Just In
- 10 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 11 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 11 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 13 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News 'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿಕ್ಷಕರ ದಿನಾಚರಣೆ: ಗುರುವಿನ ಹಿರಿಮೆಯ ಸ್ಮರಿಸುವ ದಿನ
ಗುರುವಿನ ಗುಲಾಮನಾಗದ ಹೊರತು ದೊರಕದಣ್ಣ ಮುಕುತಿ ಎಂಬುದೊಂದು ಕನ್ನಡ ಉಕ್ತಿಯಾಗಿದೆ. ಜೀವನದಲ್ಲಿ ಏಳ್ಗೆ ಪಡೆಯಲು ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ. ನಮ್ಮ ಜೀವನದಲ್ಲಿ ತಾಯಿಯೇ ಪ್ರಥಮ ಗುರುವಾಗಿರುತ್ತಾಳೆ. ಶಿಕ್ಷಕರ ದಿನಾಚರಣೆ ವಿಶೇಷ: ಒಂದು ಸವಿ ನೆನಪು
ವಿದ್ಯಾಭ್ಯಾಸದ ಅವಧಿಯಲ್ಲಿ ಹಲವರು ಗುರುಗಳು ನಮ್ಮನ್ನು ತಿದ್ದಿ ತೀಡಿ ಉತ್ತಮ ನಾಗರಿಕರಾಗಲು ಸಹಕರಿಸುತ್ತಾರೆ. ಆದ್ದರಿಂದ ಜೀವನದ ಯಶಸ್ಸಿಗೆ ಗುರುವಿನ ಇರುವಿಕೆ ಅತ್ಯಗತ್ಯವಾಗಿದೆ. ಗುರುವಿನ ಸಮರ್ಥ ಮಾರ್ಗದರ್ಶನವಿಲ್ಲದೇ ಗುರಿಯತ್ತ ಸಾಗಲು ಅಸಾಧ್ಯ. ಗುರುಗಳ ಮಾರ್ಗದರ್ಶನ ನಮ್ಮನ್ನು ಜೀವಮಾನವಿಡೀ ಸರಿಯಾದ ಮಾರ್ಗದಲ್ಲಿ ನಡೆಸಲು ಪ್ರೇರಣೆಯಾಗಿರುತ್ತದೆ.
ಈ ಪ್ರೇರಣೆಯನ್ನು ಮರೆಯದಿರಲು, ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಶಿಕ್ಷಕರನ್ನು ನೆನೆಸಿಕೊಂಡು ಈ ಪ್ರೇರಣೆಯನ್ನು ಸದಾ ಹಸಿರಾಗಿರಿಸಲು ಶಿಕ್ಷಕರ ದಿನಾಚರಣೆ ಅಗತ್ಯವಾಗಿದೆ. ಶಿಕ್ಷಕರ ದಿನಾಚರಣೆಯ ಮೂಲ, ಇತಿಹಾಸದ ಮಹತ್ವ
ವರ್ಷದಲ್ಲೊಂದು ದಿನ ನಮ್ಮ ಗುರುಗಳಿಗಾಗಿ ಮೀಸಲಿಡುವ ಮೂಲಕ ಇವರನ್ನು ಸದ್ಗುರುವಿನ ರೂಪದಲ್ಲಿ ಸ್ಮರಿಸಲು ನೆರವಾಗುತ್ತದೆ. ಪ್ರತಿಯೊಬ್ಬ ಸುಶಿಕ್ಷತನೂ ತನ್ನ ಶಿಕ್ಷಣ ಮತ್ತು ತನಗೆ ಶಿಕ್ಷಣ ನೀಡಿದ ಸಂಸ್ಥೆ, ಗುರುಗಳನ್ನು ಮರೆಯದೇ ಇರುವುದು ಮುಂದಿನ ಪೀಳಿಗೆಗೆ ಮಾದರಿಯಾಗಲು ಸಾಧ್ಯ. ಬನ್ನಿ, ಶಿಕ್ಷಕರ ದಿನಾಚರಣೆಯ ಕೆಲವು ಮಹತ್ವದ ಮಾಹಿತಿಗಳನ್ನು ನೋಡೋಣ:
ಮಾಹಿತಿ
#1
ಭಾರತದಲ್ಲಿ
ಪ್ರತಿ
ವರ್ಷ
ಸೆಪ್ಟೆಂಬರ್
ಐದರಂದು
ಶಿಕ್ಷಕರ
ದಿನಾಚರಣೆಯನ್ನು
ಆಚರಿಸಲಾಗುತ್ತದೆ.
