Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ರಾಮಾಯಣದ ಹೆಗ್ಗುರುತು ಲೇಪಾಕ್ಷಿ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ..! ವಿಶೇಷ ಏನು ಗೊತ್ತಾ?
ಪ್ರಧಾನಿ ನರೇಂದ್ರ ಮೋದಿಯವರು ಇಂದು ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಾಲಯಕ್ಕೆ ಭೇಟಿ ನೀಡಿದರು. ಅಯೋಧ್ಯೆಯಲ್ಲಿ ಇಂದಿನಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಈ ನಡುವೆ ಪ್ರಧಾನಿ ಮೋದಿ ಈ ದೇವಾಲಯಕ್ಕೆ ಭೇಟಿ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ದೇವಾಲಯಕ್ಕೂ ರಾಮಾಯಣಕ್ಕೂ ಇನ್ನಿಲ್ಲದ ನಂಟಿದೆ.
ಆ೦ಧ್ರಪ್ರದೇಶದ ಅನ೦ತಪುರ ಜಿಲ್ಲೆಯಲ್ಲಿರುವ ಹಿ೦ದೂಪುರ್ ನಿ೦ದ 15 ಕಿ.ಮೀ ದೂರದಲ್ಲಿರುವ ಈ ದೇವಾಲಯವು ರಾಮಾಯಣದ ಕಥೆಯನ್ನು ತನ್ನೊಳಗೆ ಇಟ್ಟಿಕೊಂಡಿದೆ. ರಾವಣನಿಂದ ಬಾಣದ ಏಟು ತಿಂದ ಜಟಾಯು ಪಕ್ಷಿ ಇದೇ ಸ್ಥಳದಲ್ಲಿ ಕೊನೆಯುಸಿರೆಳೆದಿದೆ ಎಂದು ನಂಬಲಾಗಿದೆ.
ರಾವಣನಿಂದ ಸೀತಾದೇವಿಯನ್ನು ಅಪಹರಿಸಿದ ನಂತರ ಜಟಾಯು, ದೈತ್ಯ ಹದ್ದು, ಸೀತಾದೇವಿಯನ್ನು ಹಿಂಬಾಲಿಸಿದ ಸ್ಥಳ ಲೇಪಾಕ್ಷಿ ಎಂದು ನಂಬಲಾಗಿದೆ. ಸಾಯುತ್ತಿರುವ ಜಟಾಯು, ಸೀತಾ ದೇವಿಯ ಸೆರೆಯಲ್ಲಿರುವ ಬಗ್ಗೆ ಕೊನೆಯ ಮಾಹಿತಿಯನ್ನು ರಾಮನಿಗೆ ತಿಳಿಸಿದ ನಂತರ, ಲೇಪಾಕ್ಷಿಯಲ್ಲಿ ಭಗವಾನ್ ರಾಮನಿಂದ ದಿವ್ಯ ಮೋಕ್ಷ ಪಡೆಯಿತು ಎಂಬ ಕಥೆ ಇದೆ.

ಸಾಯುವ ಹಂತದಲ್ಲಿ ಇಲ್ಲಿ ಬಿದ್ದ ಜಟಾಯುವನ್ನು ನೋಡಿದ ರಾಮ, ಸ್ಥಳೀಯ ಭಾಷೆಯಲ್ಲಿ ಎದ್ದೇಳು ಪಕ್ಷಿಯೇ ಎನ್ನಲು 'ಲೇ ಪಕ್ಷಿ' ಎಂದಿದ್ದನಂತೆ. ನಂತರದ ದಿನಗಳಲ್ಲಿ ಇದೇ 'ಲೇಪಾಕ್ಷಿ' ಎಂಬ ಹೆಸರು ಬರಲು ಕಾರಣವಾಯಿತು ಎಂದು ನಂಬಲಾಗಿದೆ. ಅಲ್ಲಿಗೆ ಭೇಟಿ ನೀಡಿದ ರಾಮನಿಗೆ ಸೀತೆಯನ್ನು ರಾವಣನು ದಕ್ಷಿಣಕ್ಕೆ ಕರೆದೊಯ್ದನೆಂದು ಹೇಳಿ ಜಟಾಯುವು ಇದೇ ಜಾಗದಲ್ಲಿ ಮೋಕ್ಷವನ್ನು ಪಡೆಯಿತಂತೆ.
