Just In
- 1 hr ago ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- 2 hrs ago ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
- 2 hrs ago ಪಳ ಪಳ ಹೊಳೆಯುವ ಕೆಂಪು ನಾಗರ ನೋಡಿದ್ದೀರಾ..? ವೈರಲ್ ಆಗ್ತಿದೆ ವಿಡಿಯೋ..!
- 5 hrs ago ದೇಹದಲ್ಲಿ ಈ 7 ಭಾಗದಲ್ಲಿ ಊತ ಉಂಟಾದರೆ ಅದು ಫ್ಯಾಟಿ ಲಿವರ್ನ ಲಕ್ಷಣವಾಗಿದೆ, ನಿರ್ಲಕ್ಷ್ಯ ಮಾಡಬೇಡಿ
Don't Miss
- Finance ಬ್ಯಾಂಕುಗಳ ಮೇಲೆ ನಡೆಯಲಿದ್ಯಾ ಸೈಬರ್ ಅಟ್ಯಾಕ್! ಎಚ್ಚರ ಎಚ್ಚರ ಎಂದ ಆರ್ಬಿಐ
- News ಆಜಾನ್ ಕೂಗುತ್ತಿದ್ದಾಗ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ: ವಿಡಿಯೋ ಹಂಚಿಕೊಂಡು ವಿಜಯೇಂದ್ರ ಕಿಡಿ
- Automobiles BAJAJ CNG ಬೈಕ್ ಚಿತ್ರಗಳು ಸೋರಿಕೆ: ಬೆಲೆ ಕೇಳಿದರೆ ಶಾಕ್ ಆಗುವುದಂತೂ ಪಕ್ಕಾ!
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Technology Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
- Movies ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಶಿಚಕ್ರದ ಆಧಾರದ ಮೇಲೆ ನಿಮ್ಮ ಮಹಾನ್ ಶಕ್ತಿ ಏನು?
ನಾವು ಜೀವನ ನಡೆಸಲು ನಮ್ಮಲ್ಲಿರುವ ಸಾಮಥ್ರ್ಯವೇ ಸಾಕಾಗುತ್ತದೆ. ಎಂದು ನಾವು ಇತರರಲ್ಲಿ ಇರುವಂತಹ ಸಾಮರ್ಥ್ಯವನ್ನು ನೋಡಿ ಕೊರಗಲು ಪ್ರಾರಂಭಿಸುತ್ತೇವೋ ಆಗ ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತೇವೆ. ಅಂತೆಯೇ ನಾವೆಷ್ಟೇ ಅನುಕೂಲಕರ ಸ್ಥಿತಿಯಲ್ಲಿದ್ದರೂ ಜೀವನವು ದುಃಖದಿಂದ ಕೂಡಿರುತ್ತದೆ. ಜೊತೆಗೆ ಒಂದು ಬಗೆಯ ಕೊರಗು ಮನಸ್ಸಿನ ನೆಮ್ಮದಿಯನ್ನು ಕೆಡಿಸುತ್ತಲೇ ಇರುತ್ತದೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಭಾವನೆಗಳು, ಸಾಮಥ್ರ್ಯ ಹಾಗೂ ದೌರ್ಬಲ್ಯ ಎನ್ನುವುದು ಇದ್ದೇ ಇರುತ್ತವೆ. ಅವು ಒಬ್ಬರಿಗಿಂತ ಬೊಬ್ಬರಲ್ಲಿ ವಿಭಿನ್ನವಾಗಿರುವುದು. ವ್ಯಕ್ತಿಯಲ್ಲಿರುವ ವಿಶೇಷ ಸಾಮಥ್ರ್ಯವು ಅದೃಷ್ಟವನ್ನು ತಂದುಕೊಟ್ಟರೆ, ದೌರ್ಬಲ್ಯವು ಜೀವನದಲ್ಲಿ ತಿದ್ದಿ-ತೀಡಿ ನಡೆಯಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ಹಾಗಾಗಿ ನಮ್ಮಲ್ಲಿರುವ ವಿಶೇಷ ಬಲವನ್ನು ಅರಿತು ಜೀವನದಲ್ಲಿ ಸಂತೋಷವಾಗಿರಲು ಕಲಿಯಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ರಾಶಿಚಕ್ರದ ಪ್ರಭಾವಕ್ಕೆ ಒಳಗಾಗುತ್ತಾನೆ. ಆ ರಾಶಿಚಕ್ರದ ಅನ್ವಯದಡಿ ವಿಶೇಷ ಶಕ್ತಿ ಹಾಗೂ ಸಾಮಥ್ರ್ಯಗಳನ್ನು ಹೊಂದುವುದನ್ನು ಕಾಣಬಹುದು ಎನ್ನಲಾಗುತ್ತದೆ. ನಿಮಗೂ ನಿಮ್ಮ ರಾಶಿಚಕ್ರದಡಿಯಲ್ಲಿ ಇರುವ ವಿಶೇಷ ಶಕ್ತಿಯನ್ನು ಅರಿಯಬೇಕು ಎನ್ನುವ ಕುತೂಹಲ ಹಾಗೂ ಹಂಬಲಗಳಿದ್ದರೆ ಈ ಮುಂದೆ ವಿವರಿಸಲಾದ ರಾಶಿಚಕ್ರದ ವಿವರಣೆಯನ್ನು ಅರಿಯಿರಿ...
