಇರಿ ಮತ್ತು ಆ ವ್ಯವಹಾರಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮುಂದುವರಿಯಿರಿ..9845743807

ಅದೃಷ್ಟ ಸಂಖ್ಯೆ:8

ವೃಶ್ಚಿಕ

ವೃಶ್ಚಿಕ

ವಿದೇಶ ಪ್ರವಾಸಗಳನ್ನು ಸದ್ಯಕ್ಕೆ ಮುಂದೂಡುವುದೇ ಒಳಿತು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳದಂತೆ ತಡೆಯುಂಟಾಗುವ ಸಾಧ್ಯತೆ ಇರುತ್ತದೆ. ಆಂಜನೇಯ ಸ್ವಾಮಿ ಸ್ತೋತ್ರ ಮತ್ತು ಶನಿ ದೇವರ ಸ್ತೋತ್ರ ಪಠಿಸಿ.ನಿಮ್ಮ ಎಲ್ಲಾ ಯೋಚನೆಗಳು ಧನಾತ್ಮಕವಾಗಿದ್ದು ಉತ್ತಮ ಫಲಿತಾಂಶವನ್ನು ಶೀಘ್ರವೇ ಹೊಂದುವಿರಿ. ನಿಮ್ಮ ಪ್ರಗತಿಯನ್ನು ಕಂಡು ಅಸೂಯೆ ಪಡುವ ಮತ್ತು ಕರುಬುವ ವ್ಯಕ್ತಿಗಳು ಹುಟ್ಟಿಕೊಳ್ಳುವರು. ಈ ಬಗ್ಗೆ ನೀವು ತಲೆಕೆಡಿಸಿಕೊಳ್ಳದಿರಿ. ಬಹು ವಿವಾದಪೂರ್ಣ ವಿಚಾರವು ತಾತ್ವಿಕ ನೆಲೆಗಟ್ಟಿನ ಮಾತುಕತೆಯೊಂದಿಗೆ ಮತ್ತು ಹೊಂದಾಣಿಕೆಗಳೊಂದಿಗೆ ಒಂದು ಇತ್ಯರ್ಥಕ್ಕೆ ಬರುವುದು. ಒಂದು ರೀತಿಯಲ್ಲಿ ವ್ಯಾಜ್ಯವು ಸುಖಾಂತ್ಯಗೊಳ್ಳುವುದು. ಇದು ಉಭಯರಿಗೂ ಸಂತೋಷ ತರುವುದು..9845743807

ಅದೃಷ್ಟ ಸಂಖ್ಯೆ:6

ಧನುಸ್ಸು

ಧನುಸ್ಸು

ನಿಮ್ಮ ಚಾಕಚಕ್ಯತೆಯನ್ನು ಗಮನಿಸಿ ಏಕಕಾಲದಲ್ಲಿ ಹಲವಾರು ಕಾರ್ಯಯೋಜನೆಗಳು ನಿಮ್ಮ ಬಳಿ ಬರುವವು. ಅವುಗಳಲ್ಲಿ ಪ್ರಮುಖವಾದ ಮತ್ತು ಮುಖ್ಯವಾದ ಕಾರ್ಯಗಳನ್ನು ಆದ್ಯತೆಯ ಮೇಲೆ ಹಮ್ಮಿಕೊಳ್ಳಿ. ಒಳಿತಾಗುವುದು.ಹಲವು ಮನೋಲ್ಲಾಸದ ಘಟನೆಗಳು ನಡೆಯುವುದರಿಂದ ಹೆಚ್ಚಿನ ಉತ್ಸಾಹ, ಶಕ್ತಿ ಸಾಮರ್ಥ್ಯ‌ಗಳನ್ನು ಹೊಂದುವಿರಿ. ಹಣಕಾಸು ಕೂಡ ವಿವಿಧಮೂಲಗಳಿಂದಬರುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.

ಈಗಾಗಲೇ ದೂರ ಪ್ರವಾಸವನ್ನು ಹಮ್ಮಿಕೊಂಡಿದ್ದಲ್ಲಿ ಅದನ್ನು ಮುಂದೂಡುವುದು ಒಳ್ಳೆಯದು. ಪ್ರಯಾಣದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ಅನಿವಾರ್ಯ ಎಂದಾದಲ್ಲಿ ಶ್ರೀ ಲಕ್ಷ್ಮೀನಾರಸಿಂಹನನ್ನು ನೆನೆದು ಪ್ರಯಾಣ ಮಾಡಿ..9845743807

