Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಈತ ಕತ್ತರಿಯ ಬದಲು ಬೆಂಕಿಹಚ್ಚಿ ತಲೆಕೂದಲು ಕತ್ತರಿಸುತ್ತಾನೆ!
ಕತ್ತರಿಯ ಬದಲು ಬೆಂಕಿಯನ್ನು ಬಳಸಿ ಕೇಶ ಕತ್ತರಿಸುವ ಇದೊಂದು ವಿನೂತನ ವಿಧಾನ...ವಿಡಿಯೋ ವೈರಲ್ ಮುಂದೆ ಓದಿ..
ಕೇಶವನ್ನು ಸುಂದರವಾಗಿ ಕಾಣುವಂತೆ ಕತ್ತರಿಸುವುದೇ ಕ್ಷೌರಿಕನ ಕೆಲಸ. ಇದಕ್ಕೆ ಅಗತ್ಯವಾಗಿ ಬೇಕಾಗಿರುವ ಸಲಕರಣೆಗಳೆಂದರೆ ಕತ್ತರಿ ಮತ್ತು ಬಾಚಣಿಗೆ. ಕ್ಷೌರಿಕನ ಕಲಾತ್ಮಕತೆಯಿಂದಲೇ ಸುಂದರ ಕೇಶವಿನ್ಯಾಸ ಮೂಡಲು ಸಾಧ್ಯ. ಕೇಶವಿನ್ಯಾಸ ಚೆನ್ನಾಗಿದೆ ಎಂದು ನೋಡಿದವರು ಹೇಳಿದರೆ ಮಾಡಿಸಿಕೊಂಡವನಿಗೇನೋ ಸಂತೋಷ, ತೃಪ್ತಿ. ಮಂಗಳವಾರ ಕೂದಲು ಕತ್ತರಿಸುವುದು ಅಪಶಕುನವೇ?
ಈಗ ಭಿನ್ನ ವಿಭಿನ್ನ ಕೇಶವಿನ್ಯಾಸಗಳು ಗಮನ ಸೆಳೆಯುತ್ತಿದ್ದು ಇತ್ತೀಚೆಗೆ ಕತ್ತರಿಯ ಬದಲು ಬೆಂಕಿಯನ್ನು ಬಳಸಿ ಕೂದಲನ್ನು ವಿನ್ಯಾಸಗೊಳಿಸುವ ನೂತನ ವಿಧಾನ ಬಂದಿದ್ದು ನೋಡುವವರ ಎದೆ ಝಲ್ಲೆನಿಸುತ್ತದೆ. ಅಷ್ಟಕ್ಕೂ ಈ ಕೇಶವಿನ್ಯಾಸ ಪ್ರಾರಂಭವಾಗಿದ್ದು ಖ್ಯಾತ ಪಟ್ಟಣವಾದ ಗಾಝಾದಲ್ಲಿ. ಯಾವಾಗ ಈ ಪರಿಯ ಕೇಶಮುಂಡನ ನಗರದಲ್ಲಿ ಲಭ್ಯವಿದೆ ಎಂದು ಗೊತ್ತಾಯಿತೋ, ಆಗಲೇ ನಗರದ ಯುವಕರು, ಹುಡುಗರೆಲ್ಲಾ ಈ ಕ್ಷೌರಿಕನ ಅಂಗಡಿಗೆ ಜಮಾಯಿಸಿಬಿಟ್ಟಿದ್ದಾರೆ. ಬನ್ನಿ, ಬೆಂಕಿಯಿಂದ ಈತ ಹೇಗೆ ಕ್ಷೌರ ಮಾಡ್ತುತಾನೆ ನೋಡೋಣ...

