Just In
- 33 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 1 hr ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 3 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 5 ರಾಶಿಯವರು ತಮ್ಮ ದಾರಿಯನ್ನು ಬಿಟ್ಟು ಬೇರೆಯವರ ಮಾತಿಗೆ ಬೆಲೆ ಕೊಡದ ವ್ಯಕ್ತಿಗಳು
ಸ್ವಾರ್ಥ ಎನ್ನುವುದು ಮನುಷ್ಯನಲ್ಲಿ ಅಡಗಿರುವ ಒಂದು ಗುಣ ಎನ್ನಬಹುದು. ಆದರೆ ಈ ಸ್ವಾರ್ಥದ ಗುಣ ಅತಿಯಾದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನ ಹಾಳುಮಾಡುತ್ತದೆ. ಒಂದು ಕುಟುಂಬ, ಸಮಾಜ ಹಾಗೂ ಸ್ನೇಹಿತರ ನಡುವೆ ಬೆರೆತು ಬಾಳಬೇಕು ಎಂದಾಗ ಸ್ವಾರ್ಥದ ಗುಣದಿಂದ ಹೊರ ಬರಬೇಕು. ಇಲ್ಲವಾದರೆ ಆತ್ಮೀಯರು ಸಿಗುವುದು ಕಷ್ಟ ಎಂತಲೇ ಹೇಳಬಹುದು. ಕೇವಲ ಸ್ವಾರ್ಥ ಗುಣಗಳನ್ನು ಅಳವಡಿಸಿಕೊಂಡರೆ ವಿಶ್ವಾಸಘಾತುಕರಾಗಿ ಉಳಿಯಬೇಕಾಗುವುದು. ತಮ್ಮ ವಾದಗಳನ್ನು ಬಿಟ್ಟು ಬೇರೆಯವರ ಮಾತನ್ನು ಕೇಳುವುದು ಹಾಗೂ ದನ್ನು ಅಳವಡಿಸಿಕೊಳ್ಳುವುದನ್ನು ಕಲಿತರೆ ನಮ್ಮ ಶಕ್ತಿ ಇನ್ನಷ್ಟು ದ್ವಿಗುಣವಾಗುವುದು.
ಯಾವಾಗ ನಾವು ನಮ್ಮ ಸ್ವಾರ್ಥ ಸ್ವಭಾವ ಅಥವಾ ಗುಣವನ್ನು ಸಾಕಷ್ಟು ದೂರ ಇಡುತ್ತೇವೆಯೋ ಆಗ ನಾವೊಬ್ಬ ಉತ್ತಮ ವ್ಯಕ್ತಿಗಳಾಗಿ ಬಾಳಬಹುದು. ಇತರರಿಗಾಗಿ ಸಹಾಯ ಮಾಡುವುದು ಅಥವಾ ಬಾಳುವುದರಲ್ಲಿ ಒಂದು ಸಿಹಿಯಾದ ಅನುಭವ ಇರುತ್ತದೆ. ಅಂತಹ ಒಂದು ಅದ್ಭುತ ಅನುಭವವನ್ನು ನಾವು ಪಡೆದುಕೊಳ್ಳುತ್ತೇವೆ ಎಂದರೆ ಅನೇಕ ಮಂದಿಗೆ ಬಹಳ ಹತ್ತಿರದ ವ್ಯಕ್ತಿಗಳಾಗಿರುತ್ತೇವೆ ಎಂದು ಹೇಳಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವ್ಯಕ್ತಿಗಳು ಬಹಳ ಸ್ವಾರ್ಥಿಗಳಾಗಿರುತ್ತಾರೆ. ಅವರು ಸದಾ ತಮ್ಮ ಬಗ್ಗೆಯೇ ಯೋಚಿಸುತ್ತಾರೆ. ಇತರರ ಬಗ್ಗೆ ಕೊಂಚವೂ ಚಿಂತಿಸುವುದಿಲ್ಲ. ಇಂತಹ ವ್ಯಕ್ತಿಗಳು ನಮ್ಮ ನಡುವೆ ಇದ್ದರೂ ನಮಗೆ ಅವರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಅವರ ರಾಶಿಚಕ್ರಗಳನ್ನು ತಿಳಿದುಕೊಂಡರೆ ಅವರ ಗುಣಗಳನ್ನು ಹೇಳಬಹುದು ಎಂದು ಹೇಳಲಾಗುವುದು. ಹಾಗಾದರೆ ಯಾವ ರಾಶಿಚಕ್ರದವರು ಈ ಗುಣಗಳನ್ನು ಹೊಂದಿರುತ್ತಾರೆ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....
