Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜೈಲಲ್ಲಿ ರಾಮಾಯಣ ನಾಟಕ: ಸೀತೆ ಹುಡುಕಿ ಬರುವುದಾಗಿ ಹೇಳಿ ಕೈದಿಗಳಿಬ್ಬರು ಪರಾರಿ
ಅಸ್ಸಾಂನಲ್ಲಿ ಜೈಲು ಗೋಡೆ ಹಾರಿ ಐವರು ಕೈದಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಅಲ್ಲಿ ಬೆಡ್ ಶೀಟ್, ಲುಂಗಿಯನ್ನು ಬಳಸಿ ಕೈದಿಗಳು ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದ ಘಟನೆ ವರದಿಯಾಗಿದೆ. ಆದ್ರೆ ಇಲ್ಲೊಂದು ಮತ್ತೊಂದು ಘಟನೆಯಲ್ಲಿ ಕೈದಿಗಳು ರಾಮಾಯಣ ನಾಟಕ ಆಡುತ್ತಲೇ ಪರಾರಿಯಾಗಿರುವ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ.
ಇದೊಂದು ಅಚ್ಚರಿಯ ಘಟನೆಯಾಗಿದ್ದು ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಜೈಲಿನಲ್ಲಿ ರಾಮಾಯಣ ನಾಟಕ ನಡೆಯುತ್ತಿತ್ತು, ಕೈದಿಗಳೇ ನಟಿಸುತ್ತಿದ್ದ ನಾಟಕವಾಗಿತ್ತು, ಕೈದಿಗಳೇ ಅಲ್ಲಿನ ಪ್ರೇಕ್ಷಕರು ಕೂಡ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು, ಆದರೆ ಇಬ್ಬರು ಕೈದಿಗಳು ನಾಪತ್ತೆಯಾಗಿರುವುದು ವರದಿಯಾಗಿದೆ.

ಯಾರು ಆ ಕೈದಿಗಳು? ಪರಾರಿ ಆಗಿದ್ದು ಹೇಗೆ?
ಪರಾರಿಯಾಗಿರುವ ಇಬ್ಬರು ಕೈದಿಗಳು ಕೊಲೆ ಆರೋಪದಲ್ಲಿ ಜೈಲು ಸೇರಿದ್ದವರು, ಇಬ್ಬರು ಶಿಕ್ಷೆ ಅನುಭವಿಸುತ್ತಿದ್ದರು ಎಂದು ತಿಳಿದುಬಂದಿದೆ. ಇಬ್ಬರನ್ನು ಪಂಕಜ್ ಮತ್ತು ರಾಜ್ಕುಮಾರ್ ಎಂದು ಗುರುತಿಸಲಾಗಿದೆ. ಇಲ್ಲಿನ ಹರಿದ್ವಾರದಲ್ಲಿರುವ ರೋಶನಾಬಾದ್ ಜೈಲಿನಲ್ಲಿದ್ದರು. ಇದೇ ಜೈಲಿನಲ್ಲಿ ರಾಮಾಯಣ ನಾಟಕ ಮಾಡಲು ಸಿದ್ಧತೆ ನಡೆದಿತ್ತು, ಇವರಿಬ್ಬರು ನಾಟಕದಲ್ಲಿಯೂ ಬಾಗಿಯಾಗಿದ್ದರು, ಅಲ್ಲದೆ ಜೈಲಿನಿಂದ ಪರಾರಿಯಾಗಲು ಮೊದಲೇ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಇಬ್ಬರು ನಾವರ ಸೈನ್ಯದ ಪಾತ್ರ ಹಾಕಿದ್ದರು
ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಿದ್ದ ರಾವಣನ ಮೇಲೆ ಯುದ್ಧ ಸಾರಿದಾಗ ವಾನರ ಸೇನೆಯೂ ಯುದ್ಧದಲ್ಲಿ ಭಾಗಿಯಾಗಿತ್ತು ಎಂಬುದು ನಮಗೆಲ್ಲಾ ತಿಳಿಸಿದೆ. ಹನುಮನು ಲಂಕೆಗೆ ತೆರಳಿ ಸೀತೆಯನ್ನು ಪತ್ತೆ ಮಾಡಿದ ಎಂಬುದು ಕೂಡ ನಮಗೆ ತಿಳಿಸಿದೆ. ಈಗ ಇದೇ ನಾಟಕದಲ್ಲಿ ಇಬ್ಬರು ನಾವರ ಸೇನೆಯಲ್ಲಿರುವ ಹನುಮಂತನ ವೇಷ ಧರಿಸಿದ್ದರು.
