Latest Updates
-
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ!
ಹೊಸತನ್ನು ಪ್ರಾರಂಭಿಸುವ ಮುನ್ನ 'ಚಾಣಕ್ಯ ನೀತಿ' ಪಾಲಿಸಿ....
ಚಾಣಕ್ಯ, ಭಾರತೀಯ ಇತಿಹಾಸ ಕಂಡ ಓರ್ವ ಶ್ರೇಷ್ಠ ವಿದ್ವಾಂಸ ಮತ್ತು ಬುದ್ಧಿವಂತ. ಚಾಣಕ್ಯ ಅಂದು ನುಡಿದ ಹಿತವಚನಗಳೆಲ್ಲಾ ಚಾಣಕ್ಯನ ನೀತಿಗಳ ರೂಪದಲ್ಲಿ ಇಂದು ನಮಗೆ ಲಭ್ಯವಿದೆ. ಈತನ ನೀತಿಗಳೆಲ್ಲಾ ಕಾಲಾತೀತವಾಗಿದ್ದು ಇಂದಿಗೂ ಪ್ರಸ್ತುತವಿವೆ.
ಬನ್ನಿ, ಹೊಸತೇನಾದರೊಂದನ್ನು ಪ್ರಾರಂಭಿಸುವ ಮುನ್ನ ಯಾವ ರೀತಿಯ ಎಚ್ಚರಿಕೆ ವಹಿಸಬೇಕೆಂಬುದನ್ನು ಚಾಣಕ್ಯ ತಿಳಿಸಿದ್ದಾನೆ ಮುಂದೆ ಓದಿ....

ಧನಾತ್ಮಕ ಚಿಂತನೆ
ಚಾಣಕ್ಯನ ಪ್ರಕಾರ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮುನ್ನ ಕೆಲವು ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು. ಅವೆಂದರೆ ಕೆಲಸ ಪ್ರಾರಂಭಿಸುವ ಸಮಯ, ಸ್ಥಳ, ಇದಕ್ಕೆ ತಗಲುವ ವೆಚ್ಚ ಮತ್ತು ನಿಮ್ಮ ಈ ಕೆಲಸಕ್ಕೆ ನೆರವು ನೀಡುವವರು. ಧನಾತ್ಮಕ ಚಿಂತನೆ ಮಾಡುವುದು ಹೇಗೆ ?

ಸಾಮರ್ಥ್ಯ
ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುನ್ನ ಆ ಕೆಲಸ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿದೆಯೇ ಅರಿತುಕೊಳ್ಳಬೇಕು. ಏಕೆಂದರೆ ಸಾಮರ್ಥ್ಯಕ್ಕೆ ಮೀರಿದ ಕೆಲಸವನ್ನು ಪ್ರಾರಂಭಿಸಿದ ಬಳಿಕ ಭಾರೀ ತೊಂದರೆಗೆ ಒಳಗಾಗಬಹುದು.

ನಿಮ್ಮ ನಾಲಿಗೆಯ ಮೇಲೆ ನಿಯಂತ್ರಣ
ಯಾವುದೇ ಹೊಸ ಕೆಲಸ ಯಶಸ್ವಿಯಾಗುವುದು ಅಥವಾ ವಿಫಲವಾಗುವುದು ಎರಡೂ ನಿಮ್ಮ ನಾಲಿಗೆಯ ಮೇಲಿನ ಹಿಡಿತವನ್ನು ಅವಲಂಬಿಸಿದೆ. ಗ್ರಾಹಕರೊಂದಿಗೆ ಉತ್ತಮವಾಗಿ ಮಾತನಾಡಿ ವಿಶ್ವಾಸ ಗಳಿಸುವ ಮೂಲಕ ಹೊಸ ಕೆಲಸ ಯಶಸ್ಸು ಪಡೆಯುತ್ತಾ ಸಾಗುತ್ತದೆ.

ನಿಮ್ಮ ದೇಹದ ಆರೋಗ್ಯ
ಭಗವಂತನ ನೀಡಿರುವ ಅದ್ಭುತ ಕೊಡುಗೆಯಲ್ಲಿ ನಮ್ಮ ಶರೀರವೂ ಒಂದು. ಯಾವುದೇ ಹೊಸ ಕೆಲಸ ಪ್ರಾರಂಭಿಸುವ ಮುನ್ನ ನಿಮ್ಮ ದೇಹ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.

ಕೆಲಸದಲ್ಲಿ ಯಶಸ್ಸಿಗಾಗಿ
ಎಂದಿಗೂ ನಿಮ್ಮ ಬೆನ್ನು ಮುಖ್ಯದ್ವಾರಕ್ಕೆ ಎದುರಾಗಿರುವಂತೆ ಕೆಲಸದ ಸ್ಥಳದಲ್ಲಿ ಕುಳಿತುಕೊಳ್ಳಬಾರದು. ಅಂದರೆ ಗ್ರಾಹಕ ಪ್ರಧಾನ ಬಾಗಿಲಿನ ಮೂಲಕ ಒಳಬಂದಾಗ ಸ್ವಾಗತಿಸುವವರ ಮುಖವನ್ನು ಸ್ಪಷ್ಟವಾಗಿ ಕಾಣುವಂತಿರಬೇಕು.

ಕೆಲಸದಲ್ಲಿ ಯಶಸ್ಸಿಗಾಗಿ
ಬೆನ್ನು ಗೋಡೆ ಅಥವಾ ಇನ್ನಾವುದಾದರೂ ದೃಢ ವಸ್ತುವಿನ ಆಧಾರ ಪಡೆದಿರಬೇಕು. ಇದು ಸಾಧ್ಯವಾಗದಿದ್ದರೆ ಇನ್ನೋರ್ವ ವ್ಯಕ್ತಿಯ ಬೆನ್ನಿಗೆ ಬೆನ್ನು ತಾಗಿರುವಂತೆ ಕುಳಿತುಕೊಳ್ಳಬೇಕು.

ಎತ್ತರದ ಕುರ್ಚಿ
ಕಛೇರಿಯಲ್ಲಿ ಕುಳಿತುಕೊಳ್ಳುವ ಕುರ್ಚಿಗಳು ಎತ್ತರವಾಗಿರಲಿ. ಅಂದರೆ ಹೊಕ್ಕಳು ಸರಿಸುಮಾರು ಮೇಜಿನ ಮಟ್ಟದಲ್ಲಿರುವಷ್ಟಿರಬೇಕು. ಇದರಿಂದ ಕೆಲಸದಲ್ಲಿ ಉತ್ಪಾದಕತೆ ಹೆಚ್ಚುತ್ತದೆ.



Click it and Unblock the Notifications