ಕುಂಭ
ಈ ರಾಶಿಚಕ್ರದವರು ಅತ್ಯಂತ ಮುಕ್ತ ಚಿಂತಕರು ಎನ್ನಬಹುದು. ಇವರು ಏನು ಮಾಡಬೇಕು? ಏನು ಹೇಳಬೇಕು ಎನ್ನುವುದರ ಬಗ್ಗೆ ಸಾಕಷ್ಟು ತಿಳಿದಿರುತ್ತಾರೆ. ಇತರರ ಜನಪ್ರಿಯತೆಯನ್ನು ಅಷ್ಟಾಗಿ ಇಷ್ಟಪಡದೆ ಇರುವುದರಿಂದ ಇವರು ಇತರರನ್ನು ಶ್ಲಾಘಿಸುವುದಿಲ್ಲ. ಇವರು ತಮ್ಮ ಬಗ್ಗೆ ಅತಿಯಾಗಿ ಚಿಂತಿಸುತ್ತಾರೆ. ಎಲ್ಲವೂ ತಮಗಾಗಿಯೇ ಇರಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಹೊಂದಿರುತ್ತಾರೆ. ಜೊತೆಗೆ ಪ್ರತಿಯೊಂದರಲ್ಲೂ ಇವರು ತಮ್ಮದೇ
ಆದ ವೈಯಕ್ತಿಕ ಅಭಿಪ್ರಾಯವನ್ನು ಹೊಂದಿರುತ್ತಾರೆ.
ಧನು
ಅತ್ಯಂತ ಧೈರ್ಯಶಾಲಿಯಾದ ಇವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಇವರು ಏನು ಮಾಡಬೇಕು ಎಂದು ಬಯಸುತ್ತಾರೋ ಅದನ್ನೇ ಮಾಡುತ್ತಾರೆ. ಬೇರೆ ವ್ಯಕ್ತಿಗಳ ಅಡೆತಡೆ ಅಥವಾ ಕಟ್ಟುಪಾಡನ್ನು ಇವರು ಇಷ್ಟಪಡರು. ಸಂದರ್ಭಗಳಿಗೆ ಬದ್ಧರಾಗಿರಲು ಬಯಸುವುದಿಲ್ಲ. ಇವರು ತಮ್ಮದೇ ಆದ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೊಂದಿರುವುದರಿಂದ ತಮ್ಮ ಹಾದಿಯಲ್ಲಿ ಬರುವ ಸಹಾಯ ಮತ್ತು ಅಪಾಯವನ್ನು ತಾವೇ ಎದುರಿಸುತ್ತಾರೆ.
ಮೇಷ
ಈ ರಾಶಿಯವರು ಸದಾ ಸ್ವತಂತ್ರರಾಗಿರಲು ಬಯಸುವರು. ಇವರು ಯಾವುದೇ ವಿಚಾರಗಳ ಕುರಿತು ಇತರರ ಅಭಿಪ್ರಾಯಕ್ಕೆ ಕಾಯುವುದಿಲ್ಲ. ತಮ್ಮದೇ ಆದ ನಿರ್ಧಾರವನ್ನು ಕೈಗೊಳ್ಳುವರು. ಅದು ಕೆಲವೊಮ್ಮೆ ತಪ್ಪು ನಿರ್ಧಾರವೂ ಆಗಿರುತ್ತದೆ. ಇವರು ಸಕಾರಾತ್ಮಕ ವಿಚಾರಗಳಿಗೆ ಹೆಚ್ಚು ಒತ್ತುಕೊಡುವುದನ್ನು ಕಲಿಯಬೇಕು. ಜೊತೆಗೆ ಉತ್ತಮ ಭಾವನೆಗಳ ಕಡೆಗೆ ಶ್ರಮಿಸಬೇಕು.