ಈ
ದಿನವನ್ನು
ದೇಶದ
ಎಲ್ಲಾ
ಶಿಕ್ಷಕರಿಗೆ
ಗೌರವಪೂರ್ವಕವಾಗಿ
ಮುಡಿಪಾಡಿಗಲಾಗಿದೆ.
ಮಾಹಿತಿ
#2
ಶಿಕ್ಷಕರ
ದಿನಾಚರಣೆಯ
ಹಿಂದೆ
ಅಚ್ಚರಿಯ
ಮಾಹಿತಿಯೊಂದಿದೆ.
ಇದು
ಭಾರತದ
ಸರ್ವಶ್ರೇಷ್ಠ
ಶಿಕ್ಷಕತಜ್ಞ
ಡಾ
ಸರ್ವೆಪಲ್ಲಿ
ರಾಧಾಕೃಷ್ಣನ್
ರವರ
ಜನ್ಮದಿನವಾಗಿದೆ.
ಮಾಹಿತಿ
#3
ಡಾ
ಸರ್ವಪಲ್ಲಿ
ರಾಧಾಕೃಷ್ಣನ್
ರವರು
ಭಾರತದ
ಅತ್ಯುನ್ನತ
ಹುದ್ದೆಯಾದ
ರಾಷ್ಟ್ರಪತಿಯ
ಹುದ್ದೆಯನ್ನೂ
ಅಲಂಕರಿಸಿದ್ದರು.
ರಾಷ್ಟ್ರಪತಿಯಾದ
ಬಳಿಕ
ಅವರ
ಅಭಿಮಾನಿಗಳು
ಸೆ.
ಐದರಂದು
ಅವರ
ಜನ್ಮದಿನ
ಆಚರಿಸಲು
ಉತ್ಸುಕರಾಗಿದ್ದಾಗ
ಇವರು
ಈ
ಮನವಿಯನ್ನು
ನಯವಾಗಿಯೇ
ತಿರಸ್ಕರಿಸಿ
ಈ
ದಿನವನ್ನು
ತಮ್ಮ
ಜನ್ಮದಿನಕ್ಕೂ
ಮಿಗಿಲಾಗಿ
ಶಿಕ್ಷಕರ
ದಿನವಾಗಿ
ಆಚರಿಸಿದರೆ
ತಮಗೆ
ಹೆಚ್ಚು
ಗೌರವ
ಲಭಿಸಿದಂತಾಗುತ್ತದೆ
ಎಂದಿದ್ದರು.
ಈ
ಮನವಿಯನ್ನು
ಮನ್ನಿಸಿದ
ಸರ್ಕಾರ
1962ರಿಂದ
ಈ
ದಿನವನ್ನು
ಶಿಕ್ಷಕರ
ದಿನವನ್ನಾಗಿ
ಆಚರಿಸಿಕೊಳ್ಳುತ್ತಾ
ಬಂದಿದೆ.
ಮಾಹಿತಿ
#4
ಭಾರತದ
ಮೇಧಾವಿಗಳು
ಶಿಕ್ಷಕರಾಗಿ
ಸೇವೆ
ಸಲ್ಲಿಸಬೇಕು
ಎಂಬ
ನಂಬಿಕೆಯನ್ನು
ಹೊಂದಿದ್ದ
ರಾಧಾಕೃಷ್ಣನ್
ರವರು
ಈ
ನಿಟ್ಟಿನಲ್ಲಿ
ಹಲವಾರು
ಕಾರ್ಯಕ್ರಮಗಳನ್ನು
ಅನುಷ್ಠಾನಕ್ಕೆ
ತಂದಿದ್ದರು.
ಇವರ
ಸೇವೆಗೆ
ಆಕ್ಸ್
ಫರ್ಡ್
ವಿಶ್ವವಿದ್ಯಾಲಯ
ಪ್ರಾರಂಬಿಸಿದ
Radhakrishnan
Chevening
Scholarships
ವಿದ್ಯಾರ್ಥಿ
ವೇತನ
ಪ್ರಮುಖವಾಗಿದೆ.
ಶಿಕ್ಷಕರ
ದಿನಾಚರಣೆಯ
ಈ
ಸಂದರ್ಭದಲ್ಲಿ
ದೇಶದ
ಎಲ್ಲಾ
ಶಿಕ್ಷಕರಿಗೆ
ಬೋಲ್ಡ್
ಸ್ಕೈ
ತಂಡ
ಹಾರ್ದಿಕವಾಗಿ
ಅಭಿನಂದಿಸುತ್ತದೆ.