Latest Updates
-
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್!
ಈತ ವೃತ್ತಿಯಲ್ಲಿ ಭಿಕ್ಷುಕ, ತಿಂಗಳ ಸಂಬಳ 30 ಸಾವಿರ!, ಜೊತೆಗೆ ಮೂವರು ಪತ್ನಿಯರು!
ಒಂದು ವೇಳೆ ನೀವು ಜೀವನದಲ್ಲಿ ಮುಂದುವರೆಯಲು ಯಾರದ್ದಾದರೂ ಪ್ರೇರಣೆ ಪಡೆಯಬೇಕೆಂದಿದ್ದರೆ ಇಂದಿನ ಲೇಖನ ಭಿನ್ನವಾದ ಮಾಹಿತಿ ಒದಗಿಸಬಹುದು. ಏಕೆಂದರೆ ಭಾರತದ ಜಾರ್ಖಂಡ್ ರಾಜ್ಯದಲ್ಲಿರುವ ಓರ್ವ ಭಿಕ್ಷುಕ ನಿಮ್ಮ ಗಮನವನ್ನು ಬೇರೆಯೇ ಕಾರಣಗಳಿಗಾಗಿ ಸೆಳೆಯುತ್ತಾನೆ.
ಹೆಸರೇ ಸೂಚಿಸುವಂತೆ ಭಿಕ್ಷಾಟನೆ ಈತನ ವೃತ್ತಿ. ಈತ ನಗುನಗುತ್ತಾ ರೈಲ್ವೇ ನಿಲ್ದಾಣಗಳಲ್ಲಿ ಓಡಾಡುತ್ತಾ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಾನೆ. ಇಷ್ಟೇ ಆಗಿದ್ದರೆ ಆತನಿಗೆ ಈ ಲೇಖನದಲ್ಲಿ ಜಾಗ ಸಿಗುತ್ತಿರಲಿಲ್ಲ. ಏಕೆಂದರೆ ಭಿಕ್ಷೆಯ ಮೂಲಕ ಆತ ಸಂಪಾದಿಸುವ ಹಾಗೂ ಈತನ ಜೀವನ ನಡೆಯುತ್ತಿರುವ ಬಗ್ಗೆ ಅರಿತಾಗ ಮಾತ್ರ ಈತನ ಯೋಗ್ಯತೆಯ ಬಗ್ಗೆ ಅರಿವಾಗುತ್ತದೆ. ಬನ್ನಿ, ಜನರು ಅಕ್ಕರೆಯಿಂದಿಟ್ಟ "ಛೋಟು ಬಾರಾಯಿಕ್" ಎಂಬ ಈ ಭಿಕ್ಷುಕನ ಬಗ್ಗೆ ಅರಿಯೋಣ...

ಈಗ ಸೊಂಟದ ಕೆಳಗಿನಿಂದ ವಿಕಲಾಂಗ
ಭಿಕ್ಷೆ ಬೇಡಲು ಭಿಕ್ಷುಕರಿಗೆ ಬೇಕಾದ ಅರ್ಹತೆ ಎಂದರೆ ತೋರಿಸಬಹುದಾದ ಅಂಗವೈಕಲ್ಯ. ಯಾರಲ್ಲಿ ಏನಿಲ್ಲವೋ ಅದನ್ನೇ ದೊಡ್ಡದಾಗಿ ತೋರಿಸಿಯೇ ಭಿಕ್ಷೆ ಬೇಡುವುದು ಭಿಕ್ಷೆ ಹೆಚ್ಚು ಬೀಳುವ ಯಶಸ್ಸಿನ ಮಂತ್ರ. ಈ ಛೋಟುವಿನ ಸೊಂಟದ ಕೆಳಗಿನಿಂದ ಅಂಗವಿಕಲನಾಗಿದ್ದು ಇದನ್ನೇ ತೋರಿಸಿ ಭಿಕ್ಷೆ ಬೇಡುತ್ತಾನೆ. ಆದರೆ ಭಿಕಾರಿ ಎಂಬ ಗುಣವಾಚಕ ಇವನಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಈತ ಸೌಂದರ್ಯ ಹಾಗೂ ಮಾರ್ಜಕ ವಸ್ತುಗಳ ವ್ಯಾಪಾರಿ ಸಂಘಟನೆಯ ಸದಸ್ಯ ಹಾಗೂ ಒಂದು ಚಿಕ್ಕ ಅಂಗಡಿಯ ಮಾಲೀಕನೂ ಆಗಿದ್ದಾನೆ. ಹಾಗೂ, ಎಲ್ಲರೂ ಅಸೂಯೆಗೊಳಗಾಗುವಂತೆ ಮೂವರು ಮಹಿಳೆಯರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾನೆ.

ಈತನ ಸಂಪಾದನೆ
ಈತ ಎಷ್ಟು ಕಮಾಯಿ ಮಾಡುತ್ತಾನೆ ಎಂದು ಕೇಳಿದಾದ ತಾನು ತಿಂಗಳಿಗೆ ಏನಿಲ್ಲವೆಂದರೂ ಮೂವತ್ತು ಸಾವಿರದಿಂದ ನಾಲ್ಕು ಲಕ್ಷದವರೆಗೂ ಪ್ರತಿ ತಿಂಗಳಿಗೆ ಸಂಪಾದಿಸುತ್ತೇನೆ. ಮೂವರು ಪತ್ನಿಯರ ಖರ್ಚುಗಳನ್ನು ನಿಭಾಯಿಸಿಯೂ ಸಾಕಷ್ಟು ಉಳಿತಾಯ ಮಾಡಿರುವ ಕಾರಣ ಸಿಂಡೇಗಾ ಜಿಲ್ಲೆಯ ಬಾಂಡಿ ಎಂಬ ಗ್ರಾಮದಲ್ಲಿ ಪಾತ್ರೆ ಅಂಗಡಿಯೊಂದನ್ನೂ ತೆರೆದಿದ್ದಾನೆ. ಪ್ರಸ್ತುತ ಈತನ ಪತ್ನಿಯರಲ್ಲಿ ಒಬ್ಬಳು ಈ ಅಂಗಡಿಯನ್ನು ನಡೆಸುತ್ತಿದ್ದಾಳೆ.

ಈತನ ಜೀವನ ಸುಖಕರವಾಗಿದೆ
ಭಿಕ್ಷಾಟನೆಯಿಂದ ಬರುವ ನಿಯಮಿತ ಆದಾಯದೊಂದಿಗೇ ನಿಯಮಿತವಾಗಿ ಬರುವ ಅಂಗಡಿಯ ಆದಾಯವನ್ನು ಸೇರಿಸಿ ಎಲ್ಲರೂ ಹೊಟ್ಟೆಕಿಚ್ಚು ಪಡುವಷ್ಟು ಉತ್ತಮವಾದ ಆದಾಯವನ್ನು ಹೊಂದಿರುವ ಕಾರಣ ಛೋಟುವಿಗೆ ಯಾವುದೇ ಚಿಂತೆಯಿಲ್ಲದೇ ಸುಖಕರ ಜೀವನ ನಡೆಸಲು ಸಾಧ್ಯವಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ವಸ್ತುಗಳನ್ನು ವಿಲೇವಾರಿ ಮಾಡುವ ವಿತರಕನೂ ಆಗಿದ್ದಾನೆ. ತಾನು ಸಾಚಾ ಎಂದು ತೋರಿಸಲು ಅಧಿಕೃತ ಗುರುತುಪತ್ರವನ್ನೂ ಬೇಕಿದ್ದರೆ ಈತ ತೋರಿಸುತ್ತಾನೆ.

ಈತನ ಜೀವನ ಹೇಗೆ ಪ್ರಾರಂಭವಾಯಿತು?
ಛೋಟುವಿನ ಅಂಗವೈಕಲ್ಯ ಆತನ ಬಾಲ್ಯದಿಂದಲೇ ಪ್ರಾರಂಭವಾಗಿತ್ತು. ಮನೆಯ ಕಿತ್ತು ತಿನ್ನುವ ಬಡತನ ತನ್ನನ್ನು ಭಿಕ್ಷಾಟನೆಗೆ ಇಳಿಸಿತು ಎನ್ನುವ ಛೋಟು ರೈಲು ನಿಲ್ದಾಣದಲ್ಲಿ ಭಿಕ್ಷಾಟನೆಗೆ ಪ್ರಾರಂಭಿಸಿದ್ದ. ಸತತಗಳಿಕೆ ಮುಂದುವರೆಯುತ್ತಾ ಹೋದಂತೆ ದಿನಕ್ಕೆ ಸಾವಿರದಿಂದ ಸಾವಿರದಿನ್ನೂರು ರೂಪಾಯಿ ದಾಟತೊಡಗಿತೋ ಹಾಗೂ ಎಲ್ಲಾ ಗಳಿಕೆಯನ್ನು ಮನೆಯ ಖರ್ಚುಗಳಿಗೆ ಮೀಸಲಾಗಿರಿಸತೊಡಗಿದನೋ ಆಗ ಸಮಾಜವೂ ಈತನ ಬಗ್ಗೆ ಸಹಾನುಭೂತಿ ಹಾಗೂ ಸಹಕಾರ ನೀಡತೊಡಗಿದರು

ಈತನ ಜೀವನ ಹೇಗೆ ಪ್ರಾರಂಭವಾಯಿತು?
ಈ ಗಳಿಕೆಯನ್ನು ತೋರಿಸಿಯೇ ಮೂರು ಮದುವೆಯೂ ಆಯಿತು. ಈಗ ಇವರದ್ದು ಒಂದು ಸುಖೀ ಸಂಸಾರ. ಈ ಬಗ್ಗೆ ನಿಮಗೇನೆನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.



Click it and Unblock the Notifications