Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಈ ಗ್ರಾಮದ ಕಥೆ ಕೇಳಿದರೆ ಕಟುಕನ ಕಣ್ಣಲ್ಲೂ ಕಣ್ಣೀರು ಸುರಿಯುತ್ತೆ
ಉತ್ತರ ಭಾರತದ ಜಾರ್ಖಂಡ್ ರಾಜ್ಯದ ಗ್ರಾಮವೊಂದರಲ್ಲಿ ಸ್ಥಾಪಿಸಿದ ಅಣುವಿದ್ಯುತ್ ಸ್ಥಾವರದಿಂದ ದೂರದ ನಗರಗಳಿಗೆ ಬೆಳಕು ಸಿಕ್ಕರೂ ಈ ಗ್ರಾಮದ ಕಥೆ ಏನಾಯ್ತು ಗೊತ್ತೇ? ಈ ಗ್ರಾಮಕ್ಕೆ ದಕ್ಕಿದ್ದು ವಿಷ!
ಹೆಚ್ಚಿನ ಜನರಿಗೆ ಉಪಯೋಗವಾಗುವುದಾದರೆ ಚಿಕ್ಕ ಗ್ರಾಮಗಳ ಜನರು ತಮ್ಮದೆಲ್ಲವನ್ನೂ ತ್ಯಾಗ ಮಾಡಬೇಕು ಎಂದು ನಾಗರಿಕತೆ ಬಯಸುತ್ತದೆ. ಉದಾಹರಣೆಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ಬೆಳಕು ನೀಡಬೇಕಾದರೆ ಈ ಅಣೆಕಟ್ಟಿನ ಹಿಂಭಾಗದ ವಿಸ್ತಾರದ ಸ್ಥಳ ಮುಳುಗಡೆಯಾಗುವ ಅಪಾಯ ಎದುರಾದಾಗ ಸಾವಿರಾರು ಹಳ್ಳಿಗಳ ಜನರು ತಮ್ಮ ವಂಶಸ್ಥರಿಂದ ಪಡೆದಿದ್ದ ಅಮೂಲ್ಯ ಜಮೀನನ್ನು ಮತ್ತು ತಮ್ಮ ನಿವಾಸಸ್ಥಾನವನ್ನೇ ಬಿಟ್ಟು ಬರಬೇಕಾಯಿತು.
ಇದೇ ರೀತಿಯಾಗಿ ಉತ್ತರ ಭಾರತದ ಜಾರ್ಖಂಡ್ ರಾಜ್ಯದ ಗ್ರಾಮವೊಂದರಲ್ಲಿ ಸ್ಥಾಪಿಸಿದ ಅಣುವಿದ್ಯುತ್ ಸ್ಥಾವರದಿಂದ ದೂರದ ನಗರಗಳಿಗೆ ಬೆಳಕು ಸಿಕ್ಕರೂ ಈ ಗ್ರಾಮದ ಕಥೆ ಏನಾಯ್ತು ಗೊತ್ತೇ? ಈ ಗ್ರಾಮಕ್ಕೆ ದಕ್ಕಿದ್ದು ವಿಷ! ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್ ಅನ್ನುತ್ತದೆ...
ವಿಶೇಷ ಸೂಚನೆ: ಈ ಲೇಖನಕ್ಕೆ ಬಳಸಲಾದ ಮಾಹಿತಿಗಳನ್ನು ಪಡೆದ ಮೂಲವನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ.

