Latest Updates
-
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ!
ಜನರ ಮನಸ್ಸಿಗೆ ನೋವು ಮಾಡಬಲ್ಲ ರಾಶಿಚಕ್ರದವರು, ಈ ಕ್ರಮಾಂಕದಲ್ಲಿ ಇದ್ದಾರೆ ನೋಡಿ...
ಮನಸ್ಸು ಮುರಿಯುವುದು ಅಥವಾ ಹೃದಯ ಒಡೆಯುವುದು ಎಂದರೆ ಅತ್ಯಂತ ದುಃಖದ ಸಂಗತಿ. ಇತರರಿಂದ ನೋವನ್ನು ಅನುಭವಿಸುತ್ತಿದ್ದೇವೆ ಎಂದಾದರೆ ಮನಸ್ಸು ಬಹುಬೇಗ ಒತ್ತಡಕ್ಕೆ ಒಳಗಾಗುವುದು. ಅಲ್ಲದೆ ಮಾನಸಿಕ ಅನಾರೋಗ್ಯಗಳು ಅಥವಾ ನಿರಾಶೆಯು ಅಧಿಕವಾಗುವುದು. ಸಮಯಗಳು ಬದಲಾದಂತೆ ಮನಸ್ಸು ತಿಳಿಯಾಗಿ ಪುನಃ ಭರವಸೆಯ ಹಾದಿಯಲ್ಲಿ ಸಾಗುವುದು. ಎಲ್ಲಾ ಬದಲಾವಣೆಗಳಿಗೂ ಅಧಿಕ ಸಮಯ ಬೇಕು ಎನ್ನುವುದು ನಿಜ.
ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಪ್ರತಿಯೊಂದು ರಾಶಿಚಕ್ರದವರ ಮೇಲೂ ಪರಿಣಾಮಗಳು ಗಮನಾರ್ಹವಾಗಿಯೇ ಇರುತ್ತವೆ. ಆದರೆ ಅವರಲ್ಲಿರುವ ಆತ್ಮವಿಶ್ವಾಸದ ಗುಣಮಟ್ಟದ ಮೇಲೆ ಚೇತರಿಕೆಯನ್ನು ಕಂಡುಕೊಳ್ಳುವರು. ಹೃದಯವನ್ನು ಮುರಿಯುವ ಗುಣಗಳು ಅಥವಾ ಮನಸ್ಸಿಗೆ ತುಂಬಾನೇ ನೋವು ಉಂಟು ಮಾಡುತ್ತಾರೆ. ವ್ಯಕ್ತಿಯ ರಾಶಿಚಕ್ರ ಹಾಗೂ ಗ್ರಹಗತಿಗಳ ಪ್ರಭಾವವನ್ನು ಒಳಗೊಂಡಿರುತ್ತದೆ. ರಾಶಿಚಕ್ರದ ಅನುಸಾರ ಕೆಲವು ರಾಶಿಚಕ್ರದವರು ಮನಸ್ಸಿಗೆ ನೋವುಂಟು ಮಾಡುವುದರಲ್ಲಿ ಮೊದಲಿಗರಾಗಿರುತ್ತಾರೆ. ಎನ್ನಲಾಗುವುದು.

ರಾಶಿಚಕ್ರದ ಅನುಸಾರ ಯಾರು ಅಧಿಕ ಪ್ರಮಾಣದಲ್ಲಿ ಹೃದಯಕ್ಕೆ ನೋವನ್ನುಂಟುಮಾಡುತ್ತಾರೆ? ಯಾರು ಕಡಿಮೆ ಪ್ರಮಾಣದಲ್ಲಿ ನೋವನ್ನು ನೀಡುವರು? ಎನ್ನುವುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಧನು
ಈ ರಾಶಿಯವರು ಸದಾ ತಮ್ಮ ಅಗತ್ಯತೆಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಇತರರನ್ನು ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚೆಂದು ಹೇಳಬಹುದು. ಇವರನ್ನು ಅಂಟಿಕೊಳ್ಳುವುದು ಅಥವಾ ಬಯಸುವುದು ಎಂದರೆ ಒಂದು ದೊಡ್ಡ ತಪ್ಪು ಕಲ್ಪನೆಯಾಗಿರುತ್ತದೆ. ತಮ್ಮದೇ ಆದ ಕೆಲಸವನ್ನು ನಿರ್ವಹಿಸಲು ನಿರ್ದಿಷ್ಟ ಗುರಿಯನ್ನು ಹೊಂದಿರುತ್ತಾರೆ. ಇದರಿಂದ ಇವರನ್ನು ನಂಬಿದವರಿಗೆ ಸಾಕಷ್ಟು ನೋವು ಅಥವಾ ಹೃದಯ ಮುರಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಕುಂಭ
ಈ ರಾಶಿಚಕ್ರದವರು ತಮ್ಮ ಸಂಗಾತಿಯ ಹೃದಯವನ್ನು ಮುರಿಯಬೇಕೆಂದಿಲ್ಲ. ಅವರು ಸಂಗಾತಿಯ ಎದುರಲ್ಲಿಯೇ ಇತರರಿಗೆ ಫ್ಲರ್ಟ್ ಮಾಡುವುದು ಅಥವಾ ಅವರ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದವರಂತೆ ಮಾಡುವುದು ಸಾಕಷ್ಟು ನೋವನ್ನುಂಟುಮಾಡುವುದು. ಇವರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿದಿರುತ್ತದೆ. ಇವರ ಕೆಲವು ವರ್ತನೆಗಳು ಹಾಗೂ ತೆಗೆದುಕೊಳ್ಳುವ ನಿರ್ಧಾರಗಳು ಆತ್ಮೀಯರಿಗೆ ಹೆಚ್ಚಿನ ಆಘಾತವನ್ನುಂಟುಮಾಡುವುದು.