ಅದೃಷ್ಟ ಸಂಖ್ಯೆ:4

ಮಕರ

ಮಕರ

ಜೀವನದ ಮಹತ್ವದ ಕ್ಷ ಣಗಳು ಸದಾಕಾಲ ಬರುವುದಿಲ್ಲ. ಆದರೆ ಆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಅದನ್ನು ತಿರಸ್ಕರಿಸಬೇಡಿ. ಇದರಿಂದ ಮುಂದಿನ ದಿನಗಳಲ್ಲಿಬಹುಬದಲಾವಣೆಗಳುಉಂಟಾಗುವವು.ಸಕಾರಾತ್ಮಕ ಚಿಂತನೆಯಿಂದ ಮಹತ್ತರವಾದ ಕೆಲಸವನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇದು ನಿಮ್ಮ ಪ್ರಸಿದ್ಧಿಗೆ ದಾರಿಯಾಗುವುದು. ಇದರ ಜತೆಗೆ ಖರ್ಚಿನ ದಾರಿ ತೆರೆದುಕೊಳ್ಳುವುದರಿಂದ ಖರ್ಚು ವೆಚ್ಚದ ಕಡೆ ಬಿಗಿ ಹಿಡಿತ ಮಾಡುವುದು ಒಳ್ಳೆಯದು.ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧಾರ ಮಾಡುತ್ತಾರೆಂಬ ಭ್ರಮೆಗೆ ಒಳಗಾಗುವಿರಿ. ಜೀವನದಲ್ಲಿ ಹಲವು ಏರಿಳಿತಗಳನ್ನು ಕಾಣುವಿರಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ..9845743807

ಅದೃಷ್ಟ ಸಂಖ್ಯೆ:2

ಕುಂಭ

ಕುಂಭ

ಮಾತಾ ದುರ್ಗಾದೇವಿಯನ್ನು ಅನನ್ಯ ಭಕ್ತಿಯಿಂದ ಜಪಿಸಿ. ನಿಮ್ಮ ಇಷ್ಟಾರ್ಥ ಸಿದ್ಧಿಸುವುದು. ಬರುವ ದಿನಗಳಲ್ಲಿ ಹೆಚ್ಚಿನ ಪ್ರಗತಿ ತೋರುವುದು. ಅನಗತ್ಯ ವಿಚಾರಗಳನ್ನು ತಲೆಗೆ ತುಂಬಿಕೊಂಡು ನರ್ವಸ್‌ ಆಗದಿರಿ. ಸದ್ಯದ ಪರಿಸ್ಥಿತಿಯು ಏಕಾಂತಮಯವಾದ ಸ್ಥಳವನ್ನು ಬಯಸುತ್ತದೆ. ಅಂತೆಯೇ ಮನಸ್ಸಿನ ನೆಮ್ಮದಿಗಾಗಿ ಅಂತಹ ಸ್ಥಳವನ್ನು ಹುಡುಕಿಕೊಂಡು ಹೋಗುವಿರಿ. ಇದರಿಂದಾಗಿ ಮಾನಸಿಕ ನೆಮ್ಮದಿ ದೊರೆಯುವುದು. ಕಷ್ಟಗಳನ್ನು ಎದುರಿಸುವ ಶಕ್ತಿ ಬರುವುದು. ನೀವು ಅಂದುಕೊಂಡಿರುವ ಮಹತ್ತರ ಕೆಲಸಗಳಿಗೆ ಅಡೆ ತಡೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಶನಿ ದೇವರು ನಿಮ್ಮನ್ನು ವಿವಿಧ ರೀತಿಗಳಿಂದ ಪರೀಕ್ಷಿಸುವರು. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಗುರು ಹಿರಿಯರ ಆಶೀರ್ವಾದ ಅಗತ್ಯವಿರುತ್ತದೆ..9845743807

ಅದೃಷ್ಟ ಸಂಖ್ಯೆ:2

ಮೀನ

ಮೀನ

ಹಲವು ವಿಧಗಳಿಂದ ಇಂದು ಮಹತ್ತರ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಯಾವುದೇ ಅಡೆತಡೆಗಳಿಲ್ಲದೆ ಮುಗಿಯುವವು. ಬಂಧುಗಳು, ಸ್ನೇಹಿತರು ನಿಮಗೆ ಸಹಾಯ ಮಾಡಲು ಮುಂದೆ ಬರುವರು.ಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮಗಿದೆ. ಸಕಾರಾತ್ಮಕವಾಗಿ ಮುಂದುವರೆಯಿರಿ. ಇದರಿಂದ ನಿಮ್ಮ ಕೀರ್ತಿ ಗೌರವ ಇಮ್ಮಡಿಯಾಗುವುದು. ನೀವು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಎಲ್ಲೆಡೆ ನಿಮ್ಮದೇ ಗುಣಗಾನ ಇರುತ್ತದೆ.

ಒಂದು ಕಡೆ ಮಾಡಿದ ಸಾಲವನ್ನು ತೀರಿಸಲು ಮತ್ತೊಂದು ಕಡೆ ಸಾಲ ಮಾಡಿದಂತೆ ಒಂದು ಸಮಸ್ಯೆಯಿಂದ ಬಿಡುಗಡೆ ಆಯಿತು ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಮನೆದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ. ಒಳಿತಾಗುವುದು..9845743807

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp

English summary

your daily horoscope-28-December-2018

Know what astrology and the planets have in store for you today. Choose your zodiac sign and read the details..
Story first published: Thursday, December 27, 2018, 15:20 [IST]
X
Desktop Bottom Promotion