Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
ದೆಹಲಿಯಲ್ಲಿ ಗುಟ್ಕಾ, ಪಾನ್ ಮಸಾಲ ಪ್ಯಾಕೆಟ್ ಗಳಿಂದ ಒಳಚರಂಡಿ ಬ್ಲಾಕ್ ಆಗುತ್ತಿದೆಯಂತೆ!
ಗುಟ್ಕಾ ಮತ್ತು ಪಾನ್ ಮಸಾಲವು ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದೇ ಈಗ ದೆಹಲಿಯಲ್ಲಿ ಇದು ಒಳಚರಂಡಿ ಬ್ಲಾಕ್ ಗೆ ಕಾರಣವಾಗಿ ತುಂಬಾ ಅಪಾಯವನ್ನು ಉಂಟು ಮಾಡಿದೆ. ದೆಹಲಿಯಲ್ಲಿ ಜನರು ಅತಿಯಾಗಿ ಗುಟ್ಕಾ ಮತ್ತು ಪಾನ್ ಮಸಾಲ ಸೇವನೆ ಮಾಡುವ ಕಾರಣದಿಂದಾಗಿ ಅದರ ಪ್ಯಾಕೆಟ್ ಗಳು ಚರಂಡಿ ಸೇರಿಕೊಂಡು ಬ್ಲಾಕ್ ಆಗಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.
ಅಧ್ಯಯನವೊಂದರ ಪ್ರಕಾರ ದೆಹಲಿಯಲ್ಲಿ ಚರಂಡಿ ಬ್ಲಾಕ್ ಆಗಲು ಕಾರಣವಾಗುವುದರಲ್ಲಿ ಐದನೇ ಒಂದು ಭಾಗವು ಗುಟ್ಕಾ ಮತ್ತು ಪಾನ್ ಮಸಾಲ್ ಪ್ಯಾಕೆಟ್ ಗಳು ಎಂದು ಹೇಳಿವೆ...

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ
ಖಾರಪುರದಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ ದೆಹಲಿಯಲ್ಲಿ ಮಳೆಗಾಲದ ವೇಳೆ ಕೃತಕ ನೆರೆ ಸೃಷ್ಟಿಯಾಗಲು ಶೇ.22ರಷ್ಟು ಗುಟ್ಕಾ ಮತ್ತು ಪಾನ್ ಮಸಾಲ ಪ್ಯಾಕೇಟ್ ಗಳು ಎಂದು ಹೇಳಿವೆ.ದೆಹಲಿಯಲ್ಲಿರುವ ಚರಂಡಿಗಳು ಗುಟ್ಕಾದ ಸಣ್ಣ ಫ್ಯಾಕ್ಟರಿಯಂತೆ ಕಂಡುಬರುತ್ತದೆ.

ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ
ಸಾಮಾನ್ಯ ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ. ಜನರು ಗುಟ್ಕಾ ಹಾಗೂ ಪಾನ್ ಮಸಾಲ ತಿಂದು ಅದರ ಪ್ಯಾಕೇಟ್ ಗಳನ್ನು ರಸ್ತೆ ಬದಿ ಎಸೆದುಬಿಡುತ್ತಾರೆ. ಇದು ಚರಂಡಿಯೊಳಗೆ ಹೋಗಿ ಅಲ್ಲಿ ಜಮೆಯಾಗಿ ಚರಂಡಿ ಬ್ಲಾಕ್ ಆಗುವಂತೆ ಮಾಡುವುದು. ಐಐಟಿಯ ನಗರಾಭಿವೃದ್ಧಿ ಯೋಜನೆಯ ಅಧ್ಯಯನ ಪ್ರಕಾರ ದೆಹಲಿಯ ಚರಂಡಿಗಳಲ್ಲಿ ಶೇ.27ರಷ್ಟು ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಬ್ಯಾಗ್ ಗಳು, ಶೇ.39ರಷ್ಟು ಕಾಗದ ಮತ್ತು ಇತರ ಸಾಮಗ್ರಿಗಳು ಮತ್ತು ಶೇ.12ರಷ್ಟು ಎಲೆಗಳು ಮತ್ತು ಮಣ್ಣು ಇದೆ.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ!
ಪ್ರತೀ ವರ್ಷ ಇದೇ ಕಾರಣದಿಂದಾಗಿ ದೆಹಲಿ ಜನರಿಗೆ ಕೃತಕ ನೆರೆಯ ಸಮಸ್ಯೆ ಉಂಟಾಗುವುದು ಎಂದು ಅಧ್ಯಯನವು ತಿಳಿಸಿದೆ. ಇಂತಹ ಆಘಾತಕಾರಿ ವರದಿಯ ಬಳಿಕ ಜನರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಕ್ಯಾನ್ಸರ್ ನಂತಹ ರೋಗ ತರಬಲ್ಲ ಗುಟ್ಕಾ ಮತ್ತು ಪಾನ್ ಮಸಾಲ ತಿನ್ನದಂತೆ ಅಭಿಯಾನ ನಡೆಸಬೇಕು. ಇಷ್ಟು ಮಾತ್ರವಲ್ಲದೆ ಚರಂಡಿಗೆ ಇದರ ಪ್ಯಾಕೇಟ್ ಗಳನ್ನು ಬಿಸಾಕುವುದನ್ನು ನಿಲ್ಲಿಸಬೇಕು.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ! ನಿಮ್ಮ ಅಭಿಪ್ರಾಯವೇನು?
ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಭಾರತದ ಯಾವ ಭಾಗದಲ್ಲಿ ಅತೀ ಹೆಚ್ಚು ಗುಟ್ಕಾ ಸೇವನೆ ಮಾಡುತ್ತಾರೆಂದು ನಿಮಗೆ ತಿಳಿದಿದೆಯಾ? ಇದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.



Click it and Unblock the Notifications











