Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಅಚ್ಚರಿಯ ಸತ್ಯಘಟನೆ: ಮಗುವನ್ನು ಕಾಪಾಡಿದ ಬೀದಿನಾಯಿಗಳು!
ತನ್ನನ್ನು ಪ್ರೀತಿಸಿದವರನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ನಾಯಿಯ ಹತ್ತು ಹಲವಾರು ಕಥೆಗಳು ಪ್ರಚಲಿತವಾಗಿವೆ, ಆದರೆ ಇಲ್ಲಿ ನಾವು ನೀಡಿರುವ ಲೇಖನ ಮೈ ರೋಮಾಂಚನಗೊಳಿಸುತ್ತದೆ
ಹುಟ್ಟಿದ ಮಗು ಹೆಣ್ಣಾದರೆ ತ್ಯಜಿಸುವ ಪರಿಪಾಠ ಭಾರತದಲ್ಲಿ ಮಾತ್ರವಲ್ಲ, ನೆರೆಯ ಬಾಂಗ್ಲಾದೇಶದಲ್ಲಿಯೂ ಇದೆ. ಇಂತಹ ಒಂದು ನವಜಾತ ಹೆಣ್ಣುಮಗುವೊಂದನ್ನು ಬೀದಿನಾಯಿಗಳು ರಕ್ಷಿಸಿದ ಅಚ್ಚರಿಯ ಸತ್ಯಘಟನೆ ಬಾಂಗ್ಲಾದೇಶದಿಂದ ವರದಿಯಾಗಿದೆ. ಓಡುವ ವಾಹನಗಳನ್ನು ಕಂಡರೆ ನಾಯಿಗಳೇಕೆ ಅಷ್ಟು ಕೋಪ?
ಮಾನವನ ಅಚ್ಚುಮೆಚ್ಚಿನ ಮಿತ್ರನೆಂದೇ ಖ್ಯಾತಿ ಗಳಿಸಿರುವ ನಾಯಿ ತನ್ನ ಒಡೆಯನ ಮೆಚ್ಚುಗೆ ಗಳಿಸಲು ಏನೆಲ್ಲಾ ಮಾಡುತ್ತದೆ. ನಿಯತ್ತಿನಿಂದ ಮನೆ ಕಾಯುವ ನಾಯಿ ನಿಯತ್ತಿಗೆ ಇನ್ನೊಂದು ಹೆಸರು. ತನ್ನನ್ನು ಪ್ರೀತಿಸಿದವರನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ನಾಯಿಯ ಹತ್ತು ಹಲವಾರು ಕಥೆಗಳು ಪ್ರಚಲಿತವಾಗಿವೆ.... ಆದರೆ ಇಲ್ಲಿ ನೀಡಿರುವ ಕಥೆ, ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ....

ಬಾಂಗ್ಲಾದೇಶದ ಪುರುಲಿಯಾ
ಬಾಂಗ್ಲಾದೇಶದ ಪುರುಲಿಯಾ ಎಂಬಲ್ಲಿ ಹುಟ್ಟಿ ಕೇವಲ ಏಳು ದಿನಗಳಾಗಿದ್ದ ಹೆಣ್ಣು ಮಗುವೊಂದನ್ನು ದಾರಿಪಕ್ಕದ ಪೊದೆಗಳ ನಡುವೆ ತ್ಯಜಿಸಲಾಗಿತ್ತು.

ಮಗುವಿನ ಅಳು
ಮಗುವಿನ ಅಳು ಕೇಳಿ ಆಗಮಿಸಿದ ಕಾಗೆಗಳು ಇನ್ನೇನು ಮಗುವನ್ನು ಕುಕ್ಕಿ ತಿನ್ನಲು ಅಣಿಯಾಗುತ್ತಿದ್ದಂತೆಯೇ ಆಗಮಿಸಿದ ಬೀದಿ ನಾಯಿಗಳು ಅವುಗಳನ್ನು ಓಡಿಸಿ ಮಗುವನ್ನು ಕಾಪಾಡಿವೆ.