ಮೇಷ: ಮಿತಿಯಿಲ್ಲದ ಶಕ್ತಿ
ಈ ರಾಶಿಯವರಲ್ಲಿ ಮಿತಿಯಿಲ್ಲದಂತಹ ಶಕ್ತಿ ಇರುತ್ತದೆ. ಇವರು ಎಲ್ಲಾ ಕೆಲಸದಲ್ಲೂ ಸಾಮಾನ್ಯವಾಗಿ ಹೆಚ್ಚಿನ ವೇಗವನ್ನು ಅನುಸರಿಸುತ್ತಾರೆ. ಇವರು ತಮ್ಮ ಕೆಲಸದಲ್ಲಿ ಬುಲೆಟ್ಗಿಂತ ಹೆಚ್ಚಿನ ವೇಗವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.
ವೃಷಭ: ಸಹಿಸಿಕೊಳ್ಳುವ ಶಕ್ತಿ
ವೃಷಭ ರಾಶಿಯವರು ಭೂಮಿಯ ಚಿಹ್ನೆಯನ್ನು ಹೊಂದಿದವರು. ಇವರು ಎಲ್ಲವನ್ನೂ ಸಹಿಸಿಕೊಳ್ಳುವ ಹಾಗೂ ನಿಧಾನವಾಗಿ ಸ್ವೀಕರಿಸುವ ಗುಣವನ್ನು ಹೊಂದಿರುತ್ತಾರೆ. ಕಠಿಣವಾದ ಸಂದರ್ಭದಲ್ಲಿ ಅಥವಾ ಒತ್ತಡದ ಪರಿಸ್ಥಿತಿಯಲ್ಲೂ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಬಲ್ಲರು.
ಮಿಥುನ: ಪ್ರಾಣಿಯೊಂದಿಗೂ ಮಾತನಾಡಬಲ್ಲರು
ಈ ರಾಶಿಯವರು ಛಾಯಾಗ್ರಹಣದ ಸ್ಮರಣೆ ಮಾಡಬಲ್ಲರು. ಪ್ರಾಣಿಗಳು ಮತ್ತು ನಿರ್ಜೀವ ವಸ್ತುಗಳೊಂದಿಗೂ ಸಂವಹನ ನಡೆಸಬಹುದಾದ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಿಮ್ಮ ಜ್ಞಾನಕ್ಕೆ ಯಾರೂ ಸರಿಸಾಟಿ ಇರುವುದಿಲ್ಲ ಎಂದು ಹೇಳಬಹುದು.
ಕರ್ಕ: ಎಲ್ಲರೊಂದಿಗೂ ಬೆರೆಯಬಲ್ಲರು
ಈ ರಾಶಿಯವರು ಇತರರ ಭಾವನೆಗಳನ್ನು ಅರಿಯಬಲ್ಲರು. ಅಲ್ಲದೆ ಇತರರ ಭಾವನೆಗಳನ್ನು ನಿಯಂತ್ರಿಸಬಲ್ಲರು. ಇತರರ ಭಾವನೆ ಹೇಗಿದೆ ಎನ್ನುವುದನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಎಲ್ಲರೊಂದಿಗೂ ಬೆರೆಯುವ ಸಾಮಥ್ರ್ಯ ಹೋದಿರುತ್ತಾರೆ ಎಂದು ಹೇಳಲಾಗುವುದು.
ಸಿಂಹ: ಉತ್ತಮ ಸ್ಪರ್ಶ ಶಕ್ತಿ
ಇವರು ಅತ್ಯಂತ ಅದೃಷ್ಟ ಹಾಗೂ ಸ್ಪರ್ಶ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ವಿಶೇಷ ಸ್ಪರ್ಶ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಮುಟ್ಟಿದ್ದು ಅಥವಾ ಕೈಗೆತ್ತಿಕೊಂಡದ್ದೆಲ್ಲಾ ಉತ್ತಮ ಫಲಿತಾಂಶವನ್ನು ನೀಡುವುದು.
