Latest Updates
-
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯಲ್ಲಿ ಹೀಗೆಲ್ಲಾ ನಡೆದರೆ, ನಂಬಬೇಕೇ? ಬಿಡಬೇಕೇ?
ನಂಬುಗೆಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ, ಆದರೆ ವಿಚಾರವಂತರು ಮಾತ್ರ ವೈಜ್ಞಾನಿಕ ಆಧಾರವಲ್ಲದಿರುವುದನ್ನು ಅಲ್ಲಗೆಳೆಯುತ್ತಾರೆ
ನಾವೆಲ್ಲರೂ ಹಲವಾರು ನಂಬುಗೆಗಳನ್ನು ಪರಾಮರ್ಶಿಸದೇ ಅನುಸರಿಸಿಕೊಂಡು ಬರುತ್ತಿದ್ದೇವೆ. ಮನೆಯ ವಿಷಯ ಬಂದಾಗ ಇದರಲ್ಲಿ ವಾಸ್ತುವಿನ ನಂಬುಗೆಗಳೇ ಹೆಚ್ಚು. ಮನೆಯ ಸಂಖ್ಯೆ, ಮನೆಯಲ್ಲಿ ಒಲೆಯನ್ನು ಯಾವ ಕೋನದಲ್ಲಿಡಬೇಕು ಇತ್ಯಾದಿ ಚಿಕ್ಕಪುಟ್ಟ ವಿವರಗಳೂ ಹಲವಾರು ನಂಬುಗೆಗಳ ಪ್ರಭಾವಕ್ಕೆ ಒಳಗಾಗಿದೆ.
ಸಾಮಾನ್ಯವಾಗಿ ಈ ನಂಬುಗೆಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಬಹುತೇಕ ಎಲ್ಲವೂ ನಮ್ಮ ಪೂರ್ವಾಗ್ರಹ ನಂಬಿಕೆಗಳಾಗಿವೆ. ಅಂದರೆ ಹಿಂದಿನಿಂದ ಅನುಸರಿಸಿಕೊಂಡು ಬಂದ ವಿಧಾನಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಗಡಿಯಾರ ನಿಂತರೆ ಅಶುಭ! ಕೂಡಲೇ ಚಲಿಸುವಂತೆ ಮಾಡಿ...
ನಾವೆಲ್ಲರೂ ನಮ್ಮ ವಾಸಸ್ಥಳಗಳಲ್ಲಿ ಅಂದರೆ ಮನೆಯಲ್ಲಿ ದುರಾದೃಷ್ಟ ಬರಬಾರದೆಂದೇ ಆಶಿಸುತ್ತೇವೆ. ಇದಕ್ಕಾಗಿ ಪೂಜೆ, ಪ್ರಾರ್ಥನೆ, ತೋರಣ, ತಾಯತ ಇತ್ಯಾದಿ ಹಲವು ವಿಧಾನಗಳನ್ನು ಅನುಸರಿಸುತ್ತೇವೆ.
ಇನ್ನೂ ಹೆಚ್ಚಾಗಿ ಮನೆಯ ಓರ್ವ ಸದಸ್ಯ ಈ ವಿಧಾನಗಳನ್ನು ನಂಬದೇ ಇದ್ದವರೂ ಮನೆಯ ಇತರ ಸದಸ್ಯರು ಈ ವಿಧಾನಗಳನ್ನು ಅಪಾರವಾಗಿ ನಂಬುವ ಪರಿಣಾಮವಾಗಿ ನಿಧಾನವಾಗಿ ನಂಬತೊಡಗುತ್ತಾರೆ. ಬನ್ನಿ, ಇಂತಹ ಕೆಲವು ನಂಬುಗೆಗಳ ಬಗ್ಗೆ ವಿವರಗಳನ್ನು ನೋಡೋಣ.... ಇದೇ ಕಾರಣಕ್ಕೆ ಮನೆಯಲ್ಲಿ ಜಗಳ, ಅಶಾಂತಿ ಉಂಟಾಗುವುದು!

ನಂಬುಗೆ #1
ಒಂದು ವೇಳೆ ತೆರೆದ ಕಿಟಕಿಯಿಂದ ಹಕ್ಕಿ ಒಳಬಂದರೆ ಇದು ಅಪಶಕುನವೆಂದು ಭಾವಿಸಲಾಗುತ್ತದೆ. ಅಂದರೆ ಈ ಶಕುನ ಸಾವಿನ ಸೂಚನೆ ಎಂದು ಭಾವಿಸಲಾಗುತ್ತದೆ.

ನಂಬುಗೆ #2
ಒಂದು ವೇಳೆ ಬ್ರೆಡ್ ತುಂಡನ್ನು ಕತ್ತರಿಸಿದ ಬಳಿಕ ಕತ್ತರಿಸಿದ ತುಂಡು ಉಲ್ಟಾ ಬಿದ್ದರೆ ಇದನ್ನು ಅಪಶಕುನವೆಂದು ಭಾವಿಸಲಾಗುತ್ತದೆ. ಅಂದರೆ ಈ ಮೂಲಕ ದುಷ್ಟ ಆತ್ಮಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಭಾವಿಸಲಾಗುತ್ತದೆ. ಇನ್ನೂ ಕೆಲವರು ಇದರಿಂದ ಮನೆಯ ಹಿರಿಯರ ದೇಹಾಂತ್ಯವೂ ಆಗಬಹುದು ಎಂದು ಭಾವಿಸುತ್ತಾರೆ.

