Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಅಚ್ಚರಿಯ ಸತ್ಯಘಟನೆ: ಮಗುವನ್ನು ಕಾಪಾಡಿದ ಬೀದಿನಾಯಿಗಳು!
ತನ್ನನ್ನು ಪ್ರೀತಿಸಿದವರನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ನಾಯಿಯ ಹತ್ತು ಹಲವಾರು ಕಥೆಗಳು ಪ್ರಚಲಿತವಾಗಿವೆ, ಆದರೆ ಇಲ್ಲಿ ನಾವು ನೀಡಿರುವ ಲೇಖನ ಮೈ ರೋಮಾಂಚನಗೊಳಿಸುತ್ತದೆ
ಹುಟ್ಟಿದ ಮಗು ಹೆಣ್ಣಾದರೆ ತ್ಯಜಿಸುವ ಪರಿಪಾಠ ಭಾರತದಲ್ಲಿ ಮಾತ್ರವಲ್ಲ, ನೆರೆಯ ಬಾಂಗ್ಲಾದೇಶದಲ್ಲಿಯೂ ಇದೆ. ಇಂತಹ ಒಂದು ನವಜಾತ ಹೆಣ್ಣುಮಗುವೊಂದನ್ನು ಬೀದಿನಾಯಿಗಳು ರಕ್ಷಿಸಿದ ಅಚ್ಚರಿಯ ಸತ್ಯಘಟನೆ ಬಾಂಗ್ಲಾದೇಶದಿಂದ ವರದಿಯಾಗಿದೆ. ಓಡುವ ವಾಹನಗಳನ್ನು ಕಂಡರೆ ನಾಯಿಗಳೇಕೆ ಅಷ್ಟು ಕೋಪ?
ಮಾನವನ ಅಚ್ಚುಮೆಚ್ಚಿನ ಮಿತ್ರನೆಂದೇ ಖ್ಯಾತಿ ಗಳಿಸಿರುವ ನಾಯಿ ತನ್ನ ಒಡೆಯನ ಮೆಚ್ಚುಗೆ ಗಳಿಸಲು ಏನೆಲ್ಲಾ ಮಾಡುತ್ತದೆ. ನಿಯತ್ತಿನಿಂದ ಮನೆ ಕಾಯುವ ನಾಯಿ ನಿಯತ್ತಿಗೆ ಇನ್ನೊಂದು ಹೆಸರು. ತನ್ನನ್ನು ಪ್ರೀತಿಸಿದವರನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ನಾಯಿಯ ಹತ್ತು ಹಲವಾರು ಕಥೆಗಳು ಪ್ರಚಲಿತವಾಗಿವೆ.... ಆದರೆ ಇಲ್ಲಿ ನೀಡಿರುವ ಕಥೆ, ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ....

ಬಾಂಗ್ಲಾದೇಶದ ಪುರುಲಿಯಾ
ಬಾಂಗ್ಲಾದೇಶದ ಪುರುಲಿಯಾ ಎಂಬಲ್ಲಿ ಹುಟ್ಟಿ ಕೇವಲ ಏಳು ದಿನಗಳಾಗಿದ್ದ ಹೆಣ್ಣು ಮಗುವೊಂದನ್ನು ದಾರಿಪಕ್ಕದ ಪೊದೆಗಳ ನಡುವೆ ತ್ಯಜಿಸಲಾಗಿತ್ತು.

ಮಗುವಿನ ಅಳು
ಮಗುವಿನ ಅಳು ಕೇಳಿ ಆಗಮಿಸಿದ ಕಾಗೆಗಳು ಇನ್ನೇನು ಮಗುವನ್ನು ಕುಕ್ಕಿ ತಿನ್ನಲು ಅಣಿಯಾಗುತ್ತಿದ್ದಂತೆಯೇ ಆಗಮಿಸಿದ ಬೀದಿ ನಾಯಿಗಳು ಅವುಗಳನ್ನು ಓಡಿಸಿ ಮಗುವನ್ನು ಕಾಪಾಡಿವೆ.

