Just In
- 16 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 2 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 4 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
Don't Miss
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯಲ್ಲಿ ಹೀಗೆಲ್ಲಾ ನಡೆದರೆ, ನಂಬಬೇಕೇ? ಬಿಡಬೇಕೇ?
ನಂಬುಗೆಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ, ಆದರೆ ವಿಚಾರವಂತರು ಮಾತ್ರ ವೈಜ್ಞಾನಿಕ ಆಧಾರವಲ್ಲದಿರುವುದನ್ನು ಅಲ್ಲಗೆಳೆಯುತ್ತಾರೆ
ನಾವೆಲ್ಲರೂ ಹಲವಾರು ನಂಬುಗೆಗಳನ್ನು ಪರಾಮರ್ಶಿಸದೇ ಅನುಸರಿಸಿಕೊಂಡು ಬರುತ್ತಿದ್ದೇವೆ. ಮನೆಯ ವಿಷಯ ಬಂದಾಗ ಇದರಲ್ಲಿ ವಾಸ್ತುವಿನ ನಂಬುಗೆಗಳೇ ಹೆಚ್ಚು. ಮನೆಯ ಸಂಖ್ಯೆ, ಮನೆಯಲ್ಲಿ ಒಲೆಯನ್ನು ಯಾವ ಕೋನದಲ್ಲಿಡಬೇಕು ಇತ್ಯಾದಿ ಚಿಕ್ಕಪುಟ್ಟ ವಿವರಗಳೂ ಹಲವಾರು ನಂಬುಗೆಗಳ ಪ್ರಭಾವಕ್ಕೆ ಒಳಗಾಗಿದೆ.
ಸಾಮಾನ್ಯವಾಗಿ ಈ ನಂಬುಗೆಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಬಹುತೇಕ ಎಲ್ಲವೂ ನಮ್ಮ ಪೂರ್ವಾಗ್ರಹ ನಂಬಿಕೆಗಳಾಗಿವೆ. ಅಂದರೆ ಹಿಂದಿನಿಂದ ಅನುಸರಿಸಿಕೊಂಡು ಬಂದ ವಿಧಾನಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಗಡಿಯಾರ ನಿಂತರೆ ಅಶುಭ! ಕೂಡಲೇ ಚಲಿಸುವಂತೆ ಮಾಡಿ...
ನಾವೆಲ್ಲರೂ ನಮ್ಮ ವಾಸಸ್ಥಳಗಳಲ್ಲಿ ಅಂದರೆ ಮನೆಯಲ್ಲಿ ದುರಾದೃಷ್ಟ ಬರಬಾರದೆಂದೇ ಆಶಿಸುತ್ತೇವೆ. ಇದಕ್ಕಾಗಿ ಪೂಜೆ, ಪ್ರಾರ್ಥನೆ, ತೋರಣ, ತಾಯತ ಇತ್ಯಾದಿ ಹಲವು ವಿಧಾನಗಳನ್ನು ಅನುಸರಿಸುತ್ತೇವೆ.
ಇನ್ನೂ
ಹೆಚ್ಚಾಗಿ
ಮನೆಯ
ಓರ್ವ
ಸದಸ್ಯ
ಈ
ವಿಧಾನಗಳನ್ನು
ನಂಬದೇ
ಇದ್ದವರೂ
ಮನೆಯ
ಇತರ
ಸದಸ್ಯರು
ಈ
ವಿಧಾನಗಳನ್ನು
ಅಪಾರವಾಗಿ
ನಂಬುವ
ಪರಿಣಾಮವಾಗಿ
ನಿಧಾನವಾಗಿ
ನಂಬತೊಡಗುತ್ತಾರೆ.
ಬನ್ನಿ,
ಇಂತಹ
ಕೆಲವು
ನಂಬುಗೆಗಳ
ಬಗ್ಗೆ
ವಿವರಗಳನ್ನು
ನೋಡೋಣ....
ಇದೇ
ಕಾರಣಕ್ಕೆ
ಮನೆಯಲ್ಲಿ
ಜಗಳ,
ಅಶಾಂತಿ
ಉಂಟಾಗುವುದು!
ನಂಬುಗೆ #1
ಒಂದು ವೇಳೆ ತೆರೆದ ಕಿಟಕಿಯಿಂದ ಹಕ್ಕಿ ಒಳಬಂದರೆ ಇದು ಅಪಶಕುನವೆಂದು ಭಾವಿಸಲಾಗುತ್ತದೆ. ಅಂದರೆ ಈ ಶಕುನ ಸಾವಿನ ಸೂಚನೆ ಎಂದು ಭಾವಿಸಲಾಗುತ್ತದೆ.
ನಂಬುಗೆ #2
ಒಂದು ವೇಳೆ ಬ್ರೆಡ್ ತುಂಡನ್ನು ಕತ್ತರಿಸಿದ ಬಳಿಕ ಕತ್ತರಿಸಿದ ತುಂಡು ಉಲ್ಟಾ ಬಿದ್ದರೆ ಇದನ್ನು ಅಪಶಕುನವೆಂದು ಭಾವಿಸಲಾಗುತ್ತದೆ. ಅಂದರೆ ಈ ಮೂಲಕ ದುಷ್ಟ ಆತ್ಮಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಭಾವಿಸಲಾಗುತ್ತದೆ. ಇನ್ನೂ ಕೆಲವರು ಇದರಿಂದ ಮನೆಯ ಹಿರಿಯರ ದೇಹಾಂತ್ಯವೂ ಆಗಬಹುದು ಎಂದು ಭಾವಿಸುತ್ತಾರೆ.