ಇನ್ನು ಇಲ್ಲಿ 8 ಅಡಿ ಉದ್ದದ ಪಾದದ ಗುರುತೊಂದನ್ನು ಕಾಣಬಹುದಾಗಿದ್ದು, ಇದು ಸೀತಾ ಮಾತೆಯ ಪಾದದ ಗುರುತು ಎಂದು ನಂಬಲಾಗಿದೆ. ಈ ಪಾದದ ಬಳಿ ಎಲ್ಲಾ ಋತುಗಳಲ್ಲೂ ನೀರು ಹರಿಯುತ್ತದೆ. ಈ ನೀರು ಇಂಗುವುದೇ ಇಲ್ಲವಂತೆ. ಇದೇ ಲೇಪಾಕ್ಷಿ ವೀರಭದ್ರಸ್ವಾಮಿ ದೇವಾಲಯದಲ್ಲಿ ಶಿವ ಪಾರ್ವತಿ ವಿವಾಹಕ್ಕಾಗಿ ನಿರ್ಮಿಸಿದ ಕಲ್ಯಾಣ ಮಂಟಪವನ್ನೂ ಕಾಣಬಹುದು. ಇಲ್ಲಿರುವ ಏಳು ಹೆಡೆಯ ನಾಗವು ಶಿವಲಿಂಗಕ್ಕೆ ಸುತ್ತಿರುವಂಥ ನಾಗಲಿಂಗ ಶಿಲ್ಪವು ಜನಪ್ರಿಯವಾಗಿದೆ. ಇಷ್ಟೇ ಅಲ್ಲ ದೇಶದಲ್ಲೇ ಅತಿ ದೊಡ್ಡ ನಂದಿ ವಿಗ್ರಹವನ್ನು ಕೂಡಾ ಇಲ್ಲಿದೆ.
ದೇವಾಲಯದ ಒಳಭಾಗದಲ್ಲಿ ಶಿವನ ಉಗ್ರ ಅವತಾರವಾದ ವೀರಭದ್ರನು ನೆಲೆಸಿದ್ದಾನೆ. ಪ್ರಮುಖವಾದ ಆಕರ್ಷಣೆ ಎಂದರೆ ಯಾವುದೇ ಆಧಾರವಿಲ್ಲದೇ, ದೈತ್ಯ ಸ್ತಂಭವೊಂದು ನೇತಾಡುತ್ತಿದೆ.
ರಾವಣನ ಹಿಂಬಾಲಿಸಿದ್ದ ಜಟಾಯು
ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿರುವಾಗ ಸೀತೆ ಕಾಪಾಡುವಂತೆ ಕೂಗಿಕೊಂಡಿದ್ದಳು. ಆದರೆ ಆಕೆಯ ಕೂಗು ಮೊದಲು ಕೇಳಿದ್ದು ಇದೇ ಜಟಾಯುವಿಗೆ. ಪರ್ವತದ ಬಳಿ ಕುಳಿತಿದ್ದ ಜಟಾಯು ಪಕ್ಷಿಗೆ ಸೀತೆಯ ಆಕ್ರಂದನ ಕೇಳಿಸುತ್ತದೆ. ತಡಮಾಡದೆ ರಾವಣನ ಎದುರಾಗುತ್ತದೆ. ಜಟಾಯು ಸೀತೆಯನ್ನು ರಾವಣನಿಂದ ಬಿಡಿಸಲು ಹೋರಾಡುತ್ತದೆ. ಆದರೆ ರಾವಣ ಸೀತೆಯನ್ನು ಪುಷ್ಪಕ ವಿಮಾನಕ್ಕೆ ಕಟ್ಟಿ ಜಟಾಯು ಮೇಲೆ ಬಾಣ ಪ್ರಯೋಗಕ್ಕೆ ಮುಂದಾಗುತ್ತಾನೆ. ಈ ವೇಳೆ ಬಾಣವೊಂದು ಜಟಾಯುವಿನ ರೆಕ್ಕೆ ಕತ್ತರಿಸಿ ಎದೆಗೆ ಬಡಿಯುತ್ತದೆ. ಈ ವೇಳೆ ಜಟಾಯು ಹಾರಲಾಗದೆ ನೆಲಕ್ಕೆ ಬೀಳುತ್ತದೆ.
ಆಕಾಶದಲ್ಲಿ ಇದೆಲ್ಲಾ ಘಟನೆ ನಡೆದಿರುವುದನ್ನು ಕಂಡ ರಾಮ ಲಕ್ಷ್ಮಣರು ಜಟಾಯುವನ್ನು ಹಿಂಬಾಲಿಸುತ್ತಾರೆ. ಜಟಾಯು ಈಗಿರುವ ಲೇಪಾಕ್ಷಿಯಲ್ಲಿ ಬಂದು ಬೀಳುತ್ತದೆ ಎನ್ನಲಾಗಿದೆ. ಈ ವೇಳೆ ರಾಮನಿಗೆ ರಾವಣ ಯಾವ ಕಡೆ ಪ್ರಯಾಣಿಸಿದ ಎಂಬ ಕುರಿತು ಮಾಹಿತಿ ನೀಡಿ ಮೋಕ್ಷ ಹೊಂದುತ್ತದೆ ಎಂಬ ಪುರಾತನ ಕಥೆ ಇದೆ.



Click it and Unblock the Notifications
