Just In
- 3 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 3 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 4 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 4 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೇಕಾ ಮೇಕಪ್!! ಇದರಿಂದಾಗಿ ಈಕೆ ಒಂದು ಕಣ್ಣನ್ನೇ ಕಳೆದುಕೊಳ್ಳಬೇಕಾಯ್ತು!
ಮಹಿಳೆಯೊಬ್ಬರು ತಪ್ಪು ಪ್ರಸಾಧನವನ್ನು ಬಳಸಿದ ಕಾರಣ ಕಣ್ಣನ್ನೇ ಕಳೆದುಕೊಳ್ಳಬೇಕಾಗಿ ಬಂದ ಸತ್ಯಘಟನೆಯನ್ನು ಇಂದು ಸಾದರಪಡಿಸುತ್ತಿದ್ದೇವೆ. ಇದು ಕಳಪೆ ಮತ್ತು ಅಗ್ಗದ ಪ್ರಸಾಧನಗಳನ್ನು ಕೊಳ್ಳುವ ಯಾರಿಗೇ ಆದರೂ ನೀಡುವ ಎಚ್ಚರಿಕೆಯ ಘಂಟೆಯಾಗಿದೆ....
ಸೌಂದರ್ಯ ಪ್ರಸಾಧನಗಳ ಅಲರ್ಜಿಯಿಂದ ಕೈಗಳಲ್ಲಿ ಬೊಬ್ಬೆ ಬಂದ, ಸುಟ್ಟ ಕಥೆಗಳನ್ನು ಆಗಾಗ ಕೇಳುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ತಪ್ಪು ಸೌಂದರ್ಯ ಪ್ರಸಾಧನವನ್ನು ಬಳಸಿದ ಕಾರಣ ಮಹಿಳೆಯೊಬ್ಬರು ತನ್ನ ಕಣ್ಣನ್ನೇ ಕಳೆದುಕೊಳ್ಳಬೇಕಾದ ವಿದ್ರಾವಕ ಘಟನೆ ಜರುಗಿದೆ. ಕಳಪೆ ಮತ್ತು ಅಗ್ಗದ ಸೌಂದರ್ಯ ಪ್ರಸಾಧನಗಳ ಬಳಕೆ ಇದಕ್ಕೆ ಮೊದಲ ಕಾರಣವಾದರೆ, ಯಾವುದೇ ಸೌಂದರ್ಯ ಪ್ರಸಾಧನವನ್ನು ಬಳಸವುದಕ್ಕೂ ಮುನ್ನ ಕಡ್ಡಾಯವಾಗಿ ಮಾಡಬೇಕಾದ ಅಲರ್ಜಿಕಾರಕ ಪರೀಕ್ಷೆಯನ್ನು ನಡೆಸದೇ ಇರುವುದು ಇನ್ನೊಂದು ಕಾರಣವಾಗಿದೆ. ಮೇಕಪ್ ಹಿಂದಿರುವ ಬೆಚ್ಚಿ ಬೀಳಿಸುವ ಭಯಾನಕ ಸತ್ಯ
ಕಾರಣವೇನೇ ಇರಲಿ, ಇದರಿಂದ ಕಳೆದುಕೊಂಡ ಸೌಂದರ್ಯ ಹಾಗೂ ಅಂಗಗಳು ಮತ್ತೆ ಪಡೆಯಲಾರದ ಶಾಶ್ವತ ನಷ್ಟವಾಗಿದೆ. ಮಹಿಳೆಯೊಬ್ಬರು ತಪ್ಪು ಪ್ರಸಾಧನವನ್ನು ಬಳಸಿದ ಕಾರಣ ಕಣ್ಣನ್ನೇ ಕಳೆದುಕೊಳ್ಳಬೇಕಾಗಿ ಬಂದ ಸತ್ಯಘಟನೆಯನ್ನು ಇಂದು ಸಾದರಪಡಿಸುತ್ತಿದ್ದೇವೆ. ಇದು ಕಳಪೆ ಮತ್ತು ಅಗ್ಗದ ಪ್ರಸಾಧನಗಳನ್ನು ಕೊಳ್ಳುವ ಯಾರಿಗೇ ಆದರೂ ನೀಡುವ ಎಚ್ಚರಿಕೆಯ ಘಂಟೆಯಾಗಿದೆ...
