Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಈ 5 ರಾಶಿಚಕ್ರದವರ ನಿರ್ಧಾರ ಯಾವತ್ತೂ ಕಡ್ಡಿ ಮುರಿದಂತೆ ದೃಢವಾಗಿರುತ್ತದೆ!
ಭಾವನೆ ಎಂದರೆ ಹಾಗೆ... ಸಂತೋಷ ಹಾಗೂ ದುಃಖ ವ್ಯಕ್ತವಾಗುವುದು ನಮ್ಮ ಭಾವನೆಗಳ ಆಧಾರದ ಮೇಲೆಯೇ. ಒಬ್ಬ ವ್ಯಕ್ತಿ ನಮಗೆ ಹತ್ತಿರವಾಗುವುದು ಹಾಗೂ ನಮ್ಮಿಂದ ದೂರವಾಗುವುದೆಲ್ಲವೂ ನಮ್ಮ ಭಾವನೆಯ ಆಧಾರದ ಮೇಲೆಯೇ. ಕೆಲವರು ಅದೆಷ್ಟೇ ಆತ್ಮಿಯರಾಗಿದ್ದರೂ ಅವರ ಕೆಲವು ವರ್ತನೆಗಳಿಂದ ಮನಸ್ಸಿಗೆ ನೋವಾಯಿತು ಅಥವಾ ಬೇಸರವಾಯಿತು ಎಂದರೆ ಯಾವುದೇ ಭಾವನಾತ್ಮಕ ಸುಳಿಗೆ ಒಳಗಾಗದೆಯೇ ಅವರಿಂದ ದೂರ ಸರಿಯುತ್ತಾರೆ. ಇಂತಹ ಒಂದು ದೃಢ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಕೆ ಉಂಟಾಗಬಹುದು.
ವ್ಯಕ್ತಿಯು ಗಟ್ಟಿ ಮನಸ್ಸನ್ನು ಹೊಂದಲು ಅಥವಾ ಅತಿಯಾದ ಭಾವನಾತ್ಮಕ ಗುಣವನ್ನು ತಳೆಯಲು ರಾಶಿ ಚಕ್ರಗಳೇ ಕಾರಣವಾಗಿರುತ್ತವೆ. ರಾಶಿ ಚಕ್ರಗಳ ಅನ್ವಯದಂತೆಯೇ ಅಂತಹ ಭಾವನೆಯನ್ನು ತಳೆಯಲು ಸನ್ನಿವೇಶಗಳು ಸಹ ಹಾಗೆಯೇ ಸೃಷ್ಟಿಯಾಗಿರುತ್ತವೆ ಎಂದು ಸಹ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವು ರಾಶಿಯವರು ಎಲ್ಲಾ ರಾಶಿಚಕ್ರದವರಿಗಿಂತ ಹೆಚ್ಚು ಬಲವಾದ ಮಾನಸಿಕ ಸ್ಥಿತಿಯನ್ನು ಹೊಂದಿರುತ್ತಾರೆ. ಅವರಿಗೆ ಬೇಡ ಎಂದ ವ್ಯಕ್ತಿಗಳ ಕಡೆಗೆ ಯಾವುದೇ ಭಾವನಾತ್ಮಕ ಸೆಳೆತ ಇಲ್ಲದೆಯೇ ಬಹುಬೇಗ ದೂರವಾಗುತ್ತಾರೆ. ಹಾಗಾದರೆ ಆ ರಾಶಿ ಚಕ್ರಗಳು ಯಾವವು? ಎನ್ನುವ ವಿವರಣೆ ಮುಂದಿದೆ ನೋಡಿ...

ಮೇಷ: 28 ಮಾರ್ಚ್ -20 ಏಪ್ರಿಲ್
ಈ ರಾಶಿಯವರು ವೈಯಕ್ತಿಕವಾಗಿ ಸಮಯವನ್ನು ಹಾಳುಮಾಡಲು ಇಷ್ಟಪಡುವುದಿಲ್ಲ. ಅವರು ನಿಷ್ಠಾವಂತರಾಗಿರುವ ವ್ಯಕ್ತಿಗಳ ಗುಂಪಲ್ಲಿ ಬೆರೆಯಲು ಇಷ್ಟ ಪಡುವರು. ಹಾಗೊಮ್ಮೆ ಅವರಿಗೆ ಆತ್ಮೀಯರಿಂದ ಅಥವಾ ನಂಬಿರುವ ವ್ಯಕ್ತಿಗಳಿಂದ ಮೋಸವಾಯಿತು ಎಂದರೆ ಅವರು ಬಹುಬೇಗ ಆ ವ್ಯಕ್ತಿಗಳಿಂದ ಯಾವುದೇ ಹಿಂಜರಿಕೆ ತೋರದೆ ದೂರವಾಗುತ್ತಾರೆ.

ವೃಷಭ: 21 ಏಪ್ರಿಲ್ -21 ಮೇ
ಇವರು ಒಬ್ಬ ವ್ಯಕ್ತಿಯ ಜೀವನದಿಂದ ಹೊರ ಬರಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಮನಸ್ಸಿಗೆ ಬೇಡ ಅಥವಾ ನೋವುಂಟಾದಾಗ ಬಹುಬೇಗ ಅವರಿಂದ ದೂರವಾಗುತ್ತಾರೆ. ಏಕೆಂದರೆ ಇವರು ಯಾವುದೇ ಕೆಲಸವನ್ನು ನಿರ್ವಹಿಸುವ ಮುನ್ನ ಹೆಚ್ಚು ಚಿಂತನೆ ನಡೆಸುತ್ತಾರೆ. ಹಾಗೊಮ್ಮೆ ಅವರು ಮೆಚ್ಚಿಕೊಂಡವರಿಂದ ದೂರವಾದರು ಅಥವಾ ನೋವನ್ನು ಅನುಸರಿಸುತ್ತಿದ್ದಾರೆ ಎಂದರೆ ಬಹುಬೇಗ ಯಾವುದೇ ಭಾವನಾತ್ಮಕ ಸೆಳೆತಕ್ಕೆ ಒಳಗಾಗದೆ ದೂರ ಬರುತ್ತಾರೆ.

ಸಿಂಹ: ಜುಲೈ 23-ಆಗಸ್ಟ್ 23
ಇವರು ತಮ್ಮನ್ನು ಕೆಳಗೆ ನೂಕುವ ಜನರ ಸುತ್ತ ಇರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸುತ್ತಾರೆ. ಕೆಟ್ಟ ಪ್ರಭಾವಕ್ಕೆ ಒಳಗಾಗುವುದು ಅಥವಾ ಅನಪೇಕ್ಷಿತ ಸ್ನೇಹಕ್ಕೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶಕ್ಕಾಗಿ ಇವರು ಆ ವ್ಯಕ್ತಿಗಳ ಸೆಳೆತಗಳಿಂದ ಬಹುಬೇಗ ದೂರವಾಗುತ್ತಾರೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಇವರು ತಮ್ಮ ಆಂತರಿಕ ವಿಚಾರಗಳನ್ನು ಅಷ್ಟು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹಾಗೊಮ್ಮೆ ಅವರಿಗೆ ಆತ್ಮೀಯ ವ್ಯಕ್ತಿಯಾಗಿದ್ದಾರೆ ಎಂದರೆ ಅವರು ಅದೃಷ್ಟವಂತರು ಎಂದೇ ಹೇಳಬಹುದು. ಈ ರಾಶಿಯವರು ನಂಬಿಕೆ ಮತ್ತು ಸ್ನೇಹದ ಬಗ್ಗೆ ಬಹಳ ನಂಬಿಕೆ ಇಡುತ್ತಾರೆ. ಇವರ ಈ ಭಾವನೆಗಳು ಸುಳ್ಳಾಗುತ್ತಿದೆ ಎಂದಾದರೆ ಅಂತಹ ವ್ಯಕ್ತಿಗಳಿಂದ ಬಹುಬೇಗ ದೂರ ಸರಿಯುತ್ತಾರೆ. ಜೊತೆಗೆ ಅವರ ಬಗ್ಗೆ ಯಾವುದೇ ಭಾವನೆಗಳನ್ನು ಒಳಗೊಂಡಿರುವುದಿಲ್ಲ.

ಕುಂಭ: ಜನವರಿ 20-ಫೆಬ್ರವರಿ 18
ಈ ರಾಶಿಯ ವ್ಯಕ್ತಿಗಳು ತಮ್ಮ ಜೀವನದಲ್ಲಿ ಎರಡು ಬಗೆಯ ವ್ಯಕ್ತಿಗಳನ್ನು ಇಷ್ಟಪಡುವುದಿಲ್ಲ. ಅಂದರೆ ಯಾರು ಅಸಭ್ಯ ವರ್ತನೆ ತೋರುತ್ತಾರೆ ಮತ್ತು ನೀರಸ ಭಾವನೆ ಹಾಗೂ ಜೀವನ ನಡೆಸುತ್ತಾರೆ ಅಂತಹವರಿಂದ ಇವರು ದೂರ ನಿಲ್ಲುತ್ತಾರೆ. ಇಂತಹ ಎರಡು ಸ್ವಭಾವದ ವ್ಯಕ್ತಿಗಳ ನಡುವೆ ಇವರು ಇರಲು ಇಷ್ಟ ಪಡುವುದಿಲ್ಲ. ಯಾವುದೇ ಅಂಜಿಕೆ ಬೇಸರ ಇಲ್ಲದೆ ಅವರಿಂದ ದೂರವಾಗುತ್ತಾರೆ.



Click it and Unblock the Notifications











