Just In
Don't Miss
- Movies ಪುಟ್ಟಕ್ಕನ ಮನೆಗೆ ಕುಡಿದು ಬಂದ ಮುರಳಿ ಶಾಕ್; ಅಮ್ಮ ಅರೆಸ್ಟ್.. ಸಹನಾ ಮೇಲೆ ಗೂಬೆ ಕೂರಿಸಿದ ಪತಿ
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
23-10-2018: ಮಂಗಳವಾರದ ದಿನ ಭವಿಷ್ಯ
ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು.
ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ. ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಈ ದಿನದ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807
ಮೇಷ
ಭವಿಷ್ಯದ ಯೋಜನೆಗಳಿಗೆ ಒಳ್ಳೆಯ ಸಮಯ. ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ಇದರಿಂದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಕೌಟುಂಬಿಕವಾಗಿ ನೆಮ್ಮದಿಯ ದಿನ. ನಿಮ್ಮ ಕಾರ್ಯಗಳಲ್ಲಿ ತಾಳ್ಮೆ ವಹಿಸಿ. ಅವಸರದಿಂದ ಕಾರ್ಯ ಸಿದ್ಧಿಸುವುದಿಲ್ಲ. ಶುಭವಾರ್ತೆ ಕೇಳುವಿರಿ. ಕೌಟುಂಬಿಕವಾಗಿ ಉತ್ತಮ ದಿನ. ಆರ್ಥಿಕ ಸ್ಥಿತಿ ತೃಪ್ತಿಕರವಾಗಿರುವುದು.ನಿಮಗೆ ಮಾನಸಿಕ ನಿರಾಳತೆಯ ದಿನ. ಹಿರಿಯರ ಭೇಟಿಯಿಂದ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಆರೋಗ್ಯದ ಕಡೆ ಎಂದಿನಂತೆ ಗಮನ ಹರಿಸುವುದು ಒಳ್ಳೆಯದು. ಈಶ್ವರ ಆರಾಧನೆ ಮಾಡುವುದು ಒಳಿತು. ಅದೃಷ್ಟ ಸಂಖ್ಯೆ:1
ವೃಷಭ
ಹೊಸ ಸಂಬಂಧ ಏರ್ಪಡಲಿದ್ದು ಅದು ಪ್ರಮುಖ ಪಾತ್ರ ವಹಿಸಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿ.ಮನಸ್ಸಿನ ತಾಕಲಾಟದಲ್ಲಿ ಗೊಂದಲವಾಗುವ ಸಾಧ್ಯತೆ ಇದೆ. ದೈವಕಾರ್ಯಗಳು ನೆಮ್ಮದಿ ನೀಡುವವು. ಹಣಕಾಸಿನ ಪರಿಸ್ಥಿತಿ ಸಂಜೆ ವೇಳೆಗೆ ಅನುಕೂಲವಾಗುವುದು. ಕುಟುಂಬ ಸದಸ್ಯರೊಡನೆ ಹೊರಸಂಚಾರ ಮಾಡುವಿರಿ. ಕೆಲವರು ಮಂಕು ಕವಿದಂತೆ ಯಾವುದೂ ಕೆಲಸ ಮಾಡಲು ಇಷ್ಟ ಇಲ್ಲದೆ ಕಾಲ ಕಳೆಯುವಿರಿ. ಕೆಲವರು ಅಶುಭ ವಾರ್ತೆ ಕೇಳಲಿದ್ದೀರಿ. ಸಂಜೆ ವೇಳೆಗೆ ಎಲ್ಲಾ ತಪ್ಪು ಕಲ್ಪನೆಗಳು ಕರಗಿ ಹೋಗುವವು.ಅದೃಷ್ಟ ಸಂಖ್ಯೆ:2