ಮಿಥುನ
ಈ ರಾಶಿಯ ವ್ಯಕ್ತಿಗಳು ದ್ವಿಮುಖ ಗುಣದಿಂದ ಕೂಡಿರುತ್ತಾರೆ. ಇವರು ಒಂದು ಕ್ಷಣ ಪ್ರೀತಿಯ ಮಳೆಯನ್ನು ನಿಮ್ಮ ಮೇಲೆ ಸುರಿಸುವಂತೆ ಮಾಡುವರು. ಅದೇ ಇನ್ನೊಂದು ಕ್ಷಣದಲ್ಲಿ ನೀವು ಯಾರೆಂಬುದನ್ನೇ ಮರೆಯಬಹುದು. ಇವರೊಂದಿಗೆ ಎಂದಿಗೂ ಹೆಜ್ಜೆಹಾಕಬಾರದು. ಅದು ಘೋರ ಹಾನಿಯೊಂದಿಗೆ ಹೃದಯವನ್ನು ಮುರಿಯುವುದು, ಅಲ್ಲದೆ ಮನಸ್ಸಿಗೂ ನೋವಾಗುವುದು ಎಂದು ಹೇಳಲಾಗುವುದು. ಉತ್ತಮ ಮಾತುಗಾರರು, ಆಕರ್ಷಕ ವರ್ತನೆಯನ್ನು ತೋರಬಲ್ಲರು. ಆದರೆ ಅವುಗಳನ್ನು ನಂಬಿದರೆ ಹೃದಯವು ಒಡೆಯುವುದು.

ಮೀನ
ಈ ರಾಶಿಯವರು ನಿಮ್ಮೊಳಗೆ ಇರುವಾಗ ಅತ್ಯಂತ ಸಿಹಿಯಾದ ವರ್ತನೆ ತೋರುವರು. ಅದೇ ನಿಮ್ಮವರಾಗದೆ ಹೊರಗೆ ಬಂದರೆ ಅದು ನಿಮ್ಮ ಭಾವನೆ ಹಾಗೂ ಹೃದಯವನ್ನು ಒಡೆಯುವ ವಿಚಾರವಾಗುವುದು. ಇವರು ಇತರರ ಬಗ್ಗೆ ಅನುಕಂಪ ಹೊಂದಿರುವ ವ್ಯಕ್ತಿಗಳಾಗಿರಬಹುದು. ಆದರೆ ಅನಿರೀಕ್ಷಿತ ಸಂಬಂಧಗಳ ನಡುವೆ ಅವೆಲ್ಲವೂ ಮರೆಯಾಗಿರುತ್ತವೆ. ಅಹಿತಕರ ರೀತಿಯಲ್ಲಿ ದೂರ ತಳ್ಳಬಲ್ಲರು.

ಸಿಂಹ
ನಿಮ್ಮ ಸಣ್ಣ ತಪ್ಪು ಅಥವಾ ಕೆಲವು ಭಾವನೆಗಳಿಗಾಗಿಯೂ ಸಿಂಹ ರಾಶಿಯ ವ್ಯಕ್ತಿಗಳು ಹೃದಯವನ್ನು ಮುರಿಯುವರು. ಇವರು ತಮ್ಮವರಿಗಾಗಿ ಒಂದಿಷ್ಟು ಗಮನವನ್ನು ಕೇಂದ್ರೀಕರಿಸಬೇಕಾಗುವುದು. ಇವರಿಗೆ ಆಸಕ್ತಿ ಇರುವಾಗ ಅವರ ಪ್ರಪಂಚವು ಎರಡು ವಿಭಿನ್ನ ಘಟಕಗಳಿಂದ ಕೂಡಿರುತ್ತದೆ. ಅದೇ ಆಸಕ್ತಿ ಇಲ್ಲವೆಂದಾದರೆ ಆತ್ಮೀಯರ ಭಾವನೆಯನ್ನು ಮತ್ತು ಹೃದಯವನ್ನು ಸುಲಭವಾಗಿ ಮುರಿಯಬಲ್ಲರು.

ವೃಷಭ
ಈ ರಾಶಿಚಕ್ರವು ಸುಂದರ ಹಾಗೂ ಅದ್ಭುತವಾದ ಚಿಹ್ನೆ ಎಂದು ಹೇಳಲಾಗುವುದು. ಹಾಗೆಯೇ ಇವರಲ್ಲಿ ಕ್ರೂರತೆಯೂ ಹೆಚ್ಚಾಗಿರುತ್ತವೆ. ಇವರು ದುಷ್ಟ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗದಿದ್ದರೂ ಖಂಡಿತವಾಗಿಯೂ ನಕಾರಾತ್ಮಕ ಗುಣಗಳು ಇರುತ್ತವೆ. ಇವರು ಕೆಲವು ಸಂಗತಿಗಳ ಮೇಲೆ ಹಾನಿ ಮಾಡಲು ಬಯಸಿದರೆ ಇತರರ ಹೃದಯವನ್ನು ಮುರಿಯಬಲ್ಲರು.

ಮೇಷ
ಈ ರಾಶಿಯ ವ್ಯಕ್ತಿಗಳು ಪ್ರೀತಿಯಲ್ಲಿ ಬಹುಬೇಗ ಬೀಳುತ್ತಾರೆ. ಅಂತೆಯೇ ಪ್ರೀತಿಯಿಂದ ಬಹುಬೇಗ ನುಣುಚಿಕೊಳ್ಳುತ್ತಾರೆ. ಇವರು ತಮ್ಮ ಕ್ರಿಯೆಗಳ ಮೇಲೆ ಯಾವುದೇ ರೀತಿಯ ಕಾಲಾಹರಣ ಮಾಡುವುದಿಲ್ಲ. ಇವರಿಗೆ ಬೇಡ ಎನ್ನಿಸಿರುವ ವ್ಯಕ್ತಿ ಮತ್ತು ವಿಷಯಗಳನ್ನು ಸುಲಭವಾಗಿ ತ್ಯಜಿಸುತ್ತಾರೆ. ಜೊತೆಗೆ ಮುಂದುವರಿಯುತ್ತಾರೆ. ಈ ವರ್ತನೆಗಳಿಂದಾಗಿ ಇತರರ ಮನಸ್ಸು ಮತ್ತು ಹೃದಯ ಬಹುಬೇಗ ಮುರಿಯುವುದು. ಇವರಿಗೆ ಯಾರ ಬಗ್ಗೆಯು ಆಳವಾದ ಭಾವನೆಗಳು ಇರುವುದಿಲ್ಲ.

ಮಕರ
ಇವರು ಸಾಕಷ್ಟು ಸ್ವಾರ್ಥ ಸ್ವಭಾವದಿಂದ ಕೂಡಿರುತ್ತಾರೆ. ಸಂಬಂಧಗಳ ವಿಚಾರದಲ್ಲಿ ಯಾವುದೇ ಬಗೆಯ ಹಿಮ್ಮುಖ ಆಲೋಚನೆಯನ್ನು ಮಾಡದೆಯೇ ಮುರಿದುಕೊಳ್ಳಬಲ್ಲರು. ಇವರು ಒಮ್ಮೆ ನಿರಾಕರಿಸಿದ ಮೇಲೆ ರಾಜಿಮಾಡಿಕೊಳ್ಳಲು ಸಿದ್ಧರಾಗಿರುವುದಿಲ್ಲ. ಅತ್ಯಂತ ಕಠಿಣ ಹೃದಯದವರಾಗಿರುತ್ತಾರೆ. ಇವರು ತಮ್ಮನ್ನು ತಾವು ಗಾಯಗೊಳಿಸಿಕೊಳ್ಳುವುದಲ್ಲದೆ ಇತರರ ಹೃದಯವನ್ನು ಸುಲಭವಾಗಿ ಮುರಿಯುವರು.