ಒಂದು ರಾತ್ರಿ ಈ ಘಟನೆ ನಡೆಯಿತು
ಮಧ್ಯಮವರ್ಗದ ಈ ಮಹಿಳೆ ಇಬ್ಬರು ಮಕ್ಕಳ ತಾಯಿಯಾಗಿದ್ದು ಸುಖಜೀವನ ನಡೆಸುತ್ತಿದ್ದಳು. ಒಂದು ಸಂಜೆ ಆಕೆ ತನ್ನ ಗೆಳತಿಯರೊಂದಿಗೆ ಮೋಜಿನ ಸಮಯವನ್ನು ಕಳೆದು ಮನೆಗೆ ಬಂದ ಬಳಿಕ ಕಣ್ಣಿನ ಮೇಕಪ್ ನಿವಾರಿಸಲು ನೀರಿನಿಂದ ತೊಳೆಯುತ್ತಿದ್ದಂತೆ ಕಣ್ಣುರೆಪ್ಪೆಗಳಲ್ಲಿ ಏನೋ ವಿಚಿತ್ರವಾದ ಅನುಭವವಾಯಿತು.
ಮುಂದಿನ ಘಟನೆಯನ್ನು ಆಕೆಯ ಸ್ನೇಹಿತೆ ಹೀಗೆ ವಿವರಿಸುತ್ತಾರೆ
ಸಾಮಾಜಿಕ ತಾಣದಲ್ಲಿ ಆಕೆಯ ಸ್ನೇಹಿತೆಯೊಬ್ಬರು ಹೀಗೆ ವಿವರಿಸುತ್ತಾರೆ: "ನನ್ನ ಸ್ನೇಹಿತೆ ಎರಿಕಾ ಡಿಯಾಜ್ ರವರು ಕಣ್ಣಿಗೆ ಹೊಳೆಯುವ ಗ್ಲಿಟ್ಟರ್ ಹಚ್ಚಿಕೊಂಡಿದ್ದು ಇದರ ಪ್ರಭಾವದಿಂದ ಕಣ್ಣಿನ ಒಂದು ಭಾಗವನ್ನೇ ಕಳೆದುಕೊಳ್ಳಬೇಕಾಯಿತು. ನಾನು ಗ್ಲಿಟ್ಟರ್ ಎಂದು ಹೇಳಿದೆನೆಲ್ಲಾ, ಇದೊಂದು ಚಿಕ್ಕ ಚಿಕ್ಕ ಕಣಗಳ ಪುಡಿಯಾಗಿದೆ. ಇದನ್ನು ತೊಳೆದುಕೊಳ್ಳುವಾಗ ಕೊಂಚ ಪುಡಿಯ ಭಾಗ ಆಕೆಯ ಕಣ್ಣಿನ ಒಳಗೆ ಬಿದ್ದುಬಿಟ್ಟಿತ್ತು. ಈ ಪುಡಿ ಕಣ್ಣಿನ ಪಾಪೆಗೆ ಚುಚ್ಚಿಕೊಂಡು ಬಿಟ್ಟಿತ್ತು."
