Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಈ ಗ್ರಾಮದ ಕಥೆ ಕೇಳಿದರೆ ಕಟುಕನ ಕಣ್ಣಲ್ಲೂ ಕಣ್ಣೀರು ಸುರಿಯುತ್ತೆ
ಉತ್ತರ ಭಾರತದ ಜಾರ್ಖಂಡ್ ರಾಜ್ಯದ ಗ್ರಾಮವೊಂದರಲ್ಲಿ ಸ್ಥಾಪಿಸಿದ ಅಣುವಿದ್ಯುತ್ ಸ್ಥಾವರದಿಂದ ದೂರದ ನಗರಗಳಿಗೆ ಬೆಳಕು ಸಿಕ್ಕರೂ ಈ ಗ್ರಾಮದ ಕಥೆ ಏನಾಯ್ತು ಗೊತ್ತೇ? ಈ ಗ್ರಾಮಕ್ಕೆ ದಕ್ಕಿದ್ದು ವಿಷ!
ಹೆಚ್ಚಿನ ಜನರಿಗೆ ಉಪಯೋಗವಾಗುವುದಾದರೆ ಚಿಕ್ಕ ಗ್ರಾಮಗಳ ಜನರು ತಮ್ಮದೆಲ್ಲವನ್ನೂ ತ್ಯಾಗ ಮಾಡಬೇಕು ಎಂದು ನಾಗರಿಕತೆ ಬಯಸುತ್ತದೆ. ಉದಾಹರಣೆಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ಬೆಳಕು ನೀಡಬೇಕಾದರೆ ಈ ಅಣೆಕಟ್ಟಿನ ಹಿಂಭಾಗದ ವಿಸ್ತಾರದ ಸ್ಥಳ ಮುಳುಗಡೆಯಾಗುವ ಅಪಾಯ ಎದುರಾದಾಗ ಸಾವಿರಾರು ಹಳ್ಳಿಗಳ ಜನರು ತಮ್ಮ ವಂಶಸ್ಥರಿಂದ ಪಡೆದಿದ್ದ ಅಮೂಲ್ಯ ಜಮೀನನ್ನು ಮತ್ತು ತಮ್ಮ ನಿವಾಸಸ್ಥಾನವನ್ನೇ ಬಿಟ್ಟು ಬರಬೇಕಾಯಿತು.
ಇದೇ ರೀತಿಯಾಗಿ ಉತ್ತರ ಭಾರತದ ಜಾರ್ಖಂಡ್ ರಾಜ್ಯದ ಗ್ರಾಮವೊಂದರಲ್ಲಿ ಸ್ಥಾಪಿಸಿದ ಅಣುವಿದ್ಯುತ್ ಸ್ಥಾವರದಿಂದ ದೂರದ ನಗರಗಳಿಗೆ ಬೆಳಕು ಸಿಕ್ಕರೂ ಈ ಗ್ರಾಮದ ಕಥೆ ಏನಾಯ್ತು ಗೊತ್ತೇ? ಈ ಗ್ರಾಮಕ್ಕೆ ದಕ್ಕಿದ್ದು ವಿಷ! ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್ ಅನ್ನುತ್ತದೆ...
ವಿಶೇಷ ಸೂಚನೆ: ಈ ಲೇಖನಕ್ಕೆ ಬಳಸಲಾದ ಮಾಹಿತಿಗಳನ್ನು ಪಡೆದ ಮೂಲವನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ.