ನಾಯಿಗಳ ಉಪಕಾರ
ದಾರಿಯಲ್ಲಿ ಬರುವ ಯಾರಾದರೂ ಮನುಷ್ಯರನ್ನು ಕಂಡ ಬಳಿಕ ಅವರ ಗಮನವನ್ನು ಸೆಳೆಯಲು ಈ ಬೀದಿನಾಯಿಗಳು ಎಷ್ಟು ಹೊತ್ತಿನಿಂದ ಆ ಮಗುವಿನ ಬಳಿ ಇದ್ದವೋ ಗೊತ್ತಿಲ್ಲ, ಆದರೆ ಆ ಹಾದಿಯಲ್ಲಿ ನಡೆದು ಹೋಗುತ್ತಿದ್ದ ಸ್ಥಳೀಯ ಶಿಕ್ಷಕರೊಬ್ಬರ ಗಮನವನ್ನು ಮಗುವಿನತ್ತ ಸೆಳೆದು ಮಗುವಿನ ಪ್ರಾಣ ಕಾಪಾಡಲು ನೆರವಾಗಿವೆ.

ನಾಯಿಗಳ ಉಪಕಾರ
ನಾಯಿಗಳು ತನ್ನನ್ನು ಏಕಾಗಿ ಹೀಗೆ ಬೊಗಳಿ ಪೊದೆಯತ್ತ ಹೋಗುವಂತೆ ಮಾಡುತ್ತಿವೆ ಎಂದು ಅರಿವಾಗದ ಅವರಿಗೆ ಪೊದೆಯತ್ತ ಬರುತ್ತಿದ್ದಂತೆಯೇ ಮಗುವಿನ ಅಳು ಕೇಳಿಸಿದೆ. ತಕ್ಷಣ ಆತ ಈ ಮಗುವನ್ನು ಎತ್ತಿಕೊಂಡು ತನ್ನ ಮನೆಗೆ ಹೋಗಿ ಹಾಲು ಕುಡಿಸಿದ್ದಾರೆ.

ನಾಯಿಗಳ ಉಪಕಾರ
ಈ ಮಗುವನ್ನು ಹೊತ್ತು ನಡೆಯುತ್ತಿದ್ದ ಶಿಕ್ಷಕರ ಹಿಂದೆ ಅಷ್ಟೂ ಬೀದಿನಾಯಿಗಳು ಮೌನವಾಗಿ ಮೆರವಣಿಗೆ ಎಂಬಂತೆ ಮನೆಯವರೆಗೂ ಹಿಂಬಾಲಿಸಿದ್ದು ಬಳಿಕ ಒಂದೊಂದಾಗಿ ಅಲ್ಲಿಂದ ಜಾಗ ಖಾಲಿ ಮಾಡಿವೆ. ಅಂದರೆ ಮಗು ಈಗ ಸುರಕ್ಷಿತ ಕೈಗಳ ಆರೈಕೆಯಲ್ಲಿವೆ ಎಂದು ಖಚಿತಪಡಿಸಿಕೊಂಡ ಬಳಿಕ ಹಿಂದಿರುಗಿವೆ ಎಂದು ಅರ್ಥೈಸಿಕೊಳ್ಳಬಹುದು.

ಮಾನವೀಯತೆ ಮೆರೆದ ಮೂಕ ಪ್ರಾಣಿಗಳು
ಈ ಪ್ರಕರಣ ಪ್ರಾಣಿಗಳಲ್ಲಿರುವ ಮಾನವೀಯತೆಯನ್ನೂ ಮಾನವರಲ್ಲಿರುವ ಮೃಗೀಯ ಭಾವನೆಗಳನ್ನೂ ಒಟ್ಟಿಗೇ ಹೊರಹೊಮ್ಮಿಸಿದೆ. ಮಗುವಿನ ಪ್ರಾಣ ರಕ್ಷಿಸಿದ ಈ ನಾಯಿಗಳು 'ನೀನಾರಿಗಾದೆಯೋ ಎಲೆ ಮಾನವಾ!' ಎಂದು ಹೇಳುತ್ತಿವೆ.



Click it and Unblock the Notifications