Latest Updates
-
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ -
ಮುಂಬೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಪ್ರವಾಹದಿಂದ ರಕ್ಷಿಸಲು ಇಂದೇ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ! -
ಸ್ವಾತಂತ್ರ್ಯ ದಿನದ ಸಂಭ್ರಮ: ಕಡಿಮೆ ಬಜೆಟ್ನಲ್ಲಿ ಆರೋಗ್ಯಕರ 'ತ್ರಿವರ್ಣ' ಉಪಾಹಾರ ತಯಾರಿಸುವುದು ಹೇಗೆ? -
ಸ್ವಾತಂತ್ರ್ಯ ದಿನಾಚರಣೆಯ ಲಾಂಗ್ ವೀಕೆಂಡ್: ₹3,000 ಬಜೆಟ್ನಲ್ಲಿ ಸುರಕ್ಷಿತ ಪ್ರವಾಸಕ್ಕೆ ಬೆಸ್ಟ್ ತಾಣಗಳು! -
ಸ್ವಾತಂತ್ರ್ಯ ದಿನಾಚರಣೆ: ಮಳೆಗಾಲದಲ್ಲೂ ಸ್ಟೈಲಿಶ್ ಆಗಿ ಕಾಣಲು ₹999 ರೊಳಗೆ ಬೆಸ್ಟ್ ಟಿಪ್ಸ್! -
ಹಾಸ್ಟೆಲ್ನಲ್ಲಿದ್ದೀರಾ? ಜಿಮ್ ಇಲ್ಲದೆ ಫಿಟ್ ಆಗಿರಲು ಈ ಸಿಂಪಲ್ 'ಕ್ಯಾಂಪಸ್ ಫಿಟ್' ಟಿಪ್ಸ್ ಫಾಲೋ ಮಾಡಿ! -
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಪಂಚಭೂತಗಳ ಸಿದ್ಧಿ ನಿಮ್ಮ ಕೈಗಳಲ್ಲಿವೆ ನಿಮಗಿದು ಗೊತ್ತೇ?
ಜನರು ಏಕೆ ತಮ್ಮ ಕೈಗಳಿಂದ ಊಟ ಮಾಡುತ್ತಾರೆ? ಏಕೆಂದರೆ ಅವರಿಗೆ ಸಂಸ್ಕೃತಿ ಇರುವುದಿಲ್ಲ ಇದು ತಮ್ಮ ಕೈಗಳಿಂದ ಊಟ ಮಾಡುವವರನ್ನು ನೋಡಿ ವಿದೇಶಿಯರು ಆಡುವ ಮಾತು! ಕೈಗಳಿಂದ ಊಟ ಮಾಡುವುದು ಅದರದ್ದೇ ಆದ ವಿಶೇಷತೆಗಳನ್ನು ಹೊಂದಿದೆ.
ಇಲ್ಲಿ ನಾವು ಮಾತನಾಡುತ್ತಿರುವುದು ಕೇವಲ ಆರೋಗ್ಯ ಪ್ರಯೋಜನಗಳನ್ನು ಮಾತ್ರವಲ್ಲ. ನಿಮ್ಮ ಕೈಗಳಿಂದ ಊಟ ಮಾಡುವುದರಿಂದ ಆಹಾರದ ಅನುಭವ ಭಿನ್ನವಾಗಿರುತ್ತದೆ. ಭಾರತದಲ್ಲಿ ಕೈಗಳಿಂದ ಊಟ ಮಾಡುವುದು ಸಂಪ್ರದಾಯವಾಗಿದೆ. ಎಷ್ಟೇ ಆಧುನಿಕ ಮನೋಭಾವದವರೂ ಕೂಡ ಕೈಗಳಿಂದ ಊಟ ಮಾಡುವುದಕ್ಕೆ ಪ್ರಾಶಸ್ತ್ಯವನ್ನು ನೀಡುತ್ತಾರೆ.

ಕೈಗಳಿಂದ ಊಟ ಮಾಡುವುದರ ಹಿಂದೆ ಎರಡು ಸಿದ್ಧಾಂತಗಳಿವೆ ಒಂದು ಆಹಾರವೆನ್ನುವುದು ವಿಷಯವಲ್ಲ, ಇದೊಂದು ಅನುಭವ. ನಿಮ್ಮ ಬಾಯಿಗೆ ಆಹಾರವನ್ನು ಹಾಕಬಹುದು ಎಂದಾದಲ್ಲಿ, ಇದನ್ನು ಬೆರಳುಗಳಿಂದ ಸ್ಪರ್ಶಿಸುವುದರಲ್ಲಿ ಏಕೆ ಹಿಂಜರಿಕೆ.