ಪಾರ್ವತೆ ಗೋಪೆ
ಈಕೆ ಕೇವಲ ಹದಿನೇಳು ವರ್ಷ ವಯಸ್ಸಿನ ಕಿಶೋರಿಯಾಗಿದ್ದು ಅಣುಸ್ಥಾವರದ ವಿಷದ ಪರಿಣಾಮವಾಗಿ Lumbar Scoliosis ಎಂಬ ಕಾಯಿಲೆಗೆ ತುತ್ತಾಗಿದ್ದಾಳೆ. ಈ ಕಾಯಿಲೆಯ ಲಕ್ಷಣವೆಂದರೆ ಈಕೆಯ ಬೆನ್ನುಮೂಳೆ ನೆಟ್ಟಗಿರಬೇಕಾಗಿದ್ದು ಈಗ ಇಂಗ್ಲಿಷ್ ಅಕ್ಷರದ ಎಸ್ (S) ಆಕಾರವನ್ನು ಪಡೆದಿದ್ದು ನೆಟ್ಟಗೆ ನಿಂತುಕೊಳ್ಳಲು ಆಗದೇ ಭಾರೀ ಕಷ್ಟವಾಗಿದೆ. ಈಕೆಗೆ ಸೂಕ್ತ ಚಿಕಿತ್ಸೆ ನೀಡಲು ಇದರ ದುಬಾರಿ ವೆಚ್ಚ ಅಡ್ಡಿಯಾಗಿದ್ದು ಇದುವರೆಗೆ ಸರ್ಕಾರದಿಂದ ಯಾವುದೇ ಸಹಾಯ ದೊರಕದೇ ಇರುವುದು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ರಾಕೇಶ್ ಗೋಪೆ
ಈ ಹದಿಮೂರು ವರ್ಷ ವಯಸ್ಸಿನ ಬಾಲಕನಿಗೆ muscular dystrophy ಎಂಬ ಕಾಯಿಲೆ ಆವರಿಸಿದೆ. ಇದರ ಪರಿಣಾಮವಾಗಿ ಇವನ ಕಾಲುಗಳು ಕಮಾನಿನಂತೆ ಬಾಗಿದ್ದು ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಪಾದಗಳು ನೆಲಕ್ಕೆ ಸಮಾನಾಂತರವಾಗಿರಬೇಕಾಗಿದ್ದುದು ಮೇಲ್ಮುಖವಾಗಿ ಕಮಾನಿನಂತೆ ಬಾಗಿವೆ ಆದರೂ ಈ ಊನವನ್ನು ಆತ ಊನವೆಂದು ಪರಿಗಣಿಸದೇ ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ನಡೆದಾಡುತ್ತಿದ್ದಾನೆ.

ಕಾರ್ತಿಕ್ ಗೋಪೆ
ಈ ಮೂರು ವರ್ಷದ ಪುಟ್ಟ ಬಾಲಕನಿಗೆ ವಿಷದ ಪರಿಣಾಮವಾಗಿ seizures ಎಂಬ ಕಾಯಿಲೆ ಆವರಿಸಿದೆ. ಇದರ ಪರಿಣಾಮವಾಗಿ ಈತನ ದೇಹ ವಿಕೃತಗೊಂಡಿದೆ. ಈತನನ್ನು ಎತ್ತಿಕೊಂಡು ಈತನ ತಾಯಿ ಸರ್ಕಾರದಿಂದ ಏನಾದರೂ ನೆರವು ಸಿಗುತ್ತದೆಯೇ ಎಂದು ಕಾಯುತ್ತಿದ್ದಾರೆ.

ಹರಧನ್ ಗೋಪೆ
ಈ ವ್ಯಕ್ತಿಯ ತಲೆಬುರುಡೆ ವಿಕೃತಗೊಂಡಿದ್ದು ಹಲ್ಲುಗಳೆಲ್ಲಾ ಉದುರಿ ಹೋಗಿವೆ. ತಲೆಬುರುಡೆ ಮಾತ್ರವಲ್ಲ, ದೇಹದ ಇತರ ಮೂಳೆಗಳೂ ವಿಕೃತಗೊಂಡಿವೆ. ಅಣುಸ್ಥಾವರದ ವಿಷಪ್ರಾಶನ ಎಷ್ಟು ಭೀಕರವಾಗಿರಬಹುದು ಎಂಬುದಕ್ಕೆ ಈತ ಜ್ವಲಂತ ಉದಾಹರಣೆಯಾಗಿದ್ದಾನೆ.

ಅನಾಮಿಕಾ ಉರಾವನ್
ಈಕೆ ಕೇವಲ ಹದಿಮೂರು ವರ್ಷದ ಬಾಲಕಿಯಾಗಿದ್ದು ಈಕೆಗೆ ದುರ್ಮಾಂಸದ ಗಡ್ಡೆಯೊಂದು ಬಾಧಿಸುತ್ತಿದೆ. ಇದು ದಿನೇ ದಿನೇ ಬೆಳೆಯುತ್ತಿದ್ದು ಕೆಲವರ್ಷಗಳಿಂದ ಒಂದು ಬದಿ ಭಾರೀ ಬೆಳವಣಿಗೆ ಪಡೆದ ಪರಿಣಾಮವಾಗಿ ಈಕೆ ವಿರುದ್ಧ ಭಾಗದಲ್ಲಿ ವಾಲಿಕೊಂಡೇ ನಡೆಯಬೇಕಾಗಿದೆ. ಈಕೆಯ ಚಿತ್ರವನ್ನು ಕಂಡ ಯಾರಿಗೂ ಮನ ಕಲಕದೇ ಇರಲಾರದು. ಈ ಬಗ್ಗೆ ನಿಮಗೆ ಏನೆನೆಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.
All Image Source



Click it and Unblock the Notifications