ಆಗ ಉಂಟಾದ ಸೋಂಕು ಕೂಡಲೇ ಹರಡಿತು
ಈ ಪುಡಿ ಭಾರೀ ಸೋಂಕುಕಾರಕವಾಗಿದ್ದು ಕೆಲವೇ ಸಮಯದಲ್ಲಿ ಕಣ್ಣಿನ ಭಾಗಕ್ಕೆ ಸೋಂಕು ಕರಡಿತು. ಆಕೆಯ ಇಡಿಯ ಕಣ್ಣು ಕೀವಿನಿಂದ ತುಂಬಿಕೊಂಡಿತ್ತು. ಕೀವಿನ ಇರುವಿಕೆಯಿಂದ ಎದುರಾದ ಒತ್ತಡದಿಂದ ಕಣ್ಣು ಒಳಗೆ ಒತ್ತಲ್ಪಡುತ್ತಿದ್ದು ಆಕೆ ಅಪಾರ ನೋವು ಅನುಭವಿಸುತ್ತಿದ್ದಳು. ನಾವು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆವು ಹಾಗೂ ಅಲ್ಲಿ ವೈದ್ಯರು ತಕ್ಷಣವೇ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಲೇಬೇಕೆಂದು ತಿಳಿಸಿದರು"
ವೈದ್ಯರ ವಿವರಣೆ ಹೀಗಿದೆ
"ಆಕೆಯ ಕಣ್ಣಿನಲ್ಲಿ ಬಿದ್ದ ಗ್ಲಿಟ್ಟರ್ ಪುಡಿ ವಾಸ್ತವದಲ್ಲಿ ಪುಟ್ಟ ಗಾಜಿನ ತುಣುಕುಗಳಾಗಿದ್ದು ಈ ತುಣುಕುಗಳು ಆಕೆಯ ಕಣ್ಣಿನ ಪಾಪೆಯನ್ನೇ ಹರಿದಿದ್ದು ಇಲ್ಲಿ ಸೋಂಕು ಉಂಟಾಗಲು ಕಾರಣವಾಯಿತು. ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿದ್ದು ಇಲ್ಲಿನ ತೇವಾಂಶ ಸೋಂಕನ್ನು ಹರಡಿಸಲು ನೆರವಾಯಿತು. ತಕ್ಷಣವೇ ರೋಗ ನಿರೋಧಕ ಶಕ್ತಿ ಈ ಸೋಂಕನ್ನು ಎದುರಿಸಲು ಕೀವನ್ನು ಉಂಟುಮಾಡಿತು. ಆದರೆ ಈ ಕೀವಿನ ಪ್ರಮಾಣ ಎಷ್ಟು ಹೆಚ್ಚಿತ್ತೆಂದರೆ ಇದು ಕಣ್ಣಿನ ಮೇಲೆ ಅಪಾರವಾದ ಒತ್ತಡ ಹೇರಿ ಈಗಾಗಲೇ ಹರಿದಿದ್ದ ಪಾಪೆಯ ಮೇಲೆ ಇನ್ನಷ್ಟು ಒತ್ತಡ ಹೇರಿ ಅಪಾರವಾದ, ತಡೆಯಲಾರದ ನೋವು ನೀಡಿತ್ತು"
ಕಡೆಗೆ ಆಕೆ ಕಣ್ಣನ್ನೇ ಕಳೆದುಕೊಳ್ಳಬೇಕಾಯಿತು
ಕಣ್ಣಿನ ಪಾಪೆ ಅತ್ಯಂತ ಸೂಕ್ಷ್ಮಭಾಗವಾಗಿದ್ದು ಇದು ಹರಿದರೆ ಇದನ್ನು ಹೊಲಿಯಲು ಹಲವು ತಜ್ಞ ವೈದ್ಯರು ಇನ್ನಿಲ್ಲದ ಶ್ರಮವಹಿಸಿದರೂ ಆಕೆಯ ಕಣ್ಣನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಧಿಯಿಲ್ಲದೇ ಸೋಂಕು ಇನ್ನೊಂದು ಕಣ್ಣಿಗೂ ಹರಡದಂತೆ ತಡೆಯಲು ಕಣ್ಣನ್ನು ನಿವಾರಿಸಬೇಕಾಯಿತು.
ಈಗಲಾದರೂ ಕಳಪೆ ಪ್ರಸಾಧನಗಳ ಬಗ್ಗೆ ಎಚ್ಚರ ವಹಿಸಿ, ಕೊಂಚ ದುಬಾರಿಯಾದರೂ ಚಿಂತೆಯಿಲ್ಲ, ಉತ್ತಮ ಗುಣಮಟ್ಟದ್ದನ್ನೇ ಕೊಳ್ಳಿ. ಅಷ್ಟಕ್ಕೂ ಅಲ್ಪ ಮತ್ತು
ಸರಳ ಪ್ರಸಾಧನಗಳಿಂದಲೇ ಸಹಜ ಸೌಂದರ್ಯ ಪ್ರಜ್ವಲಿಸಲು ಸಾಧ್ಯವಿರುವಾಗ ದುಬಾರಿ ಮತ್ತು ಅನಗತ್ಯವಾಗಿ ಹೊಳೆಯುವ ಪ್ರಸಾದನಗಳ ಅಗತ್ಯವೇನಿದೆ?