Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ದೆಹಲಿಯಲ್ಲಿ ಗುಟ್ಕಾ, ಪಾನ್ ಮಸಾಲ ಪ್ಯಾಕೆಟ್ ಗಳಿಂದ ಒಳಚರಂಡಿ ಬ್ಲಾಕ್ ಆಗುತ್ತಿದೆಯಂತೆ!
ಗುಟ್ಕಾ ಮತ್ತು ಪಾನ್ ಮಸಾಲವು ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದೇ ಈಗ ದೆಹಲಿಯಲ್ಲಿ ಇದು ಒಳಚರಂಡಿ ಬ್ಲಾಕ್ ಗೆ ಕಾರಣವಾಗಿ ತುಂಬಾ ಅಪಾಯವನ್ನು ಉಂಟು ಮಾಡಿದೆ. ದೆಹಲಿಯಲ್ಲಿ ಜನರು ಅತಿಯಾಗಿ ಗುಟ್ಕಾ ಮತ್ತು ಪಾನ್ ಮಸಾಲ ಸೇವನೆ ಮಾಡುವ ಕಾರಣದಿಂದಾಗಿ ಅದರ ಪ್ಯಾಕೆಟ್ ಗಳು ಚರಂಡಿ ಸೇರಿಕೊಂಡು ಬ್ಲಾಕ್ ಆಗಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.
ಅಧ್ಯಯನವೊಂದರ ಪ್ರಕಾರ ದೆಹಲಿಯಲ್ಲಿ ಚರಂಡಿ ಬ್ಲಾಕ್ ಆಗಲು ಕಾರಣವಾಗುವುದರಲ್ಲಿ ಐದನೇ ಒಂದು ಭಾಗವು ಗುಟ್ಕಾ ಮತ್ತು ಪಾನ್ ಮಸಾಲ್ ಪ್ಯಾಕೆಟ್ ಗಳು ಎಂದು ಹೇಳಿವೆ...

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ
ಖಾರಪುರದಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ ದೆಹಲಿಯಲ್ಲಿ ಮಳೆಗಾಲದ ವೇಳೆ ಕೃತಕ ನೆರೆ ಸೃಷ್ಟಿಯಾಗಲು ಶೇ.22ರಷ್ಟು ಗುಟ್ಕಾ ಮತ್ತು ಪಾನ್ ಮಸಾಲ ಪ್ಯಾಕೇಟ್ ಗಳು ಎಂದು ಹೇಳಿವೆ.ದೆಹಲಿಯಲ್ಲಿರುವ ಚರಂಡಿಗಳು ಗುಟ್ಕಾದ ಸಣ್ಣ ಫ್ಯಾಕ್ಟರಿಯಂತೆ ಕಂಡುಬರುತ್ತದೆ.

ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ
ಸಾಮಾನ್ಯ ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ. ಜನರು ಗುಟ್ಕಾ ಹಾಗೂ ಪಾನ್ ಮಸಾಲ ತಿಂದು ಅದರ ಪ್ಯಾಕೇಟ್ ಗಳನ್ನು ರಸ್ತೆ ಬದಿ ಎಸೆದುಬಿಡುತ್ತಾರೆ. ಇದು ಚರಂಡಿಯೊಳಗೆ ಹೋಗಿ ಅಲ್ಲಿ ಜಮೆಯಾಗಿ ಚರಂಡಿ ಬ್ಲಾಕ್ ಆಗುವಂತೆ ಮಾಡುವುದು. ಐಐಟಿಯ ನಗರಾಭಿವೃದ್ಧಿ ಯೋಜನೆಯ ಅಧ್ಯಯನ ಪ್ರಕಾರ ದೆಹಲಿಯ ಚರಂಡಿಗಳಲ್ಲಿ ಶೇ.27ರಷ್ಟು ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಬ್ಯಾಗ್ ಗಳು, ಶೇ.39ರಷ್ಟು ಕಾಗದ ಮತ್ತು ಇತರ ಸಾಮಗ್ರಿಗಳು ಮತ್ತು ಶೇ.12ರಷ್ಟು ಎಲೆಗಳು ಮತ್ತು ಮಣ್ಣು ಇದೆ.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ!
ಪ್ರತೀ ವರ್ಷ ಇದೇ ಕಾರಣದಿಂದಾಗಿ ದೆಹಲಿ ಜನರಿಗೆ ಕೃತಕ ನೆರೆಯ ಸಮಸ್ಯೆ ಉಂಟಾಗುವುದು ಎಂದು ಅಧ್ಯಯನವು ತಿಳಿಸಿದೆ. ಇಂತಹ ಆಘಾತಕಾರಿ ವರದಿಯ ಬಳಿಕ ಜನರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಕ್ಯಾನ್ಸರ್ ನಂತಹ ರೋಗ ತರಬಲ್ಲ ಗುಟ್ಕಾ ಮತ್ತು ಪಾನ್ ಮಸಾಲ ತಿನ್ನದಂತೆ ಅಭಿಯಾನ ನಡೆಸಬೇಕು. ಇಷ್ಟು ಮಾತ್ರವಲ್ಲದೆ ಚರಂಡಿಗೆ ಇದರ ಪ್ಯಾಕೇಟ್ ಗಳನ್ನು ಬಿಸಾಕುವುದನ್ನು ನಿಲ್ಲಿಸಬೇಕು.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ! ನಿಮ್ಮ ಅಭಿಪ್ರಾಯವೇನು?
ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಭಾರತದ ಯಾವ ಭಾಗದಲ್ಲಿ ಅತೀ ಹೆಚ್ಚು ಗುಟ್ಕಾ ಸೇವನೆ ಮಾಡುತ್ತಾರೆಂದು ನಿಮಗೆ ತಿಳಿದಿದೆಯಾ? ಇದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.



Click it and Unblock the Notifications