ಎಂದಿನಂತೆ ರಾಮಾಯಣ ನಾಟಕ ನಡೆಯುತ್ತಿರುವಾಗಲೇ ಸೀತೆಯನ್ನು ಹುಡುಕುವ ದೃಶ್ಯ ಬರುತ್ತದೆ. ಈ ದೃಶ್ಯದ ಲಾಭ ಪಡೆದ ಇಬ್ಬರು ಸೀತೆಯನ್ನಯ ಹುಡುಕಿಕೊಂಡು ಬರುವುದಾಗಿ ವೇದಿಕೆಯಿಂದ ನಿರ್ಗಮಿಸುತ್ತಾರೆ. ಆದರೆ ನಾಟಕ ಮುಂದುವರೆದರೂ ಇಬ್ಬರು ವಾಪಾಸು ಬರುವುದೇ ಇಲ್ಲ.
ಆದರೆ ಅವರಿಬ್ಬರು ದೊಡ್ಡ ಏಣಿಯನ್ನು ಬಳಸಿ ಗೋಡೆಯನ್ನು ಹಾರಿ ಪರಾರಿಯಾಗಿರುವುದು ಹಲವು ಗಂಟೆಗಳ ಬಳಿಕ ಅಧಿಕಾರಿಗಳಿಗೆ ತಿಳಿದುಬರುತ್ತದೆ. ಅವರಿಬ್ಬರು ವೇಷ ಧರಿಸಿದ್ದ ಕಾರಣ ತಕ್ಷಣಕ್ಕೆ ತಪ್ಪಿಸಿಕೊಂಡಿರುವುದು ಯಾರು ಎಂಬುದು ತಿಳಿದುಬಂದಿರಲಿಲ್ಲ. ಒಬ್ಬರು ಉತ್ತರಾಖಂಡ್ ಮೂಲದವರಾಗಿದ್ದರೆ ಮತ್ತೊಬ್ಬರು ಉತ್ತರ ಪ್ರದೇಶ ಮೂಲದ ಕೈದಿ ಎಂಬುದು ತದನಂತರ ತಿಳಿದುಬಂದಿತು.
ಈ ವಿಚಿತ್ರ ಘಟನೆ ನೋಡಿದ ಅಧಿಕಾರಿಗಳು ಹಾಗೂ ಜನರು ಶಾಕ್ ಆಗಿದ್ದಾರೆ. ಇಬ್ಬರನ್ನು ಹುಡುಕಲು ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಬೆಡ್ ಶೀಟ್ ಲುಂಗಿ ಬಳಸಿ ಐವರು ಪರಾರಿ..!
ಇದೇ ರೀತಿ ಅಸ್ಸಾಂನ ದಿಸ್ಪೂರ್ ಜೈಲಿನಲ್ಲಿದ್ದ ಐವರು ಕೈದಿಗಳು ಬೆಡ್ ಶೀಟ್ ಲುಂಗಿಯನ್ನು ಹಗ್ಗದಂತೆ ಉದ್ದವಾಗಿ ಕಟ್ಟಿ ಜೈಲು ಗೋಡೆ ಹಾರಿ ಪರಾರಿಯಾಗಿರುವ ಘಟನೆ ನಡೆದಿದೆ. ಐವರು ಪೋಕ್ಸೊ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಐವರು ಬಹಳ ಕಾಲದಿಂದ ಜೈಲಿನಿಂದ ಪರಾರಿಯಾವಲು ಯೋಜನೆ ರೂಪಿಸಿದ್ದರು. ಆದರೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬೆಡ್ಶೀಟ್ಗಳನ್ನು ಹರಿದು, ಲುಂಗಿಯನ್ನು ಹಗ್ಗದಂತೆ ಒಂದಕ್ಕೊಂದು ಕಟ್ಟಿ ಜೈಲು ಗೋಡೆಯ ಮೇಲೆ ಹಲ್ಲು ಕಟ್ಟಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.



Click it and Unblock the Notifications