ನಂಬುಗೆ #3
ಜೇನ್ನೊಣಗಳು ದೇವರ ಸಂದೇಶವಾಹಕರೆಂದು ಕೆಲವರು ನಂಬುತ್ತಾರೆ. ಒಂದು ವೇಳೆ ದಿನದ ಹೊತ್ತಿನಲ್ಲಿ ಜೇನ್ನೊಣಗಳು ಮನೆಯ ಒಳಗಡೆ ಕಂಡುಬಂದರೆ ಮನೆಯಲ್ಲಿ ಸಾವು ಎದುರಾಗುವ ಸಂದೇಶವನ್ನು ಇವು ತಂದಿವೆ ಎಂದು ಕೆಲವರು ಭಾವಿಸುತ್ತಾರೆ.
ನಂಬುಗೆ #4
ಹೊಸಮನೆಯನ್ನು ಪ್ರವೇಶಿಸುವಾಗ ಕಡ್ಡಾಯವಾಗಿ ಹೊಸ ಪೊರಕೆಯನ್ನೇ ಕೊಂಡೊಯ್ಯಬೇಕು. ಹಳೆಯ ಪೊರಕೆಯನ್ನು ಕೊಂಡೊಯ್ದರೆ ಇದರ ಮೂಲಕ ಋಣಾತ್ಮಕ ಶಕ್ತಿಗಳೂ ಮನೆ ಪ್ರವೇಶಿಸುತ್ತವೆ ಎಂಬುದೊಂದು ನಂಬಿಕೆಯಾಗಿದೆ. ಹೇಗೆಂದರೆ ಹಳೆಯ ಮನೆಯಲ್ಲಿದ್ದ ಋಣಾತ್ಮಕ ಶಕ್ತಿಗಳು ಈ ಪೊರಕೆಯ ಕೊಳೆಯಲ್ಲಿ ಸಂಗ್ರಹವಾಗಿದ್ದು ಹೊಸಮನೆಯನ್ನೂ ಪ್ರವೇಶಿಸಬಹುದು.
ನಂಬುಗೆ #5
ಒಂದು ವೇಳೆ ಮನೆಯಲ್ಲಿರುವ ಕನ್ನಡಿ ತನ್ನಿಂತಾನೇ ಒಡೆದರೆ ಇದು ಭಾರೀ ಅಪಶಕುನ ಎಂದು ಭಾವಿಸಲಾಗುತ್ತದೆ. ಇದು ಮನೆಯಲ್ಲಿ ಸಾವು ಸಂಭವಿಸುವ ಸಂಕೇತ ಎಂದು ಭಾವಿಸಲಾಗುತ್ತದೆ.
ನಂಬುಗೆ #6
ಒಂದು ವೇಳೆ ಒಡೆದ ಗಡಿಯಾರವೊಂದು ಅಕಸ್ಮಾತ್ತಾಗಿ ಗಂಟೆ ಬಾರಿಸಿದರೆ ಇದು ಸಹಾ ಮನೆಯಲ್ಲಿ ಸಾವು ಸಂಭವಿಸುವ ಸೂಚನೆ ಎಂದು ಭಾವಿಸಲಾಗುತ್ತದೆ. ಅಲ್ಲದೇ ನಿಂತು ಹೋಗಿದ್ದ ಗಡಿಯಾರ ಗಂಟೆಬಾರಿಸಿದರೆ ಇದು ಎಚ್ಚರಿಕೆ ನೀಡುತ್ತಿದೆ ಎಂದು ಭಾವಿಸಲಾಗುತ್ತದೆ.
ಈ ಶಕುನಗಳ ಬಗ್ಗೆ ವಿಚಾರವಂತರ ವಿಮರ್ಶೆ
ವಿಚಾರವಂತರ ಪ್ರಕಾರ ಇವೆಲ್ಲವೂ ಕೇವಲ ನಂಬಿಕೆಗಳೇ ಆಗಿದ್ದು ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಸಾವಿಗೂ ಈ ಶಕುನಗಳಿಗೂ ಯಾವುದೇ ಸಂಭವವಿಲ್ಲ. ಇನ್ನೂ ಹೆಚ್ಚಾಗಿ ಈ ನಂಬುಗೆಗಳಿಂದ ಪ್ರಭಾವಿತರಾಗಿ ಹೆದರಿಕೆಯಿಂದಲೇ ಎದೆಯೊಡೆದು ಸಾಯುವ ಸಾಧ್ಯತೆ ಇದೆ. ಆದ್ದರಿಂದ ಹಳೆಯ ನಂಬುಗೆಗಳನ್ನೆಲ್ಲಾ ಬದಿಗಿಟ್ಟು ಜೀವನ ನಮಗೆ ನೀಡುತ್ತಿರುವ ಸುಂದರ ಜೀವನನ್ನು, ಸ್ವತಂತ್ರವಾಗಿ, ನಿರ್ಭಯರಾಗಿ ಮತ್ತು ಪೂರ್ಣವಾಗಿ ಜೀವಿಸುವುದೇ ಉತ್ತಮ.