ನಂಬುಗೆ #3
ಜೇನ್ನೊಣಗಳು ದೇವರ ಸಂದೇಶವಾಹಕರೆಂದು ಕೆಲವರು ನಂಬುತ್ತಾರೆ. ಒಂದು ವೇಳೆ ದಿನದ ಹೊತ್ತಿನಲ್ಲಿ ಜೇನ್ನೊಣಗಳು ಮನೆಯ ಒಳಗಡೆ ಕಂಡುಬಂದರೆ ಮನೆಯಲ್ಲಿ ಸಾವು ಎದುರಾಗುವ ಸಂದೇಶವನ್ನು ಇವು ತಂದಿವೆ ಎಂದು ಕೆಲವರು ಭಾವಿಸುತ್ತಾರೆ.

ನಂಬುಗೆ #4
ಹೊಸಮನೆಯನ್ನು ಪ್ರವೇಶಿಸುವಾಗ ಕಡ್ಡಾಯವಾಗಿ ಹೊಸ ಪೊರಕೆಯನ್ನೇ ಕೊಂಡೊಯ್ಯಬೇಕು. ಹಳೆಯ ಪೊರಕೆಯನ್ನು ಕೊಂಡೊಯ್ದರೆ ಇದರ ಮೂಲಕ ಋಣಾತ್ಮಕ ಶಕ್ತಿಗಳೂ ಮನೆ ಪ್ರವೇಶಿಸುತ್ತವೆ ಎಂಬುದೊಂದು ನಂಬಿಕೆಯಾಗಿದೆ. ಹೇಗೆಂದರೆ ಹಳೆಯ ಮನೆಯಲ್ಲಿದ್ದ ಋಣಾತ್ಮಕ ಶಕ್ತಿಗಳು ಈ ಪೊರಕೆಯ ಕೊಳೆಯಲ್ಲಿ ಸಂಗ್ರಹವಾಗಿದ್ದು ಹೊಸಮನೆಯನ್ನೂ ಪ್ರವೇಶಿಸಬಹುದು.

ನಂಬುಗೆ #5
ಒಂದು ವೇಳೆ ಮನೆಯಲ್ಲಿರುವ ಕನ್ನಡಿ ತನ್ನಿಂತಾನೇ ಒಡೆದರೆ ಇದು ಭಾರೀ ಅಪಶಕುನ ಎಂದು ಭಾವಿಸಲಾಗುತ್ತದೆ. ಇದು ಮನೆಯಲ್ಲಿ ಸಾವು ಸಂಭವಿಸುವ ಸಂಕೇತ ಎಂದು ಭಾವಿಸಲಾಗುತ್ತದೆ.

ನಂಬುಗೆ #6
ಒಂದು ವೇಳೆ ಒಡೆದ ಗಡಿಯಾರವೊಂದು ಅಕಸ್ಮಾತ್ತಾಗಿ ಗಂಟೆ ಬಾರಿಸಿದರೆ ಇದು ಸಹಾ ಮನೆಯಲ್ಲಿ ಸಾವು ಸಂಭವಿಸುವ ಸೂಚನೆ ಎಂದು ಭಾವಿಸಲಾಗುತ್ತದೆ. ಅಲ್ಲದೇ ನಿಂತು ಹೋಗಿದ್ದ ಗಡಿಯಾರ ಗಂಟೆಬಾರಿಸಿದರೆ ಇದು ಎಚ್ಚರಿಕೆ ನೀಡುತ್ತಿದೆ ಎಂದು ಭಾವಿಸಲಾಗುತ್ತದೆ.

ಈ ಶಕುನಗಳ ಬಗ್ಗೆ ವಿಚಾರವಂತರ ವಿಮರ್ಶೆ
ವಿಚಾರವಂತರ ಪ್ರಕಾರ ಇವೆಲ್ಲವೂ ಕೇವಲ ನಂಬಿಕೆಗಳೇ ಆಗಿದ್ದು ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಸಾವಿಗೂ ಈ ಶಕುನಗಳಿಗೂ ಯಾವುದೇ ಸಂಭವವಿಲ್ಲ. ಇನ್ನೂ ಹೆಚ್ಚಾಗಿ ಈ ನಂಬುಗೆಗಳಿಂದ ಪ್ರಭಾವಿತರಾಗಿ ಹೆದರಿಕೆಯಿಂದಲೇ ಎದೆಯೊಡೆದು ಸಾಯುವ ಸಾಧ್ಯತೆ ಇದೆ. ಆದ್ದರಿಂದ ಹಳೆಯ ನಂಬುಗೆಗಳನ್ನೆಲ್ಲಾ ಬದಿಗಿಟ್ಟು ಜೀವನ ನಮಗೆ ನೀಡುತ್ತಿರುವ ಸುಂದರ ಜೀವನನ್ನು, ಸ್ವತಂತ್ರವಾಗಿ, ನಿರ್ಭಯರಾಗಿ ಮತ್ತು ಪೂರ್ಣವಾಗಿ ಜೀವಿಸುವುದೇ ಉತ್ತಮ.



Click it and Unblock the Notifications