Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೂರಾರು ವರ್ಷಗಳಿಂದ ಬಂಧನದಲ್ಲಿರುವ ಆಲದ ಮರ!
ನೂರಾರು ವರ್ಷಗಳಿಂದ ಸರಪಳಿಯಿಂದ ಬಂಧಿಸಲ್ಪಟ್ಟಿರುವ ಆಲದ ಮರವನ್ನು ಬಂಧಮುಕ್ತಗೊಳಿಸಲು ಜನರು ಮುಂದೆ ಬರುವುದಿಲ್ಲ. ಆಲದ ಮರವನ್ನು ಕಟ್ಟಿಹಾಕಿರುವ ಕಾರಣ ತುಂಬಾ ಅವಿವೇಕಿತನದ್ದಾಗಿದೆ...
ವಿಶ್ವದಲ್ಲಿ ಹಲವಾರು ವಿಚಿತ್ರಗಳು ಹಾಗೂ ವಿಲಕ್ಷಣಗಳು ನಡೆಯುತ್ತಲೇ ಇರುತ್ತದೆ. ಕೆಲವೊಂದು ವಿಚಿತ್ರಗಳಿಗೆ ಕಾರಣಗಳು ಇದ್ದರೆ ಮತ್ತೆ ಕೆಲವು ವಿನಾ ಕಾರಣವಾಗಿರುತ್ತದೆ. ವಿಲಕ್ಷಣಗಳಿಗೆ ಯಾವುದೇ ಸ್ಪಷ್ಟ ಅರ್ಥವಿರುವುದಿಲ್ಲ. ಪಾಕಿಸ್ತಾನದಲ್ಲಿ ನೂರಾರು ವರ್ಷಗಳಿಂದ ಆಲದ ಮರವೊಂದನ್ನು ಕಟ್ಟಿ ಹಾಕಿರುವುದು ಇಂತಹ ವಿಲಕ್ಷಣಗಳಲ್ಲಿ ಒಂದಾಗಿದೆ. ವಿಸ್ಮಯ ಜಗತ್ತು: ಸಾವಿನ ನಂತರ ನಡೆಯುವುದೆಲ್ಲ ವಿಚಿತ್ರ!
ನೂರಾರು ವರ್ಷಗಳಿಂದ ಸರಪಳಿಯಿಂದ ಬಂಧಿಸಲ್ಪಟ್ಟಿರುವ ಆಲದ ಮರವನ್ನು ಬಂಧಮುಕ್ತಗೊಳಿಸಲು ಜನರು ಮುಂದೆ ಬರುವುದಿಲ್ಲ. ಆಲದ ಮರವನ್ನು ಕಟ್ಟಿಹಾಕಿರುವ ಕಾರಣ ತುಂಬಾ ಅವಿವೇಕಿತನದ್ದಾಗಿದೆ. ಆಲದ ಮರವನ್ನು ಕಟ್ಟಿ ಹಾಕಿರುವುದು ಯಾಕೆನ್ನುವ ಬಗ್ಗೆ ಲೇಖನದಲ್ಲಿ ತಿಳಿದುಕೊಳ್ಳಿ....

ಇದು ನಡೆದಿರುವುದು ಎಲ್ಲಿ?
ಪಾಕಿಸ್ತಾನದ ಲಂಡಿ ಕೊಟಲ್ ಎನ್ನುವ ಪ್ರದೇಶದ ಸೇನಾ ಕಂಟೋನ್ಮೆಟ್ನಲ್ಲಿ ನಡೆದಿದೆ. ಮರವು ಮುಂದೆ ಸಾಗದಂತೆ ಇದನ್ನು ಕಟ್ಟಿಹಾಕಲಾಗಿದೆಯಂತೆ. ಇದು ತುಂಬಾ ಗಂಭೀರವಾದ ವಿಷಯವಲ್ಲವೇ?

1898ರಿಂದ ಕಟ್ಟಿ ಹಾಕಲಾಗಿದೆ
ದಶಕಕ್ಕೂ ಮೊದಲು ಬ್ರಿಟಿಷ್ ಅಧಿಕಾರಿ ಜೇಮ್ಸ್ ಸ್ಕ್ವಿಡ್ ಎನ್ನುವಾತ ಈ ಮರವನ್ನು ಕಟ್ಟಿ ಹಾಕಿದ್ದನಂತೆ.

ಹೀಗೆ ಮಾಡಲು ಕಾರಣವೇನು?
ಕುಡಿತದ ನಶೆಯಲ್ಲಿದ್ದ ಈ ಅಧಿಕಾರಿಗೆ ಮರವು ತನ್ನತ್ತ ಬರುತ್ತಿರುವುದು ಕಾಣಿಸಿದೆ. ಇದನ್ನು ನೋಡಿ ಭಯಭೀತನಾದ ಆತ ಮರವನ್ನು ಕಟ್ಟಿಹಾಕಲು ನಿರ್ಧರಿಸಿದ.

ಶಿಕ್ಷೆಯ ರೂಪದಲ್ಲಿ....
ತಪ್ಪಿತಸ್ಥರನ್ನು ಶಿಕ್ಷಿಸಲು ನಿರ್ಧರಿಸಿದ್ದ ಆತ ಮರಕ್ಕೆ ಕೂಡ ಶಿಕ್ಷೆ ನೀಡಲು ಬಯಸಿದ. ಇದರಿಂದ ಮರವು ತನ್ನ ಜಾಗದಿಂದ ಅಲುಗಾಡದಂತೆ ಅದನ್ನು ಸರಪಳಿಯಿಂದ ಬಂಧಿಸುವಂತೆ ಆದೇಶ ನೀಡಿದ. ಮರವನ್ನು ಬಂಧಿಸುವಂತೆ ಬ್ರಿಟಿಷ್ ಅಧಿಕಾರಿಯು ಆದೇಶಿಸಿದ್ದ.
Image Source khaleejtimes.com

ತುಂಬಾ ಹಾಸ್ಯಾಸ್ಪದವೆಂದರೆ....
ಇಂದಿಗೂ ಕೂಡ ಮರಕ್ಕೆ ಸರಪಳಿಯನ್ನು ಹಾಕಿಡಲಾಗಿದೆ ಮತ್ತು ಅದರ ಕೊಂಬೆಯಲ್ಲಿ ನೇತು ಹಾಕಲ್ಪಟ್ಟಿರುವ ಬೋರ್ಡ್ ನಲ್ಲಿ ನಾನು ಬಂಧಿಸಲ್ಪಟ್ಟಿದ್ದೇನೆ ಎನ್ನುವ ಸಂದೇಶವಿದೆ.....
Image sourcekhaleejtimes.com



Click it and Unblock the Notifications