ಬರೇ ಕೈಗಳಿಂದ ಆಹಾರವನ್ನು ಸೇವಿಸುವುದರಿಂದ ಸೇವಿಸುವ ಅನುಭವ ವರ್ಧಿಸುತ್ತದೆ. ನಿಮ್ಮ ಮೂಗು ಆಹಾರವನ್ನು ಆಘ್ರಾಣಿಸುವುದರಿಂದ ಇದಕ್ಕೆ ಮೊದಲ ಆದ್ಯತೆ ಮತ್ತು ಮೊದಲ ಸಂಪರ್ಕ. ನಂತರದ್ದು ಆಹಾರವನ್ನು ಸ್ಪರ್ಶಿಸುವ ನಿಮ್ಮ ಬೆರಳುಗಳದ್ದಾಗಿದೆ. ನಂತರದ ಸ್ಥಾನ ರುಚಿಗೆ. ಭಾರತೀಯ ಸಿದ್ಧಾಂತದ ಪ್ರಕಾರ, ನಿಮ್ಮ ಬೆರಳುಗಳನ್ನು ಬಳಸಿ ಆಹಾರವನ್ನು ಸೇವಿಸುವುದು ನಿಮ್ಮ ಊಟದ ಅನುಭವವನ್ನು ಹೆಚ್ಚಿಸುತ್ತದೆ ಎಂದಾಗಿದೆ.
ಇನ್ನೊಂದು ಸಿದ್ಧಾಂತ ದೇವರ ಸ್ವಂತ ನಾಡು ಎಂದೇ ಪ್ರಸಿದ್ಧಿ ಹೊಂದಿರುವ ಕೇರಳದಿಂದ ಬಂದಿರುವಂಥದ್ದಾಗಿದೆ. ಕೈಗಳಿಂದ ಊಟ ಮಾಡುವುದು ಮತ್ತು ಬಾಳೆ ಎಲೆಯಲ್ಲಿ ಊಟ ಮಾಡುವುದು ಕೇರಳದಲ್ಲಿ ಸಂಪ್ರದಾಯವಾಗಿದೆ ಮತ್ತು ಕಟ್ಟುನಿಟ್ಟಾದ ಆಚರಣೆಯಾಗಿದೆ. ಕೇರಳದ ನಂಬಿಕೆಯಂತೆ ಪ್ರಕೃತಿಯ ಐದು ಮುಖ್ಯ ಅಂಶಗಳಲ್ಲಿ ನಮ್ಮ ಹಸ್ತಗಳೂ ಸೇರಿವೆ ಎಂದಾಗಿದೆ. ನಮ್ಮ ಕೈಗಳ ಐದು ಬೆರಳುಗಳು ಐದು ಪ್ರಕೃತಿಯ ಮೂಲ ಅಂಶಗಳಾಗಿವೆ.
ಹೆಬ್ಬೆರಳು ಅಗ್ನಿಯನ್ನು ಪ್ರನಿಧಿಸಿದರೆ, ತೋರು ಬೆರಳು ವಾಯುವನ್ನು, ಮಧ್ಯಬೆರಳು ಆಕಾಶವನ್ನು, ಉಂಗುರ ಬೆರಳು ಭೂಮಿಯನ್ನೂ, ಕಿರು ಬೆರಳು ನೀರನ್ನು ಪ್ರತಿನಿಧಿಸುತ್ತದೆ. ಇವೆಲ್ಲವೂ ಪ್ರಕೃತಿಯ ಮುಖ್ಯ ಪಂಚಭೂತಗಳಾಗಿವೆ.
ನಮ್ಮ ಕೈಗಳಿಂದ ಊಟ ಮಾಡಿದರೆ ನಮ್ಮ ದೇಹದೊಳಗೆ ಪ್ರಕೃತಿಯ ಎಲ್ಲಾ ಈ ಅಂಶಗಳೂ ಲೀನವಾಗುತ್ತವೆ ಎಂಬುದು ನಂಬಿಕೆಯಾಗಿದೆ. ಆದ್ದರಿಂದಲೇ ಭಾರತೀಯರು ಅದರಲ್ಲೂ ಕೇರಳೀಯರು ಕೈಯಲ್ಲಿ ಊಟ ಮಾಡುವುದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇದರಿಂದ ಆಹಾರದ ಮೇಲೆ ನಂಬಿಕೆ ಮತ್ತು ಶ್ರದ್ಧೆ ಇರಿಸಲು ಅವರಿಗೆ ಇದು ಸಹಾಯಕವಾಗುತ್ತದೆ.



Click it and Unblock the Notifications