Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ದೆಹಲಿಯಲ್ಲಿ ಗುಟ್ಕಾ, ಪಾನ್ ಮಸಾಲ ಪ್ಯಾಕೆಟ್ ಗಳಿಂದ ಒಳಚರಂಡಿ ಬ್ಲಾಕ್ ಆಗುತ್ತಿದೆಯಂತೆ!
ಗುಟ್ಕಾ ಮತ್ತು ಪಾನ್ ಮಸಾಲವು ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದೇ ಈಗ ದೆಹಲಿಯಲ್ಲಿ ಇದು ಒಳಚರಂಡಿ ಬ್ಲಾಕ್ ಗೆ ಕಾರಣವಾಗಿ ತುಂಬಾ ಅಪಾಯವನ್ನು ಉಂಟು ಮಾಡಿದೆ. ದೆಹಲಿಯಲ್ಲಿ ಜನರು ಅತಿಯಾಗಿ ಗುಟ್ಕಾ ಮತ್ತು ಪಾನ್ ಮಸಾಲ ಸೇವನೆ ಮಾಡುವ ಕಾರಣದಿಂದಾಗಿ ಅದರ ಪ್ಯಾಕೆಟ್ ಗಳು ಚರಂಡಿ ಸೇರಿಕೊಂಡು ಬ್ಲಾಕ್ ಆಗಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.
ಅಧ್ಯಯನವೊಂದರ ಪ್ರಕಾರ ದೆಹಲಿಯಲ್ಲಿ ಚರಂಡಿ ಬ್ಲಾಕ್ ಆಗಲು ಕಾರಣವಾಗುವುದರಲ್ಲಿ ಐದನೇ ಒಂದು ಭಾಗವು ಗುಟ್ಕಾ ಮತ್ತು ಪಾನ್ ಮಸಾಲ್ ಪ್ಯಾಕೆಟ್ ಗಳು ಎಂದು ಹೇಳಿವೆ...

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ
ಖಾರಪುರದಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ ದೆಹಲಿಯಲ್ಲಿ ಮಳೆಗಾಲದ ವೇಳೆ ಕೃತಕ ನೆರೆ ಸೃಷ್ಟಿಯಾಗಲು ಶೇ.22ರಷ್ಟು ಗುಟ್ಕಾ ಮತ್ತು ಪಾನ್ ಮಸಾಲ ಪ್ಯಾಕೇಟ್ ಗಳು ಎಂದು ಹೇಳಿವೆ.ದೆಹಲಿಯಲ್ಲಿರುವ ಚರಂಡಿಗಳು ಗುಟ್ಕಾದ ಸಣ್ಣ ಫ್ಯಾಕ್ಟರಿಯಂತೆ ಕಂಡುಬರುತ್ತದೆ.

ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ
ಸಾಮಾನ್ಯ ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ. ಜನರು ಗುಟ್ಕಾ ಹಾಗೂ ಪಾನ್ ಮಸಾಲ ತಿಂದು ಅದರ ಪ್ಯಾಕೇಟ್ ಗಳನ್ನು ರಸ್ತೆ ಬದಿ ಎಸೆದುಬಿಡುತ್ತಾರೆ. ಇದು ಚರಂಡಿಯೊಳಗೆ ಹೋಗಿ ಅಲ್ಲಿ ಜಮೆಯಾಗಿ ಚರಂಡಿ ಬ್ಲಾಕ್ ಆಗುವಂತೆ ಮಾಡುವುದು. ಐಐಟಿಯ ನಗರಾಭಿವೃದ್ಧಿ ಯೋಜನೆಯ ಅಧ್ಯಯನ ಪ್ರಕಾರ ದೆಹಲಿಯ ಚರಂಡಿಗಳಲ್ಲಿ ಶೇ.27ರಷ್ಟು ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಬ್ಯಾಗ್ ಗಳು, ಶೇ.39ರಷ್ಟು ಕಾಗದ ಮತ್ತು ಇತರ ಸಾಮಗ್ರಿಗಳು ಮತ್ತು ಶೇ.12ರಷ್ಟು ಎಲೆಗಳು ಮತ್ತು ಮಣ್ಣು ಇದೆ.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ!
ಪ್ರತೀ ವರ್ಷ ಇದೇ ಕಾರಣದಿಂದಾಗಿ ದೆಹಲಿ ಜನರಿಗೆ ಕೃತಕ ನೆರೆಯ ಸಮಸ್ಯೆ ಉಂಟಾಗುವುದು ಎಂದು ಅಧ್ಯಯನವು ತಿಳಿಸಿದೆ. ಇಂತಹ ಆಘಾತಕಾರಿ ವರದಿಯ ಬಳಿಕ ಜನರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಕ್ಯಾನ್ಸರ್ ನಂತಹ ರೋಗ ತರಬಲ್ಲ ಗುಟ್ಕಾ ಮತ್ತು ಪಾನ್ ಮಸಾಲ ತಿನ್ನದಂತೆ ಅಭಿಯಾನ ನಡೆಸಬೇಕು. ಇಷ್ಟು ಮಾತ್ರವಲ್ಲದೆ ಚರಂಡಿಗೆ ಇದರ ಪ್ಯಾಕೇಟ್ ಗಳನ್ನು ಬಿಸಾಕುವುದನ್ನು ನಿಲ್ಲಿಸಬೇಕು.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ! ನಿಮ್ಮ ಅಭಿಪ್ರಾಯವೇನು?
ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಭಾರತದ ಯಾವ ಭಾಗದಲ್ಲಿ ಅತೀ ಹೆಚ್ಚು ಗುಟ್ಕಾ ಸೇವನೆ ಮಾಡುತ್ತಾರೆಂದು ನಿಮಗೆ ತಿಳಿದಿದೆಯಾ? ಇದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.



Click it and Unblock the Notifications