ವೃಶ್ಚಿಕ
ಇವರು ತಮ್ಮ ಭಾವನೆಗಳನ್ನು ಬಲು ಆಳವಾಗಿ ಭಾವಿಸುತ್ತಾರೆ. ಅಂತಿಮವಾಗಿ ಯಾರೊಂದಿಗಾದರೂ ಬರುವಾಗ ತಮ್ಮ ಸಂಬಂಧಗಳ ಮೇಲೆ ಬಹುಕಾಲ ಉಳಿಯಲು ಬಯಸುತ್ತಾರೆ. ಇವರು ಒಮ್ಮೆ ಹಾನಿ ಮಾಡುವ ಮನಸ್ಸನ್ನು ಹೊಂದಿದರೆ ಅದು ಅತ್ಯಂತ ಘೋರವಾಗಿರುತ್ತದೆ. ಇವರ ಈ ಪ್ರವೃತ್ತಿಯಿಂದ ಪ್ರೀತಿಪಾತ್ರರ ಹೃದಯವು ಬಹುಬೇಗ ಮುರಿಯುವುದು. ಇವರು ಯಾರಿಂದ ನೋವನ್ನು ಹೊಂದುತ್ತಾರೋ ಅವರಿಗೆ ಪ್ರತಿಕಾರ ನೀಡುವರು.

ಕನ್ಯಾ
ಇವರು ಸಂಬಂಧಗಳ ಉದ್ದಕ್ಕೂ ಸಣ್ಣಪುಟ್ಟ ವಿಚಾರಗಳಿಗೂ ಪ್ರತಿಕಾರವನ್ನು ತೋರಿಸುತ್ತಲೇ ಬರುತ್ತಾರೆ. ಇವರ ಈ ವರ್ತನೆ ಪ್ರೀತಿಪಾತ್ರರ ಹೃದಯ ಮುರಿಯುವಂತೆ ಮಾಡುವುದು. ಯಾವಾಗ ಇವರ ದೃಷ್ಟಿಯು ಹಾನಿಕಾರಕ ರೀತಿಯಲ್ಲಿ ತಿರುವನ್ನು ಕಾಣುವುದೋ ಅಂದಿನಿಂದ ಎಲ್ಲವೂ ವಿನಾಶದ ಅಂಚನ್ನು ಕಾಣುವುದು.

ತುಲಾ
ಈ ರಾಶಿಯ ವ್ಯಕ್ತಿಗಳು ಇತರರಿಗೆ ಹಾನಿಯುಂಟುಮಾಡಲು ಬಯಸುವುದಿಲ್ಲ. ಸಾಮಾನ್ಯವಾಗಿ ಅವರು ಹಾಣಿಯುಂಟುಮಾಡುವ ಪ್ರಕ್ರಿಯೆಯನ್ನು ಮಾಡುತ್ತಾರೆ. ಸಂಬಂಧಗಳಲ್ಲಿ ತ್ವರಿತವಾಗಿ ಹೋಗುತ್ತಾರೆ. ವಿಷಯಗಳನ್ನು ನೈಜವಾಗಿ ಪಡೆಯಲು ಪ್ರಾರಂಭಿಸಿದಾಗ ಹೊರಬರಲು ನಿರ್ಧರಿಸುತ್ತಾರೆ. ಈ ವರ್ತನೆಗಳು ಹಾಗೂ ನಿರ್ಧಾರಗಳು ಇತರರ ಹೃದಯವನ್ನು ಮುರಿಯುವ ಸಾಧ್ಯತೆಗಳಿರುತ್ತವೆ.

ಕರ್ಕ
ಇವರು ಇತರರ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ. ಹಾಗೊಮ್ಮೆ ನೋಯಿಸಿದರೆ ಬಹುಬೇಗ ಭಯಭೀತರಾಗುತ್ತಾರೆ. ದೀರ್ಘಕಾಲದವರೆಗೆ ಈ ಕುರಿತು ಯೋಚಿಸುತ್ತಾರೆ. ದೀರ್ಘ ಸಮಯದ ವರೆಗೆ ಸಂಬಂಧ ಹೊಂದಲು ಬಯಸುವರು. ಇವರು ಸಾಮಾನ್ಯವಾಗಿ ಸ್ನೇಹಿತರಂತೆ ಇರಲು ಬಯಸುತ್ತಾರೆ. ಹಾಗೊಮ್ಮೆ ದ್ವೇಷದ ಭಾವನೆ ಮೂಡಿದರೆ ಭೀಕರವಾಗಿರುತ್ತದೆ. ಆಪ್ತರ ಮನಸ್ಸು ಹಾಗೂ ಹೃದಯವು ಮುರಿಯುವುದು.



Click it and Unblock the Notifications











