Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಜೈಲಲ್ಲಿ ರಾಮಾಯಣ ನಾಟಕ: ಸೀತೆ ಹುಡುಕಿ ಬರುವುದಾಗಿ ಹೇಳಿ ಕೈದಿಗಳಿಬ್ಬರು ಪರಾರಿ
ಅಸ್ಸಾಂನಲ್ಲಿ ಜೈಲು ಗೋಡೆ ಹಾರಿ ಐವರು ಕೈದಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಅಲ್ಲಿ ಬೆಡ್ ಶೀಟ್, ಲುಂಗಿಯನ್ನು ಬಳಸಿ ಕೈದಿಗಳು ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದ ಘಟನೆ ವರದಿಯಾಗಿದೆ. ಆದ್ರೆ ಇಲ್ಲೊಂದು ಮತ್ತೊಂದು ಘಟನೆಯಲ್ಲಿ ಕೈದಿಗಳು ರಾಮಾಯಣ ನಾಟಕ ಆಡುತ್ತಲೇ ಪರಾರಿಯಾಗಿರುವ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ.
ಇದೊಂದು ಅಚ್ಚರಿಯ ಘಟನೆಯಾಗಿದ್ದು ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಜೈಲಿನಲ್ಲಿ ರಾಮಾಯಣ ನಾಟಕ ನಡೆಯುತ್ತಿತ್ತು, ಕೈದಿಗಳೇ ನಟಿಸುತ್ತಿದ್ದ ನಾಟಕವಾಗಿತ್ತು, ಕೈದಿಗಳೇ ಅಲ್ಲಿನ ಪ್ರೇಕ್ಷಕರು ಕೂಡ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು, ಆದರೆ ಇಬ್ಬರು ಕೈದಿಗಳು ನಾಪತ್ತೆಯಾಗಿರುವುದು ವರದಿಯಾಗಿದೆ.

ಯಾರು ಆ ಕೈದಿಗಳು? ಪರಾರಿ ಆಗಿದ್ದು ಹೇಗೆ?
ಪರಾರಿಯಾಗಿರುವ ಇಬ್ಬರು ಕೈದಿಗಳು ಕೊಲೆ ಆರೋಪದಲ್ಲಿ ಜೈಲು ಸೇರಿದ್ದವರು, ಇಬ್ಬರು ಶಿಕ್ಷೆ ಅನುಭವಿಸುತ್ತಿದ್ದರು ಎಂದು ತಿಳಿದುಬಂದಿದೆ. ಇಬ್ಬರನ್ನು ಪಂಕಜ್ ಮತ್ತು ರಾಜ್ಕುಮಾರ್ ಎಂದು ಗುರುತಿಸಲಾಗಿದೆ. ಇಲ್ಲಿನ ಹರಿದ್ವಾರದಲ್ಲಿರುವ ರೋಶನಾಬಾದ್ ಜೈಲಿನಲ್ಲಿದ್ದರು. ಇದೇ ಜೈಲಿನಲ್ಲಿ ರಾಮಾಯಣ ನಾಟಕ ಮಾಡಲು ಸಿದ್ಧತೆ ನಡೆದಿತ್ತು, ಇವರಿಬ್ಬರು ನಾಟಕದಲ್ಲಿಯೂ ಬಾಗಿಯಾಗಿದ್ದರು, ಅಲ್ಲದೆ ಜೈಲಿನಿಂದ ಪರಾರಿಯಾಗಲು ಮೊದಲೇ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಇಬ್ಬರು ನಾವರ ಸೈನ್ಯದ ಪಾತ್ರ ಹಾಕಿದ್ದರು
ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಿದ್ದ ರಾವಣನ ಮೇಲೆ ಯುದ್ಧ ಸಾರಿದಾಗ ವಾನರ ಸೇನೆಯೂ ಯುದ್ಧದಲ್ಲಿ ಭಾಗಿಯಾಗಿತ್ತು ಎಂಬುದು ನಮಗೆಲ್ಲಾ ತಿಳಿಸಿದೆ. ಹನುಮನು ಲಂಕೆಗೆ ತೆರಳಿ ಸೀತೆಯನ್ನು ಪತ್ತೆ ಮಾಡಿದ ಎಂಬುದು ಕೂಡ ನಮಗೆ ತಿಳಿಸಿದೆ. ಈಗ ಇದೇ ನಾಟಕದಲ್ಲಿ ಇಬ್ಬರು ನಾವರ ಸೇನೆಯಲ್ಲಿರುವ ಹನುಮಂತನ ವೇಷ ಧರಿಸಿದ್ದರು.