ಮಿಥುನ
ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸುವುದು ಒಳ್ಳೆಯದಲ್ಲ. ನಿಮಗೆ ಹಿತವೆನಿಸುವ ಕಾರ್ಯ ಕೈಗೆತ್ತಿಕೊಳ್ಳಿ. ಇಲ್ಲದಿದ್ದರೆ ವಿನಾಕಾರಣ ಅಪವಾದಗಳು ನಿಮ್ಮ ಬೆನ್ನತ್ತಿ ಬರುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಕೆಲವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನವಿರಲಿ.ಆರೋಗ್ಯದಲ್ಲಿ ಅಲ್ಪ ಕಿರಿಕಿರಿ ಅನುಭವಿಸುವಿರಿ. ಸ್ನೇಹಿತರು, ಬಂಧುಗಳು ನಿಮಗೆ ಸರಿಯಾದ ಸಮಯಕ್ಕೆ ಸಹಕಾರ ನೀಡುವುದಿಲ್ಲ. ಅನಾಥೋ ದೇವ ರಕ್ಷ ಕ ಎಂಬಂತೆ ಭಗವಂತನ ಸಹಾಯ ನಿಮಗಿದೆ. ಅದೃಷ್ಟ ಸಂಖ್ಯೆ:2
ಕಟಕ
ಗಟ್ಟಿ ಮನೋಭಾವ ಬೆಳೆಸಿಕೊಳ್ಳಿ. ಮನೋರಂಜನೆಗಾಗಿ ಯೋಚಿಸುವ ಸಮಯವಿದು. ಹಣ ಹೂಡಿಕೆ ವಿಷಯದಲ್ಲಿ ಲಾಭವಾಗಲಿದೆ. ಗುರು, ಹಿರಿಯರ ಆಶೀರ್ವಾದ ಪಡೆಯಿರಿ. ಕಡಲೆಕಾಳು ದಾನ ಮಾಡಿ.
ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ. ಕುಟುಂಬದ ಜನರೊಡನೆ ಮಾತುಕತೆ ಫಲಪ್ರದವಾಗುವುದು. ಆರೋಗ್ಯ ಉತ್ತಮವಾಗಿರುವುದು. ದೂರ ಪ್ರಯಾಣದಲ್ಲಿ ಸಫಲತೆ ಇದೆ. ದೇವಿ ಮಂದಿರಕ್ಕೆ ಭೇಟಿ ನೀಡುವಿರಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಶ್ರಮಕ್ಕೆ ತಕ್ಕ ದುಡಿಮೆ ಇದೆ. ಮಕ್ಕಳು ವಿಧೇಯತೆ ಪ್ರದರ್ಶಿಸುವರು. ಅದೃಷ್ಟ ಸಂಖ್ಯೆ:6
ಸಿಂಹ
ಧನಾಗಮನದಲ್ಲಿ ಏರುಪೇರು ಮತ್ತು ವ್ಯಾಪಾರ, ವ್ಯವಹಾರದಲ್ಲಿ ಧನ ನಷ್ಟವಾಗುವ ಸಂಭವವಿದೆ. ಅನಪೇಕ್ಷಿತ ವಿಚಾರಗಳನ್ನು ಬದಿಗೆ ಸರಿಸಿ ಕಾರ್ಯೋನ್ಮುಖರಾದರೆ ಯಶಸ್ಸು ನಿಮ್ಮದಾಗುವುದು. ಆರ್ಥಿಕ ವಲಯದಲ್ಲೂ ಉತ್ತಮ ಸಂಚಯವಾಗುವುದು. ನಿಮ್ಮ ಹಿತಚಿಂತಕರನ್ನು ಅಥವಾ ಸ್ನೇಹಿತರನ್ನು ಬೆಂಬಲಿಸುವಿರಿ. ಅದರಿಂದ ನಿಮಗೆ ಮುಂದಿನ ದಿನಗಳಲ್ಲಿ ಒಳಿತಾಗುವುದು. ಮಗನ ಸಲುವಾಗಿ ನಡೆಸಿದ ಪೂಜೆಗಳು ಫಲ ಕೊಡುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ತೃಪ್ತಿಕರವಾಗಿರುವುದು. ನಿಮ್ಮ ಇಚ್ಛೆಗೆ ವಿರುದ್ಧವಾದ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸು ವ್ಯಾಕುಲತೆಯಿಂದ ತುಂಬಿಹೋಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಒಳಿತಾಗುವುದು. ಅದೃಷ್ಟ ಸಂಖ್ಯೆ:8
ಕನ್ಯಾ
ಕಚೇರಿ ಕೆಲಸಗಳನ್ನು ಆದಷ್ಟು ಬೇಗನೆ ಮುಗಿಸಿಕೊಳ್ಳುವುದು ಒಳ್ಳೆಯದು. ವಿನಾಕಾರಣ ಅಲೆದಾಟದಿಂದ ಅಧಿಕ ಖರ್ಚು ಮಾಡುವಿರಿ. ಕುಲದೇವತಾ ಪ್ರಾರ್ಥನೆ ಮಾಡುವುದು ಒಳ್ಳೆಯದು.ಮಾಡಲು ಬಹಳಷ್ಟು ಕೆಲಸಗಳಿವೆ. ಆದರೆ ಯಾವುದನ್ನು ಮೊದಲು ಮಾಡಬೇಕು ಎಂಬ ಗೊಂದಲ ನಿಮ್ಮದಾಗಲಿದೆ. ಸಂಗಾತಿಯ ದೂರವಾಣಿ ಕರೆ ಮನಸ್ಸಿಗೆ ಮುದ ನೀಡುವುದು. ಸಂಜೆ ವೇಳೆ ಸಿಹಿ ಸುದ್ದಿ ಕೇಳುವಿರಿ.ದೈನಂದಿನ ವಿಷಯಕ್ಕೆ ಹೆಚ್ಚಿನ ಸಮಯ ವ್ಯಯಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಅದೃಷ್ಟ ಸಂಖ್ಯೆ:3
ತುಲಾ
ಕೆಲಸದ ಒತ್ತಡ ಹಾಗೂ ಹೊಸ ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿಭಾಯಿಸಲು ಕಷ್ಟ ಎನಿಸುತ್ತದೆ. ಆದಷ್ಟು ಸಂಯಮದಿಂದ ಇದ್ದು ಕಾರ್ಯ ಪೂರೈಸಿಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಉನ್ನತ ಅಧಿಕಾರಿಗಳ ಭೇಟಿಯಿಂದ ಸಮಸ್ಯೆ ಇತ್ಯರ್ಥವಾಗುವುದು. ಎಲೆಕ್ಟ್ರಾನಿಕ್ಸ್ ವ್ಯಾಪಾರದಲ್ಲಿ ಲಾಭಾಂಶ ಅಧಿಕವಾಗುವುದು. ಕಟ್ಟಡ ಮೇಲುಸ್ತುವಾರರಿಗೆ ಆಳುಗಳ ಕೊರತೆ ಕಂಡುಬರುವುದು. ಪರ್ಯಾಯ ವ್ಯವಸ್ಥೆ ಇರಲಿ.
ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ. ಬದುಕಿಗೆ ಸರಿಯಾದ ತಿರುವು ಸಿಗಲಿದೆ. ಸಂಗಾತಿಯ ಸಹಕಾರ ಉತ್ತಮವಾಗಿರುವುದು. ಮಕ್ಕಳ ಆಟಪಾಠಗಳು ಮನಸ್ಸಿಗೆ ಮುದ ನೀಡುವವು.