ಮಿಥುನ
ಈ ವ್ಯಕ್ತಿಗಳು ಸಾಮಾನ್ಯವಾಗಿ ಇತರರ ಬಗ್ಗೆ ಅಸಯ್ಯ ಪಡುವುದಿಲ್ಲ. ಜೊತೆಗೆ ಯಾವುದೇ ಕಾರಣಕ್ಕೂ ಇತರರ ಹೃದಯಕ್ಕೆ ನೋವುಂಟುಮಾಡುವಂತಹ ಟೀಕೆಗಳನ್ನು ಮಾಡುವುದಿಲ್ಲ. ಅದರ ಬದಲಿಗೆ ಇತರರಿಗೆ ಸಂತೋಷ ಆಗುವಂತಹ ವಿಚಾರವನ್ನು ಹೇಳುತ್ತಾರೆ. ಅವರಿಗೆ ಸಹಾಯ ಮಾಡುತ್ತಾರೆ. ಅತ್ಯಂತ ಬುದ್ಧಿವಂತರಾದ ಇವರು ತಮ್ಮ ಬಗ್ಗೆ ಯೋಚಿಸುವುದು ಹೆಚ್ಚು. ಅಂತೆಯೇ ತಮಗೆ ಬೇಕಾದ ರೀತಿಯಲ್ಲಿಯೇ ನಡೆದುಕೊಳ್ಳುವರು.
ಮಕರ
ಈ ವ್ಯಕ್ತಿಗಳು ಅತ್ಯಂತ ಶ್ರಮ ಜೀವಿಗಳು ಎನ್ನುವ ಪಟ್ಟಕ್ಕೆ ಹೆಸರುವಾಸಿ ಯಾಗಿದ್ದಾರೆ. ಅಲ್ಲದೆ ಅತ್ಯಂತ ಸ್ವತಂತ್ರ ರಾಶಿಚಿಹ್ನೆಗಳು ಎಂದು ಸಹ ಹೇಳಲಾಗುವುದು. ಇವರು ಆಯ್ಕೆ ಮಾಡುವ ಕೆಲಸವು ಭಾವೋದ್ರಿಕ್ತ ವಿಚಾರವಾಗಿರುತ್ತದೆ. ಆರ್ಥಿಕ ಸ್ವಾತಂತ್ರ್ಯದಿಂದ ಬರುವ ಸ್ವಾತಂತ್ರ್ಯವನ್ನು ಇವರು ಇಷ್ಟಪಡುವರು. ಯಾವುದೇ ನಿರ್ಬಂಧಗಳಿಗೆ ಒಳಗಾಗದೆ ಕೆಲಸ ಮಾಡಲು ಬಯಸುವ ಇವರು ಇತರರ ಅಭಿಪ್ರಾಯಯಗಳಿಗೆ ಪ್ರಾಮುಖ್ಯತೆ ನೀಡರು. ಬದಲಾಗಿ ಮೇಲಾಧಿಕಾರಿಗಳಂತೆ ಕೆಲಸ ಮಾಡಲು ಬಯಸುವರು.
ಕನ್ಯಾ
ಈ ವ್ಯಕ್ತಿಗಳು ಯಾರನ್ನಾದರೂ ಎಂತಹ ಸನ್ನಿವೇಶದಲ್ಲಾದರೂ ನಿಯಂತ್ರಣಕ್ಕೆ ತರಬಹುದು ಎಂದು ಹೇಳಬಹುದು. ತಮ್ಮದೇ ಆದ ರೀತಿಯಲ್ಲಿ ಸಂಶೋಧನೆಯನ್ನು ಮಾಡುತ್ತಾರೆ. ಸತ್ಯದಿಂದ ಇರುವುದನ್ನು ಹೆಚ್ಚು ಬಯಸುವ ಇವರು ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ ಎನ್ನುವುದನ್ನು ಬಲು ಸುಲಭವಾಗಿ ತಿಳಿದಿರುತ್ತಾರೆ. ಆದರೆ ಇತರ ವ್ಯಕ್ತಿಗಳ ಅಭಿಪ್ರಾಯ ಅಥವಾ ಮಾತನ್ನು ಅಷ್ಟಾಗಿ ಪರಿಗಣಿಸುವುದಿಲ್ಲ. ಆದಷ್ಟು ಸ್ವಾವಲಂಭಿಯಾಗಿರಲು ಬಯಸುವರು. ಇವರು ಒಂದು ಗಡಿಯನ್ನು
ಹೊಂದಿದ್ದಾರೆ. ಅದನ್ನು ಮೀರಿ ಯಾರು ಬರುವುದನ್ನು ಇಷ್ಟಪಡುವುದಿಲ್ಲ.