For Quick Alerts
ALLOW NOTIFICATIONS  
For Daily Alerts

22-11-2018: ಗುರುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಗುರುವಾರದ ದಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇವರು ಬ್ರಾಹ್ಮಣ ಮಾಧ್ವಸಂನ್ಯಾಸಿಗಳಲ್ಲಿ ಪ್ರಮುಖರು. ಇವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

horoscope

ಇವರ ಮೂಲ ಬೃಂದಾವನವು (ಸಶರೀರ) ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ. ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807.

ಮೇಷ

ಮೇಷ

ಗುರುವಿನ ಸ್ಥಾನ ಬದಲಾವಣೆಯು ನಿಮ್ಮ ವೃತ್ತಿಯಲ್ಲೂ ಪ್ರಭಾವ ಬೀರುತ್ತಲಿದೆ. ಬದಲಾದ ವಾತಾವರಣದಲ್ಲಿ ಕೆಲಸ ಮಾಡಲು ತಯಾರಿ ನಡೆಸಿರಿ ಮತ್ತು ನೂತನ ಕಾರ್ಯ ವಿಧಾನಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕಾಗುತ್ತದೆ.ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಇದೆ. ನಿಮ್ಮ ಅಂತಃಶಕ್ತಿಯನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳಿ. ಮೇಲಧಿಕಾರಿಗಳಿಂದ ನಿಮಗೆ ಹೆಚ್ಚಿನ ಪ್ರಶಂಸೆ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಧನಕಾರಕ ಗುರುವು ರಿಪು ಸಂಚಾರದಲ್ಲಿ ಸಂಚರಿಸುವುದರಿಂದ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಧನನಾಶಕ್ಕೆ ಕಾರಣವಾಗುವ ಯಾವುದೇ ಕಾರ್ಯಗಳನ್ನು ಹಮ್ಮಿಕೊಳ್ಳದಿರುವುದು ಕ್ಷೇಮ.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ನಿಮ್ಮದು ಚಾಣಾಕ್ಷ ತನದ ಕಾರ್ಯ ವಿಧಾನವಾಗಿದೆ. ಇದಕ್ಕೆ ಪೂರಕವಾಗಿ ಗುರು ಹಿರಿಯರ ಆಶೀರ್ವಾದವೂ ಇರುವುದರಿಂದ, ಹಿಡಿದ ಕೆಲಸವನ್ನು ಅರ್ಧಕ್ಕೆ ಕೈಬಿಡಿದಿರಿ. ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ನಾಲಿಗೆ ಒಳ್ಳೆಯದಿದ್ದರೆ ನಾಡೇ ಒಳ್ಳೆಯದು ಎನ್ನುವಂತೆ ನೀವು ಆಡುವ ಮಾತು ಪರರನ್ನು ನೋಯಿಸದಿರಲಿ. ಶಾಂತವಾದ ಮಾತುಗಳಿಂದ ಕೆಲಸಗಾರರ ಮನಸ್ಸನ್ನು ಗೆಲ್ಲಿ. ಇದರಿಂದ ನಿಮಗೆ ಒಳಿತಾಗುವುದು. ಪರಾಕ್ರಮ ಶಾಲಿಗೆ ಭಗವಂತ ಸಹಾಯಹಸ್ತ ಚಾಚುವನು. ಅಂತೆಯೇ ಕೆಲಸ ಕಾರ್ಯಗಳನ್ನು ಅರ್ಧ ಮನಸ್ಸಿನಿಂದ ಮಾಡದಿರಿ. ಆತ್ಮಬಲದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಗುರುವಿನ ಒಲುಮೆ ಇರುವಾಗ ಯಾರು ಮುನಿದರೇನು? ನಿಮ್ಮ ಮೇಲೆ ಎಷ್ಟೇ ಭಾರ ಬಂದರೂ ಅದನ್ನು ನಿಭಾಯಿಸಿ ವರ್ತಮಾನವನ್ನು ನಿಯಂತ್ರಿಸಬಲ್ಲಿರಿ. ಇದರಿಂದ ಕುಟುಂಬ ಸದಸ್ಯರ ಮೆಚ್ಚುಗೆಗೆ ಪಾತ್ರರಾಗುವಿರಿ.ಅನಗತ್ಯ ಖರ್ಚು ವೆಚ್ಚಗಳು ಜಾಸ್ತಿ ಆಗುವ ಸಂಭವವಿದೆ. ಆದಷ್ಟು ಮಿತವ್ಯಯದ ಕಡೆ ಗಮನ ಹರಿಸಿ. ಮನೆಯಿಂದ ಹೊರಗೆ ಹೊರಡುವಾಗ ಹಿರಿಯರ ಅಪ್ಪಣೆ ಪಡೆದು ಹೊರಡಿ.ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ ಈದಿನದ ಪರಿಸ್ಥಿತಿ. ನೀವು ಮಾಡದೇ ಇರುವ ಕೆಲಸದ ಬಗ್ಗೆ ಅಪವಾದಗಳನ್ನು ಎದುರಿಸಬೇಕಾಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ಅದೃಷ್ಟ ಸಂಖ್ಯೆ:4

ಕಟಕ

ಕಟಕ

ದಿನದಿಂದ ದಿನಕ್ಕೆ ನೀವು ನಡೆಯುವ ಹಾದಿ ಕಠಿಣವಾಗಿದೆ. ಆದರೆ ಆ ಹಾದಿಯಲ್ಲಿಯೇ ಸಾಗುವುದು ಅನಿವಾರ್ಯವಾಗಿರುವಾಗ ರಕ್ಷಾ ಕವಚಗಳನ್ನು ಧರಿಸಿಕೊಂಡಂತೆ ಮನದಲ್ಲಿ ಭಗವಂತನ ನಾಮಸ್ಮರಣೆಯಿಂದ ರಕ್ಷ ಣೆ ಪಡೆಯಿರಿ.ನಿಮ್ಮ ಹೆಚ್ಚಿನ ಶಕ್ತಿಯನ್ನು ಸಕಾರಾತ್ಮಕವಾದ ರೀತಿಯಲ್ಲಿ ಪ್ರದರ್ಶಿಸಲು ಅತ್ಯಂತ ಸೂಕ್ತ ದಿನವಾಗಿದೆ. ನಿಮ್ಮ ಮೇಲೆ ನೀವು ವಿಶ್ವಾಸ ಕಳೆದುಕೊಳ್ಳದಿರಿ. ಎಲ್ಲವೂ ಒಳಿತಾಗುವುದು. ಗುರುವಿನ ರಕ್ಷ ಣೆ ಮಾಡಿ.

ಸೋಲಿಗಾಗಿ ಚಿಂತಿಸದೆ ಹೊಸದಾದ ಒಂದು ಕಾರ್ಯಕ್ರಮ ರೂಪಿಸಿಕೊಳ್ಳುವಿರಿ. ಇದರಿಂದ ನಿಮಗೆ ಒಳಿತಾಗುವುದು ಮತ್ತು ಮನೋ ಅಭಿಲಾಷೆಯು ಪೂರ್ಣಗೊಳ್ಳುವವು.

ಅದೃಷ್ಟ ಸಂಖ್ಯೆ:6

ಸಿಂಹ

ಸಿಂಹ

ನಿಮ್ಮ ನಂಬಿಕೆ ಹಾಗೂ ಸ್ಥೈರ್ಯ ಧೈರ್ಯಗಳು ನಿಮ್ಮ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತವೆ. ಹಾಗಾಗಿ ನೀವು ಸುಲಭವಾಗಿ ಇಚ್ಛಿತ ಗುರಿಯನ್ನು ಮುಟ್ಟಬಲ್ಲಿರಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.ನಿಮಗಾಗಿ ಬಹು ಸೂಕ್ತ ಸಮಯದ ಪದೋನ್ನತಿಯೊಂದು ಕಾದಿದೆ. ನಿರಾಳ ಆಗಿರಿ. ಮನಸ್ಸಿನ ತುಮುಲಗಳೆಲ್ಲ ತಮ್ಮಷ್ಟಕ್ಕೆ ಕಡಿಮೆ ಆಗುವುದು. ಜಗತ್ತು ಸುಂದರವಾಗಿ ಕಾಣಿಸಿಕೊಳ್ಳುವುದು.ಗುರುಕೃಪೆಯು ತಪ್ಪುತ್ತಿರುವ ಈ ಸಂದರ್ಭದಲ್ಲಿ ಬಹು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕಾಗುವುದು. ಅನಾವಶ್ಯಕ ವಾದ ವಿವಾದಗಳಲ್ಲಿ ಸಿಲುಕದಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ಜನರಿಗೆ ಸಹಾಯ ಸಲ್ಲಿಸುವ ನಿಮ್ಮ ಮನೋಭಾವದಿಂದಾಗಿ ಎಲ್ಲಾ ರೀತಿಯ ಶ್ಲಾಘನೆ ಪಡೆಯುವಿರಿ. ಗುರುವಿನ ಅನುಗ್ರಹ ಆಗುತ್ತಿರುವುದರಿಂದ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳುವುದು. ನಿಮ್ಮ ಬುದ್ಧಿಬಲ ಶಕ್ತಿಯುತವಾದದ್ದು. ಸಂಪನ್ನವಾದ ನಿಮ್ಮ ಊಹೆಗಳು ಕಾರ್ಯರೂಪಕ್ಕೆ ಯಶಸ್ಸನ್ನು ನೀಡುವವು. ಮನೆಯ ಮಡದಿ ಮಕ್ಕಳ ಜೊತೆ ಸ್ವಲ್ಪ ಕಾಲ ಕಳೆಯುವುದು ಒಳ್ಳೆಯದು.ಅರಿತು ನಡೆಯುವ ಗೆಳೆಯರ ಗುಂಪು ನಿಮ್ಮ ಸಹಾಯಕ್ಕೆ ಬಂದು ಅಭಿವೃದ್ಧಿಗೆ ದಾರಿ ಮಾಡಿಕೊಡುವರು. ನೂತನ ಕಾರ್ಯಯೋಜನೆಗಳಿಗೆ ಬೆಂಬಲ ನೀಡುವರು. ಹಾಗಾಗಿ ನೀವು ವೃತ್ತಿರಂಗದಲ್ಲಿ ಬೆಳೆಯಲು ಸಹಕಾರಿ ಆಗುವುದು.

ಅದೃಷ್ಟ ಸಂಖ್ಯೆ:8

ತುಲಾ

ತುಲಾ

ಹೊಸದೇ ಆದ ಜವಾಬ್ದಾರಿಯೊಂದು ನಿಮ್ಮ ಹೆಗಲೇರುವ ಸಾಧ್ಯತೆ ಅಧಿಕವಾಗಿರುವುದು. ಸಮಾಜದಲ್ಲಿ ಪ್ರಭಾವಿ ಜನರ ಸಂಪರ್ಕ ಬೆಳೆಯುವುದರಿಂದ ನಿಮ್ಮ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಗತಿ ಕಂಡು ಬರುವುದು.ಹಿರಿಯರನ್ನು ದೂರ ಇಡಬೇಡಿರಿ. ಮತ್ತು ಅವರ ದಿನಚರ್ಯೆಗಳನ್ನು ದೂಷಿಸಬೇಡಿರಿ. ಅವರ ಸೇವೆಯನ್ನು ಮಾಡುವ ಮೂಲಕ ಮಹತ್ತರವಾದ ಗೆಲುವನ್ನು ಸಾಧಿಸಲು ಅನುಕೂಲವಾಗುವುದು.ಅಪತ್ ಕಾಲದಲ್ಲಿ ಆದವನೇ ನೆಂಟ ಎಂಬಂತೆ ನಿಮ್ಮ ಕಷ್ಟದ ದಿನಗಳಲ್ಲಿ ನಿಮ್ಮ ಮಕ್ಕಳು ಬಂಧು ಬಾಂಧವರು ಸಹಾಯ ಹಸ್ತ ನೀಡುವುದರಿಂದ ಜೀವನದಲ್ಲಿ ಒಂದು ಹೊಸ ಬೆಳಕು ಮೂಡುವುದು. ಜೀವನ ನಡೆಸಲು ಧೈರ್ಯ ಬರುವುದು.

ಅದೃಷ್ಟ ಸಂಖ್ಯೆ:5

ವೃಶ್ಚಿಕ

ವೃಶ್ಚಿಕ

ಮೇಲಾಧಿಕಾರಿಯ ಎದುರು, ವಿಷಯ ಗೊತ್ತಿದ್ದರೂ ಮತ್ತು ಮಾಡುವ ಕೆಲಸದಲ್ಲಿ ಅವರ ಸಲಹೆಯನ್ನು ಸ್ವೀಕರಿಸಿ ಮುಂದಡಿ ಇಟ್ಟಲ್ಲಿ ಅವರಿಗೂ ಖುಷಿ ಆಗುವುದು. ಇಲ್ಲವೆ ನಿಮ್ಮ ಬುದ್ಧಿಚಾತುರ್ಯಕ್ಕೆ ಅಸೂಯೆ ಪಡುವರು. ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಕ್ಷುಲ್ಲಕರನ್ನು ದೂರವಿಡುವುದೇ ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ನಿಮ್ಮ ಮಾನಹಾನಿಯನ್ನು ಮಾಡುವರು. ಗುರುವಿನ ಸ್ತೋತ್ರವನ್ನು ಮಾಡಿರಿ. ನಿಮಗೆ ನೀವೇ ಗುರುವಾಗಿ ನಿಮ್ಮ ಮಿತಿಯ ಬಗ್ಗೆ ತಿಳಿಯಿರಿ. ಜನರು ನಿಮ್ಮನ್ನು ಪ್ರಶಂಸಿಸುವಂತಹ ಗುರುವಿನ ಕೃಪೆಗೆ ಪಾತ್ರರಾಗಿರುವುದರಿಂದ ಮುಂದಿನ ದಿನಗಳು ಸಹ ಉತ್ತಮವಾಗಿರುತ್ತದೆ.

ಅದೃಷ್ಟ ಸಂಖ್ಯೆ:5

ಧನುಸ್ಸು

ಧನುಸ್ಸು

ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವವು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮ ಸಹಾಯಕ್ಕೆ ನಿಮ್ಮೊಂದಿಗೆ ಸ್ನೇಹಿತರು ಹೆಜ್ಜೆ ಹಾಕುವರು. ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯವು ಪೂರ್ಣಗೊಳ್ಳುವುದು. ಮಕ್ಕಳು ವಿದ್ಯೆಯಲ್ಲಿ ಪ್ರಗತಿ ತೋರಿ ನಿಮಗೆ ಹರ್ಷವನ್ನುಂಟು ಮಾಡುವರು. ಹಿರಿಯರ ಆಶೀರ್ವಾದ ದೊರೆಯುವುದು.ಬಹು ನಿರೀಕ್ಷಿತವಾದ ದೂರ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುವುದು. ಆ ಮೂಲಕ ನಿಮ್ಮ ಬಹುದಿನದ ಕನಸು ನನಸಾಗುವುದು. ಹಣಕಾಸು ಅದಕ್ಕೆ ಪೂರಕವಾಗಿ ಲಭ್ಯವಾಗುವುದರಿಂದ ಹೆಚ್ಚು ಚಿಂತೆ ಪಡಬೇಕಾಗಿಲ್ಲ.

ಅದೃಷ್ಟ ಸಂಖ್ಯೆ:9

ಮಕರ

ಮಕರ

ಪರೋಪಕಾರಾರ್ಥಂ ಇದಂ ಶರೀರಂ ಎಂದು ಭಾವಿಸಿರುವ ನೀವು ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ಈ ನಿಮ್ಮ ಮನೋಭಾವನೆಯು ಸರ್ವ ಜನರಿಂದ ಮೆಚ್ಚುಗೆಗೆ ಪಾತ್ರರಾಗುವುದು. ಆದರೆ ಮಾತಿನಲ್ಲಿ ನಯ ವಿನಯ ಇರಲಿ. ದೈಹಿಕ ಬಲದ ಜತೆಗೆ ಬುದ್ಧಿಯ ತೇಜಸ್ಸು ಹರಿತವಾದ್ದರಿಂದ ನಿಮ್ಮ ಊಹೆ ತರ್ಕಗಳು ಸರಿ ಎನಿಸುವುದು. ಇದರಿಂದ ನಿಮ್ಮ ಆಪ್ತರಿಂದ ಮೆಚ್ಚುಗೆ ಪಡೆಯುವಿರಿ. ಆದರೆ ಕುಟುಂಬದ ಸದಸ್ಯರಿಂದ ಮೂದಲಿಕೆಗೆ ಗುರಿ ಆಗುವಿರಿ. ಎಷ್ಟೇ ಬುದ್ಧಿಶಾಲಿಯಾದರೂ ಎಲ್ಲಾ ವಿಷಯಗಳಲ್ಲೂ ಅಥವಾ ಎಲ್ಲಾ ರಂಗದಲ್ಲೂ ನೀವು ಸರ್ವಜ್ಞರಲ್ಲ. ಹಾಗಾಗಿ ಅನ್ಯರ ಅನುಭವ ಮತ್ತು ಹಿತವಚನಗಳನ್ನು ಆಲಿಸಿದಲ್ಲಿ ನಿಮಗೆ ಒಳಿತಾಗುವುದು. ಜನರಲ್ಲಿ ನಿಮ್ಮ ಬಗ್ಗೆ ಗೌರವವಿರುತ್ತದೆ.

