Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದೆಹಲಿಯಲ್ಲಿ ಗುಟ್ಕಾ, ಪಾನ್ ಮಸಾಲ ಪ್ಯಾಕೆಟ್ ಗಳಿಂದ ಒಳಚರಂಡಿ ಬ್ಲಾಕ್ ಆಗುತ್ತಿದೆಯಂತೆ!
ಗುಟ್ಕಾ ಮತ್ತು ಪಾನ್ ಮಸಾಲವು ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದೇ ಈಗ ದೆಹಲಿಯಲ್ಲಿ ಇದು ಒಳಚರಂಡಿ ಬ್ಲಾಕ್ ಗೆ ಕಾರಣವಾಗಿ ತುಂಬಾ ಅಪಾಯವನ್ನು ಉಂಟು ಮಾಡಿದೆ. ದೆಹಲಿಯಲ್ಲಿ ಜನರು ಅತಿಯಾಗಿ ಗುಟ್ಕಾ ಮತ್ತು ಪಾನ್ ಮಸಾಲ ಸೇವನೆ ಮಾಡುವ ಕಾರಣದಿಂದಾಗಿ ಅದರ ಪ್ಯಾಕೆಟ್ ಗಳು ಚರಂಡಿ ಸೇರಿಕೊಂಡು ಬ್ಲಾಕ್ ಆಗಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.
ಅಧ್ಯಯನವೊಂದರ ಪ್ರಕಾರ ದೆಹಲಿಯಲ್ಲಿ ಚರಂಡಿ ಬ್ಲಾಕ್ ಆಗಲು ಕಾರಣವಾಗುವುದರಲ್ಲಿ ಐದನೇ ಒಂದು ಭಾಗವು ಗುಟ್ಕಾ ಮತ್ತು ಪಾನ್ ಮಸಾಲ್ ಪ್ಯಾಕೆಟ್ ಗಳು ಎಂದು ಹೇಳಿವೆ...

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ
ಖಾರಪುರದಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ ದೆಹಲಿಯಲ್ಲಿ ಮಳೆಗಾಲದ ವೇಳೆ ಕೃತಕ ನೆರೆ ಸೃಷ್ಟಿಯಾಗಲು ಶೇ.22ರಷ್ಟು ಗುಟ್ಕಾ ಮತ್ತು ಪಾನ್ ಮಸಾಲ ಪ್ಯಾಕೇಟ್ ಗಳು ಎಂದು ಹೇಳಿವೆ.ದೆಹಲಿಯಲ್ಲಿರುವ ಚರಂಡಿಗಳು ಗುಟ್ಕಾದ ಸಣ್ಣ ಫ್ಯಾಕ್ಟರಿಯಂತೆ ಕಂಡುಬರುತ್ತದೆ.

ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ
ಸಾಮಾನ್ಯ ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ. ಜನರು ಗುಟ್ಕಾ ಹಾಗೂ ಪಾನ್ ಮಸಾಲ ತಿಂದು ಅದರ ಪ್ಯಾಕೇಟ್ ಗಳನ್ನು ರಸ್ತೆ ಬದಿ ಎಸೆದುಬಿಡುತ್ತಾರೆ. ಇದು ಚರಂಡಿಯೊಳಗೆ ಹೋಗಿ ಅಲ್ಲಿ ಜಮೆಯಾಗಿ ಚರಂಡಿ ಬ್ಲಾಕ್ ಆಗುವಂತೆ ಮಾಡುವುದು. ಐಐಟಿಯ ನಗರಾಭಿವೃದ್ಧಿ ಯೋಜನೆಯ ಅಧ್ಯಯನ ಪ್ರಕಾರ ದೆಹಲಿಯ ಚರಂಡಿಗಳಲ್ಲಿ ಶೇ.27ರಷ್ಟು ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಬ್ಯಾಗ್ ಗಳು, ಶೇ.39ರಷ್ಟು ಕಾಗದ ಮತ್ತು ಇತರ ಸಾಮಗ್ರಿಗಳು ಮತ್ತು ಶೇ.12ರಷ್ಟು ಎಲೆಗಳು ಮತ್ತು ಮಣ್ಣು ಇದೆ.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ!
ಪ್ರತೀ ವರ್ಷ ಇದೇ ಕಾರಣದಿಂದಾಗಿ ದೆಹಲಿ ಜನರಿಗೆ ಕೃತಕ ನೆರೆಯ ಸಮಸ್ಯೆ ಉಂಟಾಗುವುದು ಎಂದು ಅಧ್ಯಯನವು ತಿಳಿಸಿದೆ. ಇಂತಹ ಆಘಾತಕಾರಿ ವರದಿಯ ಬಳಿಕ ಜನರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಕ್ಯಾನ್ಸರ್ ನಂತಹ ರೋಗ ತರಬಲ್ಲ ಗುಟ್ಕಾ ಮತ್ತು ಪಾನ್ ಮಸಾಲ ತಿನ್ನದಂತೆ ಅಭಿಯಾನ ನಡೆಸಬೇಕು. ಇಷ್ಟು ಮಾತ್ರವಲ್ಲದೆ ಚರಂಡಿಗೆ ಇದರ ಪ್ಯಾಕೇಟ್ ಗಳನ್ನು ಬಿಸಾಕುವುದನ್ನು ನಿಲ್ಲಿಸಬೇಕು.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ! ನಿಮ್ಮ ಅಭಿಪ್ರಾಯವೇನು?
ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಭಾರತದ ಯಾವ ಭಾಗದಲ್ಲಿ ಅತೀ ಹೆಚ್ಚು ಗುಟ್ಕಾ ಸೇವನೆ ಮಾಡುತ್ತಾರೆಂದು ನಿಮಗೆ ತಿಳಿದಿದೆಯಾ? ಇದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.



Click it and Unblock the Notifications