ಕನ್ಯಾ: ವೇಗ
ಈ ರಾಶಿಯವರು ಅತ್ಯಂತ ವೇಗದ ತೀವ್ರತೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಕೆಲಸದಲ್ಲಿ ವೇಗವನ್ನು ಅನ್ವಯಿಸುವುದರ ಮೂಲಕ ಬಹುಬೇಗ ಯಶಸ್ಸನ್ನು ಕಂಡುಕೊಳ್ಳುವರು. ಇವರು ಹಲವಾರು ಶಕ್ತಿಯನ್ನು ಹೀರಿಕೊಳ್ಳುವ ಸಾಮಥ್ರ್ಯವನ್ನು ಸಹ ಹೊಂದಿರುತ್ತಾರೆ ಎಂದು ಹೇಳಲಾಗುವುದು.
ತುಲಾ: ಸಾಧಿಸುವ ಸಾಮರ್ಥ್ಯ
ಎಂತಹ ಕೆಲಸವನ್ನು ನೀಡಿದರೂ ಅಥವಾ ಸಮಸ್ಯೆಗಳು ಎದುರಾದರೂ ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಅಥವಾ ನಿಭಾಯಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಈ ಶಕ್ತಿಯಿಂದಲೇ ವಿಭಿನ್ನ ರೂಪದಲ್ಲಿ ಜೀವನವನ್ನು ಅನುಭವಿಸುತ್ತಾರೆ ಎಂದು ಹೇಳಲಾಗುವುದು.
ವೃಶ್ಚಿಕ: ಮನಸ್ಸನ್ನು ನಿಯಂತ್ರಿಸಬಹುದು
ಈ ರಾಶಿಯವರು ಯಾವುದೇ ವ್ಯಕ್ತಿಯ ಮನಸ್ಸನ್ನು ನಿಯಂತ್ರಿಸಬಹುದಾದ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಮೊದಲ ನೋಟದಲ್ಲಿಯೇ ವ್ಯಕ್ತಿಯ ಅಂತರಾಳವನ್ನು ಅರಿಯಬಲ್ಲರು ಇವರು.
ಧನು: ಸತ್ಯವನ್ನು ನುಡಿಯುವರು
ಇವರು ಅತ್ಯಂತ ಪ್ರಾಮಾಣಿಕರು. ಇವರ ನಡತೆಯಲ್ಲಿ ನಿಖರತೆ ಮತ್ತು ಪ್ರಾಮಾಣಿಕತೆಯನ್ನು ಕಾಣಬಹುದು.
ಮಕರ: ಎಲ್ಲರಿಗೂ ಬಾಗಬಲ್ಲರು
ಇವರ ಬಲವಾದ ಮಾನಸಿಕ ಶಕ್ತಿಯು ಎಲ್ಲರೊಂದಿಗೂ ತಗ್ಗಿ ಬಗ್ಗಿ ನಡೆದುಕೊಳ್ಳುವಂತೆ ಮಾಡುತ್ತದೆ. ಇವರು ತುಂಬಾ ಪ್ರಾಯೋಗಿಕ ಮತ್ತು ಶಿಸ್ತಿನ ಪ್ರವೃತ್ತಿಯನ್ನು ಹೊಂದಿರುತ್ತಾರೆ.
ಕುಂಭ: ಇಚ್ಛಾಶಕ್ತಿ ಹೊಂದಿದವರು
ಈ ರಾಶಿಯವರು ಹೊಸದನ್ನು ಅನುಭವಿಸಲು ಹಂಬಲಿಸುವರು. ಇವರಿಗೆ ಬಯಕೆಯಾದರೆ ವಿಮಾನವನ್ನು ಸಹ ಖರೀದಿಸಬಲ್ಲರು. ಮಾನವೀಯತೆಯ ಗುಣವನ್ನು ಹೊಂದಿರುವ ಇವರು ಪ್ರಾಮಾಣಿಕರೂ ಹೌದು.
ಮೀನ: ಭ್ರಮೆಯನ್ನು ರಚಿಸಬಲ್ಲರು
ಈ ರಾಶಿಯವರು ಭ್ರಮೆಯನ್ನು ಸೃಷ್ಟಿಸಬಲ್ಲ ಮತ್ತು ಇತರರನ್ನು ಕುಶಲತೆಯಿಂದ ನಿರ್ವಹಿಸಬಲ್ಲ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವರು ತಮ್ಮ ಜೀವನದ ಬಗ್ಗೆ ಹೊಸ ಬಗೆಯ ಕನಸನ್ನು ಕಾಣುತ್ತಾರೆ.