ಅದೃಷ್ಟ ಸಂಖ್ಯೆ:8

ಕುಂಭ

ಕುಂಭ

ಹೊಸ ಜನರ ಪರಿಚಯದೊಂದಿಗೆ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆತು ಅದರಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವುದು.ನಿಮ್ಮ ಸಮಸ್ಯೆಗಳು ಸಾಕಷ್ಟು ಇರುವಾಗ ಪರರ ಸಂಕಷ್ಟಗಳಿಗೆ ಮರುಗಿ ಸಹಾಯ ಮಾಡಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

ನಿಮ್ಮ ಮಕ್ಕಳು ನಿಮಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಅದರ ಹಿಂದೆ ಯಾವುದೋ ಮಹತ್ತರ ಬಯಕೆ ಈಡೇರಿಸಿಕೊಳ್ಳುವ ಇರಾದೆ ಇರುತ್ತದೆ. ಈ ಬಗ್ಗೆ ಸೂಕ್ಷ್ಮ ವಾಗಿ ಗಮನಿಸಿ ಅವರಿಗೆ ಸಹಾಯ ಮಾಡಿ. ಅವರೂ ಖುಷಿ ಪಡುವರು.

ಅದೃಷ್ಟ ಸಂಖ್ಯೆ:2

ಮೀನ

ಮೀನ

ಸರಿದಾರಿಯಲ್ಲಿದ್ದರೂ ಆಪ್ತರಿಂದ ಸಲಹೆ ಸೂಚನೆ ಪಡೆಯಿರಿ. ನಿಮ್ಮ ಆಂತರಿಕ ತುಮುಲಗಳ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರನ್ನು ಪ್ರಾರ್ಥಿಸಿ. ನಿರುದ್ಯೋಗಿಗಳಿಗೆ ಸಣ್ಣಪುಟ್ಟ ನೌಕರಿ ದೊರೆಯುವ ಸಂಭವವಿರುತ್ತದೆ.ಕ್ಷುಲ್ಲಕರನ್ನು ನೀವು ದೂರ ಇಡುವುದೇ ಒಳ್ಳೆಯದು. ನಿಮ್ಮ ಪ್ರಗತಿಯನ್ನು ಕಂಡು ಕರಬುವ ವ್ಯಕ್ತಿಗಳು ನಿಮ್ಮ ಸುತ್ತಮುತ್ತಲಿನಲ್ಲಿಯೇ ಇರುತ್ತಾರೆ. ಅವರನ್ನು ಉದಾಸೀನ ಮಾಡುವುದೇ ಲೇಸು. ಈ ಹಿಂದೆ ಬರೆದ ಪರೀಕ್ಷೆ ಫಲಿತಾಂಶವು ಶೀಘ್ರದಲ್ಲಿ ಬರುವುದು. ನಿಮಗೆ ನೀವೇ ಗುರುವಾಗಿ ನಿಮ್ಮ ಇತಿಮಿತಿ ಬಗ್ಗೆ ತಿಳಿಯಿರಿ. ಇದರಿಂದ ಸಮಾಜದಲ್ಲಿ ನಿಮಗೆ ಗೌರವ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ಖರ್ಚಿನ ಬಗ್ಗೆ ಹಿಡಿತವಿರಲಿ.

ಅದೃಷ್ಟ ಸಂಖ್ಯೆ:1

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp

English summary

your daily horoscope-22-November-2018

Know what astrology and the planets have in store for you today. Choose your zodiac sign and read the details...
Story first published: Wednesday, November 21, 2018, 16:28 [IST]
X
Desktop Bottom Promotion