ಅದೃಷ್ಟ ಸಂಖ್ಯೆ:5
ವೃಶ್ಚಿಕ
ಕಷ್ಟ, ನಷ್ಟ ತಾತ್ಕಾಲಿಕ. ಕೋಪಕ್ಕೆ ಕಡಿವಾಣ ಹಾಕಿ. ಕೌಟುಂಬಿಕ ಜೀವನದಲ್ಲಿ ನಡೆದ ಘಟನೆ ಮನಸ್ಸಿಗೆ ಬೇಸರ ಮಾಡುವುದು. ವಿವಾಹಕ್ಕೆ ಸಂಬಂಧಪಟ್ಟ ಮಾತುಕತೆಗಳು ಬೇಡ. ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಬೆಂಬಲ ದೊರೆಯುವುದಿಲ್ಲ. ಆದಾಗ್ಯೂ ಮನುಷ್ಯ ಪ್ರಯತ್ನಶೀಲನಾಗಬೇಕು. ಪ್ರಯತ್ನಶೀಲನಿಗೆ ಭಗವಂತ ಒಲಿಯುವನು. ಆರ್ಥಿಕ ಸ್ಥಿತಿ ಸುಭದ್ರವಾಗಿರುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ಮನೋಬಲ ಮತ್ತು ಆತ್ಮಸ್ಥೈರ್ಯದಿಂದ ಕೆಲಸ ಕಾರ್ಯಗಳು ಯಶಸ್ಸಿನತ್ತ ಸಾಗುವವು. ಪ್ರಯಾಣದಲ್ಲಿ ಲಕ್ಷ್ಮೀ ನರಸಿಂಹ ಸ್ತೋತ್ರ ಪಠಿಸಿ. ಆಹಾರ ದಾನ ಮಾಡಿ. ಅದೃಷ್ಟ ಸಂಖ್ಯೆ:6
ಧನಸ್ಸು
ನೂತನ ಯೋಜನೆಗಳಿಂದ ಬದುಕಿಗೆ ಹೊಸ ಆಯಾಮ ದೊರೆಯುವುದು. ಮನಸ್ಸು ನಿರಾಳವಾಗುವುದು. ಮಿತ್ರರ ಸಹಕಾರದಿಂದ ಕಾರ್ಯ ಸಿದ್ಧಿಸುವುದು. ಶುಭ ಕಾರ್ಯದಲ್ಲಿ ಭಾಗವಹಿಸುವಿರಿ. ಕೆಲವು ಘಟನೆಗಳು ನಿಮ್ಮ ಆಸಕ್ತಿ ಹೆಚ್ಚಿಸಬಹುದು. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಗೆಳೆಯರು ಒತ್ತಾಯಿಸುವರು. ನೀವು ಬಯಸಿದ್ದು ಅದೇ ಅಲ್ಲವೆ? ಧೈರ್ಯವಾಗಿ ಚುನಾವಣೆಯಲ್ಲಿ ಸ್ಫರ್ಧಿಸಿ. ಉದ್ಯೋಗಿಗಳಿಗೆ ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ಬಹುದಿನದ ಆಕಾಂಕ್ಷೆ ಈಡೇರುವುದು. ಗುರುವಿನ ಕೃಪೆ ಹೊಂದುವುದು ಒಳ್ಳೆಯದು. ಆಂಜನೇಯ ಸ್ತೋತ್ರ ಪಠಿಸಿ. ಅದೃಷ್ಟ ಸಂಖ್ಯೆ:9
ಮಕರ
ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವವು. ಮೇಲಧಿಕಾರಿ ಅಥವಾ ತಪಾಸಣಾ ಅಧಿಕಾರಿಗಳ ಸಹಕಾರ ದೊರೆಯುವುದು. ಪ್ರಮುಖ ಕಾರ್ಯಗಳು ಕೈಗೂಡುವವು. ಪ್ರತಿದಿನದ ಚುನಾವಣೆ ಘೋಷಣೆಗಳು ನಿಮ್ಮನ್ನು ಹುರಿದುಂಬಿಸುವವು. ಚುನಾವಣೆಯಲ್ಲಿ ಸ್ಪರ್ಧಿಸಿದಲ್ಲಿ ದೈವಕೃಪೆಯಿಂದ ಜಯಶೀಲರಾಗುವಿರಿ. ಕೆಲವರಿಗೆ ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಲಭಿಸುವುದು.ಸೂಕ್ತ ಸಮಯಕ್ಕೆ ತೆಗೆದುಕೊಂಡ ನಿರ್ಣಯಗಳು ನಿಮಗೆ ಯಶಸ್ಸು ಮತ್ತು ಕೀರ್ತಿ ತಂದುಕೊಡುವವು. ಋುಣಾತ್ಮಕವಾಗಿ ಚಿಂತಿಸದೆ ಧನಾತ್ಮಕವಾಗಿ ಚಿಂತಿಸಿ. ಆರೋಗ್ಯ ಉತ್ತಮವಾಗಿರುವುದು. ಅದೃಷ್ಟ ಸಂಖ್ಯೆ:3
ಕುಂಭ
ಒಳ್ಳೆಯ ಸುದ್ದಿಗಳು ನಿಮಗೆ ಸಂತಸ ನೀಡುವವು. ನಿಮ್ಮ ಉನ್ನತಾಧಿಕಾರಿ ಮತ್ತು ಅಧಿಕಾರಿ ವರ್ಗದವರಿಂದ ಬೆಂಬಲ ವ್ಯಕ್ತವಾಗುವುದು. ಅಧಿಕ ತಿರುಗಾಟದಿಂದ ದೇಹದಲ್ಲಿ ಆಲಸ್ಯ ತೋರುವುದು. ಸ್ತ್ರೀ ಸಂಕುಲ ಅಥವಾ ದೈವಿ ಶಕ್ತಿ ನಿಮ್ಮನ್ನು ರಕ್ಷಿಸಲಿದೆ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಮನೆಯಿಂದ ಹೊರಡುವಾಗ ಹಿರಿಯರಿಗೆ ನಮಸ್ಕರಿಸಿ ಹೊರಡಿ. ಆರ್ಥಿಕ ಸ್ಥಿತಿಯಲ್ಲೇನೂ ಬದಲಾವಣೆ ಕಂಡುಬರುವುದಿಲ್ಲ. ವಿದ್ಯೆ ಮತ್ತು ತಾಂತ್ರಿಕ ವಿಷಯದಲ್ಲಿ ಏಕಾಗ್ರತೆ ವಹಿಸುವಿರಿ. ವಾಣಿಜ್ಯ ರಂಗದವರಿಗೆ ಉತ್ತಮ ಕಾಲ. ಆರ್ಥಿಕ ಅಭಿವೃದ್ಧಿ ಮತ್ತು ಆರೋಗ್ಯ ಉತ್ತಮವಾಗಿರುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ. ಅದೃಷ್ಟ ಸಂಖ್ಯೆ:2
ಮೀನ
ಕಾರ್ಯಸ್ಥಳದಲ್ಲಿ ತಾಳ್ಮೆಯಿಂದಿರಿ. ನಿಮ್ಮ ನಿಷ್ಠೆ ಮತ್ತು ಪ್ರಯತ್ನ ಒಳ್ಳೆಯ ಫಲಿತಾಂಶ ನೀಡುವುದು. ಗುರು ಸ್ತೋತ್ರ ಪಠಿಸಿ. ಕುಟುಂಬ ಸದಸ್ಯರ ಒಮ್ಮತದ ಅಭಿಪ್ರಾಯ ಪಡೆಯುವಿರಿ.
ಪರರ ಚಿಂತೆ ಮಾಡಿ ಪಡಿಪಾಟಲು ಪಡಬೇಡಿ. ನಿಮ್ಮ ಗ್ರಹಗತಿಗಳು ಉತ್ತಮ ಸ್ಥಿತಿಯಲ್ಲಿ ಸಂಚರಿಸುತ್ತಿರುವುದರಿಂದ ಊರ ಉಸಾಬರಿ ನಿಮಗೇಕೆ? ನಿಮ್ಮ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ. ನೆರೆಹೊರೆಯವರೊಂದಿಗೆ ಸೌಹಾರ್ದ ವಾತಾವರಣ ಇರುವುದು. ಆರೋಗ ಉತ್ತಮವಾಗಿರುವುದು. ನಿಮ್ಮ ವಿಚಾರಗಳನ್ನು ಗೌಪ್ಯವಾಗಿ ಇಡುವುದು ಒಳ್ಳೆಯದು. ಹಣಕಾಸು ಸ್ಥಿತಿ ಉತ್ತಮವಾಗಿರುವುದು. ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp