Just In
Don't Miss
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
12 ರಾಶಿಗಳಲ್ಲಿ ಯಾವ್ಯಾವ ರಾಶಿಯವರು 'ಧೈರ್ಯ' ವಂತರು ನೋಡಿ..
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ರಾಶಿ ಲೆಕ್ಕಾಚಾರವನ್ನು ನಿಮ್ಮ ಹುಟ್ಟಿದ ದಿನ, ಸಮಯ ಮತ್ತು ಗಳಿಗೆಯನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ನಿಮ್ಮ ರಾಶಿ ಯಾವುದು ಎಂಬುದನ್ನು ಆಧರಿಸಿಕೊಂಡು ನಿಮ್ಮ ವ್ಯಕ್ತಿತ್ವ, ಗುಣ, ನಿಮ್ಮ ಉನ್ನತಿ, ಭವಿಷ್ಯ, ಉದ್ಯೋಗ ಮೊದಲಾದ ಅಂಶಗಳನ್ನು ಅರಿತುಕೊಳ್ಳಬಹುದಾಗಿದೆ, ಅಷ್ಟೇ ಅಲ್ಲದೆ ರಾಶಿಗೆ ಅನುಗುಣವಾಗಿ ನಿಮ್ಮ ಸ್ವಭಾವ ಕೂಡ ಹಾಗೆ ಇರುತ್ತದೆ. ನೀವು ಹೆಚ್ಚು ಕೋಪವಂತರಾಗಿರಬಹುದು, ಇಲ್ಲವೇ ಮೃದು ಮನಸ್ಸಿನವರಾಗಿರಬಹುದು, ಮೋಸದ ಸ್ವಭಾವ ನಿಮ್ಮಲ್ಲಿರಬಹುದು ಇಲ್ಲದಿದ್ದರೆ ಸಹೃದಯರು ನೀವಾಗಿರಬಹುದು, ಎಂಬುದನ್ನೆಲ್ಲಾ ಲೆಕ್ಕ ಹಾಕಲಾಗುತ್ತದೆ.
ಅಂತೆಯೇ ಬೇರೆ ಬೇರೆ ಜನ್ಮರಾಶಿಗಳಲ್ಲಿ ಹುಟ್ಟಿದವರ ಅಭ್ಯಾಸ, ಚಟುವಟಿಕೆ, ಮನೋಭಾವನ್ನು ಪರಿಗಣಿಸಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರಾಶಿಯ ಜನರಿಗೆ ಧೈರ್ಯ ಜನ್ಮತಃ ಬಂದಿರುವ ಗುಣವಾಗಿರುತ್ತದೆ ಎಂಬುದನ್ನು ಪರಿಗಣಿಸಲಾಗುತ್ತದೆ. ಇನ್ನು ಕೆಲವು ರಾಶಿಯವರಲ್ಲಿ ಧೈರ್ಯ ಕಡಿಮೆ ಇರುತ್ತದೆ.
ಕೆಲವರು ಪುಕ್ಕಲರಾಗಿರಲು ಇವರ ಜನ್ಮರಾಶಿಯೇ ಕಾರಣವಾಗಿರಬಹುದು. ಸಾಮಾನ್ಯವಾಗಿ ಧೈರ್ಯದಿಂದ ಮುನ್ನುಗ್ಗಲು ಸ್ವಪ್ರೇರಣೆಯ ಜೊತೆಗೇ ಸ್ನೇಹಿತರು, ಕುಟುಂಬ ಸದಸ್ಯರು, ಆತ್ಮೀಯರು ಮತ್ತು ಹಿತೈಷಿಗಳು ನೀಡುವ ಪ್ರೇರಣೆ ಮಹತ್ವದ ಪಾತ್ರ ವಹಿಸುತ್ತದೆ. ಹೀಗೆ ಪ್ರೇರಣೆ ನೀಡುವವರೂ ಕೆಲವು ರಾಶಿಗಳಲ್ಲಿ ಹುಟ್ಟಿದವರೇ ಆಗಿರುತ್ತಾರೆ. ಯಾವ ರಾಶಿಯಲ್ಲಿ ಹುಟ್ಟಿದವರು ಹೆಚ್ಚು ಧೈರ್ಯವಂತರಾಗಿರುತ್ತಾರೆ ಎಂಬುದನ್ನು ಮುಂದೆ ಓದಿ...
ಮೇಷ
ಈ ರಾಶಿಯ ಜನರು ಸಾಮಾನ್ಯವಾಗಿ ದಿಟ್ಟರೂ, ಹುರುಪುಳ್ಳವರೂ ಆತ್ಮವಿಶ್ವಾಸವುಳ್ಳವರೂ ಆಗಿರುತ್ತಾರೆ. ಯಾವುದೇ ಹೊಸ ಕಾರ್ಯವನ್ನು ಇವರು ಥಟ್ಟನೇ ಕೈಗೊಳ್ಳದೇ, ಇದರ ಸಾಧಕ ಬಾಧಕಗಳನ್ನು ಪರಿಗಣಿಸಿಯೇ ಮುಂದುವರೆಯುವಷ್ಟು ತಾಳ್ಮೆಯನ್ನು ತೋರುತ್ತಾರೆ. ಸರಿ ಎನಿಸಿದ ಬಳಿಕವೇ ಧೈರ್ಯದಿಂದ ಮುನ್ನುಗ್ಗುತ್ತಾರೆ. ಇನ್ನು ಮಂಗಳ ಈ ರಾಶಿಯ ಅಧಿಪತಿಯಾಗಿದ್ದು, ಇದು ಧೈರ್ಯ ಮತ್ತು ಸ್ಪರ್ಧೆಯ ಪ್ರತೀಕ. ಇವರು ತಮ್ಮ ವ್ಯಕ್ತಿತ್ವವನ್ನು ತೋರಿಸಿಕೊಡಲು ಬಯಸುವರು. ಸಾಮಾಜಿಕ ಜಾಲತಾಣ ಮತ್ತು ರ್ಯಾಲಿಗಳಲ್ಲಿ ಇವರು ತಮ್ಮ ಭಾವನೆಗಳನ್ನು ಹೊರಹಾಕುವರು. ಈ ರಾಶಿಯ ವ್ಯಕ್ತಿಗಳು ತಮ್ಮ ಭಾವನೆ ತೋರ್ಪಡಿಸಲು ಇಷ್ಟಪಡುವರು.
ವೃಷಭ
ಈ ರಾಶಿಯ ಜನರು ಸ್ಥಿತಪ್ರಜ್ಞರೂ, ಜವಾಬ್ದಾರಿಯುತರೂ, ಸಾವಧಾನಿಗಳೂ ಮತ್ತು ವಾಸ್ತವವನ್ನು ಆಧರಿಸಿ ಮುಂದುವರೆಯುವವರೂ ಆಗಿರುತ್ತಾರೆ. ಆದರೆ ಮೇಶರಾಶಿಯವರಿಗಿಂತ ಕಡಿಮೆ ಧೈರ್ಯ ತೋರುತ್ತಾರೆ. ಇನ್ನು ಈ ರಾಶಿಯವರು ಈ ವ್ಯಕ್ತಿಗಳು ವೈಭೋಗದ ಎಲ್ಲಾ ರೀತಿಯ ಅನುಭವವನ್ನು ಪಡೆಯಲು ಬಯಸುವರು. ಇವರು ಹೊಸ ಹೊಸ ಆಹಾರ ಮತ್ತು ಖಾದ್ಯದಲ್ಲಿ ಪ್ರಯೋಗ ಮಾಡಲು ಇಚ್ಛಿಸುವರು. ಇವರು ಯಾವಾಗಲೂ ಹೊಸ ರುಚಿಯನ್ನು ಅನುಭವಿಸಲು ಬಯಸುವರು. ಇವರು ತಿಂಡಿಪೋತರಾಗಿರುವರು.
ಮಿಥುನ
ಈ ರಾಶಿಯವರು ಎಲ್ಲಾ ವಿಷಯದಲ್ಲಿ ತಮ್ಮ ಕುತೂಹಲವನ್ನು ಪ್ರಕಟಿಸಿ ತಾವು ಎಲ್ಲೆಲ್ಲೂ ಸಲ್ಲುವವರು ಎಂಬ ಭಾವನೆಯನ್ನು ಹೊಂದಿರುತ್ತಾರೆ. ಆದರೆ ಯಾವುದೇ ಒಂದು ವಿಷಯದಲ್ಲಿ ತಮ್ಮ ಕುತೂಹಲವನ್ನು ಕೇಂದ್ರೀಕರಿಸಲು ವಿಫಲರಾಗುತ್ತಾರೆ. ಇವರಿಗೆ ಅತಿ ಆಕರ್ಷಕವಾಗಿ ಕಂಡ ವಿಷಯದಲ್ಲಿ ಮುನ್ನುಗ್ಗಲು ಇವರು ಧೈರ್ಯ ತೋರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇವರು ಯಾರೂ ಮುನ್ನುಗ್ಗದೆಡೆ ಮುನ್ನುಗ್ಗುವ ಧೈರ್ಯವನ್ನೂ ತೋರುತ್ತಾರೆ.