ಪಾರ್ವತೆ ಗೋಪೆ
ಈಕೆ ಕೇವಲ ಹದಿನೇಳು ವರ್ಷ ವಯಸ್ಸಿನ ಕಿಶೋರಿಯಾಗಿದ್ದು ಅಣುಸ್ಥಾವರದ ವಿಷದ ಪರಿಣಾಮವಾಗಿ Lumbar Scoliosis ಎಂಬ ಕಾಯಿಲೆಗೆ ತುತ್ತಾಗಿದ್ದಾಳೆ. ಈ ಕಾಯಿಲೆಯ ಲಕ್ಷಣವೆಂದರೆ ಈಕೆಯ ಬೆನ್ನುಮೂಳೆ ನೆಟ್ಟಗಿರಬೇಕಾಗಿದ್ದು ಈಗ ಇಂಗ್ಲಿಷ್ ಅಕ್ಷರದ ಎಸ್ (S) ಆಕಾರವನ್ನು ಪಡೆದಿದ್ದು ನೆಟ್ಟಗೆ ನಿಂತುಕೊಳ್ಳಲು ಆಗದೇ ಭಾರೀ ಕಷ್ಟವಾಗಿದೆ. ಈಕೆಗೆ ಸೂಕ್ತ ಚಿಕಿತ್ಸೆ ನೀಡಲು ಇದರ ದುಬಾರಿ ವೆಚ್ಚ ಅಡ್ಡಿಯಾಗಿದ್ದು ಇದುವರೆಗೆ ಸರ್ಕಾರದಿಂದ ಯಾವುದೇ ಸಹಾಯ ದೊರಕದೇ ಇರುವುದು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ರಾಕೇಶ್ ಗೋಪೆ
ಈ ಹದಿಮೂರು ವರ್ಷ ವಯಸ್ಸಿನ ಬಾಲಕನಿಗೆ muscular dystrophy ಎಂಬ ಕಾಯಿಲೆ ಆವರಿಸಿದೆ. ಇದರ ಪರಿಣಾಮವಾಗಿ ಇವನ ಕಾಲುಗಳು ಕಮಾನಿನಂತೆ ಬಾಗಿದ್ದು ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಪಾದಗಳು ನೆಲಕ್ಕೆ ಸಮಾನಾಂತರವಾಗಿರಬೇಕಾಗಿದ್ದುದು ಮೇಲ್ಮುಖವಾಗಿ ಕಮಾನಿನಂತೆ ಬಾಗಿವೆ ಆದರೂ ಈ ಊನವನ್ನು ಆತ ಊನವೆಂದು ಪರಿಗಣಿಸದೇ ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ನಡೆದಾಡುತ್ತಿದ್ದಾನೆ.

ಕಾರ್ತಿಕ್ ಗೋಪೆ
ಈ ಮೂರು ವರ್ಷದ ಪುಟ್ಟ ಬಾಲಕನಿಗೆ ವಿಷದ ಪರಿಣಾಮವಾಗಿ seizures ಎಂಬ ಕಾಯಿಲೆ ಆವರಿಸಿದೆ. ಇದರ ಪರಿಣಾಮವಾಗಿ ಈತನ ದೇಹ ವಿಕೃತಗೊಂಡಿದೆ. ಈತನನ್ನು ಎತ್ತಿಕೊಂಡು ಈತನ ತಾಯಿ ಸರ್ಕಾರದಿಂದ ಏನಾದರೂ ನೆರವು ಸಿಗುತ್ತದೆಯೇ ಎಂದು ಕಾಯುತ್ತಿದ್ದಾರೆ.

ಹರಧನ್ ಗೋಪೆ
ಈ ವ್ಯಕ್ತಿಯ ತಲೆಬುರುಡೆ ವಿಕೃತಗೊಂಡಿದ್ದು ಹಲ್ಲುಗಳೆಲ್ಲಾ ಉದುರಿ ಹೋಗಿವೆ. ತಲೆಬುರುಡೆ ಮಾತ್ರವಲ್ಲ, ದೇಹದ ಇತರ ಮೂಳೆಗಳೂ ವಿಕೃತಗೊಂಡಿವೆ. ಅಣುಸ್ಥಾವರದ ವಿಷಪ್ರಾಶನ ಎಷ್ಟು ಭೀಕರವಾಗಿರಬಹುದು ಎಂಬುದಕ್ಕೆ ಈತ ಜ್ವಲಂತ ಉದಾಹರಣೆಯಾಗಿದ್ದಾನೆ.

ಅನಾಮಿಕಾ ಉರಾವನ್
ಈಕೆ ಕೇವಲ ಹದಿಮೂರು ವರ್ಷದ ಬಾಲಕಿಯಾಗಿದ್ದು ಈಕೆಗೆ ದುರ್ಮಾಂಸದ ಗಡ್ಡೆಯೊಂದು ಬಾಧಿಸುತ್ತಿದೆ. ಇದು ದಿನೇ ದಿನೇ ಬೆಳೆಯುತ್ತಿದ್ದು ಕೆಲವರ್ಷಗಳಿಂದ ಒಂದು ಬದಿ ಭಾರೀ ಬೆಳವಣಿಗೆ ಪಡೆದ ಪರಿಣಾಮವಾಗಿ ಈಕೆ ವಿರುದ್ಧ ಭಾಗದಲ್ಲಿ ವಾಲಿಕೊಂಡೇ ನಡೆಯಬೇಕಾಗಿದೆ. ಈಕೆಯ ಚಿತ್ರವನ್ನು ಕಂಡ ಯಾರಿಗೂ ಮನ ಕಲಕದೇ ಇರಲಾರದು. ಈ ಬಗ್ಗೆ ನಿಮಗೆ ಏನೆನೆಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.
All Image Source



Click it and Unblock the Notifications