ಈ ತಂತ್ರಕ್ಕೇನು ಹೆಸರು?
ಯಾವುದೇ ಹೊಸತು ಬಂದರೂ ಅದಕ್ಕೊಂದು ಹೆಸರಿಡಬೇಕಲ್ಲಾ, ನಮ್ಮಲ್ಲಾದರೆ ಅಗ್ನಿಕ್ಷೌರ ಎಂದು ಕರೆಯಬಹುದಾಗಿತ್ತು. ಆದರೆ ಇದಕ್ಕೆ ಇವರು ಬ್ಲೋ ಟಾರ್ಚ್ (Blowtorch) ಎಂದು ಹೆಸರಿಟ್ಟಿದ್ದಾರೆ.

ಗಾಝಾದಲ್ಲಿ ಬ್ಲೋಟಾರ್ಚ್ ನದ್ದೇ ಈಗ ಬೋಲ್ ಬಾಲಾ
ಈ ಪರಿಯ ಕ್ಷೌರ ಮಾಡಿಸಿಕೊಳ್ಳಲು ಯುವಕರೆಲ್ಲಾ ಮುಗಿಬಿದ್ದಿದ್ದು ಹೆಚ್ಚಿನವರು ಇದನ್ನು ಕೇವಲ ಕುತೂಹಲಕ್ಕಾಗಿ ಮಾಡಿಸಿಕೊಳ್ಳುತ್ತಿದ್ದಾರೆ. ಗಾಝಾ ಪಟ್ಟಣದಲ್ಲಿ ಈ ಪರಿಯ ಕ್ಷೌರ ಮಾಡಿಸಿಕೊಳ್ಳದಿರುವುದೇ ಒಂದು ಬಗೆಯ ಕೀಳರಿಮೆಯ ವಿಷಯವಾಗಿಬಿಟ್ಟಿದೆ.

ಬೆಂಕಿ ಹತ್ತಿಕೊಳ್ಳುವ ದ್ರವರೂಪದ ಲೇಪನ!
ಕ್ಷೌರಿಕ ಈ ವಿಧಾನಕ್ಕಾಗಿ ಇದುವರೆಗೆ ಯಾವುದೆಂದು ಪ್ರಕಟಿಸದ ದ್ರವರೂಪದ ಲೇಪನವನ್ನು ಕೂದಲ ಮೇಲೆ ಚಿಮುಕಿಸುತ್ತಾನೆ. ಬಳಿಕ ಬಾಚಣಿಗೆಯಲ್ಲಿ ತನಗೆ ಬೇಕಿದ್ದಂತೆ ಬಾಚಿ ಬಳಿಕ ಲೈಟರ್ ಒಂದರಿಂದ ಅಗ್ನಿಸ್ಪರ್ಶ ಮಾಡುತ್ತಾನೆ. ನಂತರ ಬೆಂಕಿ ಕೂದಲನ್ನು ಹೆಚ್ಚು ಸುಡಲು ಬಿಡದೇ ಚಕಚಕನೇ ಬಾಚಣಿಗೆ ಕತ್ತರಿ ಬಳಸಿ ಕತ್ತರಿಸುತ್ತಾನೆ.

ಈ ಪರಿಯ ಅಪಾಯಕ್ಕೆ ಏನು ಪ್ರೇರಣೆ?
ಗಾಝಾ ಪಟ್ಟಣದ ಕ್ಷೌರಿಕರು ವಿಶ್ವದ ಇತರ ವೃತ್ತಿಪರ ಕ್ಷೌರಿಕರಿಗೇನೂ ಕಡಿಮೆಯಿಲ್ಲ ಎಂದು ಜಗತ್ತಿಗೆ ತೋರಿಸುವುದೇ ಇದರ ಉದ್ದೇಶ ಎಂದು ಈ ನಾಪಿತರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬನ್ನಿ, ಈ ಅಗ್ನಿ ಕ್ಷೌರದ ಪರಿ ಹೇಗಿರುತ್ತದೆ ಎಂಬುದನ್ನು ಕೆಳಗಿನ ವೀಡಿಯೋ ಮೂಲಕ ನೋಡೋಣ:



Click it and Unblock the Notifications