ಕಟಕ
ಈ ರಾಶಿಯ ಜನರು ಅತಿ ಸೂಕ್ಷ್ಮಮತಿಗಳಾಗಿದ್ದು ಹೆಚ್ಚಿನ ಸಂವೇದನಾಶಾಲಿಗಳೂ ಆಗಿರುತ್ತಾರೆ. ವೈಯಕ್ತಿಕವಾಗಿ ಇದು ಅಗತ್ಯವಿಲ್ಲದಿರುವ ಹೊರತು ಇವರು ಹೊಸ ವಿಷಯದೆಡೆ ಮುನ್ನುಗ್ಗಲು ಧೈರ್ಯ ತೋರುವುದಿಲ್ಲ.
ಸಿಂಹ
ಈ ರಾಶಿಯ ಜನರು ಜನ್ಮತಃ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಇವರು ಸದಾ ಆಕರ್ಷಣೆಯ ಕೇಂದ್ರವಾಗಿರಬೇಕು ಎಂದು ಆಶಿಸುತ್ತಾರೆ. ಎಲ್ಲರೂ ಇವರನ್ನು ಇಷ್ಟಪಡಬೇಕು ಎಂದು ಬಯಸುತ್ತಾರೆ. ಇದೇ ಕಾರಣಕ್ಕೆ ಇವರು ತಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ಹೊರಗೆಡವುವ ಧೈರ್ಯ ತೋರುತ್ತಾರೆ.
ಕನ್ಯಾ
ಈ ರಾಶಿಯ ಜನರು ಶಿಸ್ತುಬದ್ದರಾಗಿದ್ದು ತಮ್ಮ ನಿತ್ಯದ ಚಟುವಟಿಕೆಯಲ್ಲಿ ಒಪ್ಪ ಓರಣಗಳನ್ನೇ ಬಯಸುತ್ತಾರೆ. ಇವರಿಗೆ ತಮ್ಮ ಕೆಲಸದಲ್ಲಿಯೇ ಆಗಲಿ ಸಂಬಂಧಪಟ್ಟ ಇತರರಿಂದ ಪಡೆಯುವ ಸಹಾಯಗಳೇ ಆಗಲಿ ಓರಣವಾಗಿರಬೇಕು. ಇದಕ್ಕಾಗಿ ಇವರು ಕಠಿಣ ಕ್ರಮಗಳನ್ನು ಕೈಗೊಳ್ಳುವ ಧೈರ್ಯವನ್ನು ಪ್ರಕಟಿಸುತ್ತಾರೆ.
ತುಲಾ
ಈ ರಾಶಿಯ ಜನರು ತಮ್ಮ ಸಾಮರ್ಥ್ಯದ ಮಿತಿಗೆ ಹೊರತಾದ ಕಾರ್ಯಗಳಿಗೆ ಕೈ ಹಾಕಲು ಹೋಗುವುದೇ ಇಲ್ಲ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಮನುಷ್ಯರಿಗೆ ಸಾಮಾನ್ಯವಾಗಿದ್ದರೂ ಈ ರಾಶಿಯ ಜನರು ಸರಿಯಾದ ನಿರ್ಧಾರವನ್ನೇ ಕೈಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ.