ನಾಯಿಗಳ ಉಪಕಾರ
ದಾರಿಯಲ್ಲಿ ಬರುವ ಯಾರಾದರೂ ಮನುಷ್ಯರನ್ನು ಕಂಡ ಬಳಿಕ ಅವರ ಗಮನವನ್ನು ಸೆಳೆಯಲು ಈ ಬೀದಿನಾಯಿಗಳು ಎಷ್ಟು ಹೊತ್ತಿನಿಂದ ಆ ಮಗುವಿನ ಬಳಿ ಇದ್ದವೋ ಗೊತ್ತಿಲ್ಲ, ಆದರೆ ಆ ಹಾದಿಯಲ್ಲಿ ನಡೆದು ಹೋಗುತ್ತಿದ್ದ ಸ್ಥಳೀಯ ಶಿಕ್ಷಕರೊಬ್ಬರ ಗಮನವನ್ನು ಮಗುವಿನತ್ತ ಸೆಳೆದು ಮಗುವಿನ ಪ್ರಾಣ ಕಾಪಾಡಲು ನೆರವಾಗಿವೆ.

ನಾಯಿಗಳ ಉಪಕಾರ
ನಾಯಿಗಳು ತನ್ನನ್ನು ಏಕಾಗಿ ಹೀಗೆ ಬೊಗಳಿ ಪೊದೆಯತ್ತ ಹೋಗುವಂತೆ ಮಾಡುತ್ತಿವೆ ಎಂದು ಅರಿವಾಗದ ಅವರಿಗೆ ಪೊದೆಯತ್ತ ಬರುತ್ತಿದ್ದಂತೆಯೇ ಮಗುವಿನ ಅಳು ಕೇಳಿಸಿದೆ. ತಕ್ಷಣ ಆತ ಈ ಮಗುವನ್ನು ಎತ್ತಿಕೊಂಡು ತನ್ನ ಮನೆಗೆ ಹೋಗಿ ಹಾಲು ಕುಡಿಸಿದ್ದಾರೆ.

ನಾಯಿಗಳ ಉಪಕಾರ
ಈ ಮಗುವನ್ನು ಹೊತ್ತು ನಡೆಯುತ್ತಿದ್ದ ಶಿಕ್ಷಕರ ಹಿಂದೆ ಅಷ್ಟೂ ಬೀದಿನಾಯಿಗಳು ಮೌನವಾಗಿ ಮೆರವಣಿಗೆ ಎಂಬಂತೆ ಮನೆಯವರೆಗೂ ಹಿಂಬಾಲಿಸಿದ್ದು ಬಳಿಕ ಒಂದೊಂದಾಗಿ ಅಲ್ಲಿಂದ ಜಾಗ ಖಾಲಿ ಮಾಡಿವೆ. ಅಂದರೆ ಮಗು ಈಗ ಸುರಕ್ಷಿತ ಕೈಗಳ ಆರೈಕೆಯಲ್ಲಿವೆ ಎಂದು ಖಚಿತಪಡಿಸಿಕೊಂಡ ಬಳಿಕ ಹಿಂದಿರುಗಿವೆ ಎಂದು ಅರ್ಥೈಸಿಕೊಳ್ಳಬಹುದು.

ಮಾನವೀಯತೆ ಮೆರೆದ ಮೂಕ ಪ್ರಾಣಿಗಳು
ಈ ಪ್ರಕರಣ ಪ್ರಾಣಿಗಳಲ್ಲಿರುವ ಮಾನವೀಯತೆಯನ್ನೂ ಮಾನವರಲ್ಲಿರುವ ಮೃಗೀಯ ಭಾವನೆಗಳನ್ನೂ ಒಟ್ಟಿಗೇ ಹೊರಹೊಮ್ಮಿಸಿದೆ. ಮಗುವಿನ ಪ್ರಾಣ ರಕ್ಷಿಸಿದ ಈ ನಾಯಿಗಳು 'ನೀನಾರಿಗಾದೆಯೋ ಎಲೆ ಮಾನವಾ!' ಎಂದು ಹೇಳುತ್ತಿವೆ.



Click it and Unblock the Notifications