ಎಂದಿನಂತೆ ರಾಮಾಯಣ ನಾಟಕ ನಡೆಯುತ್ತಿರುವಾಗಲೇ ಸೀತೆಯನ್ನು ಹುಡುಕುವ ದೃಶ್ಯ ಬರುತ್ತದೆ. ಈ ದೃಶ್ಯದ ಲಾಭ ಪಡೆದ ಇಬ್ಬರು ಸೀತೆಯನ್ನಯ ಹುಡುಕಿಕೊಂಡು ಬರುವುದಾಗಿ ವೇದಿಕೆಯಿಂದ ನಿರ್ಗಮಿಸುತ್ತಾರೆ. ಆದರೆ ನಾಟಕ ಮುಂದುವರೆದರೂ ಇಬ್ಬರು ವಾಪಾಸು ಬರುವುದೇ ಇಲ್ಲ.
ಆದರೆ ಅವರಿಬ್ಬರು ದೊಡ್ಡ ಏಣಿಯನ್ನು ಬಳಸಿ ಗೋಡೆಯನ್ನು ಹಾರಿ ಪರಾರಿಯಾಗಿರುವುದು ಹಲವು ಗಂಟೆಗಳ ಬಳಿಕ ಅಧಿಕಾರಿಗಳಿಗೆ ತಿಳಿದುಬರುತ್ತದೆ. ಅವರಿಬ್ಬರು ವೇಷ ಧರಿಸಿದ್ದ ಕಾರಣ ತಕ್ಷಣಕ್ಕೆ ತಪ್ಪಿಸಿಕೊಂಡಿರುವುದು ಯಾರು ಎಂಬುದು ತಿಳಿದುಬಂದಿರಲಿಲ್ಲ. ಒಬ್ಬರು ಉತ್ತರಾಖಂಡ್ ಮೂಲದವರಾಗಿದ್ದರೆ ಮತ್ತೊಬ್ಬರು ಉತ್ತರ ಪ್ರದೇಶ ಮೂಲದ ಕೈದಿ ಎಂಬುದು ತದನಂತರ ತಿಳಿದುಬಂದಿತು.
ಈ ವಿಚಿತ್ರ ಘಟನೆ ನೋಡಿದ ಅಧಿಕಾರಿಗಳು ಹಾಗೂ ಜನರು ಶಾಕ್ ಆಗಿದ್ದಾರೆ. ಇಬ್ಬರನ್ನು ಹುಡುಕಲು ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಬೆಡ್ ಶೀಟ್ ಲುಂಗಿ ಬಳಸಿ ಐವರು ಪರಾರಿ..!
ಇದೇ ರೀತಿ ಅಸ್ಸಾಂನ ದಿಸ್ಪೂರ್ ಜೈಲಿನಲ್ಲಿದ್ದ ಐವರು ಕೈದಿಗಳು ಬೆಡ್ ಶೀಟ್ ಲುಂಗಿಯನ್ನು ಹಗ್ಗದಂತೆ ಉದ್ದವಾಗಿ ಕಟ್ಟಿ ಜೈಲು ಗೋಡೆ ಹಾರಿ ಪರಾರಿಯಾಗಿರುವ ಘಟನೆ ನಡೆದಿದೆ. ಐವರು ಪೋಕ್ಸೊ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಐವರು ಬಹಳ ಕಾಲದಿಂದ ಜೈಲಿನಿಂದ ಪರಾರಿಯಾವಲು ಯೋಜನೆ ರೂಪಿಸಿದ್ದರು. ಆದರೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬೆಡ್ಶೀಟ್ಗಳನ್ನು ಹರಿದು, ಲುಂಗಿಯನ್ನು ಹಗ್ಗದಂತೆ ಒಂದಕ್ಕೊಂದು ಕಟ್ಟಿ ಜೈಲು ಗೋಡೆಯ ಮೇಲೆ ಹಲ್ಲು ಕಟ್ಟಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.



Click it and Unblock the Notifications