ವೃಶ್ಚಿಕ
ಈ ರಾಶಿಯ ಜನರು ವಿವಿಧ ಗುಣಗಳನ್ನು ಹೊಂದಿದ್ದು ಧೈರ್ಯವಂತರಾಗಿರುವುದು ಇದರಲ್ಲೊಂದು. ಸಾಮಾನ್ಯವಾಗಿ ತಮ್ಮ ಚಟುವಟಿಕೆಯ ಬಗ್ಗೆ ಇವರು ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಾರೆ. ಇದೇ ಕಾರಣಕ್ಕೆ ಇವರು ಜೀವನದ ಇನ್ನೊಂದು ಮಗ್ಗುಲಿನ ಸಂತೋಷವನ್ನು ಕಳೆದುಕೊಳ್ಳುತ್ತಾರೆ. ಹೀಗೆ ಕಳೆದುಕೊಂಡಿರುವುದನ್ನು ಪಡೆಯಲು ಇವರು ಮುನ್ನುಗ್ಗಲು ಹೆಚ್ಚಾಗಿ ಯತ್ನಿಸುವುದಿಲ್ಲ.
ಧನು
ಈ ರಾಶಿಯವರು ಸಾಮಾನ್ಯವಾಗಿ ಎಲ್ಲಕೂ ಸೈ ಎನ್ನುವ ಮನೋಭಾವ ಹೊಂದಿರುತ್ತಾರೆ. ಇಲ್ಲ, ಸಾಧ್ಯವಿಲ್ಲ ಎಂದು ಹೇಳುವುದನ್ನು ಇವರು ಇಷ್ಟಪಡುವುದಿಲ್ಲ. ಹೀಗೆ ಹೇಳಬೇಕಾದರೆ ಏಕಾಗಿ ಹೇಳಬೇಕಾಗಿ ಬಂತು? ಇದನ್ನು ಹೇಳದಿರಲು ಏನು ಮಾಡಬಹುದು ಎಂಬತ್ತ ಅವರ ಚಿಂತನೆ ಹರಿಯುತ್ತದೆ ಹಾಗೂ ಈ ನಿಟ್ಟಿನಲ್ಲಿ ಮುಂದುವರೆಯುವ ಧೈರ್ಯವನ್ನು ಪ್ರಕಟಿಸುತ್ತಾರೆ.
ಮಕರ
ಈ ರಾಶಿಯ ಜನರು ಸಾಮಾನ್ಯವಾಗಿ ನಿಯಮಗಳನ್ನು ಪಾಲಿಸುವವರಾಗಿದ್ದು ಉತ್ತಮ ಪ್ರೇಮಿಗಳೂ ಆಗಿರುತ್ತಾರೆ. ಇವರು ಸಂಪ್ರದಾಯಸ್ಥರೂ, ಹಠಮಾರಿಗಳೂ ಆಗಿರುತ್ತಾರೆ. ಹೊಸ ವಿಷಯಕ್ಕೆ ಇವರನ್ನು ಒಲಿಸುವುದು ಮತ್ತು ಬದಲಿಸುವುದೇ ಬಹಳ ತ್ರಾಸದಾಯಕ ಕಾರ್ಯವಾಗಿದೆ.
ಕುಂಭ
ಈ ರಾಶಿಯ ಜನರು ತಮ್ಮ ಮೆದುಳು ಮತ್ತು ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅಂದರೆ ಭಾವನಾತ್ಮಕವಾದ ಯಾವುದೇ ವಿಷಯವನ್ನು ಇವರು ಎದುರಿಸಲು ಸಮರ್ಥರಾಗಿದ್ದು ಇದಕ್ಕಾಗಿ ಧೈರ್ಯದಿಂದ ಮುನ್ನುಗ್ಗಲು ಸದಾ ಸಿದ್ಧರಿರುತ್ತಾರೆ.
ಮೀನ
ಈ ರಾಶಿಯ ಜನರು ಸಾಮಾನ್ಯವಾಗಿ ತಮ್ಮ ಹಿಂದಿನ ದಿನಗಳ ದುಃಖವನ್ನೇ ಮೆಲುಕು ಹಾಕುತ್ತಾ ಋಣಾತ್ಮಕ ಭಾವನೆಯನ್ನು ಪ್ರಕಟಿಸುತ್ತಿರುತ್ತಾರೆ. ಇವರು ವಾಸ್ತವವನ್ನು ಎದುರಿಸಲು ಪುಕ್ಕಲುತನ ತೋರುತ್ತಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಹೊಸ ವಿಷಯದತ್ತ ಒಲವು ತೋರಲು ಇವರು ಧೈರ್ಯವನ್ನು ಎಲ್ಲರಿಗಿಂತ ಕಡೆಗೆ ಪ್ರಕಟಿಸುತ್ತಾರೆ.